Showing posts with label ಶ್ರೀ ರಾಘವೇಂದ್ರ ಮಂಗಲಾಷ್ಟಕ. Show all posts
Showing posts with label ಶ್ರೀ ರಾಘವೇಂದ್ರ ಮಂಗಲಾಷ್ಟಕ. Show all posts

Friday, 12 February 2016

Shri Rāghavēndra Maṅgalāṣṭaka: Epilogue

ಕೊನೆಯಲ್ಲಿ ಹೇಳಬೇಕಾದ್ದು

ಶ್ರೀ ರಾಘವೇಂದ್ರಸ್ವಾಮಿಗಳ ಮಂಗಳಾಷ್ಟಕ ಅರ್ಥ ಚಿಂತನೆಯು ತಾತ್ಕಾಲಿಕವಾಗಿ ಮುಗಿತಾಯದ ಹಂತಕ್ಕೆ ಬಂದಿದೆ. ಇದು ಚಿಂತನೆಯ ಮುಕ್ತಾಯವಲ್ಲ. ಕೇವಲ ಈ ಚಿಂತನೆಯ ಪರ್ವದ ಕೊನೆಯಷ್ಟೆ. ಈ ಪರ್ವದ ಅಂತ್ಯವೇ ನಮ್ಮೆಲ್ಲರ ಮುಂದಿನ ಚಿಂತನಾ ಸರಣಿಯ ಆದಿಯಾಗಬೇಕೆಂದು ಹೃತ್ಪೂರ್ವಕವಾಗಿ ಆಶಿಸುತ್ತೇನೆ.

ಒಂದು ವೇಳೆ, ಈ ಕೃತಿಯಲ್ಲಿ ಹೇಳಿದಂತೆ ಇಷ್ಟೆಲ್ಲಾ ಫಲಗಳು ಸಿಗುತ್ತವೆಯೇ ಎಂಬ ಅನುಮಾನ ಬಂದರೆ, ಅದಕ್ಕೆ ಇಲ್ಲೇ ಉತ್ತರ ಸಿಗುತ್ತದೆ. ಹೇಗೆಂದರೆ, ರಾಯರು ಸತತ ತಪಸ್ಸಿನಿಂದ, ಧ್ಯಾನದಿಂದ ಜಗನ್ನಾಥನನ್ನೇ ತನ್ನವನನ್ನಗಿಸಿಕೊಂಡವರು. 'ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ' ಎಂಬ ಹಿರಿಯರ ವಾಕ್ಯದಂತೆ ಯಾರಿಗೆ ಭಗವಂತನ ಅನುಗ್ರಹವಾಗಿದೆಯೋ ಅವರಿಗೆ ಅಸಾಧ್ಯವಾದುದಾದರೋ ಯಾವುದು. ಇಂದಿನಿಂದಲೇ, ಕಲಿಯುಗ ಕಲ್ಪತರು, ಅಪರೋಕ್ಷೀಕೃತ ಶೀಶ: ಎನ್ನಿಸಿಕೊಂಡ ರಾಯರ ಈ ಸ್ತೋತ್ರವನ್ನು ನಿತ್ಯಪಾರಾಯಣ ಮಾಡೋಣ, ಮಾಡಿ ಕೃತಾರ್ಥರಾಗೋಣ. ಮೇಲೆ ಹೇಳಿದ ಫಲಗಳಿಗಾಗಿಯಲ್ಲ, ಬದಲಿಗೆ ಅವರ ಅನುಗ್ರಹದಿಂದ ಆಚಾರ್ಯ ಮಧ್ವರ ಉತ್ತಮ ಶಾಸ್ತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೋಸ್ಕರ.

ರಾಯರ ಅನುಗ್ರಹದಿಂದ ಇನ್ನು ಮುಂದೆ ಕೂಡ ಇಂಥ ಉತ್ತಮ ಕೃತಿಗಳ ಚಿಂತನಾ ಸರಣಿಗಳು ತಡೆಯಿಲ್ಲದೇ ನಡೆಯಲೆಂದು ಆ ರಾಘವೇಂದ್ರ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸುತ್ತಾ, ಇಷ್ಟುದಿನ ಈ ಕೃತಿಯ ಅರ್ಥಚಿಂತನೆಯಲ್ಲಿ, ನನಗೆ ಮಾರ್ಗದರ್ಷನ ಮಾಡಿ, ಆಂಗ್ಲ ಅನುವಾದಕ್ಕೆ ಸಹಕರಿಸಿದ ಶ್ರೀಯುತ ಪ್ರಸಾದ್ ಅವರಿಗೆ, ಹಾಗೂ ನನ್ನ ಪ್ರಯತ್ನವನ್ನು ಮೆಚ್ಚಿ ಪ್ರೋತ್ಸಾಹಿಸಿದ  ನಮ್ಮ ಬಳಗದ ಹಿರಿಯ- ಕಿರಿಯ ಗೆಳೆಯರಿಗೂ ಕೂಡ ನನ್ನ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

****
Epilogue

We have just concluded a discussion on the Maṅgaḷāṣṭakaṁ of Śrī Rāghavēndra Swāmi. This is not the end of contemplation on this work. It is merely the culmination of one episode of a discussion. May the conclusion of this episode, cascade into a new opening for another contemplative series, is my heartfelt wish for all of us.

Should there be any doubt in any one’s mind on whether this work would be as beneficial as stated in it to the one who chants it, there is ready answer for it right here. Rāyaru, through his relentless penance and meditation, endeared himself to Jagannātha (the Lord of our world). As said by our elders, ‘किमलभ्यं भगवति प्रसन्ने श्रीनिकेतने (Kimalabhyaṁ bhagavati prasannē śrīnikētanē),’ nothing is impossible to those who are blessed by the grace of God. Let us start chanting each day, to Rāyaru, the one who has been called as कलियुग कल्पतरु, अपरोक्षीकृत शीशः Kaliyuga kalpataru, aparōkṣīkr̥ta śīśaḥ, and in the process accomplish something meaningful in our lives. It is not for the fruits that are mentioned in the stōtra but instead, by Rāyaru’s grace, let us be able to understand all of Ācarya Madhva’s supreme scriptural texts, in a better manner.

