Thursday 23 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 07 - 13

ಕದಾಚಿದೀಶ್ವರಃ ಸ್ತನಂ ಪಿಬನ್ ಯಶೋದಯಾ ಪಯಃ ।
ಶೃತಂ ನಿಧಾತುಮುಜ್ಝಿತೋ ಬಭಞ್ಜ ದದ್ಧ್ಯಮತ್ರಕಮ್ ॥೧೩.೦೭॥
ಒಮ್ಮೆ ಸರ್ವಜ್ಞನಾದ ಕೃಷ್ಣಗೆ ತಾಯಿ ಮಾಡಿಸುತ್ತಿದ್ದಾಗ ಸ್ತನಪಾನ,
ಉಕ್ಕುವ ಹಾಲನ್ನು ಇಳಿಸುವುದಕ್ಕೆಂದು ಕೃಷ್ಣನ ಕೆಳಗಿಟ್ಟಾಕ್ಷಣ.
ಆಗ ಅಲ್ಲಿದ್ದ ಮೊಸರ ಪಾತ್ರೆಯನ್ನು ಒಡೆಯುತ್ತಾನೆ ಪುಟ್ಟಕೃಷ್ಣ.

ಸ ಮತ್ಥ್ಯಮಾನದದ್ಧ್ಯುರುಪ್ರಜಾತಮಿನ್ದುಸನ್ನಿಭಮ್ ।
ನವಂ ಹಿ ನೀತಮಾದದೇ ರಹೋ ಜಘಾಸ ಚೇಶಿತಾ ॥೧೩.೦೮॥
ಕಡೆದ ಮೊಸರಲ್ಲಿ ದೊಡ್ಡ ಮುದ್ದೆಯಾಗಿ ಬಂದ,
ಚಂದ್ರನಂತೆ ಬಿಳಿಯಾಗಿ ಕಾಣುವ ಬೆಣ್ಣೆಯ ಚೆಂದ.
ಅದನ್ನೆಲ್ಲ ಎತ್ತಿದ ಕೃಷ್ಣ ಏಕಾಂತದಲ್ಲದನ ತಿಂದ.

ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ ।
ತಥಾ ಪ್ರವರ್ತ್ತನಂ ಭವೇದ್ ದಿವೌಕಸಾಂ ಸಮುದ್ಭವೇ ॥೧೩.೦೯॥
ಇತಿ ಸ್ವಧರ್ಮ್ಮಮುತ್ತಮಂ ದಿವೌಕಸಾಂ ಪ್ರದರ್ಶಯನ್ ।
ಅಧರ್ಮ್ಮಪಾವಕೋsಪಿ ಸನ್ ವಿಡಮ್ಬತೇ ಜನಾರ್ದ್ದನಃ ॥೧೩.೧೦॥
ನೃತಿರ್ಯ್ಯಗಾದಿರೂಪಕಃ ಸ ಬಾಲ್ಯಯೌವನಾದಿ ಯತ್ ।
ಕ್ರಿಯಾಶ್ಚ ತತ್ತದುದ್ಭವಾಃ ಕರೋತಿ ಶಾಶ್ವತೋsಪಿ ಸನ್ ॥೧೩.೧೧॥
ಆದಾಗ ಭೂಮಿಯಲ್ಲಿ ದೇವತೆಗಳ ಅವತಾರ,
ಯಾವ್ಯಾವ ಯುಗದ ಯಾವ ಕುಲದ ದ್ವಾರ,
ನಡೆಯಬೇಕು ಯುಗ ಕುಲ ಧರ್ಮಾನುಸಾರ.
ಕೃಷ್ಣ ಮಾಡಿದ ಅಂಥಾ ಉತ್ಕೃಷ್ಟವಾದ ಧರ್ಮಪಾಲನೆ,
ಅಧರ್ಮಕ್ಕೆ ಅಗ್ನಿಯಾದರೂ ತೋರಿದ ಲೋಕಾನುಕರಣೆ.
ಮನುಷ್ಯ ಪ್ರಾಣಿ ಮುಂತಾದ ರೂಪಗಳಿಂದ ಅವತರಿಸುವ ಹರಿ,
ಆಯಾ ಕಾಲ ಯೋನಿ ಯುಗಗಳ ಅನುಸರಿಸಿ ತೋರಿಸುವ ಪರಿ.
ವಾಸ್ತವಿಕವಾಗಿ ಭಗವಂತ ನಿತ್ಯ -ಒಂದೇ ರೀತಿ,
ಆದರೂ ವಯೋಗುಣ ಚೇಷ್ಟೆ ತೋರುವ ನೀತಿ.

ಸ ವಿಪ್ರರಾಜಗೋಪಕಸ್ವರೂಪಕಸ್ತದುದ್ಭವಾಃ ।
ತದಾತದಾ ವಿಚೇಷ್ಟತೇ ಕ್ರಿಯಾಃ ಸುರಾನ್ ವಿಶಿಕ್ಷಯನ್ ॥೧೩.೧೨॥
ಆಗಿ ಬಂದಾಗ ಅನೇಕ ಬ್ರಾಹ್ಮಣ, ರಾಜ, ಗೋಪಸ್ವರೂಪ,
ವಿವಿಧ ಯೋನಿಗಳ ಕ್ರಿಯೆ ತೋರೋ ದೇವತಾಶಿಕ್ಷಣ ರೂಪ.

