Saturday 5 February 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 81-89

 

ಸ ಪಾಣ್ಡವೈಃ ಸಮರ್ಚ್ಚಿತೋ ಮಖಾಯ ಧರ್ಮ್ಮಜೇನ ಚ ।

ಪ್ರ ಪೃಷ್ಟ ಆಹ ಮಾಧವೋ ವಚೋ ಜಗತ್ಸುಖಾವಹಮ್             ॥೨೧.೮೧॥

ಶ್ರೀಕೃಷ್ಣಪರಮಾತ್ಮ ಪೂಜಿತನಾದ ಪಾಂಡವರಿಂದ,

ರಾಜಸೂಯದ ಬಗ್ಗೆ ಪ್ರಶ್ನಿಸಲ್ಪಟ್ಟ ಧರ್ಮಜನಿಂದ.

ಕೃಷ್ಣನಾಡಿದ ಮಾತದು ಜಗಕ್ಕೇ ನೀಡಿತು ಆನಂದ.

 

ಕ್ರತುರ್ಯ್ಯಥಾ ವಿಧಾನತಃ ಕೃತೋ ಹಿ ಪಾರಮೇಷ್ಠ್ಯಕಮ್ ।

ಪದಂ ನಯೇತ ತತ್ಪದೇ ಸುಯೋಗ್ಯಮೇಷ ನಾನ್ಯಥಾ              ॥೨೧.೮೨॥

ಶಾಸ್ತ್ರೋಕ್ತವಾಗಿ ಮಾಡಿದಂಥ ರಾಜಸೂಯ ಯಾಗ,

ತಂದುಕೊಡುತ್ತದೆ ಖಚಿತ ಬ್ರಹ್ಮಪದವಿಯ ಯೋಗ,

ಅಯೋಗ್ಯರಿಗಲ್ಲ, ಯೋಗ್ಯರಿಗೆ ಮಾತ್ರ ಅಂಥಾ ಭಾಗ್ಯ.

 

ಬ್ರಹ್ಮಪದವಿಗೆ ಅಯೋಗ್ಯರಾದವರು(ಉದಾಹರಣೆಗೆ- ಸೋಮ, ವರುಣ, ಇಂದ್ರ.. )  ಈ ಯಾಗವನ್ನು ಮಾಡಿದರೆ ಅವರಿಗೆ ಏನು ಫಲ ಎನ್ನುವುದನ್ನು ವಿವರಿಸುತ್ತಾರೆ-

 

ಅಯೋಗ್ಯಕಾನ್ಮಹಾಪದೇ ವಿಧಾತುರೇಷ ಹಿ ಕ್ರತುಃ ।

ಸಮಾನಯೋಗ್ಯತಾಗಣಾತ್ ಕರೋತಿ ಮುಕ್ತಿಗಂ ವರಮ್ ॥೨೧.೮೩॥

 

ಪುರಾ ತು ಮುಕ್ತಿತೋsಧಿಕಂ ಸ್ವಜಾತಿತಃ ಕರೋತಿ ಚ ।

ಅತಸ್ತ್ರಿಶಙ್ಕುಪುತ್ರಕೋ ನೃಪಾನತೀತ್ಯ ವರ್ತ್ತತೇ ॥೨೧.೮೪॥

ಬ್ರಹ್ಮಪದವಿಗೆ ಯೋಗ್ಯರಲ್ಲದವರು ಮಾಡಿದರೆ ಈ ಯಾಗ,

ಮುಕ್ತಲೋಕದಲ್ಲಿ ತನ್ನ ಕಕ್ಷೆಯವರಿಗಿಂತ ಉತ್ತಮ ಜಾಗ,

ಮುಕ್ತಿ ಹೊಂದುವ ಮೊದಲು,ತನ್ನ ಸಮಾನ ಯೋಗ್ಯತೆಯವರಿಗಿಂತ ಬೇಗ ಸಿಗುತ್ತದೆ ಉತ್ತಮ ಲೋಕದ ಪಾಲು,

ಆ ಕಾರಣದಿಂದಾಗಿಯೇ ತ್ರಿಶಂಕುಪುತ್ರ ರಾಜಾ ಹರಿಶ್ಚಂದ್ರ ಆಗುತ್ತಾನೆ ತನ್ನ ಸಮಾನ ಕ್ಷತ್ರಿಯರಿಗಿಂತ ಮಿಗಿಲು.