May we be blessed through Rāyaru’s grace to continue ceaselessly, a series of discussions on several similar supreme works. I hereby pray to Śrī Rāghavēndra Gurusārvabhouma, for guiding me in the course of a meaningful contemplation of this work; I thank Shri Prasad who supported me by translating it to English and last but not the least, I am extremely grateful to all of you, my bandhus, older and younger, who constantly appreciated and encouraged me, in this effort of mine.

Shri Rāghavēndra Maṅgalāṣṭaka Ślōka 09

ಯ: ಸಂಧ್ಯಾಸ್ವನಿಶಂ ಗುರೋರ್ವ್ರತಿಪತೇ: ಸನ್ಮಂಗಳಸ್ಯಾಷ್ಟಕಂ
 ಸಧ್ಯ: ಪಾಪಹರಂ ಸ್ವಸೇವಿ ವಿದುಷಾಂ ಭಕ್ತ್ಯೈವ ಬಾಭಾಷಿತಮ್ |
ಭಕ್ತ್ಯಾ ವಕ್ತಿ ಸುಸಂಪದಂ ಶುಭಪದಂ ದೀರ್ಘಾಯುರಾರೋಗ್ಯಕಂ
ಕೀರ್ತಿಂ ಪುತ್ರಕಳತ್ರಬಾಂಧವಸುಹೃನ್ಮೂರ್ತೀ: ಪ್ರಯಾತಿ ಧೃವಮ್ || ||

|| ಇತಿ ಶ್ರೀಮದಪ್ಪಣಾಚಾರ್ಯ ಕೃತಂ ಶ್ರೀ ರಾಘವೇಂದ್ರ ಮಂಗಳಾಷ್ಟಕಂ ಸಂಪೂರ್ಣಮ್ ||

ಪದಚ್ಛೇದ:

ಯ:, ಸಂಧ್ಯಾಸು, ಅನಿಶಮ್, ಗುರೋ:, ವ್ರತಿಪತೇ ಪತೇ:, ಸನ್ಮಂಗಳಸ್ಯ, ಅಷ್ಟಕಮ್, ಸಧ್ಯ:, ಪಾಪಹರಂ, ಸ್ವಸೇವಿ, ವಿದುಷಾಮ್, ಭಕ್ತ್ಯಾ, ಏವ, ಬಾಭಾಷಿತಮ್,| ಭಕ್ತ್ಯಾ, ವಕ್ತಿ, ಸುಸಂಪದಂ, ಶುಭಪದಂ, ದೀರ್ಘಾಯು:, ಆರೋಗ್ಯಕಂ, ಕೀರ್ತಿಮ್, ಪುತ್ರ, ಕಳತ್ರ, ಬಾಂಧವ, ಸುಹೃತ್ ಮೂರ್ತೀ: ಪ್ರಯಾತಿ, ಧೃವಮ್ ||

ಅನ್ವಯಾರ್ಥ:

ಸ್ವಸೇವಿ - ತನ್ನನ್ನು (ರಾಯರನ್ನು)  ಸೇವಿಸುವ, ವಿದುಷಾಂ - ಜ್ಞಾನಿಗಳಿಗೆ, ಸಧ್ಯ: - ಕೂಡಲೇ, ಪಾಪಹರಂ - ಪಾಪಗಳನ್ನು ಪರಿಹರಿಸುವ, ಭಕ್ತ್ಯಾ  ಏವ - ಕೇವಲ ಭಕ್ತಿಯಿಂದಲೇ, ಬಾಭಾಷಿತಮ್ - ವಿಶೇಷವಾಗಿ ಹೇಳಲ್ಪಟ್ಟ, ವ್ರತಿ ಪತೇ: - ವ್ರತಾನುಷ್ಠಾನ ರತರಾದ ಸಜ್ಜನರ ರಕ್ಷಕರಾದ (ರಕ್ಷಕನಾದ) ಗುರೋ: ಶ್ರೀ ರಾಘವೇಂದ್ರ ಗುರುಗಳ, ಸನ್ಮಂಗಳಸ್ಯ - ಅತ್ಯಂತ ಶುಭಕರವಾದ, ಅಷ್ಟಕಮ್- ಎಂಟು ಸೊಲ್ಲುಗಳನ್ನು, ಯ: - ಯಾರು, ಅನಿಶಮ್- ನಿತ್ಯವೂ, ಸಂಧ್ಯಾಸು - ತ್ರಿ ಸಂಧ್ಯಾಕಾಲಗಳಲ್ಲಿ, ಭಕ್ತ್ಯಾ - ಭಕ್ತಿಯಿಂದ, ವಕ್ತಿ - ಹೇಳುತ್ತಾನೋ, (ಅವನು) ಆರೋಗ್ಯಕಮ್- ಆರೋಗ್ಯಪೂರ್ಣವಾದದೀರ್ಘಾಯು : ದೀರ್ಘಾಯುಸ್ಸನ್ನೂ, ಪುತ್ರ, - ಉತ್ತಮರಾದ ಮಕ್ಕಳನ್ನೂ, ಕಳತ್ರ - ಸತ್ಪತ್ನಿಯನ್ನೂ, ಸುಹೃನ್ಮೂರ್ತೀ: - ಪ್ರಿಯಮಿತ್ರರನ್ನೂಧೃವಮ್ - ಶಾಶ್ವತವಾದ, ಸುಸಂಪದಂ - ದೈವಿಕ ಸಂಪತ್ತನ್ನೂ, ಶುಭಪದಂ - ಮಂಗಳಕರವಾದ ಉತ್ತಮಲೋಕವನ್ನೂ, ಪ್ರಯಾತಿ - ವಿಶೇಷವಾಗಿ ಹೊಂದುತ್ತಾನೆ.

