Monday 23 September 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 11 - 15

ಕ್ಷುಬ್ಧೋsತಿಕೋಪವಶತಃ ಸ್ವಗದಾಮಮೋಘಾಂ ದತ್ತಾಂ ಶಿವೇನ ಜಗೃಹೇ ಶಿವಭಕ್ತವನ್ದ್ಯಃ ।
ಶೈವಾಗಮಾಖಿಲವಿದತ್ರ ಚ ಸುಸ್ಥಿರೋsಸೌ ಚಿಕ್ಷೇಪ ಯೋಜನಶತಂ ಸ ತು ತಾಂ ಪರಸ್ಮೈ ॥೧೪.೧೧॥
ಶೈವಾಗಮಗಳಲ್ಲಿ ಸರ್ವಜ್ಞ ಮತ್ತು ನಿಷ್ಠೆಯಿದ್ದವ ಜರಾಸಂಧ,
ಸಿಟ್ಟಿನಿಂದ ವ್ಯರ್ಥವಾಗದ ಶಿವಕೊಟ್ಟ ಗದೆಯನ್ನು ಹಿಡಿದ.
ಮಗಧದಿಂದ ನೂರುಯೋಜನಕ್ಕೆ ಕೃಷ್ಣನೆಂದು ಗದೆ ಎಸೆದ.

ಅರ್ವಾಕ್ ಪಪಾತ ಚ ಗದಾ ಮಧುರಾಪ್ರದೇಶಾತ್ ಸಾ ಯೋಜನೇನ ಯದಿಮಂ ಪ್ರಜಗಾದ ಪೃಷ್ಟಃ ।
ಏಕೋತ್ತರಾಮಪಿ ಶತಾಚ್ಛತಯೋಜನೇತಿ ದೇವರ್ಷಿರತ್ರ ಮಧುರಾಂ ಭಗವತ್ಪ್ರಿಯಾರ್ತ್ಥೇ ॥೧೪.೧೨॥
ಜರಾಸಂಧ ಕೃಷ್ಣಗೆ ಎಸೆದ ಆ ಗದೆ,
ಬಿದ್ದದ್ದು ಒಂದು ಯೋಜನ ಹಿಂದೆ.
ಜರಾಸಂಧನಿಂದ ಕೇಳಲ್ಪಟ್ಟ ದೇವಋಷಿ ನಾರದರು,
ಭಗವತ್ಪ್ರೀತಿಗಾಗಿ ನೂರೊಂದಿದ್ದರೂ ನೂರೆಂದು ಹೇಳಿದ್ದರು.

ಶಕ್ತಸ್ಯ ಚಾಪಿ ಹಿ ಗದಾಪ್ರವಿಘಾತನೇ ತು ಶುಶ್ರೂಷಣಂ ಮದುಚಿತಂ ತ್ವಿತಿ ಚಿನ್ತಯಾನಃ ।
ವಿಷ್ಣೋರ್ಮ್ಮುನಿಃ ಸ ನಿಜಗಾದ ಹ ಯೋಜನೋನಂ ಮಾರ್ಗ್ಗಂ ಪುರೋ ಭಗವತೋ ಮಗಧೇಶಪೃಷ್ಟಃ ॥೧೪.೧೩ ॥

ಗದೆ ಎದುರಿಸಲು ಕೃಷ್ಣನಾಗಿದ್ದ ಸದಾ ಶಕ್ತ,
ನಾರದರ ಯೋಚನೆ ಭಗವತ್ಸೇವೆಗಿದು ಸೂಕ್ತ.
ನುಡಿದರು ಮಧುರೆ ಒಂದು ಯೋಜನೆ ಕಡಿಮೆಯಂತ.