ತಥಾsಪ್ಯನನ್ಯದೇವತಾಸಮಂ ನಿಜಂ ಬಲಂ ಪ್ರಭುಃ ।
ಪ್ರಕಾಶಯನ್ ಪುನಃಪುನಃ ಪ್ರದರ್ಶಯತ್ಯಜೋ ಗುಣಾನ್ ॥೧೩.೧೩॥
ಹೀಗೆ ಮಾಡುತ್ತಿದ್ದಾಗಲೂ ಅವನು ಎಲ್ಲಾ ದೇವತೆಗಳಿಗೂ ಮೇಲೆ,
ತನ್ನ ಬಲ ತೋರುತ್ತಾ ಮಾಡಿದ ಅಸಾಮಾನ್ಯ ಗುಣಗಳ ಲೀಲೆ. 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 04 - 06

ಸ ಕದಾಚಿಚ್ಛಶುಭಾವಂ ಕುರ್ವನ್ತ್ಯಾ ಮಾತುರಾತ್ಮನೋ ಭೂಯಃ ।
ಅಪನೇತುಂ ಪರಮೇಶೋ ಮೃದಂ ಜಘಾಸೇಕ್ಷತಾಂ ವಯಸ್ಯಾನಾಮ್ ॥೧೩.೦೪॥
ಎಲ್ಲರಿಗೂ ಒಡೆಯನಾದವನು ಶ್ರೀಕೃಷ್ಣ - ಅವನೇ ಶ್ರೀಮನ್ನಾರಾಯಣ,
ತಾಯಿಗೆ ಸುತ್ತಿಕೊಂಡಿತ್ತು ಇದು ನನ್ನ ಮಗುವೆಂಬ ಮಮಕಾರದ ಆವರಣ.
ತಾಯಿಯ ಆ ಭಾವನೆ ನಾಶಮಾಡಲು ಕೃಷ್ಣನೆಂಬ ಆ ಕಂದ,
ತನ್ನ ಗೆಳೆಯರೆಲ್ಲ ನೋಡುತ್ತಿರುವಂತೆಯೇ ಮಣ್ಣನ್ನು ತಿಂದ.

ಮಾತ್ರೋಪಾಲಾಬ್ದ ಈಶೋ ಮುಖವಿವೃತಿಮಕರ್ನ್ನಾಮ್ಬ ಮೃದ್ಭಕ್ಷಿತಾsಹಂ ।
ಪಶ್ಯೇತ್ಯಸ್ಯಾನ್ತರೇ ತು ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯ್ಯಪಶ್ಯತ್ ।
ಇತ್ಥಂ ದೇವೋsತ್ಯಚಿನ್ತ್ಯಾಮಪರದುರಧಿಗಾಂ ಶಕ್ತಿಮುಚ್ಚಾಂ ಪ್ರದರ್ಶ್ಯ
ಪ್ರಾಯೋ ಜ್ಞಾತಾತ್ಮತತ್ತ್ವಾಂ ಪುನರಪಿ ಭಗವಾನಾವೃಣೋದಾತ್ಮಶಕ್ತ್ಯಾ ॥೧೩.೦೫॥
ಎಲ್ಲೀ ಕೃಷ್ಣಾ ಬಾಯಿತೆರೆ ಎಂದಳು ತಾಯಿ ಯಶೋದೆ,
ನಾ ಮಣ್ತಿನ್ಲಿಲ್ಲಮ್ಮಾ ಎನ್ನುತ್ತಾ ಬಾಯಿತೆರೆದ ಜಗದತಂದೆ.
ಆಗ ಯಶೋದೆಗೆ ಪ್ರಕೃತಿ ವಿಕೃತಿಯಿಂದ ಕೂಡಿದ ಜಗದ ದರ್ಶನ,
ಬೇರಾರೂ ತಿಳಿಯಲಾಗದ ತನ್ನ ಸ್ವರೂಪಶಕ್ತಿಯ  ತೋರಿದಾ ಕ್ಷಣ.
ಹೆಚ್ಚಾಗಿ ತನ್ನ ತಿಳಿದ ಯಶೋದೆಗೆ ಮತ್ತೆ ಮಾಡಿದ ಮೋಹದಾವರಣ.

ಇತಿ ಪ್ರಭುಃ ಸ ಲೀಲಯಾ ಹರಿರ್ಜ್ಜಗದ್ ವಿಡಮ್ಬಯನ್ ।
ಚಚಾರ ಗೋಷ್ಠಮಣ್ಡಲೇsಪ್ಯನನ್ತಸೌಖ್ಯಚಿದ್ಘನಃ ॥೧೩.೦೬॥
ಈರೀತಿಯಾಗಿ ಸರ್ವಸಮರ್ಥನಾದ ಶ್ರೀಕೃಷ್ಣ,
ತನ್ನ ಲೀಲೆಯ ತೋರಿದ್ದು -ಲೋಕಾನುಕರಣ.
ಆ ಗೋವುಗಳ ಗ್ರಾಮದಲ್ಲಿ ಎಣೆಯಿರದ ಸುಖದ ಧಾರ,
ಹರಿಸುತ್ತಾ ಮಾಡಿದ ಜ್ಞಾನಾನಂದದೇಹಿ ತಾನು ಸಂಚಾರ.