ತಾತ್ಪರ್ಯ:

ಒಂಭತ್ತನೆಯ ಈ ಶ್ಲೋಕದಲ್ಲಿ ಆಪ್ಪಣ್ಣಾಚಾರ್ಯರು ರಾಘವೇಂದ್ರ ಮಂಗಳಾಷ್ಟಕವನ್ನು ಯಾರು ಭಕ್ತಿಯಿಂದ ಪಠಿಸುತ್ತಾರೋ ಅವರಿಗೆ ಸಿಗುವ ಫಲಗಳ ಬಗ್ಗೆ ಹೇಳಿದ್ದಾರೆ.

ಅವರೇ ಹೇಳಿರುವಂತೆ, ವ್ರತಾನುಷ್ಠಾನ ನಿರತರಾದ ಸಮಸ್ತಸಜ್ಜನರ ರಕ್ಷಕರಾದ ರಾಘವೇಂದ್ರತೀರ್ಥರ, ಎಂಟು ಪದ್ಯಗಳ ಈ ಮಂಗಳಕರವಾದ ಸ್ತೋತ್ರವನ್ನು ಯಾವುದೇ ಸ್ವಾರ್ಥದ ಸಾಧನೆಗಾಗಿ ಅಲ್ಲದೆ ಕೇವಲ ರಾಯರ ಮೇಲಿನ ಭಕ್ತಿಯಿಂದ ಹೇಳಲಾಗಿದೆ. ಯಾರು ಈ ಸ್ತೋತ್ರವನ್ನು ಮೂರೂ ಸಂಧ್ಯಾಕಾಲಗಳಲ್ಲಿ ಭಕ್ತಿಯಿಂದ ಪಠಿಸುತ್ತಾರೋ ಅವರು ಒಳ್ಳೆಯ ಹೆಂಡತಿ ಮಕ್ಕಳು, ಬಂಧು ಬಾಂಧವರು ಮತ್ತು ಒಳ್ಳೆಯ ಮಿತ್ರರನ್ನು ಪಡೆಯುತ್ತಾರೆ. ಆರೋಗ್ಯಪೂರ್ಣವಾದ ದೀರ್ಘಾಯುಸ್ಸನ್ನೂ, ಐಹಿಕ ಮತ್ತು ದೈವಿಕ ಸಂಪತ್ತನ್ನೂ, ಶಾಶ್ವತವಾದ ಉತ್ತಮ ಪದವಿಯನ್ನೂ, ಉತ್ತಮ ಲೋಕವನ್ನೂ ಪಡೆಯುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
****

Thursday, 11 February 2016

Shri Rāghavēndra Maṅgalāṣṭaka Ślōka 08

ಶ್ರೀಮದ್ವೈಷ್ಣವ-ಲೋಕ-ಜಾಲಕ-ಗುರು: ಶ್ರೀಮದ್ಪರಿವ್ರಾಡ್-ಭರು:
ಶಾಸ್ತ್ರೇ ದೇವಗುರು: ಶ್ರಿತಾಮರ-ತರು: ಪ್ರತ್ಯೂಹ-ಗೋತ್ರ-ಸ್ವರು: |
ಚೇತೋತೀತ-ಶಿರುಸ್ತಥಾ ಜಿತವರು: ಸತ್ಸೌಖ್ಯ-ಸಂಪತ್-ಕರು:
ಶ್ರೀಮತ್ಸದ್ಗುರು-ರಾಘವೇಂದ್ರ-ಯತಿರಾಟ್ ಕುರ್ಯಾದ್ಧೃವಂ ಮಂಗಳಮ್ || ೮ ||

ಪದಚ್ಛೇದ :

ಶ್ರೀಮತ್, ವೈಷ್ಣವ ಲೋಕ ಜಾಲಕ ಗುರು:, ಶ್ರೀಮತ್, ಪರಿವ್ರಾಟ್ ಭರು:, ಶಾಸ್ತ್ರೇ, ದೇವಗುರು:, ಶ್ರಿತ ಅಮರತರು:, ಪ್ರತ್ಯೂಹ ಗೋತ್ರ ಸ್ವರು:, ಚೇತ: ಅತೀತ ಶಿರು:, ತಥಾ, ಜಿತ ವರು:, ಸತ್ ಸೌಖ್ಯ ಸಂಪತ್ ಕರು:

ಅನ್ವಯಾರ್ಥ:

ಶ್ರೀಮತ್- ಜ್ಞಾನವುಳ್ಳ, ವೈಷ್ಣವ - ವಿಷ್ಣವನ್ನು ಆರಾಧಿಸುವ, ಲೋಕ - ಜನರ, ಜಾಲಕ - ಸಮೂಹಕ್ಕೆ, - ಗುರು: ದಾರಿತೋರುವ ಗುರುಗಳು, ಶ್ರೀಮತ್ - ಜ್ಞಾನಿಗಳಾದ, ಪರಿವ್ರಾಟ್ - ಸನ್ಯಾಸಿಗಳ, ಭರು: ರಕ್ಷಕರು, ಶಾಸ್ತ್ರೇ - ಶಾಸ್ತ್ರ ವಿಶಯಗಳಲ್ಲಿ, ದೇವಗುರು- ದೇವತೆಗಳ ಗುರುವಾದ ಬೃಹಸ್ಪತಿಯಂಥವರು, ಶ್ರಿತ - ಬೇಡಿ ಬಂದವರಿಗೆ, ಅಮರ ತರು: - ದೇವಲೋಕದ ಮರ, ಅಂದರೆ, ಕಲ್ಪವೃಕ್ಷದಂತೆ ಬೇಡಿದ್ದನ್ನು ಕೊಡುವವರು. ಪ್ರತ್ಯೂಹ - ವಿಘ್ನಗಳ, ಗೋತ್ರ - ಬೆಟ್ಟಗಳಿಗೆ, ಸ್ವರು - ಸಿಡಿಲಿನಂಥವರು, (ವಜ್ರಾಯುಧ). ಚೇತ:   - ಅಂತ:ಕರಣಕ್ಕೆ(ಮನಸ್ಸಿಗೆ), ಅತೀತ - ನಿಲುಕದ, ಶಿರು:  - ಜ್ಞಾನಿಗಳುಜಿತ - ಜಿತೇಂದ್ರಿಯರಲ್ಲಿವರು:  - ಶ್ರೇಷ್ಠರು. ತಥಾ - ಹಾಗೆಯೇ, ಸತ್ - ನಿರ್ದುಷ್ಟವಾದ, ಸೌಖ್ಯ - ಆನಂದ ಮತ್ತು ಸಂಪತ್ - ಸಂಪತ್ತನ್ನು, ಕರು: - ಉಂಟುಮಾಡುವವರು.

ತಾತ್ಪರ್ಯ: ಎಂಟನೆಯ ಶ್ಲೋಕದಲ್ಲಿ ರಾಯರ ಇನ್ನೂ ಹಲವು ವಿಶಿಷ್ಟ ಗುಣಗಳಬಗ್ಗೆ ಹೇಳಿದ್ದಾರೆ.

ರಾಯರು, ವಿಷ್ಣುವನ್ನು ಆರಾಧಿಸುವ ಎಲ್ಲಾ ಸಜ್ಜನರ ಸಮೂಹಕ್ಕೂ ಭಗವಂತನೆಡೆಗಿನ ದಾರಿ ತೋರುವ ಗುರುಗಳು, ಆಗಿನ ಕಾಲದ ಎಲ್ಲಾ ಜ್ಞಾನಿಗಳಾದ ಯತಿಗಳ ರಕ್ಷಿಸುವ ಮುಂದಾಳುವಾಗಿದ್ದರು.

ಶಾಸ್ತ್ರ ಪಾಠ ಪ್ರವಚನದಲ್ಲಿ ಸಾಕ್ಷಾತ್ ದೇವಗುರು ಬೃಹಸ್ಪತಿಯಂತೆ ಜ್ಞಾನಿಗಳಾಗಿದ್ದರು.. ತಮ್ಮನ್ನು ಆಶ್ರಯಿಸಿ ಬಂದ ಸಮಸ್ತ ಸಜ್ಜನರಿಗೂ ಕಲ್ಪವೃಕ್ಷದಂತೆ ಕೇಳಿದ್ದನ್ನು ಕೊಡುತ್ತಿದ್ದರು. ತಮ್ಮ/ಭಗವಂತನ ಭಕ್ತರ ಬೆಟ್ಟದಂಥ ಕಷ್ಟಗಳನ್ನು ಸಹ ನಿವಾರಿಸುವ ಸಿಡಿಲಿನಂಥವರು. ಇಲ್ಲಿ, ರಾಯರ ಮಹಿಮೆಯನ್ನು ಪರ್ವತಗಳ ರೆಕ್ಕೆ ಸೀಳಿ ಕೊಬ್ಬಿಳಿಸಿದ ಇಂದ್ರನ ವಜ್ರಾಯುಧಕ್ಕೆ ಮತ್ತು ದೊಡ್ಡ ದೊಡ್ಡ ಬೆಟ್ಟಗಳನ್ನೂ ಪುಡಿಗುಟ್ಟಿಸುವ ಸಿಡಿಲಿಗೆ ಹೋಲಿಸಿದ್ದಾರೆ.

ಇನ್ನು, ಅವರ ಜ್ಞಾನದ ಆಳವಂತೂ ಯಾರ ಊಹೆಗೂ ನಿಲುಕದಂಥದು. ಜಿತೇಂದ್ರಿಯರಲ್ಲಿ ಉತ್ತಮರಾಗಿದ್ದರು. ನಿರ್ದುಷ್ಟವಾದ (ಪರಮ) ಆನಂದವನ್ನೂ, ಹಾಗೆಯೇ ಐಹಿಕ ಮತ್ತು ಪಾರಮಾರ್ಥಿಕ ಸಂಪತ್ತನ್ನೂ ನೀಡಬಲ್ಲವರು.
ಇಂಥ: ಸಜ್ಜನರ ಪಾಲಿನ ಪ್ರೀತಿಯ ಗುರುಗಳಾದ, ಯತಿಶ್ರೇಷ್ಟರಾದ ರಾಘವೇಂದ್ರರು ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ.
****

Wednesday, 10 February 2016

Shri Rāghavēndra Maṅgalāṣṭaka Ślōka 07

ವೇದವ್ಯಾಸ-ಮುನೀಶ-ಮಧ್ವ-ಯತಿರಾಟ್ಟೀಕಾರ್ಯ-ವಾಕ್ಯಾಮೃತಂ
ಜ್ಞಾತ್ವಾ ದ್ವೈತಮತಂ ಹಲಾಹಲಸಮಂ ತ್ಯಕ್ತ್ವಾ ಸಮಾಖ್ಯಾಪ್ತಯೇ |
ಸಂಖ್ಯಾವತ್ಸುಖದಾಂ ದಶೋಪನಿಷದಾಂ ವ್ಯಾಖ್ಯಾಂ ಸಮಾಖ್ಯಾನ್ಮುದಾ
ಶ್ರೀಮತ್ಸದ್ಗುರು-ರಾಘವೇಂದ್ರ-ಯತಿರಾಟ್ ಕುರ್ಯಾದ್ಧೃವಂ ಮಂಗಳಮ್ || ೭ ||

