Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 29: 01-47

 

ಅಧ್ಯಾಯ ಇಪ್ಪತೊಂಬತ್ತು [ಸಮಸ್ತಧರ್ಮ್ಮಸಙ್ಗ್ರಹಃ]

 

̐

ಯದೈವ ಕೃಷ್ಣೌ ಸಕಲಾಧಿರಾಜ್ಯೇ ಯುಧಿಷ್ಠಿರಂ ಯೌವರಾಜ್ಯೇ ಚ ಭೀಮಮ್ ।

ವಿಪ್ರೈರ್ಯ್ಯುತಾವಭಿಷಿಚ್ಯಾSಶಿಷಶ್ಚ ಯುಕ್ತಾ ದತ್ವಾ ಹರ್ಷಯಾಮಾಸತುಸ್ತೌ ॥ ೨೯.೦೧ ॥

 

ತದೈವ ಚಾರ್ವಾಕ ಇತಿ ಪ್ರಸಿದ್ಧಂ ರಕ್ಷಸ್ತ್ರಿದಣ್ಡೀ ಯತಿರೇವ ಭೂತ್ವಾ ।

ಯುಧಿಷ್ಠಿರಂ ಗರ್ಹಯಾಮಾಸ ವಿಪ್ರಾಸ್ತ್ವಾಂ ಗರ್ಹಯನ್ತೀತಿ ಸುಪಾಪಶೀಲಮ್ ॥ ೨೯.೦೨ ॥

 

ಬ್ರಾಹ್ಮಣರು ಮತ್ತು ಮುನಿಗಳಿಂದ ಕೂಡಿಕೊಂಡ ವೇದವ್ಯಾಸದೇವರು ಮತ್ತು ಶ್ರೀಕೃಷ್ಣ, 

ಚಕ್ರವರ್ತಿಯಾಗಿ ಯುಧಿಷ್ಠಿರನ, ಯುವರಾಜನಾಗಿ ಭೀಮನ ಅಭಿಷೇಕ ಮಾಡುವ ಕ್ಷಣ.

ವಿಧಿಬದ್ಧವಾಗಿ ಧೀಕ್ಷೆಯನ್ನು ಕೊಟ್ಟು, ಆಶೀರ್ವದಿಸಿ ಸಂತೋಷಗೊಳಿಸಿದಾಗ,

ಚಾರ್ವಾಕ ಎಂದು ಪ್ರಸಿದ್ಧವಾದ ರಾಕ್ಷಸನು ತ್ರಿದಂಡಿ ಸನ್ಯಾಸಿಯಾಗಿ ಬರುವನಾಗ.

‘ಅತ್ಯಂತ ಪಾಪಿಷ್ಠನಾದ ನಿನ್ನನ್ನು ಎಲ್ಲಾ ಬ್ರಾಹ್ಮಣರು ನಿಂದಿಸುತ್ತಿದ್ದಾರೆ’

ಎಂದು ಹೇಳುತ್ತಾ ಯುಧಿಷ್ಠಿರನ ಕುರಿತು ಹರಿಸುವ ಬೈಯ್ಗಳ ಧಾರೆ.

 

ಶ್ರುತ್ವೈವ ತದ್ ದುಃಖಿತಮಾಶು ಧರ್ಮ್ಮಜಂ ದೃಷ್ಟ್ವಾ ವಿಪ್ರಾಃ ಶೇಪುರಮುಂ ಭೃಶಾರ್ತ್ತಾಃ ।

ಅಗರ್ಹಿತಂ ನಿತ್ಯಮಸ್ಮಾಭಿರೇನಂ ಯತೋSವೋಚೋ ಗರ್ಹಿತಮದ್ಯ ಪಾಪ ।

ಭಸ್ಮೀಭವಾSಶ್ವೇವ ತತಸ್ತ್ವಿತೀರಿತೇ ಕ್ಷಣಾದಭೂತ್ ಪಾಪತಮಃ ಸ ಭಸ್ಮಸಾತ್ ॥ ೨೯.೦೩ ॥

 

ಆ ಮಾತನ್ನು ಕೇಳಿದೊಡನೆ ಅತ್ಯಂತ ಖತಿಗೊಂಡ ಧರ್ಮರಾಜನನ್ನು ,

ಕಂಡ ಬ್ರಾಹ್ಮಣರು ದುಃಖಗೊಂಡು ಯತಿವೇಷದಲ್ಲಿ ಬಂದ ಆ ರಾಕ್ಷಸನನ್ನು, ಶಪಿಸಿದರು-

‘ಎಲೈ ಪಾಪಿಷ್ಠನೇ, ನಮ್ಮಿಂದ ನಿತ್ಯದಲ್ಲಿ ನಿಂದಿಸಲ್ಪಡದವನು ಈ ರಾಜನು.

ನಮ್ಮಿಂದ ನಿಂದಿಸಲ್ಪಟ್ಟವನು ಎಂದು ಯಾವ ಕಾರಣದಿಂದ ಸುಳ್ಳು  ಹೇಳುತ್ತಿರುವೆಯೋ, ನೀನು ,

ಕೂಡಲೇ ಭಸ್ಮವಾಗಿ ಹೋಗು ಎನ್ನಲು ಕ್ಷಣದಲ್ಲಿ ಆ ಪಾಪಿಷ್ಠ ಚಾರ್ವಾಕನು ಭಸ್ಮವಾದನು.

 

ಭಸ್ಮೀಕೃತೇSಸ್ಮಿನ್ ಯತಿವೇಷಧಾರಿಣಿ ಯುಧಿಷ್ಠಿರಂ ದುಃಖಿತಂ ವೃಷ್ಣಿಸಿಂಹಃ ।

ಪ್ರೋವಾಚ ನಾಯಂ ಯತಿರುಗ್ರಕರ್ಮ್ಮಾ ಸುಯೋಧನಸ್ಯೈವ ಸಖಾ ಸುಪಾಪಃ ॥ ೨೯.೦೪ ॥

 

 

ರಕ್ಷೋಧಮೋSಯಂ ನಿಹತೋSದ್ಯ ವಿಪ್ರೈಸ್ತನ್ಮಾ ಶುಚಃ ಕೃತಕಾರ್ಯ್ಯೋSಸಿ ರಾಜನ್ ।

ಇತೀರಿತಃ ಶಾನ್ತಮನಾಃ ಸ ವಿಪ್ರಾನ್ ಸನ್ತರ್ಪ್ಪಯಾಮಾಸ ಧನೈಶ್ಚ ಭಕ್ತ್ಯಾ   ॥ ೨೯.೦೫ ॥

 

ಯತಿವೇಷವನ್ನು ಧರಿಸಿರುವ ಚಾರ್ವಾಕನು ಸುಟ್ಟುಹೋದಾಗ,

ಅದನ್ನು ನೋಡಿದ ಯುಧಿಷ್ಠಿರನು ದುಖಿತ ಆಗುವನಾಗ.