 

ಸುರಾಂಶಕೋsಪಿ ತೇ ಪಿತಾ ವಿನಾ ಹಿ ರಾಜಸೂಯತಃ 

ನ ಶಕ್ಷ್ಯತಿ ತ್ರಿಶಙ್ಕುಜಾದ್ ವರತ್ವಮಾಪ್ತುಮದ್ಯ ತು ॥೨೧.೮೫॥

ನಿನ್ನ ತಂದೆ ಪಾಂಡುರಾಜ ದೇವತಾ ಅಂಶದಿಂದ ಕೂಡಿದ್ದರೂ ಕೂಡಾ,

ರಾಜಸೂಯ ಮಾಡದಿದ್ದರಿಂದ ಹಿಡಿಯಲಾಗಲಿಲ್ಲ ಹರಿಶ್ಚಂದ್ರನ ಜಾಡ.

 

ಏಕೆ ಮರುದ್ಗಣೋತ್ತಮನಾದ ಪಾಂಡುವಿಗೆ ಈ ಸಮಸ್ಯೆ ಎದುರಾಯಿತು ಎನ್ನುವುದರ ಹಿನ್ನೆಲೆಯನ್ನು ಹೇಳುತ್ತಾರೆ-

 

ತಪಶ್ಚರನ್ ಸಮಾಗತೇ ಶಚೀಪತೌ ಪಿತಾ ತವ ।

ಮರುದ್ಗಣೋತ್ತಮಃ ಪುರಾ ನತೂತ್ಥಿತಃ ಶಶಾಪ ಸಃ ॥೨೧.೮೬॥

ಮರುದ್ಗಣೋತ್ತಮನಾದ ನಿನ್ನ ತಂದೆ ತಪಸ್ಸು ಮಾಡುತ್ತಿದ್ದ,

ಇಂದ್ರ ಬಂದಾಗ ಏಳದಿರಲು, ಇಂದ್ರ ಅವನನ್ನು ಶಪಿಸಿದ.

 

ವ್ರಜಸ್ವ ಮಾನುಷೀಂ ತನುಂ ತತೋ ಮೃತಃ ಪುನರ್ದ್ಧಿವಮ್ ।

ಗತೋsಪಿ ನ ಸ್ವಕಾಂ ತನುಂ ಪ್ರವೇಷ್ಟುಮತ್ರ ನೇಶಸೇ ॥೨೧.೮೭॥

 

ತದಾsಧಿಕಸ್ತ್ರಿಶಙ್ಕುಜೋ ಭವಿಷ್ಯತು ತ್ವದಿತ್ಯಥ ।

ಕ್ಷಮಾಪಿತಶ್ಚ ವಾಸವೋ ಜಗಾದ ರಾಜಸೂಯತಃ ।

ತ್ರಿಶಙ್ಕುಜಾಧಿಕೋ ಭವಾನವಾಪ್ಸ್ಯತಿ ಸ್ವಕಾಂ ತನುಮ್ ॥೨೧.೮೮॥

 ಮನುಷ್ಯದೇಹ ಹೊಂದಿ ಆನಂತರ ಆ ದೇಹ ತೊರೆಯುತ್ತೀಯ,

ಉನ್ನತಲೋಕ ಸೇರಿದರೂ ಸೇರಲಾಗಲ್ಲ ನಿನ್ನ ಸ್ವರೂಪ ಕಾಯ.

ಆಗ ತ್ರಿಶಂಕುಪುತ್ರ ರಾಜ ಹರಿಶ್ಚಂದ್ರ ನಿನಗಿಂತ ಮಿಗಿಲಾಗಿರುವ.

ಆಗ ಮರುದ್ಗಣೋತ್ತಮ ಇಂದ್ರನಲ್ಲಿ ಕ್ಷಮೆಯನ್ನು ಯಾಚಿಸುತ್ತಾನೆ,

ಇಂದ್ರ- ರಾಜಸೂಯದಿಂದ ನೀನು ಮೂಲರೂಪ ಹೊಂದುವೆ ಎನ್ನುತ್ತಾನೆ.

 

ಅತಃ ಸುಕಾರ್ಯ್ಯ ಏವ ತೇ ಯುಧಿಷ್ಠಿರ ಕ್ರತೂತ್ತಮಃ ।

ಭವದ್ಭಿರಪ್ಯವಾಪ್ಯತೇ ಸ್ವಯೋಗ್ಯತಾsಮುನಾsಖಿಲಾ ॥೨೧.೮೯॥

ಓ ಧರ್ಮರಾಯಾ, ಇಷ್ಟೆಲ್ಲಾ ಕಾರಣಗಳಿಂದ ಶ್ರೇಷ್ಠ ರಾಜಸೂಯ ನಿನ್ನಿಂದ ಆಗಲೇಬೇಕಿದೆ,

ನಿನ್ನ ಅಪ್ಪನಷ್ಟೇ ಅಲ್ಲ,ನೀವೆಲ್ಲರೂ ಕೂಡಾ ಯೋಗ್ಯತಾನುಸಾರವಾದ ಫಲವ ಹೊಂದಬೇಕಿದೆ.