Wednesday 22 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 01 - 03


।। ಓಂ ।।
ಕಂಸವಧಃ

ಗರ್ಗ್ಗಃ ಶೂರಸುತೋಕ್ತ್ಯಾ ವ್ರಜಮಾಯಾತ್ ಸಾತ್ವತಾಂ ಪುರೋಧಾಃ ಸಃ ।
ಚಕ್ರೇ ಕ್ಷತ್ರಿಯಯೋಗ್ಯಾನ್ ಸಂಸ್ಕಾರಾನ್ ಕೃಷ್ಣರೋಹಿಣೀಸೂನ್ವೋಃ ॥೧೩.೦೧॥
ಯಾದವರ ಪುರೋಹಿತರಾಗಿರುವ ಹೆಸರಾಂತ ಋಷಿ ಗರ್ಗಾಚಾರ್ಯ,
ವಸುದೇವನ ಮಾತಿನಂತೆ ನಂದಗೋಕುಲಕ್ಕೆ ನಡೆದು  ಬಂದರು ಆರ್ಯ.
ಮಾಡಿದರು ಕೃಷ್ಣಬಲರಾಮರಿಗೆ ಕ್ಷತ್ರಿಯಯೋಗ್ಯ ಜಾತಕರ್ಮಾದಿ ಸಂಸ್ಕಾರ.

ಊಚೇ ನನ್ದ ಸುತೋsಯಂ ತವ ವಿಷ್ಣೋರ್ನ್ನಾವಮೋ ಗುಣೈಃ ಸರ್ವೈಃ ।
ಸರ್ವೇ ಚೈತತ್ರಾತಾಃ ಸುಖಮಾಪ್ಸ್ಯನ್ತ್ಯುನ್ನತಂ ಭವತ್ಪೂರ್ವಾಃ ॥೧೩.೦೨ ॥
ಸಮಸ್ತ ಸಂಸ್ಕಾರಗಳ ಪೂರೈಸಿ ಗರ್ಗಾಚಾರ್ಯ ನಂದಗೆ ಹೇಳುತ್ತಾರೆ ಈ ಮಾತ,
ನಾರಾಯಣನಂತೆ  ಎಲ್ಲಾ ಗುಣಗಳಿಂದಲೂ ಪರಿಪೂರ್ಣ ಈ ನಿನ್ನ ಸುತ.
ನೀನೂ ನಿನ್ನವರೆಲ್ಲರೂ ಹೊಂದುತ್ತೀರಿ ಇವನಿಂದ ರಕ್ಷಣೆ ಸುಖ ಮತ್ತು ಹಿತ.

ಇತ್ಯುಕ್ತಃ ಸ ಮುಮೋದ ಪ್ರಯಯೌ ಗರ್ಗ್ಗೋsಪಿ ಕೇಶವೋsಥಾsಧ್ಯಃ ।
ಸ್ವಪದೈರಗ್ರಜಯುಕ್ತಶ್ಚಕ್ರೇ ಪುಣ್ಯಂ ವ್ರಜನ್ ವ್ರಜೋದ್ದೇಶಮ್ ॥೧೩.೦೩॥
ಹೀಗೆ ಗರ್ಗರಿಂದ ಹೇಳಲ್ಪಟ್ಟ ನಂದ,
ಹೊಂದಿದ ಅತ್ಯಂತವಾದ ಆನಂದ.
ನಂದನ ಅನುಜ್ಞೆ ಪಡೆದ ಗರ್ಗಾಚಾರ್ಯರದು ಅಲ್ಲಿಂದ ನಿರ್ಗಮನ,
ಅಣ್ಣನೊಡಗೂಡಿ ಕೃಷ್ಣ ಆ ಪ್ರಾಂತ್ಯದಲ್ಲಿ ಓಡಾಡಿ ಮಾಡಿದ ಗ್ರಾಮ ಪಾವನ.

[Contributed by Shri Govind Magal]