ಶ್ರೀಕೃಷ್ಣನು ‘ಭಸ್ಮವಾಗಿರುವ ಇವನು ಸನ್ಯಾಸಿ ಅಲ್ಲ,

ಕ್ರೂರಕರ್ಮವುಳ್ಳ ಸುಯೋಧನನ ಗೆಳೆಯನಾಗಿರುವ ಇವನು ರಾಕ್ಷಸ,

ಹಾಗಾಗಿ ಬ್ರಾಹ್ಮಣರಿಂದ ಸತ್ತಿದ್ದಾನೆ, ಓ ರಾಜಾ ನೀನು ಮಾಡಬೇಕಾದ್ದನ್ನೇ ಮಾಡಿರುವೆ,

ದುಃಖಕ್ಕೆ ಇಲ್ಲಿಲ್ಲ ಅವಕಾಶ. ’ ಈ ರೀತಿಯಾಗಿ ಹೇಳಲ್ಪಟ್ಟ ಯುಧಿಷ್ಠಿರ ಶಾಂತಮನಸ್ಕನಾದ,

ಬ್ರಾಹ್ಮಣರನ್ನು ಭಕ್ತಿಯಿಂದ, ದ್ರವ್ಯದಿಂದ  ಸಂತೋಷಗೊಳಿಸಿದ.

 

ಅಸಾನ್ತ್ವಯಚ್ಚ ಬಾನ್ಧವಾನ್ ಸ ಪೌರಸಂಶ್ರಿತಾದಿಕಾನ್ ।

ದದೌ ಯಥೇಷ್ಟತೋ ಧನಂ ರರಕ್ಷ ಚಾನು ಪುತ್ರವತ್ ॥ ೨೯.೦೬ ॥

 

ಧರ್ಮರಾಜ ತನ್ನ ಪ್ರಜೆಗಳನ್ನು, ತನ್ನನ್ನು ಆಶ್ರಯಿಸಿದವರನ್ನು, ಸಮಾಧಾನ ಮಾಡಿದ ಬಂಧುಗಳನ್ನೂ. ಅವರಿಗೆ ಅಗತ್ಯವಿದ್ದ ಹಣವನ್ನು ನೀಡಿದ, ಮತ್ತು ಅವರನ್ನು ಮಕ್ಕಳಂತೆಯೇ ರಕ್ಷಿಸಿದ. 

 

ಸ ಭೀಷ್ಮದ್ರೋಣಕರ್ಣ್ಣಾನಾಂ ವಧಾದ್ ದುರ್ಯ್ಯೋಧನಸ್ಯ ಚ ।

ಪಾಪಾಶಙ್ಕೀ ತಪ್ಯಮಾನೋ ರಾಜ್ಯತ್ಯಾಗೇ ಮನೋ ದಧೇ ॥ ೨೯.೦೭ ॥

 

ಆ ಧರ್ಮರಾಜಗೆ ಭೀಷ್ಮ,ದ್ರೋಣ,ಕರ್ಣರ, ಮತ್ತು ದುರ್ಯೋಧನಾದಿಗಳ ಸಂಹಾರ ;

ಅದರಿಂದ ತನಗೆ  ಪಾಪ ಬಂದಿರುವುದೋ ಎಂಬ ಶಂಕೆ ಮತ್ತು ಆತಂಕ,

ಅದು ತಂದು ನಿಲ್ಲಿಸಿ ಬಿಡುತ್ತದೆ ರಾಜ್ಯವನ್ನೇ ಬಿಡುವ ನಿರ್ಧಾರದ ತನಕ.

 

ಸೋSನುಜೈಃ ಕೃಷ್ಣಯಾ ವಿಪ್ರೈರಪ್ಯುಕ್ತೋ ಧರ್ಮ್ಮಶಾಸನಮ್ ।

ಭೀಮಂ ಸಮ್ಪ್ರಾರ್ತ್ಥಯಿತ್ವೈವ ನ ವೇತ್ಥ್ಸಿತ್ಯಾಹ ಫಲ್ಗುನಮ್ ॥ ೨೯.೦೮ ॥

 

ತಮ್ಮಂದಿರಿಂದಲೂ, ದ್ರೌಪದೀಯಿಂದಲೂ, ಬ್ರಾಹ್ಮಣರಿಂದಲೂ,

ಧರ್ಮಾನುಶಾಸನದ ಬಗ್ಗೆ ಧರ್ಮರಾಜನಿಗೆ ಹೇಳಿಕೆ ಸಲಹೆಗಳು .

ಭೀಮಸೇನನಲ್ಲಿ ಅವನು ಬೇಡಿಕೊಂಡ,

(ಹೆಚ್ಚಿನ ಧರ್ಮಶಿಕ್ಷಣ ಮಾಡಬೇಡ ಎಂದ. ಅರ್ಜುನಗೆ ನೀನು ತಿಳಿದಿಲ್ಲ ಎಂದು ಗದರಿದ).

 

ತಸ್ಮಿನ್ ಕ್ರುದ್ಧೇ ನೃಪಂ ಪ್ರಾಹುರ್ವಿಪ್ರಾಸ್ತ್ವತ್ತೋSಪಿ ತತ್ವವಿತ್ ।

ಶಕ್ರೋSರ್ಜ್ಜುನ ಇತಿ ಶ್ರುತ್ವಾSಪ್ಯೇತದ್ಧರ್ಮ್ಮೇ ಸಸಂಶಯಮ್ ॥ ೨೯.೦೯ ॥

 

ಯುಧಿಷ್ಠಿರನ ಮಾತಿನಿಂದ ಅರ್ಜುನ ಕೋಪಗೊಂಡಾಗ,

ಬ್ರಾಹ್ಮಣರು ಧರ್ಮರಾಜನನ್ನು ಕುರಿತು- ಹೇಳುತ್ತಾರಾಗ‘,

ಅರ್ಜುನನು ಸಾಕ್ಷಾತ್ ಇಂದ್ರನೇ ಆಗಿದ್ದಾನೆ.

ನಿನಗಿಂತಲೂ ಧರ್ಮ ಅವನು ತಿಳಿದಿದ್ದಾನೆ.  ಇದೆಲ್ಲವನ್ನೂ ಕೇಳಿಸಿಕೊಂಡ ನಂತರವೂ ಕೂಡಾ,

ಧರ್ಮದ ಕುರಿತು ಯುಧಿಷ್ಠಿರ ಸಂಶಯದಲ್ಲೇ ಉಳಿದ.

 

ಮತ್ಸ್ನೇಹಾದೇವ ಸರ್ವೇSಪಿ ಧರ್ಮ್ಮೋSಯಮಿತಿ ವಾದಿನಃ ।

ಇತ್ಯೇವಂ ಶಙ್ಕಮಾನಂ ತಮೂಚತುರ್ವಿಪ್ರಯಾದವೌ ॥ ೨೯.೧೦ ॥

 

ಕೃಷ್ಣೌ ಧರ್ಮ್ಮೋSಯಮಿತ್ಯೇವ ಶಾಸ್ತ್ರಯುಕ್ತ್ಯಾ ಪುನಃಪುನಃ ।

ನಾತಿನಿಶ್ಚಿತಬುದ್ಧಿಂ ತಂ ತದಾSಪಿ ಪುರುಷೋತ್ತಮೌ  ॥ ೨೯.೧೧ ॥

 

ಹತಪಕ್ಷಗತತ್ವೇನ ತಚ್ಛಙ್ಕಾಯಾ ಅಗೋಚರಃ ।

ಯತೋ ಭೀಷ್ಮಸ್ತತೋ ಯಾಹಿ ತಮಿತ್ಯೂಚತುರವ್ಯಯೌ ॥ ೨೯.೧೨ ॥

 

ತನ್ನ ಮೇಲಿನ ಪ್ರೀತಿಯಿಂದ ಎಲ್ಲರೂ ಈರೀತಿಯಾಗಿ ಧರ್ಮವನ್ನು ಹೇಳುತ್ತಿದ್ದಾರೆ ಎಂದು ಸಂದೇಹಪಡುತ್ತಿದ್ದ,

ಧರ್ಮರಾಜನನ್ನು ಕುರಿತು ವೇದವ್ಯಾಸರು ಮತ್ತು ಶ್ರೀಕೃಷ್ಣ‘ಇದು ಧರ್ಮ’ಎಂದರುಹಲು ಶಾಸ್ತ್ರದ ಅನೇಕ ಯುಕ್ತಿಗಳಿಂದ,

ಮತ್ತೆ ಮತ್ತೆ ಹೇಳಿದರೂ ಕೂಡಾ ಅವನು ದೃಢನಿಶ್ಚಯಕ್ಕೆ ಬರಲಾಗದಾಗ, ಧರ್ಮರಾಜನ ಕುರಿತು ವೇದವ್ಯಾಸ-ಕೃಷ್ಣರು- ಕೆಳಕಂಡಂತೆ ಹೇಳುವರಾಗ.