ಕ್ಷಿಪ್ತಾ ತು ಸಾ ಭಗವತೋsಥ ಗದಾ ಜರಾಖ್ಯಾಂ ತತ್ಸನ್ಧಿನೀಮಸುಭಿರಾಶು ವಿಯೋಜ್ಯ ಪಾಪಾಮ್ ।
ಮರ್ತ್ತ್ಯಾಶಿನೀಂ ಭಗವತಃ ಪುನರಾಜ್ಞಯೈವ ಯಾತಾ ಗಿರೀಶಸದನಂ ಮಗಧಂ ವಿಸೃಜ್ಯ ॥೧೪.೧೪ ॥
ಕೃಷ್ಣಗೆಂದು ಜರಾಸಂಧ ಎಸೆದ ಆ ಗದೆ,
ಜರೆಗೆ ಕೊಟ್ಟಿತ್ತು ಪ್ರಾಣಾಂತಿಕವಾದ ಒದೆ.
ಜರೆ ಜರಾಸಂಧನ ದೇಹ ಜೋಡಿಸಿದ ಅವನ ಅಮ್ಮ,
ಭಗವದಾಜ್ಞೆಯಂತೆ ಗದೆ ಜರೆಮುಗಿಸಿ ಕೈಲಾಸ ಸೇರಿದ ಮರ್ಮ.

ರಾಜಾ ಸ್ವಮಾತೃತ ಉತೋ ಗದಯಾ ಚ ಹೀನಃ ಕ್ರೋಧಾತ್ ಸಮಸ್ತನೃಪತೀನಭಿಸನ್ನಿಪಾತ್ಯ ।
ಅಕ್ಷೋಹಿಣೀತ್ರ್ಯಧಿಕವಿಂಶಯುತೋsತಿವೇಲದರ್ಪ್ಪೋದ್ಧತಃ ಸಪದಿ ಕೃಷ್ಣಪುರೀಂ ಜಗಾಮ ॥೧೪.೧೫॥
ಹೀಗೆ ಜರಾಸಂಧ ಗದೆ ಮತ್ತು ತಾಯಿಯನ್ನು ಕಳಕೊಂಡ ಬಗೆ,
ಎಲ್ಲ ರಾಜರ ಕಲೆಹಾಕಿದ ಹೊಂದಿ ಕೃಷ್ಣನಮೇಲೆ ತೀರದ ಹಗೆ.
ಇಪ್ಪತ್ಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ಹೊರಟ ಮಧುರೆ ಕಡೆಗೆ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 06 - 10

ಸರ್ವೇsಪಿ ತೇ ಪತಿಮವಾಪ್ಯ ಹರಿಂ ಪುರಾsಭಿತಪ್ತಾ ಹಿ ಭೋಜಪತಿನಾ ಮುಮುದುರ್ನ್ನಿತಾನ್ತಮ್ ।
ಕಿಂ ವಾಚ್ಯಮತ್ರ ಸುತಮಾಪ್ಯ ಹರಿಂ ಸ್ವಪಿತ್ರೋರ್ಯ್ಯತ್ರಾಖಿಲಸ್ಯ ಸುಜನಸ್ಯ ಬಭೂವ ಮೋದಃ ॥೧೪.೦೬॥
ಕಂಸನಿಂದ ಸಂಕಟಕ್ಕೆ ಒಳಗಾಗಿದ್ದ ಯಾದವರೆಲ್ಲ,
ಕೃಷ್ಣನಹೊಂದಿ ಆತ್ಯಂತಿಕವಾದ ಸಂತೋಷಪಟ್ಟರೆಲ್ಲ.
ಮಗನಾಗವನ ಪಡೆದವರು ಹರ್ಷಿಸಿದರಂತ್ಹೇಳಬೇಕಿಲ್ಲ.