Saturday 18 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 126 136

ಪುನರ್ಮ್ಮನೋಃ ಫಲವತ್ತ್ವಾಯ ಮಾದ್ರೀ ಸಮ್ಪ್ರಾರ್ತ್ಥಯಾಮಾಸ ಪತಿಂ ತದುಕ್ತಾ ।
ಪೃಥಾsವಾದೀತ್ ಕುಟಿಲೈಷಾ ಮದಾಜ್ಞಾಮೃತೇ ದೇವಾವಾಹ್ವಯಾಮಾಸ ದಸ್ರೌ ॥೧೨.೧೨೬॥
ಅತೋ ವಿರೋಧಂ ಚ ಮದಾತ್ಮಜಾನಾಂ ಕುರ್ಯ್ಯಾದೇಷೇತ್ಯೇವ ಭೀತಾಂ ನ ಮಾಂ ತ್ವಮ್ ।
ನಿಯೋಕ್ತುಮರ್ಹಃ ಪುನರೇವ ರಾಜನ್ನಿತೀರಿತೋsಸೌ ವಿರರಾಮ ಕ್ಷಿತೀಶಃ ॥೧೨.೧೨೭॥
ಮಾದ್ರಿಯಿಂದ ಎರಡು ಮಕ್ಕಳ ಪಡೆಯುವಿಕೆ,
ಮತ್ತೆ ಮಂತ್ರ ಫಲವತ್ತತೆಗೆ ಮಾದ್ರಿಯ ಬೇಡಿಕೆ.
ಪಾಂಡುವಿನಿಂದ ಅದ ಹೇಳಲ್ಪಟ್ಟ ಕುಂತೀದೇವಿ ಹೀಗೆ ಹೇಳುತ್ತಾಳೆ,
ನಮ್ಮರಿವಿಗೆ ಬಾರದೆ ಕುಟಿಲತೆಯಿಂದ ಇಬ್ಬರು ದೇವತೆಗಳ ಕರೆದಿದ್ದಾಳೆ.
ಆದಕಾರಣ ಈಕೆಯಿಂದ ನನ್ನ ಮಕ್ಕಳಿಗೆ ನಿಶ್ಚಯ,
ಮುಂದೆ ವಿರೋಧ ಬರಬಹುದೆಂದು ನನ್ನ ಭಯ.
ಮತ್ತೆ ಮಾಡಬೇಡ ಮಂತ್ರ ನೀಡೆಂಬ ಪ್ರಚೋದನೆ,
ಕುಂತಿಯ ವಿಶ್ಲೇಷಣೆ ಕೇಳಿ ಪಾಂಡು ಆದ ಸುಮ್ಮನೆ.

ವಿಶೇಷನಾಮ್ನೈವ ಸಮಾಹುತಾಃ ಸುತಾನ್ ದಧ್ಯುಃ ಸುರಾ ಇತ್ಯವಿಶೇಷಿತಂ ಯಯೋಃ।
ವಿಶೇಷನಾಮಾಪಿ ಸಮಾಹ್ವಯತ್ ತೌ ಮನ್ತ್ರಾವೃತ್ತಿರ್ನ್ನಾಮಭೇದೇsಸ್ಯ ಚೋಕ್ತಾ ॥೧೨.೧೨೮॥
ದೇವತೆಗಳಿಗೆ ಉಂಟು ವಿಶೇಷ ನಾಮ,
ಅದನುಚ್ಚರಿಸಿ ಕರೆದಾಗವರು ಬರುವ ನೇಮ.
ಕರೆಯಲ್ಪಡುವ ದೇವತೆಗಳಿಗೆ ನಾಮಭೇದವಿದ್ದಲ್ಲಿ ಮಾತ್ರ,
ಪುನರುಚ್ಚರಿಸಿ ಪ್ರಾರ್ಥಿಸಿ ಹೇಳಲ್ಪಡಬೇಕಾಗುತ್ತದೆ ಮಂತ್ರ.
ಅಶ್ವೀದೇವತೆಗಳಿಗೆ ಸಾಕಾಯಿತು ಒಂದುಬಾರಿ ಕರೆದ ತಂತ್ರ.

ಯುಧಿಷ್ಠಿರಾದ್ಯೇಷು ಚತುರ್ಷು ವಾಯುಃ ಸಮಾವಿಷ್ಟಃ ಫಲ್ಗುನೇsಥೋ ವಿಶೇಷಾತ್ ।
ಯುಧಿಷ್ಠಿರೇ ಸೌಮ್ಯರೂಪೇಣ ವಿಷ್ಟೋ ವೀರೇಣ ರೂಪೇಣ ಧನಞ್ಜಯೇsಸೌ ॥೧೨.೧೨೯॥
ಯುಧಿಷ್ಠಿರ ಮೊದಲಾದ ನಾಲ್ವರಲ್ಲೂ ವಾಯುವಿನ ಆವೇಶ,
ಆದರೆ ಅರ್ಜುನನಲ್ಲಿ ಮಾತ್ರ ಇದ್ದದ್ದದು ಹೆಚ್ಚಾದ  ವಿಶೇಷ.
ಯುಧಿಷ್ಠರನಲ್ಲಿತ್ತು ಮುಖ್ಯಪ್ರಾಣನ ಶಾಂತರೂಪ,
ಅರ್ಜುನನಲ್ಲಿತ್ತು ಮುಖ್ಯಪ್ರಾಣನ ವೀರರೂಪ.

ಶೃಙ್ಗಾರರೂಪಂ ಕೇವಲಂ ದರ್ಶಯಾನೋ ವಿವೇಶ ವಾಯುರ್ಯ್ಯಮಜೌ ಪ್ರಧಾನಃ ।
ಶೃಙ್ಗಾರಕೈವಲ್ಯಮಭೀಪ್ಸಮಾನಃ ಪಾಣ್ಡುರ್ಹಿ ಪುತ್ರಂ ಚಕಮೇ ಚತುರ್ತ್ಥಮ್ ॥೧೨.೧೩೦॥
ಕೇವಲ ಶೃಂಗಾರರೂಪ ತೋರಿಸುವುದಕ್ಕಾಗಿ,
ಮುಖ್ಯಪ್ರಾಣ ಅವಳಿಗಳಲ್ಲಿ ಪ್ರವೇಶಿಸಿದವರಾಗಿ,
ಪಾಂಡು ಬಯಸಿದ್ದ ಸುಂದರಮಗುವ ನೀಡುವರಾಗಿ.