‘ಶತ್ರುವಿನ ಪಕ್ಷದಲ್ಲಿರುವ ಭೀಷ್ಮಾಚಾರ್ಯರ ಮಾತನ್ನು ನೀನು ಸಂಶಯಪಡಲಾರೆ.

ನಿನ್ನ ಸಂದೇಹಕ್ಕೆ ಸಿಲುಕದ ಭೀಷ್ಮರಲ್ಲಿಗೆ ನೀ ಹೋಗು’ ಅವರು ತಿಳಿಸಿ ಹೇಳುತ್ತಾರೆ.

 

ಸ ತಾಭ್ಯಾಂ ಭ್ರಾತೃಭಿಶ್ಚೈವ ಮುನಿಭಿಶ್ಚ ಸಮನ್ವಿತಃ ।

ಭೀಷ್ಮಂ ಯಯೌ ಲಜ್ಜಿತೇSಸ್ಮಿಂಸ್ತಂ ಭೀಷ್ಮಾಯಾSಹ ಕೇಶವಃ ॥ ೨೯.೧೩ ॥

 

 

ವೇದವ್ಯಾಸ-ಕೃಷ್ಣರಿಂದಲೂ, ತಮ್ಮಂದಿರರಿಂದಲೂ, ಮುನಿಗಳಿಂದಲೂ ಕೂಡಿಕೊಂಡ ಧರ್ಮರಾಜನು ಭೀಷ್ಮರಿದ್ದಲ್ಲಿಗೆ ತೆರಳಿದನು.

ಧರ್ಮರಾಜನು ಭೀಷ್ಮರಿಗೆ ಹೇಗೆ ಮುಖ ತೋರಿಸುವುದು ಎಂದು ನಾಚಿಕೊಳ್ಳುತ್ತಿರಲು, ಕೃಷ್ಣನು ಅದನ್ನು ಭೀಷ್ಮಾಚಾರ್ಯರಿಗೆ ಹೇಳಿದನು.

 

ಪೃಚ್ಛೇತ್ಯುಕ್ತಃ ಸ ಭೀಷ್ಮೇಣ ಪಪ್ರಚ್ಛಾಖಿಲಮಞ್ಜಸಾ ।

ತತ್ರೋವಾಚಾಖಿಲಾನ್ ಧರ್ಮ್ಮಾನ್ ಕೃಷ್ಣೋ ಭೀಷ್ಮಶರೀರಗಃ ॥ ೨೯.೧೪ ॥

 

‘ನೀನು ಪ್ರಶ್ನೆ ಮಾಡು’ ಎಂದು ಹೇಳುತ್ತಾರೆ ಭೀಷ್ಮಾಚಾರ್ಯ,

ಧರ್ಮರಾಜನಿಂದ, ಎಲ್ಲವನ್ನೂ ಚೆನ್ನಾಗಿ ಪ್ರಶ್ನಿಸಿವ ಕಾರ್ಯ.

ಆಗ ಭೀಷ್ಮಾಚಾರ್ಯರ ಶರೀರದಲ್ಲಿರುವ ಶ್ರೀಕೃಷ್ಣ,

ಯುಧಿಷ್ಠಿರನಿಗೆ ಉಪದೇಶಿಸಿದ ಧರ್ಮಗಳ ಹೂರಣ.

 

ಭೀಷ್ಮೋ ಹ್ಯಾಹ ಹರಿಂ ಪಾರ್ತ್ಥಾ ಬೋಧನೀಯಾಸ್ತ್ವಯೈವ ಹಿ ।

ಕಾ ಶಕ್ತಿರ್ಮ್ಮಮ ದೇವೇಶ ಪಾರ್ತ್ಥಾನ್ ಬೋಧಯಿತುಂ ಪ್ರಭೋ ॥ ೨೯.೧೫ ॥

 

ಭೀಷ್ಮಾಚಾರ್ಯರು - ‘ಓ, ಕೃಷ್ಣನೇ, ನಿನ್ನಿಂದಲೇ ಪಾಂಡವರು ಉಪದೇಶಕ್ಕೆ ಯೋಗ್ಯರಾಗಿದ್ದಾರೆ.

ದೇವನಾಯಕನೇ, ಪಾಂಡವರಿಗೆ ಉಪದೇಶ ಮಾಡಲು ನನಗೆಲ್ಲಿದೆ ಶಕ್ತಿ’ ಎಂದು ಕೇಳುತ್ತಾರೆ.

 

ಇತ್ಯುಕ್ತೋ ಭಗವಾನಾಹ ತ್ವತ್ಕೀರ್ತ್ತ್ಯೈ ತ್ವಯಿ ಸಂಸ್ಥಿತಃ ।

ಪ್ರವಕ್ಷ್ಯಾಮ್ಯಖಿಲಾನ್ ಧರ್ಮ್ಮಾನ್ ಸೂಕ್ಷ್ಮಂ ತತ್ವಮಪೀತಿ ಹ ॥ ೨೯.೧೬ ॥

 

ಈರೀತಿಯಾಗಿ ಹೇಳಲ್ಪಟ್ಟ ಶ್ರೀಕೃಷ್ಣ, ‘ನಿನ್ನ ಕೀರ್ತಿಗಾಗುತ್ತದೆ ಇದು ಕಾರಣ.

ನಿನ್ನಲ್ಲಿ ಇರುವವನಾಗಿ ನಾನು, ಇರುವ ಎಲ್ಲಾ ಧರ್ಮಗಳನ್ನೂ,

ಸೂಕ್ಷ್ಮತತ್ವಗಳನ್ನೂ ಹೇಳುವೆನು’.

 

ರಾಜ್ಞಃ ಪ್ರಥಮತೋ ಧರ್ಮ್ಮೋ ಭಗವದ್ಧರ್ಮ್ಮಪಾಲನಮ್ ।

ತದರ್ತ್ಥಂ ಕಣ್ಟಕೋದ್ಧಾರೋ ಧರ್ಮ್ಮಾ ಭಾಗವತಾ ಅಪಿ ॥ ೨೯.೧೭ ॥

 

 

ರಾಜನಾದವನಿಗೆ ಮೊದಲನೆಯ ಕರ್ತವ್ಯವೆಂದರೆ- ಇರಬೇಕು ಪರಮಾತ್ಮನ ಧರ್ಮದ

ಪಾಲನಾ ಮೇರೆ.ಅದಕ್ಕಾಗಿ ಶತ್ರುಗಳನ್ನು ನಿಗ್ರಹಿಸುವುದು ಧರ್ಮ.

ಭಾಗವತ ಧರ್ಮಪಾಲನೆ ಮಾಡುವುದೂ ಮರ್ಮ.

