Saturday 3 February 2024

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 30: 01-58

 

ಅಧ್ಯಾಯ ಮೂವತ್ತು [ಯಾಗಸಮಾಪ್ತಿಃ]

 

̐

ಅಥ ಕೃಷ್ಣಮನುಸ್ಮೃತ್ಯ ಭೀಷ್ಮೇ ಸ್ವಾಂ ವಸುತಾಂ ಗತೇ ।

ಕೃತ್ವಾ ಕಾರ್ಯ್ಯಾಣಿ ಸರ್ವಾಣಿ ಗಙ್ಗಾಮಾಶ್ವಾಸ್ಯ ದುಃಖಿತಾಮ್ ॥ ೩೦.೦೧ ॥

 

ಆಶ್ವಾಸಿತಶ್ಚ ಕೃಷ್ಣಾಭ್ಯಾಂ ಧರ್ಮ್ಮಜೋ ದುಃಖಿತಃ ಪುನಃ ।

ಪರಾಶರಸುತೇನೋಕ್ತಃ ಕೃಷ್ಣೇನಾನನ್ತರಾಧಸಾ                  ॥ ೩೦.೦೨ ॥

 

ಧರ್ಮೋಪದೇಶ ಮಾಡಿದ ನಂತರ ಭೀಷ್ಮಾಚಾರ್ಯರು ಕೃಷ್ಣನನ್ನು ಸ್ಮರಣೆಮಾಡಿ,

ಸ್ವರೂಪ ಸಹಜ ವಸುತ್ವ ಹೊಂದಲು, ಧರ್ಮರಾಜನು ಎಲ್ಲಾ ಕರ್ತವ್ಯಗಳನ್ನು ಮಾಡಿ,

ಭೀಷ್ಮರ ಮರಣದಿಂದ ನೊಂದ ಗಂಗೆಯನ್ನು ಸಮಾಧಾನಗೊಳಿಸಿದ,

ವ್ಯಾಸರು,ಕೃಷ್ಣನಿಂದ ಆಶ್ವಾಸನೆ ಸಿಕ್ಕಮೇಲೂ ಮತ್ತೆ ದುಃಖಿತನಾದ.

ಆಗ ಅನಂತ ಬಲವುಳ್ಳ ಶ್ರೀಕೃಷ್ಣನಿಂದ, ಮತ್ತು ವ್ಯಾಸರಿಂದ ಬೋಧನೆಗೊಳಗಾದ.

 

ಅಪಾಪೇ ಪಾಪಶಙ್ಕಿತ್ವಾದಶ್ವಮೇಧೈರ್ಯ್ಯಜಾಚ್ಯುತಮ್ ।

ಕುರು ರಾಜ್ಯಂ ಚ ಧರ್ಮ್ಮೇಣ ಪಾಲಯಾಪಾಲಕಾಃ ಪ್ರಜಾಃ ॥ ೩೦.೦೩ ॥

 

‘ಯಾವುದು ಪಾಪವಲ್ಲವೋ, ಅದನ್ನು ಪಾಪ ಎಂದು ಸಂದೇಹಿಸುತ್ತಿರುವುದರಿಂದ,

ಪರಮಾತ್ಮನ ಪೂಜಿಸು ನೀನು ನಿಷ್ಠೆಯಿಂದ ಅಶ್ವಮೇಧ ಯಾಗ ಮಾಡುವುದರಿಂದ. ರಾಜ್ಯವನ್ನು ಧರ್ಮದಿಂದ ರಕ್ಷಣೆ ಮಾಡು. ಪಾಲಕರಿಲ್ಲದ ಪ್ರಜೆಗಳಿಗೆ ಪೋಷಣೆ ನೀಡು.

 

ಇತ್ಯುಕ್ತಃ ಸ ತಥಾ ಚಕ್ರೇ ತ್ಯಕ್ತ್ವಾ ಭೋಗಾಂಶ್ಚ ಕೃತ್ಸ್ನಶಃ ।

ಗೋವ್ರತಾದಿವ್ರತೈರ್ಯ್ಯುಕ್ತಃ ಪಾಲಯಾಮಾಸ ಮೇಧಿನೀಮ್ ॥ ೩೦.೦೪ ॥

 

ಈರೀತಿಯಾಗಿ ಹೇಳಲ್ಪಟ್ಟ ಧರ್ಮರಾಜ, ಮಾಡಿದ ಸಮಗ್ರವಾಗಿ ಭೋಗಗಳ ತ್ಯಾಗ.

ಗೋವ್ರತ ಮೊದಲಾದ ವ್ರತಗಳಿಂದ , ಕೂಡಿಕೊಂಡು ಭೂಪಾಲನೆ ಮಾಡಿದ.

 

ದದೌ ದೇಯಾನಿ ಮುಖ್ಯಾನಿ ಯಥಾಕಾಮಮಖಣ್ಡಿತಮ್ ।

ನೈವಾರ್ತ್ಥೀ ವಿಮುಖಃ ಕಶ್ಚಿದಭೂದ್ ಯೋಗ್ಯಃ ಕದಾಚನ ॥ ೩೦.೦೫ ॥

 

ಕೊಡಬೇಕಾಗಿರುವ ಮುಖ್ಯವಾದ ಅನೇಕ ದಾನಗಳನ್ನು ,

ಸ್ವೀಕರಿಸುವವರ ಬಯಕೆಗನುಗುಣವಾಗಿ ನಿರಂತರ ಕೊಟ್ಟನು.

ಬೇಡಲು ಬಂದ ಯೋಗ್ಯನಾದ ಯಾರನ್ನೂ ಅವನು ಹಾಗೇ ಕಳಿಸುತ್ತಿರಲಿಲ್ಲ,

ಧರ್ಮಜನಿಂದ ದಾನ ಪಡೆಯದೇ ಯಾರೂ ವಿಮುಖರಾಗಿ ಹೋಗುತ್ತಿರಲಿಲ್ಲ.

