Wednesday 1 January 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 41 -45

ಭೀಮಃ ಸಮಸ್ತಂ ಪ್ರತಿಭಾಬಲೇನ ಜಾನನ್ ಸ್ನೇಹಂ ತ್ವದ್ವಿತೀಯಂ ಕನಿಷ್ಠೇ ।
ದ್ರೋಣಸ್ಯ ಕೃತ್ವಾ ಸಕಲಾಸ್ತ್ರವೇದಿನಂ ಕರ್ತುಂ ಪಾರ್ತ್ಥಂ ನಾರ್ಜ್ಜುನವಚ್ಚಕಾರ ॥೧೫.೪೧॥
ಭೀಮಸೇನ ತನ್ನಲ್ಲಿದ್ದರೂ ಸಮಸ್ತ ಪ್ರತಿಭೆ ಮತ್ತು ಬಲ,
ತೋರದೇ, ಅರ್ಜುನಗೆ ದ್ರೋಣಪ್ರೀತಿ ಕೊಡಿಸುವ ಛಲ.
ಮಾಡಲೆಂದೇ ಅರ್ಜುನನ ಸರ್ವಾಸ್ತ್ರಕೋವಿದ,
ಭೀಮ ಪ್ರತಿಜ್ಞೆಗೈಯ್ಯದೇ ತಾನು ಸುಮ್ಮನಾದ.

ನೈವಾತಿಯತ್ನೇನ  ದದರ್ಶ ಲಕ್ಷಂ^ ಶುಶ್ರೂಷಾಯಾಂ ಪಾರ್ತ್ಥಮಗ್ರೇ ಕರೋತಿ ।
ಸ್ವಬಾಹುವೀರ್ಯ್ಯಾದ್ ಭಗವತ್ಪ್ರಸಾದಾನ್ನಿಹನ್ಮಿ ಶತ್ರೂನ್ ಕಿಮನೇನ ಚೇತಿ ॥೧೫.೪೨॥
ಭೀಮ ಮಾಡುತ್ತಿರಲಿಲ್ಲ ಶರಪ್ರಯೋಗದಲ್ಲಿ ಮಹಾಪ್ರಯತ್ನ,
ದ್ರೋಣರ ಕಣ್ಣಲ್ಲಿ ಪಾರ್ಥ ದೊಡ್ಡವನಾಗಲೆಂದು ಅವನ ಯತ್ನ.
ಗುರುಸೇವೆಯಲ್ಲಿ ಅರ್ಜುನನ ಬಿಡುತ್ತಿದ್ದ ಮುಂದೆ,
ಕೊಲ್ಲಬಲ್ಲೆ ನಾ ಸಹಜಬಲ ಹರಿ ಅನುಗ್ರಹದಿಂದೆ.
ಏನಾಗಬೇಕಿದೆ ಪ್ರತಿಜ್ಞೆ ಅಸ್ತ್ರೋಪದೇಶಗಳಿಂದೆ.

ತದಾ ಸಮೀಯುಃ ಸಕಲಾಃ ಕ್ಷಿತೀಶಪುತ್ರಾ ದ್ರೋಣಾತ್ ಸಕಲಾಸ್ತ್ರಾಣ್ಯವಾಪ್ತುಮ್ ।
ದದೌ ಸ ತೇಷಾಂ ಪರಮಾಸ್ತ್ರಾಣಿ ವಿಪ್ರೋ ರಾಮಾದವಾಪ್ತಾನ್ಯಗತಾನಿ ಚಾನ್ಯೈಃ             ॥೧೫.೪೩॥
ರಾಜಕುಮಾರರು ಬಂದರು ದ್ರೋಣಾಚಾರ್ಯರಿಂದ ಪಡೆಯಲು ಅಸ್ತ್ರ,
ಪರಶುರಾಮರಿಂದ ಕಲಿತ ದ್ರೋಣರು ಕೊಟ್ಟರೆಲ್ಲರಿಗೆ  ಅದ್ವಿತೀಯ ಶಾಸ್ತ್ರ.

ಅಸ್ತ್ರಾಣಿ ಚಿತ್ರಾಣಿ ಮಹಾನ್ತಿ ದಿವ್ಯಾನ್ಯನ್ಯೈರ್ನೃಪೈರ್ಮ್ಮನಸಾsಪ್ಯಸ್ಮೃತಾನಿ ।
ಅವಾಪ್ಯ ಸರ್ವೇ ತನಯಾ ನೃಪಾಣಾಂ ಶಕ್ತಾ ಬಭೂವುರ್ನ್ನ ಯಥೈವ ಪೂರ್ವೇ             ॥೧೫.೪೪॥
ಹೊಂದಿದರು ಆಶ್ಚರ್ಯಕರ ಮಹತ್ತರ ಅಲೌಕಿಕವಾದ ದಿವ್ಯಾಸ್ತ್ರ,
ಪಡೆದರು ಬೇರಾರೂ ಯೋಚಿಸಲಾಗದ ಬಲಶಕ್ತಿಯ ಅಸ್ತ್ರ.