 

ಮನೋವಾಕ್ಕರ್ಮ್ಮಭಿರ್ವಿಷ್ಣೋರಚ್ಛಿದ್ರತ್ವೇನ ಚಾರ್ಚ್ಚನಮ್ ।

ಪೂರ್ಣ್ಣಾಶೇಷಗುಣೋ ವಿಷ್ಣುಃ ಸ್ವತನ್ತ್ರಶ್ಚೈಕ ಏವ ತು ॥ ೨೯.೧೮ ॥

 

ತದ್ವಶಂ ಸರ್ವಮನ್ಯಚ್ಚ ಸರ್ವದೇತಿ ವಿನಿಶ್ಚಯಃ ।

ದೇವತಾಕ್ರಮವಿಜ್ಞಾನಮಪೂಜಾSನ್ಯಸ್ಯ ವೈ ಹರೇಃ ॥ ೨೯.೧೯ ॥

 

ಪೂಜಾ ಭಾಗವತತ್ವೇನ ದೇವಾದೀನಾಂ ಚ ಸರ್ವಶಃ ।

ವೃಥಾ ಕರ್ಮ್ಮಾಕೃತಿಃ ಕ್ವಾಪಿ ನಿರಾಶೀಸ್ತ್ವಂ ಸದೈವ ಚ ॥ ೨೯.೨೦ ॥

 

ವಿಷ್ಣೋರ್ಭಾಗವತಾನಾಂ ಚ ಪ್ರತೀಪಸ್ಯಾಕೃತಿಃ ಸದಾ ।

ಪರಸ್ಪರವಿರೋಧೇ ತು ವಿಶಿಷ್ಟಸ್ಯಾನುಕೂಲತಾ ॥ ೨೯.೨೧ ॥

 

ಪ್ರಿಯಂ ವಿಷ್ಣೋಸ್ತದೀಯಾನಾಮಪಿ ಸರ್ವಂ ಸಮಾಚರೇತ್ ।

ಧರ್ಮ್ಮಮಪ್ಯಪ್ರಿಯಂ ತೇಷಾಂ ನೈವ ಕಿಞ್ಚಿತ್ ಸಮಾಚರೇತ್ ॥ ೨೯.೨೨ ॥

 

ಸಾಮ್ಯೇ ವಿರೋಧೇ ಚ ಬಹೂನನುವರ್ತ್ತೇತ ವೈಷ್ಣವಾನ್ ।

ಏತೇ ಸಾಧಾರಣಾ ಧರ್ಮ್ಮಾ ಜ್ಞೇಯಾ ಭಾಗವತಾ ಇತಿ ॥ ೨೯.೨೩ ॥

 

ಮನಸ್ಸಿನಿಂದ, ಮಾತಿನಿಂದ ಹಾಗೂ ಕರ್ಮಗಳಿಂದ, ಯಾವುದೇ ಮೋಸವಿಲ್ಲದೇ, ನಾರಾಯಣನನ್ನು  ಪೂಜಿಸುವುದು ಧರ್ಮ; ಪರಮಾತ್ಮನೊಬ್ಬನೇ ಸಮಸ್ತಗುಣಗಳ, ಸರ್ವಸ್ವಾತಂತ್ರ್ಯದ, ಸರ್ವೋತ್ತಮತ್ವದ,  ಸರ್ವಾಂತರ್ಯಾಮಿತ್ವದ ಏಕೈಕ ಧಾಮ.

ಉಳಿದ ಎಲ್ಲವೂ ಯಾವಾಗಲೂ ಕೂಡಾ ಪರಮಾತ್ಮನ  ವಶವಾಗಿದೆ ಎಂದು ಸಿದ್ಧ,                         ದೇವತಾ ತಾರತಮ್ಯದ ವಿಜ್ಞಾನದಿಂದ ದೇವ ವಿರೋಧಿಗಳ ಗೌರವಿಸದಿರುವುದು ವೇದ್ಯ.          ದೇವತೆಗಳನ್ನು ವಿಷ್ಣುಭಕ್ತತ್ವೇನ ಪೂಜಿಸುವುದು,

ವ್ಯರ್ಥವಾದ ಕರ್ಮವನ್ನು ಮಾಡದೇ ಇರುವುದು,

ಕರ್ಮಫಲದಲ್ಲಿ ಎಂದೂ ಅಂಟಿಕೊಳ್ಳದೇ ಇರುವುದು ,

ಪರಮಾತ್ಮನಿಗಾಗಲೀ, ಭಗವದ್ ಭಕ್ತರಿಗಾಗಲೀ ವಿರುದ್ಧವಾದ ಕೆಲಸವನ್ನು ಮಾಡದಿರುವಿಕೆಯು ಧರ್ಮ.

ಭಗವದ್ ಭಕ್ತರ ನಡುವೆ ಪರಸ್ಪರ ವಿರೋಧಬಂದಾಗ ಹೆಚ್ಚಿನ ಜ್ಞಾನ-ಭಕ್ತಿಗೆ ತಕ್ಕಂತೆ ನಡೆಯುವುದು ಧರ್ಮ. ಪರಮಾತ್ಮನ ಭಕ್ತರಿಗೆ ಯಾವುದು ಪ್ರಿಯವೋ ಅದನ್ನು ಮಾಡುವುದು,                             ಸಾಮ್ಯ-ವಿರೋಧ ಎರಡೂ ಬಂದಾಗ  ಬಹುವೈಷ್ಣವರನ್ನು ಅನುಸರಿಸುವುದು,

ಇದೆಲ್ಲವೂ ಸಾಧಾರಣ ಭಾಗವತ ಧರ್ಮ. ಭೀಷ್ಮರೊಳಗಿನ ಕೃಷ್ಣ ಬಿತ್ತರಿಸಿದ ಮರ್ಮ.

 

ತತ್ವವಿಜ್ಞಾಪನಂ ಧರ್ಮ್ಮೋ ವಿಪ್ರಸ್ಯ ತು ವಿಶೇಷತಃ ।

ಶಾರೀರದಣ್ಡಸನ್ತ್ಯಾಗಃ ಪುತ್ರಭಾರ್ಯ್ಯಾದಿಕಾನೃತೇ ॥ ೨೯.೨೪ ॥

 

ತತ್ರಾಪಿ ನಾಙ್ಗಹಾನಿಃ ಸ್ಯಾದ್ ವೇದನಾ ವಾ ಚಿರಂ ನತು ।

ನಚಾರ್ತ್ಥದಣ್ಡಃ ಕರ್ತ್ತವ್ಯೋ ವಿಪ್ರವೈಶ್ಯಾದಿಭಿಃ ಕ್ವಚಿತ್ ॥ ೨೯.೨೫ ॥

 

ತತ್ವವನ್ನು ತಿಳಿಸಿಕೊಡುವುದು ಬ್ರಾಹ್ಮಣರ ಪರಮಧರ್ಮ.

ಹೆಂಡತಿ ಮಕ್ಕಳ ಬಿಟ್ಟು ಉಳಿದವರ ದೇಹ ದಂಡನೆಗಿಲ್ಲ ನೇಮ.

ಹೆಂಡತಿ ಮಕ್ಕಳಲ್ಲೂ ಕೂಡಾ, ಅಂಗಹಾನಿ ಆಗದಂತೆ, ಹೆಚ್ಚು ನೋವಾಗದಂತೆ  ದಂಡಿಸಬೇಕು.

ಬ್ರಾಹ್ಮಣರಾಗಲೀ  ವೈಶ್ಯರಾಗಲೀ ಇನ್ನೊಬ್ಬರಿಗೆ ಅರ್ಥದಂಡ (ಕರ /ದಂಡ) ಹಾಕದಂತಿರಬೇಕು. 