ಪದಚ್ಛೇದ:

ವೇದವ್ಯಾಸ- ಮುನೀಶ ಮಧ್ವ-ಯತಿರಾಟ್ ಟೀಕಾರ್ಯ ವಾಕ್ಯ ಅಮೃತಮ್, ಜ್ಞಾತ್ವಾ, ಅದ್ವೈತ ಮತಮ್, ಹಲಾಹಲ ಸಮಂ, ತ್ಯಕ್ತ್ವಾ, ಸಮಾಖ್ಯ ಆಪ್ತಯೇ, ಸಂಖ್ಯಾವತ್ ಸುಖದಾಮ್, ದಶ ಉಪನಿಷದಾಮ್, ವ್ಯಾಖ್ಯಾಮ್, ಸಮಾಖ್ಯಾತ್, ಮುದಾ,

ಅನ್ವಯಾರ್ಥ:

ಮುನೀಶ ವೇದವ್ಯಾಸ - ಜ್ಞಾನಿಗಳಿಗೆ ಒಡೆಯರಾದ ವೇದವ್ಯಾಸರು, ಯತಿರಾಟ್ ಮಧ್ವ - ಯತಿಗಳಿಗೆಲ್ಲ ನಾಯಕರಾದ ಆಚಾರ್ಯ ಮಧ್ವರು, ಟೀಕಾರ್ಯ - ಜಯತೀರ್ಥರು, ಇವರ, ವಾಕ್ಯ - ವ್ಯಾಸರು ಕೊಟ್ಟ ವೇದ, ಬ್ರಹ್ಮ ಸೂತ್ರ, ಇತಿಹಾಸ ಪುರಾಣಗಳು, ಆಚಾರ್ಯ ಮಧ್ವರ ತತ್ವವಾದ ಬೋಧಕ ಗ್ರಂಥಗಳು ಮತ್ತು ಜಯತೀರ್ಥರ ನ್ಯಾಯಸುಧಾದಿ ಗ್ರಂಥಗಳನ್ನು, ಅಮೃತಮ್ - ಅಮೃತತುಲ್ಯವೆಂದು, ಜ್ಞಾತ್ವಾ - ತಿಳಿದು, ಹಲಾಹಲಸಮಂ - ಮಹಾವಿಶ ಸದೃಶವಾದ, ಅದ್ವೈತ ಮತಂ - ಭಗವಂತನಿಗೂ ಇತರ ಜೀವಜಡಯುಕ್ತ ಜಗತ್ತಿಗೂ ಅಭೇದವನ್ನು ಹೇಳುವ ಮತವನ್ನು, ತ್ಯಕ್ತ್ವಾ - ತ್ಯಜಿಸಿ ( ಖಂಡಿಸಿ) ಸಂಖ್ಯಾವತ್ - ಜ್ಞಾನಿಗಳಿಗೆ, ಸಮಾಖ್ಯ - ಉತ್ತಮವಾದ, ಸುಲಭವಾದ ವ್ಯಾಖ್ಯಾನವನ್ನು, ಆಪ್ತಯೇ - ಕೊಡುವುದಕ್ಕೋಸ್ಕರ, ಸುಖದಾಂ - ಸಂತೋಷವನ್ನೀಯುವ, ದಶ ಉಪನಿಷದಾಂ - ಹತ್ತು ಉಪನಿಷತ್ತುಗಳ - ವ್ಯಾಖ್ಯಾಂ - ವ್ಯಾಖ್ಯಾನವನ್ನು, ಮುದಾ - ಆನಂದದಿಂದ, ಸಮಾಖ್ಯಾತ್ - ಚೆನ್ನಾಗಿ ಹೇಳಿದರು.(ವ್ಯಾಖ್ಯಾನವನ್ನು ಮಾಡಿದರು). ಅಂತ: ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು (ಭಾಗ್ಯವನ್ನು) ಕುರ್ಯಾತ್ - ಮಾಡಲಿ (ಉಂಟುಮಾಡಲಿ)

ತಾತ್ಪರ್ಯ :-

ಈ ಶ್ಲೋಕದಲ್ಲಿ ರಾಯರ ತತ್ವ ನಿಶ್ಚಯ, ಜ್ಞಾನಿಗಳಲ್ಲಿ ಕರುಣೆ, ಕಠಿಣವಾದ ಗ್ರಂಥಗಳಿಗೂ ಸುಲಭವಾಗಿ ಅರ್ಥವಾಗುವಂತೆ ವ್ಯಾಖ್ಯಾನವನ್ನು ಮಾಡುವ ರೀತಿಯನ್ನು ವರ್ಣಿಸಿದ್ದಾರೆ.

ರಾಯರು ವ್ಯಾಸರ, ಮಧ್ವಾಚಾರ್ಯರ, ಜಯತೀರ್ಥರ ತತ್ವ ಬೋಧಕ ಗ್ರಂಥಗಳೇ ನಿಜಕ್ಕೂ ಅಮೃತತ್ವವಾದ ಮೋಕ್ಷವನ್ನು ಕೊಡುವಂಥವೆಂದು ತಿಳಿದಿದ್ದರು, ಹಾಗೆಯೇ ಭಗವಂತನಿಗೂ, ಜೀವ ಜಡಗಳಿಗೂ ಅಭೇದವನ್ನು ಬೋಧಿಸುವ ಮತಗಳು ನಿತ್ಯನರಕಕ್ಕೆ ಕಾರಣವಾಗುವ ಮಹಾವಿಶವೆಂದು ತಿಳಿದು ಅದನ್ನು ಸಮರ್ಥವಾಗಿ ಖಂಡಿಸಿದ್ದರು. ಸಜ್ಜನರು ಮತ್ತು ಜಿಜ್ಞಾಸುಗಳ ಪಾಲಿಗೆ ಕಬ್ಬಿಣದ ಕಡಲೆಯಂಥ ಗ್ರಂಥಗಳಿಗೆ ಮತ್ತು ಹತ್ತೂ ಉಪನಿಷತ್ತುಗಳಿಗೆ ಉತ್ತಮವಾದ, ಸುಲಭಸಾಧ್ಯವಾದ ವ್ಯಾಖ್ಯಾನಗಳನ್ನು ಆನಂದದಿಂದಲೇ ರಚಿಸಿದ್ದರು.