ನೈತಾದೃಶಾಃ ಪೂರ್ವಮಾಸನ್ ನರೇನ್ದ್ರಾ ಅಸ್ತ್ರೇ ಬಲೇ ಸರ್ವವಿದ್ಯಾಸು ಚೈವ ।
ದೌಷ್ಷನ್ತಿಮಾನ್ಧಾತೃಮರುತ್ತಪೂರ್ವಾಶ್ಚೈತತ್ಸಮಾನಾಃ ಸುರುದಾರವೀರ್ಯಾಃ             ॥೧೫.೪೫॥
ಹೀಗೆ ಅಸ್ತ್ರದಲ್ಲಿ ಬಲದಲ್ಲಿ ವಿದ್ಯೆಗಳಲ್ಲಿ ದ್ರೋಣಶಿಷ್ಯರಾದರು ಉತ್ತಮ,
ಹಿಂದಾರೂ ಇರದ, ಭರತ ಮಾಂಧಾತೃ ಮೊದಲಾದವರ ಸರಿಸಮ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 36 - 40

ಉನ್ಮಾದನಾದೀನಿ ಸ ವೇದ ಕೃಷ್ಣಾದಸ್ತ್ರಾಣ್ಯನಾಪತ್ಸು ನ ತಾನಿ ಮುಞ್ಚೇತ್ ।
ಇತ್ಯಾಜ್ಞಯಾ ಕೇಶವಸ್ಯಾಪರಾಣಿ ಪ್ರಯೋಗಯೋಗ್ಯಾನಿ ಸದೇಚ್ಛತಿ ಸ್ಮ ॥೧೫.೩೬॥
ಅರ್ಜುನ ಉನ್ಮಾದನಾದಿ ಅಸ್ತ್ರಗಳ ಕೃಷ್ಣನಿಂದ ತಿಳಿದಿದ್ದ,
ಆಪತ್ಕಾಲದಲ್ಲಿ ಮಾತ್ರ ಅವುಗಳ ಬಳಕೆಯೆಂದೂ ಅರಿತಿದ್ದ.
ಸದಾ ಪ್ರಯೋಗಯೋಗ್ಯ ಅಸ್ತ್ರಗಳ ಕಲಿಯಲು ಬಯಸಿದ್ದ.

ಭೀಷ್ಮಾದಿಭಿರ್ಭವಿತಾ ಸಙ್ಗರೋ ನಸ್ತದಾ ನಾಹಂ ಗುರುಭಿರ್ನ್ನಿತ್ಯಯೋದ್ಧಾ ।
ಭವೇಯಮೇಕಃ ಫಲ್ಗುನೋsಸ್ತ್ರಜ್ಞ ಏಷಾಂ ನಿವಾರಕಶ್ಚೇನ್ಮಮ ಧರ್ಮ್ಮಲಾಭಃ             ॥೧೫.೩೭॥
ನ ಬುದ್ಧಿಪೂರ್ವಂ ವರ ಇನ್ದಿರಾಪತೇರನ್ಯತ್ರ ಮೇ ಗ್ರಾಹ್ಯ ಇತಶ್ಚ ಜಿಷ್ಣುಃ ।
ಕರೋತು ಗುರ್ವರ್ತ್ಥಮಿತಿ ಸ್ಮ ಚಿನ್ತಯನ್ ಭೀಮಃ ಪ್ರತಿಜ್ಞಾಂ ನ ಚಕಾರ ತತ್ರ             ॥೧೫.೩೮॥
ಭೀಷ್ಮ ಮೊದಲಾದವರೊಡನೆ ಮುಂದಾಗಲಿದೆ ಯುದ್ಧ,
ಗುರುಹಿರಿಯರೊಡನೆ ಕಾದಲು ನಾನೆಂದೂ ಇಲ್ಲ ಸಿದ್ಧ.
ಅಸ್ತ್ರಬಲ್ಲ ಅರ್ಜುನನಿಂದಾದರೆ ಭೀಷ್ಮಾದಿಗಳ ನಿವಾರಣ,
ಭೀಮಗನಿಸಿತು ಅವನಿಗದರಿಂದ ಲಾಭ ಮತ್ತು ಸಮಾಧಾನ.
ಇಂದಿರಾಪತಿ ಹರಿಯಲ್ಲದ ಹೊರತು ಬೇರೆಯವರಿಂದ ವರ ಪಡೆಯುವಂತಿಲ್ಲ,
ಅರ್ಜುನ ಗುರುಗಳಿಗಾಗಿ ಪ್ರತಿಜ್ಞೆ ಮಾಡಲೆಂದೇ ಭೀಮಸೇನ ತಾನು ಮಾಡಲಿಲ್ಲ.