 

ಶಾರೀರದಣ್ಡವಿಷಯೇ ವೈಶ್ಯಾದೀನಾಂ ಚ ವಿಪ್ರವತ್ ।

ಯಥಾಲಬ್ಧೇನ ವರ್ತ್ತೇತ ಭಿಕ್ಷಯಾ ವಾ ದ್ವಿಜೋತ್ತಮಃ ॥ ೨೯.೨೬ ॥

 

ಶಿಷ್ಯಯಾಜ್ಯೋಪಲಬ್ಧೈರ್ವಾ ಕ್ಷತ್ರಧರ್ಮ್ಮೇಣ ವಾSSಪದಿ ।

ಮಹಾಪದಿ ವಿಶಾಂ ಧರ್ಮ್ಮೈಃ ಕ್ಷತ್ರಿಯಃ ಸುರವಿಪ್ರಯೋಃ ॥ ೨೯.೨೭ ॥

 

ಅನ್ಯತ್ರ ಸರ್ವವಿತ್ತೇನ ವರ್ತ್ತೇತೈತಾಂಶ್ಚ ಪಾಲಯನ್ ।

ವಿರೋಧಿನಃ ಕ್ಷತ್ರಿಯಾಚ್ಚ ಪ್ರಸಹ್ಯೈವ ಹರೇದ್ ಧನಮ್ ॥ ೨೯.೨೮ ॥

 

ಶರೀರಶಿಕ್ಷೆಯ ವಿಚಾರದಲ್ಲಿ ಬ್ರಾಹ್ಮಣರಿಗೆ ಏನನ್ನು ಹೇಳಿದ್ದಾರೋ ಅದೇ ವೈಶ್ಯರಿಗೆ ಮತ್ತು ಇತರರಿಗೆ  ಅನ್ವಯಿಸುತ್ತದೆ.

ಬ್ರಾಹ್ಮಣಶ್ರೇಷ್ಠನು ಸಿಕ್ಕಿದ್ದರಲ್ಲಿ (ಪ್ರಯತ್ನವಿಲ್ಲದೇ ಲಭ್ಯವಾದ ದ್ರವ್ಯದಲ್ಲಿ) ಅಥವಾ ಭಿಕ್ಷೆಬೇಡಿ ಬದುಕಬೇಕೆಂದಿದೆ.

ಶಿಷ್ಯರು ತಾವಾಗಿ ಕೊಟ್ಟದ್ದರಿಂದ ಹಾಗೂ  ಪೌರೋಹಿತ್ಯದಿಂದ ಬಂದ ದ್ರವ್ಯದಿಂದಲೂ ಬದುಕಬಹುದು.

ಆಪತ್ತಿನಲ್ಲಿ ಕ್ಷತ್ರಿಯರ ಧರ್ಮದಿಂದಲೂ, ಬಹಳ ಆಪತ್ತು ಬಂದಾಗ ವ್ಯಾಪಾರಮಾಡಿ ಬದುಕಬಹುದು.

ಕ್ಷತ್ರಿಯರು ಬ್ರಾಹ್ಮಣದ್ರವ್ಯ ಮತ್ತು ದೇವದ್ರವ್ಯ ಇಷ್ಟನ್ನು ಬಿಟ್ಟು ಬದುಕಬೇಕು.

ಇನ್ನು ಉಳಿದ ಎಲ್ಲರಿಂದ ಕರವನ್ನು ಅವರು ತೆಗೆದುಕೊಂಡರೆ ಅಷ್ಟು ಸಾಕು.

ಕ್ಷತ್ರಿಯನಾದವನು ಉಳಿದ ಎಲ್ಲರನ್ನೂ ಪಾಲನೆ ಮಾಡಿಕೊಂಡಿರಬೇಕು.

ಒಬ್ಬ ಕ್ಷತ್ರಿಯ, ವಿರೋಧಿಯಾದ ಇನ್ನೊಬ್ಬ ಕ್ಷತ್ರಿಯನ ಮಣಿಸಿ ದ್ರವ್ಯವ ಪಡೆಯಬೇಕು.

 

ಸಾಮಾದಿಕ್ರಮತೋ ಧರ್ಮ್ಮಾನ್ ವರ್ತ್ತಯೇದ್ ದಣ್ಡತೋSನ್ತತಃ ।

ಅಪಲಾಯೀ ಸದಾ ಯುದ್ಧೇ ಸತಾಂ ಕಾರ್ಯ್ಯಮೃತೇ ಭವೇತ್ ॥ ೨೯.೨೯ ॥

 

ಧರ್ಮವನ್ನು ಮೊದಲು ಸಾಮ ನಂತರ ದಾನ ಆಮೇಲೆ  ಭೇದ ಈ ಕ್ರಮದಲ್ಲಿ ರಕ್ಷಿಸಬೇಕು. ಸಾಮಾದಿಗಳಿಂದ ಆಗದಿದ್ದರೆ ಕೊನೆಯಲ್ಲಿ ದಂಡದಿಂದಲೇ ಧರ್ಮವನ್ನು ಕಾಪಾಡಬೇಕು. ಸಜ್ಜನಕಾರ್ಯ ಬಿಟ್ಟು ಇತರೆಡೆ ಕ್ಷತ್ರಿಯರು ಯುದ್ಧಪಲಾಯನ ಮಾಡದೇ ಬದುಕಬೇಕು.

 

ಕೃಷಿವಾಣಿಜ್ಯಗೋರಕ್ಷಾಕುಸೀದಂ ವೈಶ್ಯಜೀವನಮ್ ।

ಪರಿಚರ್ಯ್ಯೈವ ಶೂದ್ರಸ್ಯ ವೃತ್ತಿರನ್ಯೇ ಸ್ವಪೂರ್ವವತ್ ॥ ೨೯.೩೦ ॥

 

ಹೊಲ ಊಳುವುದು(ಕೃಷಿ), ವ್ಯಾಪಾರ ಮಾಡುವುದು, ಗೋವುಗಳ ಪಾಲನೆ (ಹೈನುಗಾರಿಕೆ), ಬಡ್ಡೀ ವ್ಯಾಪಾರ, ಇದು ವೈಶ್ಯರ ಜೀವನೋಪಾಯಧರ್ಮ.                   ಶೂದ್ರವರ್ಣದವರಿಗೆ ಪರಿಚರ್ಯೆಯೇ (ಸೇವಾವೃತ್ತಿಯೇ) ಜೀವನೋಪಾಯ, ಉಳಿದವರು ತಮ್ಮ ತಮ್ಮ ಕುಲವೃದ್ಧರ ಆಚರಣೆಯಂತೆ ಬದುಕುವ ನಿಯಮ.

 

ವರ್ತ್ತೇಯುರ್ಬಾಹ್ಮಣಾದ್ಯಾಶ್ಚ ಕ್ರಮಾತ್ ಪೂಜ್ಯಾ ಹರಿಪ್ರಿಯಾಃ ।

ಹರಿಭಕ್ತಾವನುಚ್ಚಸ್ತು ವರ್ಣ್ಣೋಚ್ಚೋ ನಾತಿಪೂಜ್ಯತೇ । ॥ ೨೯.೩೧ ॥

 

ಬ್ರಾಹ್ಮಣಾದಿಗಳು ನಿಷ್ಠರಾಗಿ ಭಕ್ತರಾಗಿದ್ದು, ಪರಮಾತ್ಮನಿಗೆ ಪ್ರಿಯರಾಗಿದ್ದರೆ ಕ್ರಮೇಣ  ಪೂಜ್ಯರಾಗಿರುವರು.