[Contributed by Shri Govind Magal]

Wednesday 2 February 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 72-80

 

ಇತ್ಯುಕ್ತೋ ನಾರದಃ ಪ್ರಾಹ ರಾಜಸೂಯಕೃತೋನ್ನತಿಮ್ ।

ಹರಿಶ್ಚನ್ದ್ರಸ್ಯ ತಾಂ ದೃಷ್ಟ್ವಾ ಪಿತಾ ಯಮಸಭಾತಳೇ ।

ಸ್ಥಿತಸ್ತ್ವಾಮವದತ್ ಪಾಣ್ಡೂ ರಾಮದ್ವಯಸುದೈವತೇ    ॥೨೧.೭೨॥

ಧರ್ಮರಾಜನ ಪ್ರಶ್ನೆಗೆ ನಾರದರಿಂದ ಬಂದ ಉತ್ತರ,

ರಾಜಸೂಯದಿಂದ ಹರಿಶ್ಚಂದ್ರಗೆ ಉನ್ನತಿಯ ಎತ್ತರ.

ಹರಿಶ್ಚಂದ್ರಗೆ ಇಂದ್ರಲೋಕ ಲಭ್ಯವಾಗಿಸಿದ್ದು ರಾಜಸೂಯಯಾಗ,

ಪಾಂಡುರಾಜ ಅದ ಮಾಡಿಲ್ಲವಾದ್ದರಿಂದ ಇಲ್ಲ ಇಂದ್ರಲೋಕದ ಯೋಗ.

ಈ ಸಂದೇಹ ನಿನಗೊಂದಲ್ಲ, ನಿನ್ನ ಅಪ್ಪ ಪಾಂಡುವಿಗೂ ಬಂದ ಸಲುವಾಗಿ,

ರಾಮ ಪರಶುರಾಮರು ಆರಾಧ್ಯರಾದ ಯಮಸಭೆಯಿಂದ ಸಂದೇಶ ನಿನಗಾಗಿ.

 

ಕರೋತು ರಾಜಸೂಯಂ ಮೇ ಪುತ್ರೋsಜೇಯಾನುಜಾರ್ಚ್ಚಿತಃ ।

ಪಾಲಿತೋ ವಾಸುದೇವೇನ ಕಿಂ ತಸ್ಯಾಸಾದ್ಧ್ಯಮತ್ರ ಹಿ              ॥೨೧.೭೩॥

 

ನನ್ನ ಮಗ ಧರ್ಮರಾಜನಿಗುಂಟು ಅಜೇಯ ತಮ್ಮಂದಿರ ಬಲ,

ಅವರಿಂದ ಕೂಡಿಕೊಂಡು ಮಾಡಿದರಾಗುವುದು ರಾಜಸೂಯ ಸಫಲ.

ಶ್ರೀಕೃಷ್ಣರಕ್ಷಿತನಾಗಿರುವ ಅವನಿಗೆ ಇದ್ಯಾವುದೂ ಅಸಾಧ್ಯದ ಮಾತಲ್ಲ.

 

ಏತಚ್ಛ್ರುತ್ವಾ ಧರ್ಮ್ಮಸುತೋ ಭ್ರಾತೃಭಿಃ ಸಹಿತೋ ವಶೀ ।

ಅವಾಪ್ತಿಂ ರಾಜಸೂಯಸ್ಯ ಮನ್ತ್ರಯಾಮಾಸ ಧರ್ಮ್ಮವಿತ್        ॥೨೧.೭೪॥

ನಾರದ ಮುನಿಗಳ ಮಾತನ್ನು ಕೇಳಿಸಿಕೊಂಡ ಧರ್ಮರಾಜ ತಾನು,

ತಮ್ಮಂದಿರೊಡನೆ ರಾಜಸೂಯದ ಮಂತ್ರಾಲೋಚನೆ ಮಾಡಿದನು.

 

ಸುಕಾರ್ಯ್ಯಮೇತದಿತ್ಯಲಂ ನಿಶಮ್ಯ ಸೋದರೋದಿತಮ್ ।

ಅಯಾತಯತ್ ಸ್ವಸಾರಥಿಂ ಸ ಕೇಶವಾಯ ಭೂಪತಿಃ               ॥೨೧.೭೫॥

ಇದು ಮಾಡಲೇಬೇಕಾದ ಒಳ್ಳೇ ಕಾರ್ಯವೆಂಬುದು ತಮ್ಮಂದಿರ ಅಭಿಪ್ರಾಯ,

ಸಮಾಲೋಚನೆ ಬಳಿಕ ಕೃಷ್ಣನೆಡೆ ತನ್ನ ಸಾರಥಿಯ ಕಳಿಸಿದ ಧರ್ಮರಾಯ.