ಶೃಙ್ಗಾರರೂಪೋ ನಕುಲೋ ವಿಶೇಷಾತ್ ಸುನೀತಿರೂಪಃ ಸಹದೇವಂ ವಿವೇಶ ।
ಗುಣೈಃ ಸಮಸ್ತೈಃ ಸ್ವಯಮೇವ ವಾಯುರ್ಬಭೂವ ಭೀಮೋ ಜಗದನ್ತರಾತ್ಮಾ ॥೧೨.೧೩೧॥
ಶೃಂಗಾರರೂಪನಾಗಿ ನಕುಲನಲ್ಲಿ ಪ್ರವೇಶ,
ಸುನೀತಿರೂಪನಾಗಿ ಸಹದೇವನಲ್ಲಿ ಪ್ರವೇಶ.
ಜಗತ್ತಿನ ಅಂತರ್ನಿಯಾಮಕನಾದ ಪ್ರಾಣರೂಪ,
ಎಲ್ಲ ಗುಣತುಂಬಿದ ವಾಯು ತಾಳಿತು ಭೀಮರೂಪ.

ಸುಪಲ್ಲವಾಕಾರತನುರ್ಹಿ ಕೋಮಳಃ ಪ್ರಾಯೋ ಜನೈಃ ಪ್ರೋಚ್ಯತೇ ರೂಪಶಾಲೀ ।
ತತಃ ಸುಜಾತಂ ವರವಜ್ರಕಾಯೌ ಭೀಮಾರ್ಜ್ಜುನಾವಪ್ಯೃತೇ ಪಾಣ್ಡುರೈಚ್ಛತ್ ॥೧೨.೧೩೨॥
ಮೃದುವಾಗಿ ಕೋಮಲವಾಗಿರುವ ದೇಹ,
ಹೆಚ್ಚಿನ ಪಕ್ಷದಲ್ಲಿ ರೂಪಶಾಲಿ ಎಂಬ ಭಾವ.
ಉತ್ಕೃಷ್ಟ ವಜ್ರಕಾಯದ ಭೀಮ ಅರ್ಜುನರನ್ನು ಬಿಟ್ಟು,
ಕೋಮಲಮೈಯ ಚೆಲುಮಗನ ಕೇಳಿದ್ದ ಪಾಂಡು ಆಸೆಪಟ್ಟು.

ಅಪ್ರಾಕೃತಾನಾಂ ತು ಮನೋಹರಂ ಯದ್ ರೂಪಂ ದ್ವಾತ್ರಿಂಶಲ್ಲಕ್ಷಣೋಪೇತಮಗ್ರ್ಯಮ್ ।
ತನ್ಮಾರುತೋ ನಕುಲೇ ಕೋಮಳಾಭ ಏವಂ ವಾಯುಃ ಪಞ್ಚರೂಪೋsತ್ರ ಚಾsಸೀತ್ ॥೧೨.೧೩೩॥
ವಾಯುದೇವರದು ಅಪ್ರಾಕೃತವಾದ ಮೂವತ್ತೆರಡು  ಲಕ್ಷಣ,
ಅವೆಲ್ಲ ಧರಿಸಿ ಭೀಮಸೇನಾಗಿ ಬಂದಿದ್ದ ತಾ ಮುಖ್ಯಪ್ರಾಣ.
ಪಾಂಡುವಿನಿಚ್ಛೆಯಂತೆ ಮುಖ್ಯಪ್ರಾಣ ನಕುಲನಲ್ಲಿ ಕೋಮಲ,
ನಾಕರಲ್ಲಿ ನಾಕು ಪಾಂಡವರಲ್ಲಿ ಪಂಚವಾಗಿ ನಿಂತ ತಾ ಅನಿಲ.

ಅತೀತೇನ್ದ್ರಾ ಏವ ತೇ ವಿಷ್ಣುಷಷ್ಠಾಃ ಪೂರ್ವೇನ್ದ್ರೋsಸೌ ಯಜ್ಞನಾಮಾ ರಮೇಶಃ ।
ಸ ವೈ ಕೃಷ್ಣೋ ವಾಯುರಥ ದ್ವಿತೀಯಃ ಸ ಭೀಮಸೇನೋ ಧರ್ಮ್ಮ ಆಸೀತ್ ತೃತೀಯಃ ॥೧೨.೧೩೪॥
ಯಧಿಷ್ಠಿರೋsಸಾವಥ ನಾಸತ್ಯದಸ್ರೌ ಕ್ರಮಾತ್ ತಾವೇತೌ ಮಾದ್ರವತೀಸುತೌ ಚ ।
ಪುರನ್ದರಃ ಷಷ್ಠ ಉತಾತ್ರ ಸಪ್ತಮಃ ಸ ಏವೈಕಃ ಫಲ್ಗುನೋ ಹ್ಯೇತ ಇನ್ದ್ರಾಃ ॥೧೨.೧೩೫॥
ಪಂಚಪಾಂಡವರು ವಿಷ್ಣು ಸೇರಿ ಆರು ಮಂದಿಯೂ ಇಂದ್ರರೇ,
ಮೊದಲ ಇಂದ್ರ ಯಜ್ಞನಾಮಕ ವಿಷ್ಣು ಕೃಷ್ಣನಾಗಿ ಬಂದಿದ್ದರೆ,
ಎರಡನೇ ಇಂದ್ರ ವಾಯು ಭೀಮ;ಮೂರನೆಯವ ಯಮನಾಗಿದ್ದಾರೆ.
ಆ ಯಮಧರ್ಮನೇ ಯುಧಿಷ್ಠಿರನಾಗಿ ಬಂದ  ಯೋಗ,
ನಾಸತ್ಯ ದಸ್ರರು ಇಂದ್ರರಾಗಿ -ಮಾದ್ರಿದೇವಿಯ ಪುತ್ರರಾದರಾಗ.
ಪುರಂದರ ಆರು ಮತ್ತು ಏಳನೇ ಇಂದ್ರ -ಅರ್ಜುನನಾಗಿ ಬಂದನಾಗ.