ಪರಮಾತ್ಮನ ಬಗ್ಗೆ ಅನಾಸಕ್ತಿ, ಭಕ್ತಿ ಇಲ್ಲದೇ ಇರುವುದು, ತತ್ವ ಚಿಂತನೆ ಮಾಡದಂತೆಯೇ ಇದ್ದು ಬದುಕುವವರು,

ಹುಟ್ಟಿನಲ್ಲಿ ವರ್ಣೋಚ್ಛನಾಗಿದ್ದರೂ ಕೂಡಾ ಪೂಜ್ಯನಾಗುವ ಯಾವ ಅರ್ಹತೆಯನ್ನೂ ಪಡೆದುಕೊಳ್ಳಲಾರರು.

 

ವಿನಾ ಪ್ರಣಾಮಂ ಪೂಜ್ಯಸ್ತು ವರ್ಣ್ಣಹೀನೋ ಹರಿಪ್ರಿಯಃ ।

ಆದರಸ್ತತ್ರ ಕರ್ತ್ತವ್ಯೋ ಯತ್ರ ಭಕ್ತಿರ್ಹರೇರ್ವರಾ ॥ ೨೯.೩೨ ॥

 

 

ಪರಮಾತ್ಮನಿಗೆ ಪ್ರಿಯನಾಗಿರುವವನು ವರ್ಣದಿಂದ ಹೀನನಾಗಿದ್ದರೂ ಕೂಡಾ, ಪೂರ್ತಿಯಾಗಿ ಅವನನ್ನು ಗೌರವಿಸಬೇಕು, ಸತ್ಕರಿಸಬೇಕು, ಆದರೆ ನಮಸ್ಕಾರ ಬೇಡ.

ಯಾರಲ್ಲಿ ಪರಮಾತ್ಮನ ಭಕ್ತಿ ಶ್ರೇಷ್ಠವಾಗಿದೆ, ಅಂಥವರನ್ನು ನೋಡಬೇಕು ಆದರದಿಂದ.

 

ಜ್ಞಾಪನಂ ಕ್ಷತ್ರಿಯಾಣಾಂ ಚ ಧರ್ಮ್ಮೋ ವಿಪ್ರಾಭ್ಯನುಜ್ಞಯಾ ।

ತದಭಾವೇ ತು ವೈಶ್ಯಾನಾಂ ಶೂದ್ರಸ್ಯ ಪರಮಾಪದಿ ॥ ೨೯.೩೩ ॥

 

ತತ್ವಜ್ಞಾನಿಯಾದ ಬ್ರಾಹ್ಮಣರು ಇಲ್ಲದೇ ಹೋದಾಗ,

ಬ್ರಾಹ್ಮಣರಾಜ್ಞೆಯಂತೆ ತತ್ವೋಪದೇಶ ಕ್ಷತ್ರಿಯಯಾಗ.

ತತ್ವೋಪದೇಶ ಮಾಡುವ ಕ್ಷತ್ರಿಯರೂ ಇಲ್ಲದಿದ್ದಾಗ,

ವೈಶ್ಯರು ಮಾಡಬಹುದು ತತ್ವೋಪದೇಶವನ್ನು ಆಗ,

ಅತ್ಯಂತ ಆಪತ್ತಿದ್ದಾಗ ಶೂದ್ರನಿಗೆ ತತ್ವವ ಹೇಳುವ ಯೋಗ.

 

‘ವರ್ಣ್ಣೇಷ್ವಜ್ಞೇಷ್ವವರ್ಣ್ಣಸ್ತು ನ ಜ್ಞಾನೀ ಸ್ಯಾತ್ ಕಥಞ್ಚನ’ ।

ಇತಿ ಶ್ರುತೇರವರ್ಣ್ಣಸ್ಯ ಜ್ಞಾಪನಪ್ರಾಪ್ತಿರೇವ ನ ॥ ೨೯.೩೪ ॥

 

‘ನಾಲ್ಕೂ ವರ್ಣಗಳು ಅಜ್ಞವಾದರೆ, ಪಂಚಮರು ,

ಯಾವ ರೀತಿಯಿಂದಲೂ ಜ್ಞಾನಿಗಳು ಆಗಲಾರರು’ .

ಎನ್ನುವ ವೇದ ವಾಕ್ಯದಂತೆ ಪಂಚಮರಿಗೆ,

ತತ್ವ ವಿಜ್ಞಾಪನೆಯ ಪ್ರಸಂಗವೇ ಇರದ ಬಗೆ.

[ಸ್ತ್ರೀಧರ್ಮದ ಕುರಿತು ಹೇಳುತ್ತಾರೆ-]

 

ಜ್ಞೇಯಂ ಸರ್ವತ್ರಿವರ್ಣ್ಣಸ್ಥಸ್ತ್ರೀಭಿರ್ವೇದಾನ್ ವಿನಾSಖಿಲಮ್ ।

ಸ್ವೀಯಪುನ್ನಿಯತಿಃ ಸ್ತ್ರೀಣಾಂ ಸ್ವದಾರನಿಯತಿರ್ನ್ನೃಣಾಮ್ ॥ ೨೯.೩೫ ॥

 

ಧರ್ಮ್ಮೋ ಗುಣೋತ್ತಮಾನಾಂ ತು ಸ್ಮೃತ್ಯೈವಾನ್ಧಂ ತಮೋ ವ್ರಜೇತ್ ।

ಗುಣಸರ್ವಸ್ವಹಾನಿಃ ಸ್ಯಾದುತ್ತರೋತ್ತರತೋSತ್ರ ಚ ॥ ೨೯.೩೬ ॥

 

ಮೂರೂ ವರ್ಣದ ಸ್ತ್ರೀಯರು ವೇದವನ್ನು ಬಿಟ್ಟು,

ಮಿಕ್ಕ ಎಲ್ಲವನ್ನೂ ತಿಳಿದಿರಬೇಕೆನ್ನುವುದು ಮಾತು.

ಹೀಗೆ ತಿಳಿಯಬೇಕಾದರೆ ಗಂಡನಿಗೆ ಮೋಸಮಾಡದೇ ನಡೆಯಬೇಕು.            

ಗಂಡಸರೂ ಕೂಡಾ ತಮ್ಮ ಪತ್ನಿಗೆ ಮೋಸಮಾಡದಂತೆ ನಡೆಯಬೇಕು.

ಇದು ಧರ್ಮ,ತಮ್ಮ ಗುಣದಿಂದ ಉತ್ತಮರಾಗಿರುವ ಗಂಡಂದಿರನ್ನು ಹೆಂಡತಿಯರು ಗೌರವಿಸಲೇಬೇಕು.

ಯಾರು ಗುಣದಿಂದ ಉತ್ತಮರಿರುತ್ತಾರೆ, ಅಂಥಾ ಸ್ತ್ರೀಯರ ಬಗ್ಗೆ ಕೆಟ್ಟ ಆಲೋಚನೆ ಸುಳಿದರೆ ಸಿದ್ದ ನರಕದ ಸರಕು. ಅದನ್ನೇ ಸ್ಮರಣೆ ಮಾಡಿಕೊಂಡಿದ್ದರೆ ಅಂಧoತಮಸ್ಸಿಗೆ ಹೋಗಬೇಕಾಗುತ್ತದೆ.                           ಹೀಗಾಗಿ ಗುಣೋತ್ತಮರಾದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಯೋಚನೆ ತಪ್ಪೆನ್ನುತ್ತದೆ. 