 

ಪ್ರಷ್ಟಾ ಚ ದಾತಾSಖಿಲರಾಜನಮ್ಯೋ ಯಷ್ಟಾ ಚ ಧರ್ಮ್ಮಾತ್ಮಜ ಏವ ತತ್ರ ।

ಬಭೂವ ಪಾಣ್ಡೋರ್ಗ್ಗೃಹಮಾವಸಂಶ್ಚ ರಾಜಾಧಿರಾಜೋ ವನಿತಾನಿವೃತ್ತಃ ॥ ೩೦.೦೬ ॥

 

ಧರ್ಮರಾಜ ಪಾಂಡುವಿನ ಮನೆಯಲ್ಲಿ ವಾಸಮಾಡುತ್ತಿದ್ದ.

ಸ್ತ್ರೀಭೋಗ ನಿವೃತ್ತನಾಗಿ ಪ್ರಜಾಹಿತ ಪ್ರಶ್ನೆಮಾಡುವವನಾಗಿದ್ದ.

ಎಲ್ಲಾ ರಾಜರಿಂದ ನಮಸ್ಕಾರಕ್ಕೆ ಒಳಗಾದವನಾಗಿದ್ದ,

ಯಾಗಗಳನ್ನು ಮಾಡುವವನಾಗಿಯೂ ಇರುತ್ತಿದ್ದ. 

 

ಭೀಮಸ್ತು ದೌರ್ಯ್ಯೋಧನಮೇವ ಸದ್ಮ ಪ್ರಪೇದಿವಾನೂರ್ಜ್ಜಿತವೀರ್ಯ್ಯಲಬ್ಧಮ್ ।

ಕೃಷ್ಣಾಸಹಾಯಃ ಸುರರಾಜಯೋಗ್ಯಾನಭುಙ್ಕ್ತ ಭೋಗಾನ್ ಯುವರಾಜ ಏವ ॥ ೩೦.೦೭ ॥

 

ಯುವರಾಜನಾದ ಭೀಮಸೇನ ತನ್ನ ಉತ್ಕೃಷ್ಟವಾದ ಪರಾಕ್ರಮದಿಂದ, ಪಡೆದುಕೊಂಡ ದುರ್ಯೋಧನನ ಮನೆಯನ್ನು ಹೊಂದಿದವನಾಗಿದ್ದ.

ಅಲ್ಲಿ ದ್ರೌಪದಿಯಿಂದ ಕೂಡಿಕೊಂಡು ಅಲೌಕಿಕ ಭೋಗಗಳನ್ನು ಭೋಗಿಸಿದ.

ಸುರರಾಜ ದೇವೇಂದ್ರಗೆ ಮಾತ್ರ ಸಿಗುವ ಸಕಲ ಭೋಗ ಭಾಗ್ಯಗಳ ಅನುಭವಿಸಿದ.

 

ಕೃಷ್ಣಾ ಚ ಪಾರ್ತ್ಥಾಂಶ್ಚತುರೋ ವಿಹಾಯ ಸುವ್ಯಕ್ತಸಾರಸ್ವತಶುದ್ಧಭಾವಾ ।

ರರಾಜ ರಾಜಾವರಜೇನ ನಿತ್ಯಮನನ್ಯಯೋಗೇನ ಶಿಖೇವ ವಹ್ನೇಃ ॥ ೩೦.೦೮ ॥

 

ಭಾರತೀದೇವಿಯ ಅಸ್ತಿತ್ವವು ದ್ರೌಪದಿಯಲ್ಲಿ ಸಂಪೂರ್ಣವಾಗಿ ಅಭಿವ್ಯಕ್ತವಾಗಿತ್ತು,

ಆಗವಳು ಇತರ ಪಾಂಡವರನ್ನು ಬದಿಗಿಟ್ಟು ಅಗ್ನಿಯ ಜ್ವಾಲೆಯಂತೆ ಹೊಳೆವ ಹೊತ್ತು,

ಇತರರ ಸಂಪರ್ಕವಿಲ್ಲದೇ, ಧರ್ಮರಾಜನ ತಮ್ಮ ಭೀಮನೊಂದಿಗೆ ಶೋಭಿಸಿದ ಗತ್ತು.

 

ಪ್ರೀತ್ಯೈವ ವಿಜ್ಞಾನಯುಜಾSನ್ಯಪಾರ್ತ್ಥೈಃ ಸಂವಾದತಃ ಪರಿಹೃತಾ ಗತಭಾವಿಕಾಲೇ ।

ಅಪಿ ಸ್ವಕೀಯಂ ಪತಿಮೇವ ಭೀಮಮವಾಪ್ಯ ಸಾ ಪರ್ಯ್ಯಚರನ್ಮುದೈವ ॥ ೩೦.೦೯ ॥

 

ಪ್ರಜ್ಞೆಯನ್ನು ಹೊಂದಿರುವ ದ್ರೌಪದಿದೇವಿಯು ಪ್ರೀತಿಯಿಂದಲೇ,

ಉಳಿದ ಪಾಂಡವರೊಡನೆ ಮಾತಿನಲ್ಲಿದ್ದಳು ದೂರದಿಂದಲೇ .

ಹೀಗೆ ತನ್ನ ಸ್ವಕೀಯ ಪತಿ ಭೀಮನನ್ನು, ದಿ ದ್ರೌಪದಿ ಪಟ್ಟಳು ಆನಂದವನ್ನು.

 

ರರಾಜ ರಾಜಾವರಜಸ್ತಯಾ ಸ ದ್ವಿರೂಪಯಾ ಸೋಮಕಕಾಶಿಜಾತಯಾ ।

ಶ್ರಿಯಾ ಭುವಾ ಚೈವ ಯಥಾSಬ್ಜನಾಭೋ ನಿಹತ್ಯ ಸರ್ವಾನ್ ದಿತಿಜಾನ್ ಮಹಾಬ್ಧೌ ॥ ೩೦.೧೦ ॥

 

ಯಾವ ರೀತಿ ಶ್ರೀಮನ್ನಾರಾಯಣನು, ಕೊಂದು ಹಾಕಿ ಎಲ್ಲಾ ರಾಕ್ಷಸರನ್ನು ;

ಕ್ಷೀರಸಾಗರದಲ್ಲಿ ಶ್ರೀದೇವಿ- ಭೂದೇವಿಯರ ಕೂಡಿಕೊಂಡು ಶೋಭಿಸಿರುವನೋ ಹಾಗೆ,

ದ್ರೌಪದಿ ಮತ್ತು ಕಾಳಿ ಎಂಬ ಎರಡು ರೂಪದ ಭಾರತೀಯೊಂದಿಗೆ ಭೀಮ ಶೋಭಿಸಿದ ಬಗೆ .