ತತ್ಪ್ರೇರಿತೇನಾರ್ಜ್ಜುನೇನ ಪ್ರತಿಜ್ಞಾ ಕೃತಾ ಯದಾ ವಿಪ್ರವರಸ್ತತಃ ಪರಮ್ ।
ಸ್ನೇಹಂ ನಿತಾನ್ತಂ ಸುರರಾಜಸೂನೌ ಕೃತ್ವಾ ಮಹಾಸ್ತ್ರಾಣಿ ದದೌ ಸ ತಸ್ಯ             ॥೧೫.೩೯॥
ಭೀಮಸೇನನಿಂದ ಪ್ರೇರಿತನಾದ ಅರ್ಜುನ,
ಯಾವಾಗ ತಾನು ಮಾಡಿದನೋ ಪ್ರತಿಜ್ಞ.
ದ್ರೋಣರು ಇಂದ್ರಪುತ್ರ ಅರ್ಜುನನಿಗೆ,
ಪ್ರೀತಿಯಲಿ ಕೊಟ್ಟರು ಮಹಾಸ್ತ್ರಗಳ ಕೊಡುಗೆ.

ಸ ಪಕ್ಷಪಾತಂ ಚ ಚಕಾರ ತಸ್ಮಿನ್ ಕರೋತಿ ಚಾಸ್ಯೋರುತರಾಂ ಪ್ರಶಂಸಾಮ್ ।
ರಹಸ್ಯವಿದ್ಯಾಶ್ಚ ದದಾತಿ ತಸ್ಯ ನಾನ್ಯಸ್ಯ ಕಸ್ಯಾಪಿ ತಥಾ ಕಥಞ್ಚಿತ್ ॥೧೫.೪೦॥
ದ್ರೋಣರಲ್ಲಿ ಬೆಳೆಯಿತು ಅರ್ಜುನನಲ್ಲಿ ಪಕ್ಷಪಾತದ ಧೋರಣೆ,
ಅವನನ್ನು ಹೊಗಳುತ್ತಾ ಮಾಡುತ್ತಿದ್ದರು ಅತಿಯಾದ ಆದರಣೆ.
ಅವನಿಗೆ ಮಾಡಿದರು ಅನೇಕ ರಹಸ್ಯ ವಿದ್ಯೆಗಳ ಉಪದೇಶ,
ಅರ್ಜುನನಂತೆ ಉಳಿದವರಿಗೆ ಇರಲಿಲ್ಲೆಂಬುದು ವಿಶೇಷ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 31 - 35

ಯಥೇಷ್ಟವಿತ್ತಾಶನಪಾನಮಸ್ಯ ಧರ್ಮ್ಮಾತ್ಮಜಃ ಪ್ರತಿಜಜ್ಞೇ ಸುಶೀಘ್ರಮ್ ।
ತಥೈವ ತೇನೋದ್ಧೃತಮಙ್ಗುಲೀಯಂ ತ್ರಿವರ್ಗ್ಗಮುಖ್ಯಾತ್ಮಜವಾಕ್ಯತೋsನು             ॥೧೫.೩೧॥
ಧರ್ಮರಾಜ ಕೊಡುತ್ತಾನೆ ದ್ರೋಣಾಚಾರ್ಯರಿಗೆ ವಚನ,
ಕೊಡುವೆ ನಿಮಗೆ ಊಟ ಪಾನೀಯ ಬೇಡಿದಷ್ಟು ಹಣ.
ತ್ರಿವರ್ಗಗಳಲ್ಲಿ ಮುಖ್ಯನಾದ ಧರ್ಮನ ಮಗನ ಮಾತು,
ಅನುಸರಿಸಿ ದ್ರೋಣರಿಂದ ಉಂಗುರವೂ ಎತ್ತಲ್ಪಟ್ಟಿತು.