ಇಂಥ: ಸಜ್ಜನರ ಪಾಲಿನ ಪ್ರೀತಿಯ ಗುರುಗಳಾದ, ಯತಿಶ್ರೇಷ್ಟರಾದ ರಾಘವೇಂದ್ರರು ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ.
****

Tuesday, 9 February 2016

Shri Rāghavēndra Maṅgalāṣṭaka Ślōka 06

ಯದ್ವೃನ್ದಾವನಸಪ್ರದಕ್ಷಿಣ ನಮಸ್ಕಾರಾಭಿಷೇಕಸ್ತುತಿ  
ಧ್ಯಾನಾರಾಧನಮೃದ್ವಿಲೇಪನಮುಖಾನೇಕೊಪಚಾರಾನ್ ಸದಾ |
ಕಾರಂಕಾರಮಭಿಪ್ರಯಾಂತಿ ಚತುರೋ ಲೋಕಾ: ಪುಮರ್ಥಾನ್ ಸದಾ |
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ || ೬ ||    

ಪದಚ್ಛೇದ :-

ಯತ್, ವೃಂದಾವನ ಸಪ್ರದಕ್ಷಿಣ ನಮಸ್ಕಾರ, ಅಭಿಷೇಕ, ಸ್ತುತಿ, ಧ್ಯಾನ, ಆರಾಧನ, ಮೃತ್ ವಿಲೇಪನ ಮುಖ ಅನೇಕ ಉಪಚಾರಾನ್, ಸದಾ, ಕಾರಮ್ ಕಾರಮ್, ಅಭಿ ಪ್ರಯಾಂತಿ, ಚತುರ:, ಲೋಕಾ:, ಪುಮರ್ಥಾನ್, ಸದಾ, ್ರೀಮತ್, ಸತ್ ಗುರು ರಾಘವೇಂದ್ರ ಯತಿರಾಟ್, ಕುರ್ಯಾತ್, ಧೃವಮ್, ಮಂಗಳಮ್.     

ಅನ್ವಯಾರ್ಥ :-

ಯತ್- ಯಾವ ಶ್ರೀ ರಾಘವೇಂದ್ರ ಸ್ವಾಮಿಗಳ, ವೃಂದಾವನ (ವೃಂದಾವನಸ್ಯ )  ವೃಂದಾವನಕ್ಕೆ, ಸದಾ - ಯಾವಾಗಲೂ, ಸಪ್ರದಕ್ಷಿಣ- ಪ್ರದಕ್ಷಿಣೆ ಸಹಿತವಾದ, ನಮಸ್ಕಾರ- ಕಾಯಿಕ, ವಾಚಿಕ, ಮಾನಸಿಕವಾಗಿ ಶರಣು ಹೊಂದಿ, ಅಭಿಷೇಕ- ವೃಂದಾವನ ಮತ್ತು ಪ್ರಾಣ-ರಾಮರಿಗೆ ಅಭಿಷೇಕ, ಸ್ತುತಿ- ಸ್ತೋತ್ರ ಪಾರಾಯಣ, ಧ್ಯಾನ - ರಾಯರ ಮತ್ತು ಪ್ರಾಣ-ರಾಮರ ಮಾನಸಿಕ ಚಿಂತನೆ, ಆರಾಧನ- ಶೋಡಷ ಉಪಚಾರ ಸಹಿತ ಪೂಜೆ,ಮೃದ್ವಿಲೇಪನ - ಮೃತ್- (ಮಣ್ಣು) ರಾಯರ ಮೃತ್ತಿಕೆ, ವಿಲೇಪನ - ಹಚ್ಚಿಕೊಳ್ಳುವುದು, ಮುಖಾ: ಇವುಗಳೇ ಮೊದಲಾದ, ಅನೇಕ- ಬಹಳ ವಿಧವಾದ, ಉಪಚಾರಾನ್ -  ಸೇವೆಗಳನ್ನು,   ಸದಾ- ಯಾವಾಗಲೂ , ಸತತಂ- ಅವಿರತವಾಗಿ,  ಕಾರಂಕಾರಂ- ಮತ್ತೆ ಮತ್ತೆ ಮಾಡುವುದರಿಂದ, ಲೋಕಾ: ಜನರು, ಚತುರೋ(ಚತುರ:) ಧರ್ಮ, ಅರ್ಥ, ಕಾಮ , ಮತ್ತು ಮೋಕ್ಷಗಳೆಂಬ ನಾಲ್ಕು ಪುಮರ್ಥಾನ್- ಪುರುಷಾರ್ಥಗಳನ್ನು, ಅಭಿಪ್ರಯಾಂತಿ- ವಿಶೇಷವಾಗಿ ಹೊಂದುತ್ತಾರೋ ಅಂತ: ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು ( ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ)