 

ಸರ್ವೋತ್ತುಙ್ಗೋ ನಾಮತಃ ಪ್ರಾಣವಾಯೋರಂಶೋ ನಿಶಾಯಾಂ ಗುರುಪುತ್ರಸೂದಿತಃ ।

ಮಾತಾSಸ್ಯ ದೇವೀತಿ ಚ ರೌಹಿಣೇಯೀ ಭೀಮಪ್ರಿಯಾSSಸೀದ್ ಯಾ ಪುರಾSಸ್ಯೈವ ರಾಕಾ ॥ ೩೦.೧೧ ॥

 

ಮುಖ್ಯಪ್ರಾಣನ ಮಗನಾಗಿರುವ ಪ್ರಾಣ ಎಂಬ ಒಬ್ಬ ವಾಯು ‘ಸರ್ವೋತ್ತುಙ್ಗ’,

ಅದೇ ಹೆಸರಿನಿಂದ ಭೀಮ ಹಾಗೂ ದೇವಿಗೆ ಹುಟ್ಟಿ ಬಂದಿದ್ದ ಆಗಿ ಅವರ ಮಗ.

ಅವನು ಅಶ್ವತ್ಥಾಮನಿಂದ ಸಂಹರಿಸಲ್ಪಟ್ಟ ಆಳು.

ಅವನ ತಾಯಿ ‘ದೇವಿ’ಯು ರೋಹಿಣಿಯ ಮಗಳು,

ಬಲರಾಮನ ತಂಗಿಯಾದವಳು ಮೂಲದಲ್ಲಿ ಹುಣ್ಣಿಮೆಯ ಅಭಿಮಾನಿ ದೇವತೆ ,

ರಾಕಾ ಎಂದು ಕರೆಸಿಕೊಳ್ಳುತ್ತಿದ್ದಂಥಾ ಅವಳೂ ಇದ್ದಳು ಭೀಮಸೇನನ ಜೊತೆ. 

 

ಅನ್ಯಾಶ್ಚಾSಸುರ್ವಾಸುದೇವ್ಯೋ ದಿಶೋ ಯಾ ಆಪಶ್ಚ ಪೂರ್ವಂ ವಿಂಶತಿರಗ್ರ್ಯರೂಪಾಃ ।

ತಾಭಿರ್ಯ್ಯುತೋ ದೈವತೈರಪ್ಯಲಭ್ಯಾನಭುಙ್ಕ್ತ ಭೋಗಾನ್ ವಿಬುಧಾನುಗಾರ್ಚ್ಚಿತಃ ॥ ೩೦.೧೨ ॥

 

ಹಾಗೆಯೇ, ವಸುದೇವನ ಪುತ್ರಿಯರಾದ,  ದಿಕ್ಕುಗಳ ಅಭಿಮಾನಿ ದೇವತೆಗಳಾದ , ಯಾರಾಗಿದ್ದರು ಆಪಭಿಮಾನಿ ದೇವತೆಗಳು , ಅಂತಹ ಇಪ್ಪತ್ತು ಇತರ ಶ್ರೇಷ್ಠ ಸ್ವರೂಪಗಳು, ಮಡದಿಯರಾಗಿ ಕೂಡಿಕೊಂಡಿದ್ದರು ಭೀಮಸೇನನನ್ನು, ಭೋಗಿಸಿದ ಭೀಮ ದೇವತೆಗಳಿಗೂ ಸಿಗದ  ಭೋಗಗಳನ್ನು .

 

ರರಕ್ಷ ಧರ್ಮ್ಮಾನಖಿಲಾನ್ ಹರೇಃ ಸ ನಿಧಾಯ ವಿಪ್ರಾನನುಶಾಸ್ಯ ಯುಕ್ತಾನ್ ।

ಸದ್ವೈಷ್ಣವಾನ್ ವಿದುಷಃ ಪಞ್ಚಪಞ್ಚ ಸವೇತನಾನ್ ಗ್ರಾಮಮನು ಸ್ವಕೀಯಾನ್ ॥ ೩೦.೧೩ ॥

 

ಆ ಭೀಮಸೇನನು ಪ್ರತಿಯೊಂದು ಗ್ರಾಮದಲ್ಲಿಯೂ, ತಮ್ಮವರಾದ ,

ಭಗವಂತಗೆ ಸಂಬಂಧಪಟ್ಟ ಎಲ್ಲಾ ಧರ್ಮಗಳಲ್ಲಿ ಆಸಕ್ತಿ ಪೂರ್ಣರಾದ, 

ವಿದ್ವಾಂಸರಾದ,  ಐದೈದು ಬ್ರಾಹ್ಮಣರನ್ನು ಸಂಬಳಕೊಟ್ಟು ನೇಮಿಸಿದ.

ಅವರು ಅಲ್ಲಿ ನಿಯಮಿಸುತ್ತಿದ್ದರು ಧರ್ಮ ಲೋಪವಾಗದಂತಹಾ ಜಾಡ.