ಕ್ರಮಾತ್ ಸಂಸ್ಕಾರಾನ್ ಕ್ಷತ್ರಿಯಾಣಾಮವಾಪ್ಯ 'ತೇsವರ್ದ್ಧನ್ತ ಸ್ವತವಸೋ ಮಹಿತ್ವನಾ'
ಸರ್ವೇ ಸರ್ವಜ್ಞಾಃ ಸರ್ವಧರ್ಮ್ಮೋಪಪನ್ನಾಃ ಸರ್ವೇ ಭಕ್ತಾಃ ಕೇಶವೇsತ್ಯನ್ತಯುಕ್ತಾಃ ೧೨.೧೩೬
ಕ್ರಮವಾಗಿ ಕ್ಷತ್ರಿಯ ಸಂಸ್ಕಾರ ಹೊಂದಿದ ಈ ಪಾಂಡವರು,
ಮಹಿಮೆ ಸ್ವರೂಪಸಾಮರ್ಥ್ಯವುಳ್ಳವರಾಗಿ ಬೆಳೆದರು.
ಯೋಗ್ಯತೆಗೆ ಅನುಗುಣವಾಗಿ ಎಲ್ಲವನ್ನೂ ಬಲ್ಲವರು,
ಧರ್ಮಯುಕ್ತರಾಗಿ ಭಗವಂತನ ಪ್ರೀತಿಯ ಭಕ್ತರು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಪಾಣ್ಡವೋತ್ಪತ್ತಿರ್ನ್ನಾಮ ದ್ವಾದಶೋsಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಶ್ರೀಮಹಾಭಾರತತಾತ್ಪರ್ಯನಿರ್ಣಯ ಅನುವಾದ,
ಪಾಂಡವೋತ್ಪತ್ತಿ ಹೆಸರಿನ ಹನ್ನೆರಡನೇ ಅಧ್ಯಾಯ,
ಪಾಂಡವಮಿತ್ರ ಕೃಷ್ಣನಡಿಗಳಿಗರ್ಪಿಸಿದ ಧನ್ಯಭಾವ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 120 - 125

ಯಸ್ಮಿನ್ನಬ್ದೇ ಭಾದ್ರಪದೇ ಸ ಮಾಸೇ ಸಿಂಹಸ್ಥಯೋರ್ಗ್ಗುರುರವ್ಯೋಃ ಪರೇಶಃ ।
ಉದೈತ್ ತತಃ ಫಾಲ್ಗುನೇ ಫಲ್ಗುನೋsಭೂದ್ ಗತೇ ತತೋ ಮಾದ್ರವತೀ ಬಭಾಷೇ ॥೧೨.೧೨೦॥
ಜಾತಾಃ ಸುತಾಸ್ತೇ ಪ್ರವರಾಃ ಪೃಥಾಯಾಮೇಕಾsನಪತ್ಯಾsಹಮತಃ ಪ್ರಸಾದಾತ್ ।
ತವೈವ ಭೂಯಾಸಮಹಂ ಸುತೇತಾ ವಿಧತ್ಸ್ವ ಕುನ್ತೀಂ ಮಮ ಮನ್ತ್ರದಾತ್ರೀಮ್ ॥೧೨.೧೨೧॥
ಯಾವ ವರ್ಷದ ಭಾದ್ರಪದಮಾಸದಲ್ಲಿ ಗುರು ಸೂರ್ಯ ಸಿಂಹರಾಶಿಯಲ್ಲಿದ್ದಾಗ,
ಕೃಷ್ಣ ಅವತರಿಸಿದ ಅದೇ ವರ್ಷದ ಫಾಲ್ಗುಣದಲ್ಲಿ ಅರ್ಜುನ ಹುಟ್ಟಿಬಂದ ಯೋಗ.
ಅರ್ಜುನನ ಜನನಾನಂತರ ಪಾಂಡುರಾಜನ ಕುರಿತು ಮಾದ್ರಿ ಹೇಳುತ್ತಾಳಾಗ.
ಕುಂತಿಯಲ್ಲಿ ನಿನಗಾಗಿದ್ದಾರೆ ಉತ್ಕೃಷ್ಟ ಮಕ್ಕಳು,
ಆದರೆ ನಾನೊಬ್ಬಳು ಮಾತ್ರ ಮಕ್ಕಳೇ ಇಲ್ಲದವಳು.
ನಿನ್ನ ಅನುಗ್ರಹದಿಂದ ನಾನು ಮಕ್ಕಳೊಂದಿಗಳಾಗಬೇಕು,
ಕುಂತಿಯನ್ನು ನನಗೆ ಆ ಮಂತ್ರ ಕೊಡುವವಳಾಗಿ ಮಾಡಬೇಕು.