ನಮಗಿಂತ ಹಿರಿಯರು, ನಮ್ಮ ಗುರುಸ್ಥಾನದಲ್ಲಿರುವ ಹೆಣ್ಣುಮಕ್ಕಳು,

ಇವರಲ್ಲಿ ಕೆಟ್ಟ ಚಿಂತನೆ ಮಾಡಿದರೆ ನಮ್ಮ ಗುಣವಾಗುತ್ತದೆ ಹಾಳು.

 

ಅಧೋSಧೋSಧಿಕದೋಷಃ ಸ್ಯಾತ್ ಸ್ತ್ರೀಣಾಮನ್ಯತ್ರ ಮದ್ಧ್ಯತಃ ।

ವೇದಾ ಅಪ್ಯುತ್ತಮಸ್ತ್ರೀಭಿಃ ಕೃಷ್ಣಾದ್ಯಾಭಿರಿವಾಖಿಲಾಃ ॥ ೨೯.೩೭ ॥

 

ದೇವ್ಯೋ ಮುನಿಸ್ತ್ರಿಯಶ್ಚೈವ ನರಾದಿಕುಲಜಾ ಅಪಿ ।

ಉತ್ತಮಾ ಇತಿ ವಿಜ್ಞೇಯಾಸ್ತಚ್ಛೂದ್ರೈರಪ್ಯವೈದಿಕಮ್ ।

ಜ್ಞೇಯಮನ್ಯೈರ್ಹರೇರ್ನ್ನಾಮ ನಿಜಕರ್ತ್ತವ್ಯಮೇವ ಚ ॥ ೨೯.೩೮ ॥

 

ಗುಣೋತ್ತಮನನ್ನು ತಿರಸ್ಕರಿಸಿ, ಗುಣಹೀನನಾದವನನ್ನು ಕಾಮಿಸಿ,

ಅಂಥಾ ಗಂಡಸರನ್ನು ಆಶ್ರಯಿಸಿ, ಇರುವ ಸ್ತ್ರೀಯರಿಗೆ ಅಧಿಕದೋಷದ ಬಿಸಿ.

ದ್ರೌಪದಿಯಂತೆ ಎತ್ತರದಲ್ಲಿರುವ ಅತ್ಯುತ್ತಮ ಸ್ತ್ರೀಯರಿಂದ

ವೇದಗಳ ತಿಳಿಯಲ್ಪಡಬೇಕು ಎನ್ನುತ್ತದೆ ಸ್ತ್ರೀ ಧರ್ಮವಾದ.

ದೇವಿಯರು, ಮುನಿಸ್ತ್ರೀಯರು , ಮನುಷ್ಯಕುಲದಲ್ಲಿ ಹುಟ್ಟಿದರೂ,

ಕೂಡಾ ಅವರುಗಳು ಉತ್ತಮರು. ಶೂದ್ರರಿಗೂ ಕೂಡಾ ಮಹಾಭಾರತಾದಿಗಳ ಅಭ್ಯಾಸವು ಆಗಿದೆ ನಿಯಮ,

ಅನ್ಯರಿಗೆ ಹರಿನಾಮಸ್ಮರಣೆ ಮತ್ತು ತಮ್ತಮ್ಮ ಕರ್ತವ್ಯಕರ್ಮಗಳೇ ಧರ್ಮ.

[ದೇವತಾರಾಧನೆ ಮತ್ತು ಮೋಕ್ಷಪ್ರಾಪ್ತಿಯ ಕುರಿತು ಹೇಳುತ್ತಾರೆ-]

 

ಸರ್ವಥಾSನ್ಧಂ ತಮೋ ಯಾತಿ ವರಂ ಸದೃಶಮೇವ ವಾ ।

ಯೋ ವಿಷ್ಣೋರ್ಮ್ಮನ್ಯತೇ ಕಿಞ್ಚಿದ್ ಗುಣೈಃ ಕೈಶ್ಚಿದಪಿ ಕ್ವಚಿತ್ ॥ ೨೯.೩೯ ॥

 

ಬ್ರಹ್ಮೇಶಾನಾದಿಕಮಪಿ ಭೇದಂ ಯೋ ವಾ ನ ಮನ್ಯತೇ ।

ಭೇದದೃಕ್ ತದ್ಗುಣಾದೌ ಚ ಪ್ರಾದುರ್ಭಾವಗತೇSಪಿ ಯಃ ॥ ೨೯.೪೦ ॥

 

 

ಪ್ರಾಕೃತಂ ದೇಹಮಥವಾ ದುಃಖಾಜ್ಞಾನಶ್ರಮಾದಿಕಮ್ ।

ಮನ್ಯತೇ ತಾರತಮ್ಯಂ ವಾ ತದ್ಭಕ್ತೇಷ್ವನ್ಯಥೈವ ಯಃ ॥ ೨೯.೪೧ ॥

 

ಇನ್ನೊಬ್ಬನನ್ನು ಪರಮಾತ್ಮನಿಗೆ ಸರಿಸಮಾನ, ಅಥವಾ ಭಗವಂತನಿಗಿಂತ ಮಿಗಿಲೆಂಬ ಜ್ಞಾನ,  ಹೊಂದಿ ಹಾಗೇ ಯಾವನು ತಿಳಿಯುತ್ತಾನೆ , ಅವನು ಅಂಧoತಮಸ್ಸನ್ನು ಹೊಂದುತ್ತಾನೆ.

 

ಬ್ರಹ್ಮ, ರುದ್ರರು ಹಾಗೂ ಇತರರು ಪರಸ್ಪರ ಸದೃಶ ಎಂದು ತಿಳಿಯುವುದು,                          ದೇವತೆಗಳನ್ನು ಪರಮಾತ್ಮನಿಗೆ ಸದೃಶರು ಅಥವಾ ಉತ್ತಮರು ಎಂದುಕೊಳ್ಳುವುದು,

ಪರಮಾತ್ಮನಿಗೂ ಹಾಗೂ ದೇವತೆಗಳಿಗೂ ನಡುವೆ  ಭೇದವನ್ನು ಒಪ್ಪದಿರುವುದು,           

ಭಗವಂತನಿಗೂ ಹಾಗೂ ಅವನ ಗುಣಗಳಿಗೂ ಭೇದವನ್ನು ಚಿಂತಿಸುವುದು,

ಭಗವಂತನ ಮೂಲ ಮತ್ತು ಅವತಾರ ರೂಪದಲ್ಲಿ ಭೇದವನ್ನು ತಿಳಿಯುವುದು,                           

ಪರಮಾತ್ಮನಿಗೆ ಕೂಡಾ ಪ್ರಾಕೃತ ಶರೀರವಿದೆ ಎಂದುಕೊಳ್ಳುವುದು,

ಭಗವಂತನಿಗೆ ನಮ್ಮಂತೆ ದುಃಖ, ಅಜ್ಞಾನ, ಶ್ರಮ, ಇತ್ಯಾದಿಗಳಿವೆ ಎಂದರಿಯುವುದು,

ಪರಮಾತ್ಮನ ಭಕ್ತರಲ್ಲಿ ತಪ್ಪುತಪ್ಪಾಗಿ ತಾರತಮ್ಯವನ್ನು ತಿಳಿಯುವುದು-

ಇಂತವರು ಹೋಗುವುದು ಅನ್ಧಂತಮಸ್ಸಿಗೆ,

ಇದು ಧರ್ಮಶಾಸ್ತ್ರವೇ ತಿಳಿಸಿ ಹೇಳುವ ಬಗೆ.