 

ದಧಾರ ದಣ್ಡಂ ತದವರ್ತ್ತಿಷು ಸ್ವಯಂ ಜಗ್ರಾಹ ಚಾನ್ವೇವ ಮುದಾSಥ ತದ್ಗಾನ್ ।

ತದ್ವೃತ್ತಮನ್ಯೈರಪಿ ವಿಪ್ರವರ್ಯ್ಯೈಃ ಸಂಶೋಧಯನ್ ಸರ್ವಮಸೌ ಯಥಾ ವ್ಯಧಾತ್ ॥ ೩೦.೧೪ ॥

 

ಭೀಮಸೇನನು  ತಾನು ನಿಯಮಿಸಿದ ಬ್ರಾಹ್ಮಣರ ವರದಿ ಆಧರಿಸಿ,

ಯಾರು ಧರ್ಮ ಮಾರ್ಗದಲ್ಲಿ ನಡೆಯುತ್ತಿಲ್ಲವೋ ಅವರಿಗೆ ಶಿಕ್ಷೆ ವಿಧಿಸಿ,

ಯಾರು ಪರಮಾತ್ಮನ ಧರ್ಮಕ್ಕೆ ಅನುಗುಣವಾಗಿದ್ದರೋ ಅವರನ್ನು  ಅನುಗ್ರಹಿಸುತ್ತಿದ್ದ.

ತಾನೂ ಅವರ ಎಲ್ಲಾ ಸಂಗತಿಗಳನ್ನು ಪರಿಶೀಲಿಸಿ ಆ ಐವರನ್ನು ಇನ್ನಿಷ್ಟು ವಿಪ್ರರಿಂದ ನೋಡಿಸುತ್ತಿದ್ದ .

 

ನಾವೈಷ್ಣವಃ ಕಶ್ಚಿದಭೂತ್ ಕುತಶ್ಚಿನ್ನೈವಾನ್ಯನಿಷ್ಠೋ ನಚ ಧರ್ಮ್ಮಹನ್ತಾ ।

ನ ವಿದ್ಧ್ಯವರ್ತೀ ನಚ ದುಃಖಿತೋSಭೂನ್ನಾಪೂರ್ಣ್ಣವಿತ್ತಶ್ಚ ತದೀಯರಾಷ್ಟ್ರೇ ॥ ೩೦.೧೫ ॥

 

ವಿಷ್ಣುಭಕ್ತನಲ್ಲದವನು ಅಲ್ಲಿ ಇರುತ್ತಿರಲಿಲ್ಲ. ಯಾರೂ ಪರಮಾತ್ಮನನ್ನು ಬಿಟ್ಟವರಿದ್ದಿಲ್ಲ. ಬಿಟ್ಟು ಬೇರೊಬ್ಬನ ಭಕ್ತಿ ಮಾಡುತ್ತಿರಲಿಲ್ಲ. ಯಾರೂ ಕೂಡಾ ಅಧಾರ್ಮಿಕರಾಗಿರಲಿಲ್ಲ. ವಿಧಿಮಾರ್ಗದಲ್ಲಿ ಇಲ್ಲದವರು ಯಾರೂ ಅಲ್ಲಿ ಇರಲಿಲ್ಲ, ಅದರಿಂದ ದುಃಖವಿರಲಿಲ್ಲ, ಅಗತ್ಯ ಹಣಕ್ಕೆ ಬರವಿರಲಿಲ್ಲ.

 

ವಾಸಿಷ್ಠವೃಷ್ಣಿಪ್ರವರೌ ಪ್ರಪಶ್ಯತಾಂ ತಾಭ್ಯಾಂ ಚ ಭೀಮೇನ ಮುನೀಶ್ವರೈಶ್ಚ ।

ಸಂಶಿಕ್ಷಿತಾನಾಂ ಪ್ರಥಮಾದ್ ಯುಗಾಚ್ಚ ಗುಣಾಧಿಕಃ ಕಲಿರಾಸೀತ್ ಪ್ರಜಾನಾಮ್ ॥ ೩೦.೧೬ ॥

 

ಶ್ರೀಕೃಷ್ಣ ಹಾಗೂ ವೇದವ್ಯಾಸದೇವರ ನಿರಂತರವಾದ ಗಮನ ಹಸ್ತಿನಪುರದ ಮೇಲಿತ್ತು,

ಅವರಿಬ್ಬರಿಂದ,ಭೀಮನಿಂದ, ಶ್ರೇಷ್ಠ ಮುನಿಗಳಿಂದ ಪ್ರಜಾವೃಂದಕ್ಕೆ ಶಿಕ್ಷಣ ಸಿಕ್ಕಿತ್ತು. ಪ್ರಜೆಗಳು ಕೃಷ್ಣ ಹಾಗೂ ವೇದವ್ಯಾಸರನ್ನು ನೋಡುತ್ತಿರಲು, ಸಿಕ್ಕಿತ್ತವರಿಗೆ ಅವರಿಬ್ಬರ ಮಾರ್ಗದರ್ಶನದ ನುಡಿಮುತ್ತುಗಳು.

ಜೊತೆಗೆ  ಭೀಮಸೇನ ಹಾಗೂ ಋಷಿ-ಮುನಿಗಳ ಮಾರ್ಗದರ್ಶನವೂ ಅವರಿಗೆ ಸಿಗುತ್ತಿತ್ತು.

ಅದರಿಂದ ಪ್ರಜೆಗಳ ಪಾಲಿಗೆ ಕಲಿಯುಗ ಕೃತಕ್ಕಿಂತಲೂ ಕೂಡಾ ಗುಣದಿಂದ ಶ್ರೇಷ್ಠವಾಯಿತು.

 

 

ಶುಭಂ ಮಹತ್ ಸ್ವಲ್ಪಫಲಂ ಕೃತೇ ಹಿ ವಿಪರ್ಯ್ಯಯೇಣಾಶುಭಮೇಷ ದೋಷಃ ।

ತದ್ಧೀನಮಪ್ಯುಚ್ಚಶುಭಂ ಕೃತಾದ್ ಯುಗಾಚ್ಚಕ್ರೇ ಕಲಿಂ ಮಾರುತಿರಚ್ಯುತಾಶ್ರಯಾತ್ ॥ ೩೦.೧೭ ॥

 

ಕೃತಯುಗದಲ್ಲಿ ಬಹಳ ಪುಣ್ಯಮಾಡಿದರೆ ಸ್ವಲ್ಪ ಫಲ ,

ಇದರ ವಿರುದ್ಧ ಪಾಪ,ಸ್ವಲ್ಪ ಪಾಪಕ್ಕೂ ಅಲ್ಲಿ ಹೆಚ್ಚು ಫಲ.