ತಾತ್ಪರ್ಯ :-
 ರಾಯರ ವೃಂದಾವನಕ್ಕೆ ನಿತ್ಯವೂ ಸತತವಾಗಿ ಸ್ತೋತ್ರ ಪಾರಾಯಣ ಸಹಿತವಾಗಿ ಪ್ರದಕ್ಷಿಣೆ ಹಾಕುವುದು, ನಮಸ್ಕಾರಗಳನ್ನು ಮಾಡುವುದು, ಅಭಿಷೇಕ ಮಾಡುವುದು, ವಿಶೇಷ ದಿವಸಗಳಂದು ಧ್ಯಾನ, ಆರಾಧನಾದಿಗಳನ್ನು ಮಾಡುವುದು, ರಾಯರ ವೃಂದಾವನದ ಮೃತ್ತಿಕೆಯನ್ನು ಹಚ್ಚಿಕೊಳ್ಳುವುದು ಹೀಗೆ ನಾನಾವಿಧ ಸೇವೆಗಳನ್ನು ಮತ್ತೆ ಮತ್ತೆ ಮಾಡುವುದರಿಂದ ಜನರು ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಪಡೆಯುತ್ತಾರೆ ಎಂಬುದಾಗಿ ಈ ಶ್ಲೋಕದಲ್ಲಿ ಅಪ್ಪಣ್ಣಾಚಾರ್ಯರು, ರಾಯರನ್ನು ಸ್ತುತಿಸಿ ಸೇವಿಸುವ ಸಜ್ಜನರಿಗೆ ಸಿಗುವ ಫಲಗಳ ಬಗ್ಗೆ ವಿವರಿಸಿದ್ದಾರೆ.
****

Monday, 8 February 2016

Shri Rāghavēndra Maṅgalāṣṭaka Ślōka 05

ವಿದ್ವದ್ರಾಜಶಿರ: ಕಿರೀಟಖಚಿತಾನರ್ಘೋರುರತ್ನಪ್ರಭಾ         
ರಾಗಾಘೌಘಹ ಪದುಕದ್ವಯಚರೋ  ಪದ್ಮಾಕ್ಷಮಾಲಾಧರ:  
ಭಾಸ್ವದ್ದಂಡಕಮಂಡಲೋಜ್ಜ್ವಲ ಕರೋ ರಕ್ತಾಮ್ಬರಾಡಮ್ಬರ:  
ಶ್ರೀಮದ್-ಸದ್ಗುರು ರಾಘವೇಂದ್ರ -ಯತಿರಾಟ್ ಕುರ್ಯಾದ್-ಧ್ರುವಂ ಮಂಗಳಮ್ || ೫ ||       

ಪದಚ್ಚೇದ :-

ವಿದ್ವತ್ ರಾಜ ಶಿರ: ಕಿರೀಟ ಖಚಿತ ಅನರ್ಘ್ಯ ಉರು ರತ್ನ ಪ್ರಭಾ, ರಾಗ ಅಘ ಓಘ ಹ ಪಾದುಕದ್ವಯ ಚರ:, ಪದ್ಮಾಕ್ಷ ಮಾಲಾಧರ:, | ಭಾಸ್ವತ್, ದಂಡ, ಕಮಂಡಲ ಉಜ್ಜ್ವಲ ಖರ:, ರಕ್ತ ಅಂಬರ ಅಡಂಬರ:

ಅನ್ವಯಾರ್ಥ:-

ಅನರ್ಘ- ಬೆಲೆಕಟ್ಟಲಾಗದ, ಉರುರತ್ನಪ್ರಭಾ - ಉತ್ಕೃಷ್ಠವಾದ ರತ್ನದ ಪ್ರಭೆಉಳ್ಳ, ಕಿರೀಟಖಚಿತ - ಕಿರೀಟದಿಂದ ಕೂಡಿದ, ವಿದ್ವದ್ರಾಜ- ವಿದ್ವಾಂಸ ಶ್ರೇಷ್ಠರ, ಶಿರ: - ಶಿರಸ್ಸಿನಂತಿರುವ,   ರಾಗ- ಅಘ - ಓಘ -   ರಾಗ- ಮೋಹ, ಅಘ- ಪಾಪ ಇವುಗಳ , ಓಘ- ಸಮೂಹವನ್ನು, - ನಾಶಪಡಿಸುವಂತ: ಪದುಕದ್ವಯ- ಎರಡುಪಾದುಕೆ ಗಳೊಂದಿಗೆ, ಚರ:- ನಡೆದಾಡುವ, ಪದ್ಮಾಕ್ಷಮಾಲಾಧರ: ಪದ್ಮಾಕ್ಷ ಮಣಿಗಳ ಹಾರ ಧರಿಸಿರುವಂತ: , ಭಾಸ್ವಾತ್- ಹೊಳೆಯುತ್ತಿರುವ, ದಂಡ- (ಯತಿಗಳು ಹಿಡಿಯುವ ಯಜ್ಞೋಪವೀತ ಸಹಿತವಾದಕೋಲು, ಕಮಂಡಲ- ಕಳಶ/ ತಂಬಿಗೆ, ಹಿಡಿದಿರುವ, ಉಜ್ವಲ- ಹೊಳೆಯುವ ಕರ:- ಕೈಉಳ್ಳ, ರಕ್ತಾಮ್ಬರಾಡಮ್ಬರ: ರಕ್ತ- ಕೆಂಪು, ಅಂಬರ- ವಸ್ತ್ರ, ಆಡಂಬರ: ಹಿರಿಮೆ ಉಳ್ಳವರು. ಸಣ್ಣ ಪುಟ್ಟ ಸಾಧನಾಶೂನ್ಯರೆಲ್ಲ ಜರತಾರಿ, ರೇಶಿಮೆ, ಇತ್ಯಾದಿ ಬೆಲೆಬಾಳುವ ವಸ್ತ್ರ ಧರಿಸಿ ಅಬ್ಬರದ   ಆಡಂಬರ ಮಾಡುವಾಗದೊಡ್ಡ  ತಪಸ್ವಿಗಳೂ, ಶಾಪಾನುಗ್ರಹ ಸಂಪನ್ನರೂ ಆದ ರಾಯರು ಮಾತ್ರಾ ಕೇವಲ ಕೆಂಪು ಕಾಷಾಯ ವಸ್ತ್ರವನ್ನೇ ಆಡಮ್ಬರ ಎಂಬಂತೆ ಧರಿಸುತ್ತಿದ್ದರು. ಶ್ರೀಮತ್ - ಜ್ಞಾನಿಗಳಾದ, ಸದ್ಗುರು- ಉತ್ತಮಗುರುಗಳಾದ, ರಾಘವೇಂದ್ರ ಯತಿರಾಟ್ - ಯತಿಶ್ರೇಷ್ಠರಾದ ರಾಘವೇಂದ್ರರು, ಧೃವಂ- ಶಾಶ್ವತವಾದ, ಮಂಗಳಂ - ಔನ್ನತ್ಯವನ್ನು (ಭಾಗ್ಯವನ್ನು ) ಕುರ್ಯಾತ್ - ಮಾಡಲಿ (ಉಂಟುಮಾಡಲಿ)