ಕೃಷ್ಣಾಶ್ರಯೋ ವಸತಿ ಯತ್ರ ಜನೋsಪಿ ತತ್ರ ವೃದ್ಧಿರ್ಭವೇತ್ ಕಿಮು ರಮಾಧಿಪತೇರ್ನ್ನಿವಾಸೇ ।
ವೃನ್ದಾವನಂ ಯದಧಿವಾಸತ ಆಸ ಸಧ್ರ್ಯಙ್ ಮಾಹೇನ್ದ್ರಸದ್ಮಸದೃಶಂ ಕಿಮು ತತ್ರ ಪುರ್ಯ್ಯಾಃ ॥೧೪.೦೭॥
ಕೃಷ್ಣನಾಶ್ರಯ ಪಡೆದ ಭಕ್ತನೆಲ್ಲಿ ಮಾಡುತ್ತಾನೋ ವಾಸ,
ಅದಾಗುತ್ತದೆ ಖಚಿತವಾಗಿ ಸರ್ವ ಸಂಪತ್ತುಗಳ ಆವಾಸ.
ಇನ್ನು ಸ್ವಯಂ ಭಗವಂತನೇ ತಾನು ವಾಸ ಮಾಡುವ ಜಾಗ,
ಕೃಷ್ಣನಿರುವಿಕೆಯಿಂದ ವೃಂದಾವನ ಅಮರಾವತಿ ಆಯಿತಾಗ.
ಹಾಗೇ ಮಧುರಾಪಟ್ಟಣದಲ್ಲೂ ಸರ್ವ ಸಂಪತ್ತಿನ ವೈಭೋಗ.

ಯೇನಾಧಿವಾಸಮೃಷಭೋ ಜಗತಾಂ ವಿಧತ್ತೇ ವಿಷ್ಣುಸ್ತತೋ ಹಿ ವರತಾ ಸದನೇsಪಿ ಧಾತುಃ ।
ತಸ್ಮಾತ್ ಪ್ರಭೋರ್ನ್ನಿವಸನಾನ್ಮಧುರಾ ಪುರೀ ಸಾ ಶಶ್ವತ್ ಸಮೃದ್ಧಜನಸಙ್ಕುಲಿತಾ ಬಭೂವ ॥೧೪.೦೮॥
ಸರ್ವೋತ್ತಮನಾದ ವಿಷ್ಣುವಿನ ವಾಸದಿಂದ ಬ್ರಹ್ಮಲೋಕಕ್ಕೆ ಉತ್ತಮತೆ,
ಅಂತಹಾ ನಾರಾಯಣನ ವಾಸದಿಂದ ಮಧುರಾಪುರಿಗೆ ಸಾತ್ವಿಕರ ಸಂಪನ್ನತೆ.

ರಕ್ಷತ್ಯಜೇ ತ್ರಿಜಗತಾಂ ಪರಿರಕ್ಷಕೇsಸ್ಮಿನ್ ಸರ್ವಾನ್ ಯದೂನ್ ಮಗಧರಾಜಸುತೇ ಸ್ವಭರ್ತ್ತುಃ ।
ಕೃಷ್ಣಾನ್ಮೃತಿಂ ಪಿತುರವಾಪ್ಯ ಸಮೀಪಮಸ್ತಿಪ್ರಾಸ್ತೀ ಶಶಂಸತುರತೀವ ಚ ದುಃಖಿತೇsಸ್ಮೈ ॥೧೪.೦೯॥
ಎಂದೂ ಹುಟ್ಟಿರದ ಜಗದ್ರಕ್ಷಕ ನಾರಾಯಣ,
ಎಲ್ಲಾ ಯದುಗಳನ್ನೂ ಮಾಡುತ್ತಿರಲು ರಕ್ಷಣ.
ಮಗಧರಾಜ ಜರಾಸಂಧನ ಹೆಣ್ಣುಮಕ್ಕಳಿಬ್ಬರು,
ಆಸ್ತಿ ಪ್ರಾಸ್ತೀ ಗಂಡ ಕಂಸ ಸತ್ತಸುದ್ದಿ ತಂದೆಗ್ಹೇಳಿದರು.