ಆದರೆ ಕಲಿಯುಗ ಕೃತಯುಗಕ್ಕೆ ವಿರುದ್ಧ.

ಇಲ್ಲಿ ಸ್ವಲ್ಪ ಪುಣ್ಯಕ್ಕೆ ಬಹಳ ಫಲವು ಸಿದ್ಧ. ಬಹಳ ಪಾಪ ಮಾಡಿದರೂ ಸ್ವಲ್ಪ ಫಲಪ್ರದ.

ಭೀಮಸೇನನು ಶ್ರೀಕೃಷ್ಣನ ಆಶ್ರಯದಿಂದ , ಕೃತಕ್ಕಿಂತ ಕಲಿಯುಗವ ಮಿಗಿಲು ಮಾಡಿದ. 

 

ಧನಞ್ಜಯಃ ಪ್ರೋದ್ಯತದಣ್ಡ ಆಸೀತ್ ಸದಾSನ್ಯಚಕ್ರೇಷು ನಿಜಾಗ್ರಜೇರಿತಃ ।

ವಿಭೀಷಯಿತ್ವಾ ನೃಪತೀನ್ ಸರತ್ನಾನ್ ಪದೋರ್ನ್ನೃಪಸ್ಯಾಗ್ರಭುವೋ ನ್ಯಪಾತಯತ್ ॥ ೩೦.೧೮ ॥

 

ಧನಂಜಯನು ಯುಧಿಷ್ಠಿರನಿಂದ ಪ್ರೇರಿತನಾಗಿದ್ದ,

ಬೇರೆ ರಾಷ್ಟ್ರಗಳ ದಂಡ-ಸಂಧಿಗಳ ನೋಡಿಕೊಳ್ಳುತ್ತಿದ್ದ.

ಎಲ್ಲಾ ರಾಜರಲ್ಲಿ ಭಯವಿರಿಸಿಕೊಂಡಿದ್ದ , ಎಲ್ಲರನ್ನೂ ಧರ್ಮಜನಲ್ಲಿ ವಿನೀತರಾಗಿಟ್ಟಿದ್ದ.

 

ಸದೈವ ಕೃಷ್ಣಸ್ಯ ಮುಖಾರವಿನ್ದಾದ್ ವಿನಿಸ್ಸೃತಂ ತತ್ವವಿನಿರ್ಣ್ಣಯಾಮೃತಮ್ ।

ಪಿಬನ್ ಸುತಾದ್ಯಾಧಿಮಸೌ ಕ್ರಮೇಣ ತ್ಯಜಂಶ್ಚ ರೇಮೇ ವಿರತಾತಿಭೋಗಃ ॥ ೩೦.೧೯ ॥

 

ಯಾವಾಗಲೂ ಶ್ರೀಕೃಷ್ಣನ ಮುಖಕಮಲದಿಂದ ,

ಹೊರಬಂದ ತತ್ವನಿರ್ಣಯವೆಂಬ ಅಮೃತಪಾನದಿಂದ,

ಮಕ್ಕಳನ್ನು ಕಳೆದುಕೊಂಡ ಹಾಗೂ ಇತರ ದುಃಖವನ್ನು ಕ್ರಮವಾಗಿ ಬಿಡುತ್ತಾ,

ಅರ್ಜುನ ವಿಹರಿಸುತ್ತಿದ್ದ ಹೊಂದಿ ನಿವೃತ್ತ ಭೋಗನಿರತನಾದಂಥ ಸಮಚಿತ್ತ.

 

ದುಃಶಾಸನಸ್ಯಾSವಸಥಂ ಸುಭದ್ರಾಚಿತ್ರಾಙ್ಗದಾಸಹಿತೋSದ್ಧ್ಯಾವಸಂಶ್ಚ ।

ಸಚನ್ದ್ರಿಕಾಕಾನ್ತಿರನೂನಬಿಮ್ಬೋ ನಭಸ್ಥಿತಶ್ಚನ್ದ್ರ ಇವಾತ್ಯರೋಚತ ॥ ೩೦.೨೦ ॥

 

ಈರೀತಿಯಾದ ಜೀವನವನ್ನು ನಡೆಸುವ ಅರ್ಜುನ,

ಸುಭದ್ರೆ ಚಿತ್ರಾಂಗದೆಯರ ಕೂಡಿಕೊಂಡ ಯಾನ.

ದುಃಶಾಸನನ ಮನೆಯಲ್ಲಿ ವಾಸಮಾಡುತ್ತಿದ್ದ , ಬೆಳದಿಂಗಳ ಪೂರ್ಣಚಂದ್ರನಂತೆ ಶೋಭಿಸಿದ.

 

[ಚಿತ್ರಾಂಗದೆ ಹಿಂದೆ ತಾರೆಯಾಗಿದ್ದಳು, ಸುಗ್ರೀವನ ಅಂಗಸಂಗವ ಮಾಡಿದ್ದಳು, ಆ ದೋಷದಿಂದ ಗಂಡನಿಂದ ದೂರವಿದ್ದಳು].

 

ಸಮಸ್ತಭೃತ್ಯಾಶ್ರಿತವೇತನಾನಾಂ ಮಾದ್ರೇಯ ಆಸೀತ್ ಪ್ರಥಮಃ ಪ್ರದಾತಾ ।

ಸ ದುರ್ಮ್ಮುಖಸ್ಯಾSವಸಥೇSವಸಚ್ಚ ಸಮದ್ರರಾಜಾತ್ಮಜಯಾSಗ್ರ್ಯವರ್ತ್ತೀ ॥ ೩೦.೨೧ ॥

 

ಮಾದ್ರಿಯ ಮೊದಲ ಮಗ ನಕುಲ, ಕೆಲಸದವರಿಗೆ ಕೊಡುತ್ತಿದ್ದ ಸಂಬಳ. ಸರಕಾರದ ಅನುದಾನ, ಇತ್ಯಾದಿಯನ್ನು, ಹಿರಿಯರೊಪ್ಪುವಂತೆ ನಿರ್ವಹಿಸುತ್ತಿದ್ದನು . ದುರ್ಮುಖ ಎನ್ನುವ ದುರ್ಯೋಧನನ ತಮ್ಮನ ಮನೆಯಲ್ಲಿದ್ದ, ಮದ್ರರಾಜ ಪುತ್ರಿಯಾದ ತನ್ನ ಹೆಂಡತಿಯ ಜೊತೆ ವಾಸಮಾಡಿದ.