 

ಮನೋವಾಕ್ತನುಭಿರ್ಯ್ಯೋ ವಾ ತಸ್ಮಿಂಸ್ತದ್ಭಕ್ತ ಏವ ವಾ ।

ವಿರೋಧಕೃದ್ ವಿಷ್ಣ್ವಧೀನಾದನ್ಯತ್ ಕಿಞ್ಚಿದಪಿ ಸ್ಮರನ್ ॥ ೨೯.೪೨ ॥

 

ಅನ್ಯಾಧೀನತ್ವವಿಚ್ಚಾಸ್ಯ ಸರ್ವಪೂರ್ತ್ತ್ಯವಿದೇವ ಚ ।

ಭಕ್ತಿಹೀನಶ್ಚ ತೇ ಸರ್ವೇ ತಮೋSನ್ಧಂ ಯಾನ್ತ್ಯಸಂಶಯಮ್ ॥ ೨೯.೪೩ ॥

 

ಮನಸ್ಸಿನಿಂದಾ, ಮಾತಿನಿಂದಾ ಅಥವಾ ದೇಹದಿಂದಾ,

ಯಾರು ಭಗವಂತನಲ್ಲಿ/ಭಕ್ತರಲ್ಲಿ ಮಾಡುವ ವಿರೋಧ,

ಅಂಥವನು ಹಿಡಿಯುತ್ತಾನೆ ಅನ್ಧಂತಮಸ್ಸಿನ ಜಾಡ.

 

ಭಗವಂತನಲ್ಲಿ ದೋಷಚಿಂತನೆ ಮಾಡುವುದು,

ಅವನು ಇನ್ನೊಬ್ಬರ ಅಧೀನ ಎಂದು ತಿಳಿಯುವುದು,

ಪರಮಾತ್ಮನು ಗುಣಗಳಿಂದ ಅಪೂರ್ಣ ಎಂದರಿಯುವುದು,

ಭಕ್ತಿ ಹೀನರಾಗಿರುವುದು; ಅಂಥವರು, ಎಲ್ಲರೂ ಅನ್ಧಂತಮಸ್ಸು ಹೊಂದುವರು.

- ಸಂಶಯವೇ ಇಲ್ಲ ಇದರಲ್ಲಿ. -  ಸ್ಪಷ್ಟವಿದೆ ಧರ್ಮಶಾಸ್ತ್ರದಲ್ಲಿ.

 

ತತ್ವೇ ಸಂಶಯಯುಕ್ತಾ ಯೇ ಸರ್ವೇ ತೇ ನಿರಯೋಪಗಾಃ ।

ದೋಷೇಭ್ಯಸ್ತೇ ಗುಣಾಧಿಕ್ಯೇ ನೈವ ಯಾನ್ತ್ಯಧಮಾಂ ಗತಿಮ್ ॥ ೨೯.೪೪ ॥

 

ಯಾರಿಗಿದೆ ತತ್ವದಲ್ಲಿ ಸಂಶಯ, ಅವರೆಲ್ಲರೂ ಆ ದೋಷಪ್ರಾಯ .

ಅಂಥವರು ಖಂಡಿತ ನರಕವನ್ನೇ ಹೊಂದುತ್ತಾರೆ.

ಗುಣವಿದ್ದವರು ಅಧೋಗತಿಯಿಂದ ಪಾರಾಗುತ್ತಾರೆ.

 

ಗುಣದೋಷಸಾಮ್ಯೇ ಮಾನುಷ್ಯಂ ಸರ್ವದೈವ ಪುನಃಪುನಃ ।

ಯಾವದ್ ದೋಷಕ್ಷಯಶ್ಚೋರ್ಧ್ವಾ ಗತಿಃ ಕ್ರಮಶ ಏವ ತು ॥ ೨೯.೪೫ ॥

 

ಗುಣ ಹಾಗೂ ದೋಷ ಎರಡೂ ಕೂಡಾ ಸಮವಾಗಿರುವುದು ಮನುಷ್ಯರ ಲಕ್ಷಣ. ಅಂತವರು ಮತ್ತೆಮತ್ತೆ ಮನುಷ್ಯರಾಗಿ ಹುಟ್ಟುತ್ತಿರುತ್ತಾರೆ, ಆಗಿ ಜನ್ಮಕ್ಕೆ ಕಾರಣ. (ಗುಣಾಧಿಕ್ಯ ಇರುವುದು ದೇವತೆಗಳ ಲಕ್ಷಣ,  ದೋಷಾಧಿಕ್ಯ ಎನ್ನುವುದು ಅಸುರ ಲಕ್ಷಣ). ನಮ್ಮಲ್ಲಿ ಎಷ್ಟೆಷ್ಟು ದೋಷವಾಗುತ್ತದೆ ನಾಶ , ಸಾಧ್ಯ ಕ್ರಮವಾಗಿ ಊರ್ಧ್ವಗತಿಗೆ ಅವಕಾಶ.

 

ಸರ್ವದೋಷಕ್ಷಯೇ ಮುಕ್ತಿರಾತ್ಮಯೋಗ್ಯಾನುಸಾರತಃ ।

ಭಕ್ತಿಜ್ಞಾನೋನ್ನತಾವೇವ ಸ್ವರ್ಗ್ಗಶ್ಚ ಶುಭಕರ್ಮ್ಮಣಃ ॥ ೨೯.೪೬ ॥

 

ವಿಷ್ಣುವೈಷ್ಣವವಾಕ್ಯೇನ ಹಾನಿಃ ಪಾಪಸ್ಯ ಕರ್ಮ್ಮಣಃ ।

ಇತ್ಯಾದಿ ಧರ್ಮ್ಮಸರ್ವಸ್ವಂ ಭೀಷ್ಮಸ್ಥೇನೈವ ವಿಷ್ಣುನಾ ॥ ೨೯.೪೭ ॥

 

ಎಲ್ಲಾ ದೋಷಗಳಿಂದ ಬಿಡುಗಡೆಯನ್ನು ಹೊಂದಿದಾಗ ,

ತನ್ನ ಯೋಗ್ಯತೆಗೆ ಅನುಗುಣವಾದ ಮುಕ್ತಿ ಸಿಗುವುದಾಗ.

ಆದಾಗ ಭಕ್ತಿ ಹಾಗೂ ಜ್ಞಾನದ ಉನ್ನತಿ,

ಎಲ್ಲಾ ದೋಷಗಳ ಕ್ಷಯವಾಗಿ , ಮುಕ್ತಿ. (ಮಂಗಳ)ಪುಣ್ಯಕರ್ಮಗಳಿಂದ ಸ್ವರ್ಗಪ್ರಾಪ್ತಿ.

 

ನಾರಾಯಣ ಮತ್ತು ನಾರಾಯಣನ ಭಕ್ತರ ವಾಕ್ಯದಿಂದ,

ಪಾಪಕರ್ಮದ ನಾಶವಾಗುತ್ತದೆ ಅವರುಗಳ ಅನುಗ್ರಹದಿಂದ.

ಹೀಗೆ ಎಲ್ಲಾ ರೀತಿಯ ಧರ್ಮಗಳನ್ನೂ ಭೀಷ್ಮರ ಅಂತರ್ಯಾಮಿ,

ಪಾಂಡವರಿಗಾಗಿ ಹೇಳುತ್ತಾನೆ,ಜಗದ್ಪಿತ ಕೃಷ್ಣನೆಂಬ ಮಹಾಸ್ವಾಮಿ.

No comments:

Post a Comment

ಗೋ-ಕುಲ Go-Kula