ಶ್ರುತ್ವೈವ ತನ್ಮಗಧರಾಜ ಉರುಪ್ರರೂಢಬಾಹ್ವೋರ್ಬಲೇನ ನಜಿತೋ ಯುಧಿ ಸರ್ವಲೋಕೈಃ ।
ಬ್ರಹ್ಮೇಶಚಣ್ಡಮುನಿದತ್ತವರೈರಜೇಯೋ ಮೃತ್ಯೂಜ್ಝಿತಶ್ಚ ವಿಜಯೀ ಜಗತಶ್ಚುಕೋಪ ॥೧೪.೧೦॥
ಮಗಧರಾಜ ಜರಾಸಂಧನದು ಚೆನ್ನಾಗಿ ಬಲಿತ ತೋಳ್ಬಲ,
ಬ್ರಹ್ಮ ರುದ್ರ ಚಂಡಕೌಶಿಕ ದುರ್ವಾಸರುಗಳ ವರ ಬಲ.
ಸಾವನ್ನೇ ಮೆಟ್ಟಿನಿಂತ ಜಗದ್ವಶ ಮಾಡಿಕೊಂಡ ಜರಾಸಂಧ,
ತನ್ನ ಹೆಣ್ಣು ಮಕ್ಕಳು ಹೇಳಿದ ಮಾತು ಕೇಳಿ ಕೋಪಗೊಂಡ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 14: 01 - 05


೧೪. ಉದ್ಧವಪ್ರತಿಯಾನಮ್

॥ ಓಂ ॥
ಕೃಷ್ಣೋ ವಿಮೋಚ್ಯ ಪಿತರಾವಭಿವನ್ದ್ಯ ಸರ್ವವನ್ದ್ಯೋsಪಿ ರಾಮಸಹಿತಃ ಪ್ರತಿಪಾಲನಾಯ ।
ಧರ್ಮ್ಮಸ್ಯ ರಾಜ್ಯಪದವೀಂ ಪ್ರಣಿಧಾಯ ಚೋಗ್ರಸೇನೇ ದ್ವಿಜತ್ವಮುಪಗಮ್ಯ ಮುಮೋಚ ನನ್ದಮ್ ॥೧೪.೦೧॥
ತಂದೆ ತಾಯಿಗಳಿಗೆ ಕೃಷ್ಣ ನೀಡಿದ ಕಂಸ ಬಂಧನದಿಂದ ಬಿಡುಗಡೆ,
ಸರ್ವವಂದ್ಯನಾದರೂ ಅಣ್ಣನೊಂದಿಗೆ ಹೆತ್ತವರಿಗೆ ನಮಸ್ಕರಿಸಿದ ನಡೆ.
ಧರ್ಮಪಾಲನೆಗೆ ರಾಜ್ಯಪದವಿಯ ಉಗ್ರಸೇನನಲ್ಲಿ ಇಟ್ಟ,
ಉಪನಯನ ಮಾಡಿಕೊಂಡ ಕೃಷ್ಣ ನಂದನನ್ನು ಬೀಳ್ಕೊಟ್ಟ.

ನನ್ದೋsಪಿ ಸಾನ್ತ್ವವಚನೈರನುನೀಯ ಮುಕ್ತಃ ಕೃಷ್ಣೇನ ತಚ್ಚರಣಪಙ್ಕಜಮಾತ್ಮಸಂಸ್ಥಮ್ ।
ಕೃತ್ವಾ ಜಗಾಮ ಸಹ ಗೋಪಗಣೇನ ಕೃಚ್ಛ್ರಾದ್ ದ್ಧ್ಯಾಯನ್ ಜನಾರ್ದ್ದನಮುವಾಸ ವನೇ ಸಭಾರ್ಯ್ಯಃ ॥೧೪.೦೨॥
ನಂದನನ್ನು ಕಳಿಸುತ್ತಾ ಕೃಷ್ಣ ಮಾಡಿದ ಸಮಾಧಾನ,
ಕೃಷ್ಣಪಾದಗಳ ನಂದ ಧರಿಸಿದ್ದು ತನ್ನ ಹೃದಯಸ್ಥಾನ.
ಬಹಳ ಪ್ರಯಾಸದಿಂದ ಗೋಪಾಲಕರ ಒಡಗೂಡಿ,
ನಾರಾಯಣಸ್ಮರಣೆಯಲ್ಲಿದ್ದ ಕಾಡಲ್ಲಿ ಪತ್ನಿ ಜೊತೆಗೂಡಿ.