 

ಸನ್ಧಾನಭೇದಾನುಗತಪ್ರವೃತ್ತಿಸ್ತಿಷ್ಠಂಶ್ಚ ದುರ್ಮ್ಮರ್ಷಣಶುಭ್ರಸದ್ಮನಿ ।

ನೃಪಾಙ್ಗರಕ್ಷಃ ಪ್ರಗೃಹೀತಖಡ್ಗಸ್ತಸ್ಯಾನುಜೋ ಮಾಗಧಕನ್ಯಯಾSSಸೀತ್ ॥ ೩೦.೨೨ ॥

 

ನಕುಲನ ತಮ್ಮನಾದ ಸಹದೇವ, ಮಾಡುತಿದ್ದ ಧರ್ಮರಾಜನ ಸೇವ.

ಇತರ ರಾಜರೊಂದಿಗೆ ಮಾಡುವ ಸಂಧಾನ , ಇಬ್ಬರು ರಾಜರ ನಡುವಿನ ಭೇದ ಚಿಂತನ ,

ಮಾಡುವಾಗ ಧರ್ಮರಾಜನ ಹಿಂದೆ ಬಿಚ್ಚುಗತ್ತಿಯ ಹಿಡಿದು ಅಂಗರಕ್ಷಕನಾಗಿದ್ದ ;

ಅವನು ದುರ್ಮರ್ಷಣನ ಮನೆಯಲ್ಲಿ ತನ್ನ ಪತ್ನಿ ಜರಾಸಂಧನ ಮಗಳ ಜೊತೆಗಿದ್ದ.

 

ಸೇನಾಪತಿಃ ಕೃಪ ಆಸೀದ್ ಯುಯುತ್ಸುಃ ಸ ಸಞ್ಜಯೋ ವಿದುರಶ್ಚಾSಮ್ಬಿಕೇಯಮ್ ।

ಪಾರ್ತ್ಥೇರಿತಾಃ ಪರ್ಯ್ಯಚರನ್ ಸ್ವಯಂ ಚ ಸರ್ವೇ ಯಥಾ ದೈವತಮಾದರೇಣ ॥ ೩೦.೨೩ ॥

 

ಅವರ ಸೇನಾಧಿಪತಿ ಕೃಪಾಚಾರ್ಯರೇ ಆಗಿದ್ದರು.

ಯುಯುತ್ಸು, ಸಂಜಯ, ವಿದುರ,ಈ ಮೂವರು,

ಪಾಂಡವರಿಂದ ಪ್ರೇರಿಸಲ್ಪಟ್ಟವರಾಗಿಯೇ ಇದ್ದರು.

ತಮ್ಮ ಇಚ್ಛೆಯಿಂದ ಕೂಡಾ ಧೃತರಾಷ್ಟ್ರನ ಸೇವಿಸಿದರು.

ಪಾಂಡವರೆಲ್ಲರೂ ಪ್ರೀತಿವಿಶೇಷದಿಂದ ತಾವೂ ಕೂಡಾ ಧೃತರಾಷ್ಟ್ರನನ್ನು ಸೇವಿಸಿದರು,

ಮತ್ತು ಮುಖ್ಯವಾಗಿ ಈ ಮೂವರನ್ನು ಅದೇ ಕೆಲಸಕ್ಕಾಗಿಯೇ ನೇಮಿಸಿ ಅಲ್ಲಿಟ್ಟಿದ್ದರು.

 

ದ್ವಿರೂಪಕೃಷ್ಣಪ್ರಹಿತೇಷು ಪಾಣ್ಡುಷು ಕ್ಷಿತಿಂ ಪ್ರಶಾಸತ್ಸು ನ ಕಶ್ಚನಾSತುರಃ ।

ನಚಾಕ್ರಮಾನ್ಮೃತ್ಯುರಭೂನ್ನ ನಾರ್ಯ್ಯೋ ವಿಭರ್ತ್ತೃಕಾ ನೋ ವಿಧುರಾ ನರಾಶ್ಚ ॥ ೩೦.೨೪ ॥

 

ನಾರಾಯಣನ ಎರಡು ರೂಪಗಳಿಂದ ಪಾಲಿಸಲ್ಪಟ್ಟ ಪಾಂಡವರು,

ಭೂಮಿ ಆಳುತ್ತಿರಲು,ಅಲ್ಲಿ ರೋಗಿಷ್ಟರು ಇರಲಿಲ್ಲ ಯಾರೊಬ್ಬರೂ.

ಅಲ್ಲಿ ವಿಪರೀತ  ಕ್ರಮದಲ್ಲಿ ಸಾವು ಸಂಭವಿಸುತ್ತಿರಲಿಲ್ಲ ,

(ಅಕಾಲ ಮರಣಗಳು ಇತ್ಯಾದಿ ಅವಘಡ ಆಗುತ್ತಿರಲಿಲ್ಲ) ,

ಅವರ ರಾಜ್ಯದಿ ವಿದುರ-ವಿಧವೆಯರಿರಲಿಲ್ಲ.

(ಅಂದರೆ ಗಂಡ ಹೆಂಡತಿ ಇಬ್ಬರೂ ಒಟ್ಟಿಗೇ ಸಾಯುತ್ತಿದ್ದರು ಎಂದರ್ಥವಲ್ಲ.

ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದ ಮೇಲೆ ತಮ್ಮ ಕರ್ತವ್ಯವ ಮುಗಿಸಿದ ಕಾಲ,

ಗಂಡ/ಹೆಂಡತಿ ಸತ್ತರೆ, ಅವರನ್ನು ವಿಧವೆ/ವಿದುರ ಎಂದು ಶಾಸ್ತ್ರ ಹೇಳುವುದಿಲ್ಲ).