ಪಪ್ರಚ್ಛುರೇನಂ ಸಹಿತಾಃ ಕುಮಾರಾಃ ಕೋsಸೀತಿ ಸೋsಪ್ಯಾಹ ಪಿತಾಮಹೋ ವಃ ।
ವಕ್ತೇತಿ ತೇ ದುದ್ರುವುರಾಶು ಭೀಷ್ಮಂ ದ್ರೋಣೋsಯಮಿತ್ಯೇವ ಸ ತಾಂಸ್ತದೋಚೇ             ॥೧೫.೩೨॥
ಕುಮಾರರು ಕೇಳುತ್ತಾರೆ ದ್ರೋಣರನ್ನು -ನೀನ್ಯಾರು,
ದ್ರೋಣರೆಂದರು ನಿಮ್ಮ ತಾತ ಹೇಳುವ -ನಾನ್ಯಾರು.
ಮಕ್ಕಳೆಲ್ಲ ಭೀಷ್ಮರಲ್ಲಿ ವಿಷಯ ಕೇಳಿದರು,
ಭೀಷ್ಮರು ಇದು ದ್ರೋಣ ಎಂದು ಹೇಳಿದರು.

ನ ರಾಜಗೇಹಂ ಸ ಕದಾಚಿದೇತಿ ತೇನಾದೃಷ್ಟಃ ಸ ಕುಮಾರೈಃ ಪುರಾsತಃ ।
ಭೀಷ್ಮೋ ವಿದ್ಯಾಸ್ತೇನ ಸಹೈವ ಚಿನ್ತಯನ್ನಸ್ತ್ರಪ್ರಾಪ್ತಿಂ ತಸ್ಯ ಶುಶ್ರಾವ ರಾಮಾತ್ ॥೧೫.೩೩॥
ದ್ರೋಣರು ಅರಮನೆಗೆಂದೂ ಹೋಗುತ್ತಿರಲಿಲ್ಲ,
ಹಾಗಾಗಿ ಕುಮಾರರೂ ಅವರನ್ನು ನೋಡಿರಲಿಲ್ಲ.
ಭೀಷ್ಮರಿಗೂ ದ್ರೋಣರಿಗೂ ಇತ್ತು ಸಂಪರ್ಕ ಮತ್ತು  ಮಾತುಕತೆ,
ಗೊತ್ತಿತ್ತು ಅಸ್ತ್ರವಿದ್ಯೆ ಕಲಿತದ್ದವರು ಪರಶುರಾಮರ ಜೊತೆ.

ಶ್ರುತ್ವಾ ವೃದ್ಧಂ ಕೃಷ್ಣವರ್ಣ್ಣಂ ದ್ವಿಜಂ ತಂ ಮಹಾಸ್ತ್ರವಿದ್ಯಾಮಪಿ ತಾಂ ಮಹಾಮತಿಃ ।
ದ್ರೋಣಂ ಜ್ಞಾತ್ವಾ ತಸ್ಯ ಶಿಷ್ಯತ್ವ ಏತಾನ್ ದದೌ ಕುಮಾರಾಂಸ್ತತ್ರ ಗತ್ವಾ ಸ್ವಯಂ ಚ ॥೧೫.೩೪॥
ಮಕ್ಕಳಿಂದ ಕೇಳಿಸಿಕೊಂಡು ಅವ ಕಪ್ಪಾದ ಮುದುಕ ಬ್ರಾಹ್ಮಣ,
ವಿದ್ಯಾಬಲದ ಚತುರ ಇವನು ನಿಶ್ಚಯವಾಗಿಯೂ ದ್ರೋಣ.
ದ್ರೋಣರಲ್ಲಿ ಹೋಗಿ ಒಪ್ಪಿಸಿದ ಮಕ್ಕಳಿಗೀಯಲು ವಿದ್ಯಾದಾನ.

ದ್ರೋಣೋsಥ ತಾನವದದ್ ಯೋ ಮದಿಷ್ಟಂ ಕರ್ತ್ತುಂ ಪ್ರತಿಜ್ಞಾಂ ಪ್ರಥಮಂ ಕರೋತಿ ।
ತಂ ಧನ್ವಿನಾಂ ಪ್ರವರಂ ಸಾಧಯಿಷ್ಯ ಇತ್ಯರ್ಜ್ಜುನಸ್ತಾಮಕರೋತ್ ಪ್ರತಿಜ್ಞಾಮ್ ॥೧೫.೩೫॥
ಪ್ರತಿಜ್ಞೆ ಮಾಡುವಿರಾ ನಿಮ್ಮಲ್ಲಿ ಯಾರು,
ನನ್ನ ಇಷ್ಟಾರ್ಥವನ್ನು ಪೂರೈಸುವವರು.
ಅವನನ್ನು ಮಾಡುತ್ತೇನೆ ಜಗದ ಶ್ರೇಷ್ಠ ಧನುರ್ಧಾರಿ,
ಅರ್ಜುನ ಪ್ರತಿಜ್ಞೆಗೈಯ್ಯುತ್ತಾನೆ ಸಂದರ್ಭಾನುಸಾರಿ.
[Contributed by Shri Govind Magal]