ಕೃಷ್ಣೋsಪ್ಯವನ್ತಿಪುರವಾಸಿನಮೇತ್ಯ ವಿಪ್ರಂ ಸಾನ್ದೀಪನಿಂ ಸಹ ಬಲೇನ ತತೋsದ್ಧ್ಯಗೀಷ್ಟ ।
ವೇದಾನ್ ಸಕೃನ್ನಿಗಾದಿತಾನ್ ನಿಖಿಲಾಶ್ಚ ವಿದ್ಯಾಃ ಸಮ್ಪೂರ್ಣ್ಣಸಂವಿದಪಿ ದೈವತಶಿಕ್ಷಣಾಯ ॥೧೪.೦೩॥
ಶ್ರೀಕೃಷ್ಣ ಬಲರಾಮ ಇಬ್ಬರು ಆವಂತಿ ಪಟ್ಟಣವ  ಸೇರಿ,
ಅಲ್ಲಿದ್ದ ಸಾಂದೀಪನೀ ಶಿಷ್ಯತ್ವ ಪಡೆದರು ಶಿಕ್ಷಣ ಕೋರಿ.
ಪೂರ್ಣಪ್ರಜ್ಞ ಸುಮ್ಮನೆ ಎಲ್ಲ ವಿದ್ಯೆ ಕೇಳಿದ ಒಂದು ಬಾರಿ,
ದೇವತೆಗಳ ಶಿಕ್ಷಣಕ್ಕಾಗಿ ಕೃಷ್ಣ ತೋರಿದ ಕಲಿಕೆಯ ದಾರಿ.

ಧರ್ಮ್ಮೋ ಹಿ ಸರ್ವವಿದುಷಾಮಪಿ ದೈವತಾನಾಂ ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ ।
ಜ್ಞಾನಾದಿಗೂಹನಮುತಾದ್ಧ್ಯಯನಾದಿರತ್ರ ತಜ್ಜ್ಞಾಪನಾರ್ತ್ಥಮವಸದ್ ಭಗವಾನ್ ಗುರೌ ಚ ॥೧೪.೦೪॥
ದೇವತೆಗಳು ಮನುಷ್ಯರಾಗಿ ಮಾಡಿದಾಗ ಅವತಾರ,
ಮನುಷ್ಯರಂತೆ ನಡೆ,ಜ್ಞಾನ ಮುಚ್ಕೊಳ್ಳೋ ವ್ಯಾಪಾರ.
ಅಧ್ಯಯನ ಮೊದಲಾದ ಅನೇಕ ಧರ್ಮಪಾಲನೆ,
ದೇವತಾಶಿಕ್ಷಣಕ್ಕೆ ಕೃಷ್ಣ ತೋರಿದ ಗುರುಕುಲವಾಸವನ್ನೆ.

ಗುರ್ವರ್ತ್ಥಮೇಷ ಮೃತಪುತ್ರಮದಾತ್ ಪುನಶ್ಚ ರಾಮೇಣಾ ಸಾರ್ದ್ಧಮಗಮನ್ಮಧುರಾಂ ರಮೇಶಃ ।
ಪೌರೈಃ ಸಜಾನಪದಬನ್ಧುಜನೈರಜಸ್ರಮಭ್ಯರ್ಚ್ಚಿತೋ ನ್ಯವಸದಿಷ್ಟಕೃದಾತ್ಮಪಿತ್ರೋಃ ॥೧೪.೦೫॥
ಶ್ರೀಕೃಷ್ಣ ಗುರುಗಳಿಗೆ ಕೊಟ್ಟ ಗುರುದಕ್ಷಿಣೆ,
ಹಿಂತಿರುಗಿಸಿ ಕೊಟ್ಟ ಸತ್ತ ಅವರ ಮಗನನ್ನೆ.
ಅಣ್ಣ ರಾಮನ ಕೂಡಿಕೊಂಡು ಕೃಷ್ಣ ಮಧುರೆಗೆ ತೆರಳಿದ,
ತನ್ನ ಜನ ಮತ್ತು ನಾಗರೀಕರಿಂದ ಸದಾ ಪೂಜೆಗೆ ಒಳಗಾದ.
ಹೆತ್ತವರ ಇಷ್ಟ ಪೂರೈಸುತ್ತಾ ಅವರೊಡನೆ ವಾಸ ಮಾಡಿದ.