 

ಶಬ್ದಾದಯಶ್ಚಾSಸುರತೀವ ಹೃದ್ಯಾ ನಿಕಾಮವರ್ಷೀ ಚ ಸುರೇಶ್ವರೋSಭೂತ್ ।

ಪ್ರಜಾ ಅನಾಸ್ಪೃಷ್ಟಸಮಸ್ತತಾಪಾ ಅನನ್ಯಭಕ್ತ್ಯಾSಚ್ಯುತಮರ್ಚ್ಚಯನ್ತಿ ॥ ೩೦.೨೫ ॥

 

ಶಬ್ದ-ಸ್ಪರ್ಶ-ರೂಪ-ರಸ-ಗಂಧ ಈ ವಿಷಯಗಳೆಲ್ಲಾ,

ಕೂಡಾ ಅತ್ಯಂತ ರಮಣೀಯವಾಗಿದ್ದ ಮಹಾ ಪುಣ್ಯ ಕಾಲ.

ದೇವೇಂದ್ರನು ಬಯಸಿದ್ದನ್ನು ಕೊಡುತ್ತಿದ್ದ. ಪ್ರಜೆಗಳಿಗಿರಲಿಲ್ಲ ತಾಪಸ್ಪರ್ಶದ ಆ ಬಂಧ.

(ಆಧ್ಯಾತ್ಮಿಕ, ಆಧಿಭೌತಿಕ, ಆಧಿದೈವಿಕ ಮೂರು ತಾಪಗಳು,

ಆ ಮೂರೂ ತಾಪಗಳಿಂದ  ಮುಕ್ತರಾಗಿದ್ದರು ಪ್ರಜೆಗಳು).

ಶ್ರೀಕೃಷ್ಣನನ್ನೇ ಅನನ್ಯವಾಗಿ ಪೂಜಿಸುತ್ತಿದ್ದರು ಪ್ರಜೆಗಳು. 

 

ಪೃಥ್ವೀ ಚ ಗಾವಃ ಸಸರಸ್ವತೀಕಾ ನಿಕಾಮದೋಹಾ ಅಭವನ್ ಸದೈವ ।

ಅಬ್ದಾಬ್ಧಿನದ್ಯೋ ಗಿರಿವೃಕ್ಷಜಙ್ಗಮಾಃ ಸರ್ವೇSಪಿ ರತ್ನಪ್ರಸವಾ ಬಭೂವುಃ ॥ ೩೦.೨೬ ॥

 

ಭೂಮಿ, ಹಸುಗಳು, ಇತ್ಯಾದಿಗಳಿಂದ ವೇದ ಸಮೃದ್ಧಿ,

ಮೋಡ, ಸಮುದ್ರ, ಗಿರಿ-ಬೆಟ್ಟ-ವೃಕ್ಷ, ಪ್ರಾಣಿ , ನದಿ,

ಎಲ್ಲವೂ ಕೂಡಾ ಕೊಡುತ್ತಿದ್ದವು ಧನ ಧಾನ್ಯ ಸಮೃದ್ಧಿ.

 

ಕೃಷ್ಣಾಶ್ರಯಾತ್ ಸರ್ವಮಿದಂ ವಶೇ ತೇ ವಿಧಾಯ ಸಮ್ಯಕ್ ಪರಿಪಾಲಯನ್ತಃ ।

ದಿವೀವ ದೇವಾ ಮುಮುದುಃ ಸದೈವ ಮುನೀನ್ದ್ರಗನ್ಧರ್ವನೃಪಾದಿಭಿರ್ವೃತಾಃ ॥ ೩೦.೨೭ ॥

 

ಕೃಷ್ಣನ ಆಶ್ರಯದಲ್ಲಿದ್ದ ಆ ಪಾಂಡವರು,  ಜಗತ್ತನ್ನೇ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರು.

ಚೆನ್ನಾಗಿ ರಾಜ್ಯ ಪಾಲನೆ ಮಾಡುತ್ತಿದ್ದರು,  ಸ್ವರ್ಗದಲ್ಲಿ ದೇವತೆಗಳು ಹೇಗೆ ಇರುತ್ತಿದ್ದರು ;

ಹಾಗೇ ಶ್ರೇಷ್ಠ ಮುನಿಗಳು, ಗಂಧರ್ವರು, ರಾಜರುಗಳ ಕೂಡಿದವರಾಗಿ ಆನಂದಿಸಿದರು.  

 

ಸಮುಜ್ಜ್ವಲಾ ಪಾಣ್ಡವಕೀರ್ತ್ತಿನಾರೀ ಪದಂ ವಿಧಾಯಾಸುರಪಕ್ಷಮೂರ್ದ್ಧಸು ।

ವರಾಭಯೇ ಚೈವ ಸತಾಂ ಕರಾಭ್ಯಾಂ ಕೃಷ್ಣಪ್ರಸೂತಾ ಜಗದಣ್ಡಮಾವೃಣೋತ್ ॥ ೩೦.೨೮ ॥

 

ಶ್ರೀಕೃಷ್ಣನಿಂದ ಹುಟ್ಟಿದ ಪಾಂಡವರ ಕೀರ್ತಿನಾರಿ ,

ಎಂಬ ಹೆಣ್ಣುಮಗಳು ಚೆನ್ನಾಗಿ ಬೆಳಕು ಎಲ್ಲೆಡೆ ಬೀರಿ,

ಅಸುರರ ತಲೆಗಳ ಮೇಲೆ ತನ್ನ ಕಾಲನ್ನು ಊರಿ ,

ಇಡುತ್ತಾ, ಸಜ್ಜನರಿಗೆ ಕೈಗಳಿಂದ ವರವನ್ನೂ,

ಅಭಯ ನೀಡುತ್ತಾ, ಆವರಿಸಿದಳು ಜಗತ್ತನ್ನು.