ಇತೀರಿತಃ ಪ್ರಾಹ ಪೃಥಾಂ ಸ ಮಾದ್ರ್ಯೈ ದಿಶಸ್ವ ಮನ್ತ್ರಂ ಸುತದಂ ವರಿಷ್ಠಮ್ ।
ಇತ್ಯೂಚಿವಾಂಸಂ ಪತಿಮಾಹ ಯಾದವೀ ದದ್ಯಾಂ ತ್ವದರ್ತ್ಥೇ ತು ಸಕೃತ್ ಫಲಾಯ ॥೧೨.೧೨೨॥

ಈ ರೀತಿಯಾಗಿ ಮಾದ್ರಿಯಿಂದ ಹೇಳಲ್ಪಟ್ಟ ರಾಜಾ ಪಾಂಡು,
ಕುಂತಿಗ್ಹೇಳುತ್ತಾನೆ ಮಾದ್ರಿಗೆ ಮಕ್ಕಳ ಪಡೆವ ಮಂತ್ರ ಕೊಡು.
ಹೀಗೆ ಹೇಳಿಸಿಕೊಂಡು ನುಡಿಯುತ್ತಾಳೆ ಯದುಕುಲೋತ್ಪನ್ನಳಾದ  ಕುಂತಿ,
ನಿನಗಾಗಿ ಕೊಡುತ್ತಿರುವೆ ಆ ಮಂತ್ರ ಒಮ್ಮೆ ಮಾತ್ರ ಫಲವದರ ಶಕ್ತಿ.

ಉವಾಚ ಮಾದ್ರ್ಯೈ ಸುತದಂ ಮನುಂ ಚ ಪುನಃ ಫಲಂ ತೇ ನ ಭವಿಷ್ಯತೀತಿ ।
ಮನ್ತ್ರಂ ಸಮಾದಾಯ ಚ ಮದ್ರಪುತ್ರೀ ವ್ಯಚಿನ್ತಯತ್ ಸ್ಯಾಂ ನು ಕಥಂ ದ್ವಿಪುತ್ರಾ ॥೧೨.೧೨೩॥
ಮಾದ್ರಿಗೆ ಕುಂತಿಯಿಂದಾಗುತ್ತದೆ ಮಂತ್ರದ ಉಪದೇಶ,
ಇದರಿಂದ ಒಮ್ಮೆ ಫಲ ಎರಡನೇ ಬಾರಿಯಿಲ್ಲ ಅವಕಾಶ.
ಮಂತ್ರೋಪದೇಶ ಪಡೆದ ಮಾದ್ರಿಯಿಂದ ಆಲೋಚನೆ,
ಇಬ್ಬರು ಮಕ್ಕಳ ಹೇಗೆ ಪಡೆದೇನು ಎಂಬ ಚಿಂತನೆ.

ಸದಾsವಿಯೋಗೌ ದಿವಿಜೇಷು ದಸ್ರೌ ನಚೈತಯೋರ್ನ್ನಾಮಭೇದಃ ಕ್ವಚಿದ್ಧಿ।
ಏಕಾ ಭಾರ್ಯ್ಯಾ ಸೈತಯೋರಪ್ಯುಷಾ ಹಿ ತದಾಯಾತಃ ಸಕೃದಾವರ್ತ್ತನಾದ್ ದ್ವೌ ॥೧೨.೧೨೪॥
ದೇವತೆಗಳಲ್ಲಿ ಅಶ್ವೀದೇವತೆಗಳದು ಬಿಡದ ಬಂಧ,
ಇರುವುದಿಲ್ಲ ಅವರುಗಳಿಗೆ ಎಂದೂ ನಾಮಭೇದ.
ಒಟ್ಟಿಗಿರುವ ಅವರಿಗೆ ಉಷೆ ಒಬ್ಬಳೇ ಹೆಂಡತಿ,
ಬರುತ್ತಾರವರು ಮಂತ್ರ ಉಚ್ಚರಿಸಲು ಒಂದಾವರ್ತಿ.

ಇತೀಕ್ಷನ್ತ್ಯಾssಕಾರಿತಾವಶ್ವಿನೌ ತೌ ಶೀಘ್ರಪ್ರಾಪ್ತೌ ಪುತ್ರಕೌ ತತ್ಪ್ರಸೂತೌ ।
ತಾವೇವ ದೇವೌ ನಕುಲಃ ಪೂರ್ವಜಾತಃ ಸಹದೇವೋsಭೂತ್ ಪಶ್ಚಿಮಸ್ತೌ ಯಮೌ ಚ ॥೧೨.೧೨೫॥
ಈ ರೀತಿ ಯೋಚನೆ ಮಾಡಿದ ಅವಳು,
ಕರೆಯಲು ಬಂದರು ಅಶ್ವಿನೀದೇವತೆಗಳು.
ಶೀಘ್ರದಿ ಮಾಡಿದರು ಮಾದ್ರಿಯಲ್ಲಿ ಪುತ್ರೋತ್ಪತ್ತಿಯ  ಉತ್ಸವ,
ಅವಳಿಗಳಾಗಿ ಹುಟ್ಟಿಬಂದರು ನಕುಲ ಮತ್ತು ಸಹದೇವ.