ತಾತ್ಪರ್ಯ:

ರಾಯರ ಅತ್ಯಂತ ಆಪ್ತಶಿಷ್ಯರೂ, ಪರಮಭಕ್ತರೂ ಆದ ಅಪ್ಪಣಾಚಾರ್ಯರು ಈಶ್ಲೋಕದಲ್ಲಿ ರಾಯರ ಬಾಹ್ಯ ಸ್ವರೂಪವನ್ನು ಮೈಮರೆತು ವರ್ಣಿಸಿದ್ದಾರೆ.

ರಾಯರು ನೋಡುವ ಭಕ್ತರ ಕಣ್ಣಿಗೆ ಹೇಗೆ ಕಾಣುತ್ತಿದ್ದರು ? ನಿಜವಾಗಲೂ ಈ ಉಪಮೆ ಬಹಳ ಸುಂದರ.

ಎಲಾ ಶ್ರೇಷ್ಠ ವಿದ್ವಾಂಸರುಗಳ ಗುಂಪೇ ಒಂದು ಶರೀರವಾದರೆ, ನಮ್ಮ ರಾಯರು ಆ ಶರೀರದ, ಅತ್ಯಂತ ಬೆಲೆಬಾಳುವ, ಬೆಲೆಕಟ್ಟಲಾರದ ವಜ್ರ ಮಣಿಗಳಿಂದ ಅಲಂಕೃತವಾದ ಶಿರಸ್ಸಿನಂತಿದ್ದರು. ಅಂದರೆ, ಒಂದು ಶರೀರಕ್ಕೆ ತಲೆ ಹೇಗೆ ಮುಖ್ಯವೋ ಹಾಗೆಯೇ ಸಮಸ್ತ ವಿದ್ವಾಂಸರ ಸಮೂಹಕ್ಕೆ ರಾಯರು ಬಹಳ ಪ್ರಮುಖರೂ ಕಿರೀಟಪ್ರಾಯರೂ ಆಗಿದ್ದರು.

ಪಾಪಗಳ ರಾಶಿಯನ್ನು, ರಾಗಾದಿ ದೋಷಗಳನ್ನು ನಾಶಮಾಡಲು ಸಾಕ್ಷಾತ್ತಾಗಿ ಅವರೇ ಬರಬೇಕಿಲ್ಲ, ಅವರ ಪಾದುಕೆಗಳೇ ಸಮರ್ಥವಾಗಿದ್ದವು.  ಸ್ಪರ್ಷಮಣಿಯ ಸ್ಪರ್ಷದಿಂದ ಕಬ್ಬಿಣ ಕೂಡ ಬಂಗಾರವಾಗುವಂತೆ, ಅವರ ತಪ;ಪ್ರಭಾವಕ್ಕೆ ಸಮೀಪವಾದ ಪಾದುಕೆಯಂಥ ಜಡವಸ್ತುಗಳು ಕೂಡ ಪಾಪಗಳ ರಾಶಿಯನ್ನು ನಾಶಮಾಡುವ ಶಕ್ತಿಯನ್ನು ಪಡೆದಿರುತ್ತಿದ್ದವು  ಎಂಬ ವಿಶಯವನ್ನು ಇಲ್ಲಿ ವಿವರಿಸಿದ್ದಾರೆ.

ಕೊರಳಲ್ಲಿ ಪದ್ಮಾಕ್ಷಿ ಹಾರ, ಕೈಯಲ್ಲಿ ಹೊಳೆಯುವ ದಂಡ ಕಮಂಡಲಗಳನ್ನು ಹಿಡಿದು, ಕೆಂಪುಬಣ್ಣದ  ಕಾವಿ ಧರಿಸಿದ ರಾಯರು ಉಜ್ವಲವಾಗಿ ಕಾಣಿಸುತ್ತದ್ದರು.  "ಯತಿಶ್ರೇಷ್ಠರಾದ ರಾಯರು ಕೇವಲ ಕೆಂಪು ಕಾಷಾಯ ವಸ್ತ್ರವನ್ನು ಧರಿಸುತ್ತಿದ್ದರು". ಇದು ಅವರ ಅತ್ಯಂತ ಸರಳ ಜೀವನ ಶೈಲಿಯ ಒಂದು ಉದಾಹರಣೆ ಅಷ್ಟೆ.

ಅಂಥ: ಶ್ರೀ ರಾಘವೇಂದ್ರ ಗುರುಗಳು ನಮಗೆ ಶಾಶ್ವತವಾದ ಮಂಗಳವನ್ನು ಉಂಟುಮಾಡಲಿ ಎಂಬುದು ಶ್ಲೋಕದ ಆಶಯ.
****