 

ತದೈವ ಕೇಶವಸ್ಯ ಯಾಃ ಸ್ತ್ರಿಯಸ್ತದೀಯತಾತಕೈಃ ।

ಸಹೋದರೈಶ್ಚ ಯಾಪಿತಃ ಸುದೂತ ಆಪ ಮಾಧವಮ್             ॥೨೧.೭೬॥

ಅದೇ ಸಮಯದಲ್ಲಿ ಕೃಷ್ಣನ ಹದಿನಾರುಸಾವಿರದ ನೂರು ಪತ್ನಿಯರ ಅಪ್ಪಂದಿರಿಂದ,

ಅವರೆಲ್ಲರ ಅಣ್ಣ ತಮ್ಮಂದಿರಿಂದಲೂ ಕಳಿಸಲ್ಪಟ್ಟ ಬೇರೊಬ್ಬ ದೂತನೂ ಬಂದ.

 

ಪ್ರಣಮ್ಯ ಕೇಶವಂ ವಚಃ ಸ ಆಹ ಮಾಗಧೇನ ತೇ ।

ವಿವಾಹಬಾನ್ಧವಾ ರಣೇ ವಿಜಿತ್ಯ ರೋಧಿತಾ ಗಿರೌ          ॥೨೧.೭೭॥

ಆ ದೂತ ಕೇಶವನಿಗೆ ನಮಸ್ಕಾರ ಮಾಡಿ ಹೀಗೆ ಹೇಳಿದ ,

ನಿನ್ನ ವಿವಾಹಬಂಧುಗಳೆಲ್ಲಾ ಸೋತಿದ್ದಾರೆ ಜರಾಸಂಧನಿಂದ.

ಜರಾಸಂಧನೊಡನೆ ಆದ ಯುದ್ಧದಲ್ಲಿ ಅವರು ಸೋತಿದ್ದಾರೆ,

ಹಾಗೆ ಸೋತವರು ಪರ್ವತದ ತಪ್ಪಲಿನಲ್ಲಿ ಬಂಧಿತರಾಗಿದ್ದಾರೆ.

 

ನೃಪಾಯುತದ್ವಯೇನ ಸೋsಷ್ಟವಿಂಶಕೈಃ ಶತೈರಪಿ ।

ಯಿಯಕ್ಷುರುಗ್ರರೂಪಿಣಂ ತ್ರಿಲೋಚನಂ ತ್ವಯಿ ಸ್ಥಿತೇ                 ॥೨೧.೭೮॥

 

ಕೃಷ್ಣಾ, ನೀನಿದ್ದಾಗಲೇ ಇಪ್ಪತ್ತೆರಡು ಸಾವಿರದ ಎಂಟುನೂರು ಅರಸರ ಬಲಿಯಾಗುತ್ತಿದೆ,

ಉಗ್ರರೂಪಿಯಾದ ರುದ್ರನಿಗೋಸ್ಕರ ಯಾಗ ನೆರವೇರಿಸುವ ಸಂಕಲ್ಪವೂ ಮಾಡಿಯಾಗಿದೆ.

 

ವಿಮೋಚಯಸ್ವ ತಾನ್ ಪ್ರಭೋ ನಿಹತ್ಯ ಮಾಗಧೇಶ್ವರಮ್ ।

ಅವೈದಿಕಂ ಮಖಂ ಚ ತಂ ವಿಲುಮ್ಪ ಧರ್ಮ್ಮಗುಪ್ತಯೇ   ॥೨೧.೭೯॥

ಪ್ರಭುವೇ, ಜರಾಸಂಧನ ವಧಿಸಿ ರಾಜರುಗಳನ್ನು ಮಾಡು ಬಿಡುಗಡೆ,

ಧರ್ಮರಕ್ಷಣೆಗಾಗಿ ಅವನು ಮಾಡುತ್ತಿರುವ ಅವೈದಿಕ ಯಜ್ಞವ ತಡೆ.

 

ಇತೀರಿತೋsಥ ಸಾರಥಿಂ ನಿಶಾಮ್ಯ ಧರ್ಮ್ಮಜಸ್ಯ ಚ ।

ನಿಶಮ್ಯ ತದ್ವಚಸ್ತದಾ ಜಗಾಮ ಪಾಣ್ಡವಾಲಯಮ್        ॥೨೧.೮೦॥

ಈ ರೀತಿಯಾಗಿತ್ತು ರಾಜರ ಕಡೆಯಿಂದ ಬಂದ ಸಾರಥಿಯ ಸಂದೇಶದ ಪೂರ್ಣ ಪಾಠ,

ಧರ್ಮಜನ ಕಡೆಯಿಂದ ಬಂದ ಸಾರಥಿಯ ಮಾತು ಕೇಳಿದ ಕೃಷ್ಣ ಇಂದ್ರಪ್ರಸ್ಥಕ್ಕೆ ಹೊರಟ.


[Contributed by Shri Govind Magal]