Friday 17 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 12: 116 - 119

ಕದಾಚಿತ್ ತಂ ಲಾಳಯನ್ತೀ ಯಶೋದಾ ವೋಢುಂ ನಾಶಕ್ನೋದ್ ಭೂರಿಭಾರಾಧಿಕಾರ್ತ್ತಾ ।
ನಿಧಾಯ ತಂ ಭೂಮಿತಳೇ ಸ್ವಕರ್ಮ್ಮ ಯದಾ ಚಕ್ರೇ ದೈತ್ಯ ಆಗಾತ್ ಸುಘೋರಃ ॥೧೨.೧೧೬॥
ಒಮ್ಮೆ ಯಶೋದೆ ಕೃಷ್ಣನ ಎತ್ತಿ ಮುದ್ದಾಡುತ್ತಿದ್ದ ಸಮಯ,
ಅವಳಿಗಾಯಿತು ಅವನು ಅತ್ಯಂತ ಭಾರವಾದ ಅನುಭವ.
ಎತ್ತಲಾರದೆ ಯಶೋದೆ ಕೃಷ್ಣನ ಮಲಗಿಸುತ್ತಾಳೆ ನೆಲದ ಮೇಲೆ,
ಕೆಲಸದಲ್ಲಿರಲವಳು ಘೋರದೈತ್ಯನ ಆಗಮನ ಆಗುತ್ತದಾಗಲೇ.

ತೃಣಾವರ್ತ್ತೋ ನಾಮತಃ ಕಂಸಭೃತ್ಯಃ ಸೃಷ್ಟ್ವಾsತ್ಯುಗ್ರಂ ಚಕ್ರವಾತಂ ಶಿಶುಂ ತಮ್ ।
ಆದಾಯಾsಯಾದನ್ತರಿಕ್ಷ ಸ ತೇನ ಶಸ್ತಃ ಕಣ್ಠಗ್ರಾಹಸಂರುದ್ಧವಾಯುಃ ॥೧೨.೧೧೭॥
ಹೆಸರಿನಿಂದ ತೃಣಾವರ್ತನಾಗಿರುವ ಆ ದೈತ್ಯ,
ಭೀಕರ ಸುಂಟರಗಾಳಿ ಸೃಷ್ಟಿಸಿದ ಕಂಸನ ಭೃತ್ಯ.
ನೆಲದ ಮೇಲಿದ್ದ ಕೃಷ್ಣನ ಆಕಾಶಕ್ಕೆ ಕೊಂಡೊಯ್ದ ಮೇಲೆತ್ತಿ,
ಆದರೆ ಕೃಷ್ಣ ಉಸಿರುಗಟ್ಟಿಸಿ ನಿಗ್ರಹಿಸಿದ ಅವನ ಕತ್ತನ್ನೊತ್ತಿ.
  
ಪಪಾತ ಕೃಷ್ಣೇನ ಹತಃ ಶಿಲಾತಳೇ ತೃಣಾವರ್ತ್ತಃ ಪರ್ವತೋದಗ್ರದೇಹಃ ।
ಸುವಿಸ್ಮಯಂ ಚಾsಪುರಥೋ ಜನಾಸ್ತೇ ತೃಣಾವರ್ತ್ತಂ ವೀಕ್ಷ್ಯ ಸಞ್ಚೂರ್ಣ್ಣಿತಾಙ್ಗಮ್  ॥೧೨.೧೧೮॥
ಹೀಗೆ ಕೃಷ್ಣನಿಂದ ಕೊಲ್ಲಲ್ಪಟ್ಟ ಆ ದೈತ್ಯ ತೃಣಾವರ್ತ,
ಬಂಡೆಮೇಲೆ ಬಿದ್ದವನ ದೇಹ ಹೋಲುತ್ತಿತ್ತು ಪರ್ವತ.
ಪುಡಿಪುಡಿಯಾದ ತೃಣಾವರ್ತನ ಕಂಡವರಾದರು ಚಕಿತ.

ಅಕ್ರುದ್ಧ್ಯತಾಂ ಕೇಶವೋsನುಗ್ರಹಾಯ ಶುಭಂ ಸ್ವಯೋಗ್ಯಾದಧಿಕಂ ನಿಹನ್ತುಮ್ ।
ಸ ಕ್ರುದ್ಧ್ಯತಾಂ ನವನೀತಾದಿ ಮುಷ್ಣಂಶ್ಚಚಾರ ದೇವೋ ನಿಜಸತ್ಸುಖಾಮ್ಬುಧಿಃ ॥೧೨.೧೧೯॥
ಕೋಪಗೊಳ್ಳದ ಜನರ ಅನುಗ್ರಹಿಸುವುದಕ್ಕಾಗಿ,
ಕೋಪಗೊಳ್ಳುವರ ಹೆಚ್ಚುಪುಣ್ಯ ನಿಗ್ರಹಿಸುವುದಕ್ಕಾಗಿ,
ಶ್ರೀಕೃಷ್ಣ ಸಂಚರಿಸಿದ ಬೆಣ್ಣೆ ಕದಿಯುವವನಾಗಿ.
ಎಣಿಕೆಗೆಟುಕದ ಅಗಣಿತನವ ಮಹಾಯೋಗಿ.
[Contributed by Shri Govind Magal]