 

ಪಾತಾಳಪಾದಾಂ ಪೃಥಿವೀನಿತಮ್ಬಾಮಾಕಾಶಮದ್ಧ್ಯಾಂ ಕರಸನ್ತತಾಶಾಮ್ ।

ಗ್ರಹರ್ಕ್ಷತಾರಾಭರಣದ್ಯುವಕ್ಷಸಂ ವಿರಿಞ್ಚಲೋಕಸ್ಥಲಸನ್ಮುಖಾಮ್ಬುಜಾಮ್ ॥ ೩೦.೨೯ ॥

 

ವಿಕುಣ್ಠನಾಥಾಭಯಹಸ್ತಮಾದರಾನ್ಮೂಧ್ನಾ ವಹನ್ತೀಂ ವರಭಾರತಾಖ್ಯಾಮ್ ।

ನಿಶಮ್ಯ ತಾಮೀಕ್ಷ್ಯ ಸಮಸ್ತಲೋಕಾಃ ಪವಿತ್ರಿತಾ ವೇದಿಭವಾಮಿವಾನ್ಯಾಮ್ ॥ ೩೦.೩೦ ॥

 

ಅವಳ ಪಾದ ಪಾತಾಳದಲ್ಲಿತ್ತು. ನಿತಂಬ(ಕಟಿ )ಭೂಮಿಯಲ್ಲಿತ್ತು,

ಆಕಾಶದಲ್ಲಿ ದೇಹದ ನಡುಭಾಗವಿತ್ತು.

ಆಕೆ ತನ್ನ ಕೈಯಿಂದ ಎಲ್ಲಾ ದಿಕ್ಕನ್ನೂ  ವ್ಯಾಪಿಸಿದ್ದಳು.

ಗೃಹ, ನಕ್ಷತ್ರಗಳೇ ಆಗಿದ್ದವು ಅವಳ ಆಭರಣಗಳು,

ಸ್ವರ್ಗಲೋಕವೇ ಅವಳ ವಕ್ಷ,  ಬ್ರಹ್ಮಲೋಕದಲ್ಲಿ ಅವಳ ಮುಖ, ಪರಮಾತ್ಮನ ಅಭಯಹಸ್ತ ,

ಅವಳ ತಲೆಯಲ್ಲಾಗಿತ್ತು ಸ್ಥಿತ. ಭಾರತ ಎಂಬ ಹೆಸರಿನ ಈ  ಪಾಂಡವ ಕೀರ್ತಿನಾರಿಯನ್ನು,

ಕಂಡು ಪೂತರಾದರು ನೋಡಿದಂತೆ ಇನ್ನೊಬ್ಬ ದ್ರೌಪದಿಯನ್ನು.

 

[ಇದು ಭಾರತೀ ದೇವಿಯ ವ್ಯಾಪ್ತಿಯೂ,  ಹೌದು,ವಾಙ್ಮಯ ವ್ಯಾಪಿಸಿದ ಬಗೆಯೂ. ಮಹಾಭಾರತದ ಅರಿವು ಪಾತಾಳದಲ್ಲಿಯೂ ಇದೇ, ಭೂಮಿಯಲ್ಲಿಯೂ ಇದೇ, ಆಕಾಶದಲ್ಲಿಯೂ ಇದೇ, ಎಲ್ಲಾ ಕಡೆ ಮಹಾಭಾರತ ಎನ್ನುವುದು ಪ್ರಚಲಿತವಾಗಿದೆ].

 

ಪ್ರಪಾಲಯತ್ಸ್ವೇವ ಧರಾಂ ಸಕೃಷ್ಣೇಷ್ವದ್ಧೈವ ಪಾರ್ತ್ಥೇಷು ಕಲಿರ್ಬಲಿಶ್ಚ ।

ಸಪಾಪದೈತ್ಯೌ ಕ್ವಚ ರಾಷ್ಟ್ರವಿಪ್ಲವಂ ಸಞ್ಚಕ್ರತುಸ್ತಚ್ಛ್ರುತಮಾಶು ಪಾರ್ತ್ಥೈಃ ॥ ೩೦.೩೧ ॥

 

ಹೀಗೆ ಕೃಷ್ಣನಿಂದ ಕೂಡಿದ ಪಾಂಡವರು, ಭೂಮಿಯನ್ನು ಪಾಲಿಸುತ್ತಾ ಇದ್ದರು.

ಕಲಿ ಮತ್ತು ಬಲಿ ಎಂಬ ಇಬ್ಬರು ದೈತ್ಯರು , ಇತರ ಪಾಪಿಷ್ಠ ದೈತ್ಯರೊಂದಿಗೆ ಕೂಡಿದರು,

ರಾಷ್ಟ್ರ ವಿಪ್ಲವವನ್ನು ಉಂಟು ಮಾಡಿದರು. ಪಾಂಡವರು ಈ ಘಟನೆಯನ್ನು ಕೇಳಿದರು.

 

ನೃಪೇಣ ಕೃಷ್ಣೇನ ಚ ಸಾಧು ಚೋದಿತೋ ಭೀಮಸ್ತದಾ ತೌ ಸಗಣೌ ವಿಜಿತ್ಯ ।

ಬಲಿಂ ಪ್ರವಿದ್ರಾಪ್ಯ ಕಲಿಂ ನಿಬದ್ಧ್ಯ ಸಮಾನಯತ್ ಕೃಷ್ಣನೃಪೇನ್ದ್ರಯೋಃ ಪುರಃ ॥ ೩೦.೩೨ ॥

 

ಧರ್ಮರಾಜನಿಂದಲೂ, ಕೃಷ್ಣನಿಂದಲೂ ಚೆನ್ನಾಗಿ ಪ್ರಚೋದಿಸಲ್ಪಟ್ಟ ಭೀಮಸೇನನು,

ಕಲಿ-ಬಲಿಗಳನ್ನು ಅವರ ಗಣದೊಂದಿಗೆ ಗೆದ್ದು, ಬಲಿಯನ್ನು ಓಡಿಸಿದವನಾದನು.             

ಭೀಮಸೇನ ಕಲಿಯನ್ನು ಕಟ್ಟಿಹಾಕಿದ,         ಧರ್ಮಜ ಹಾಗೂ ಕೃಷ್ಣರೆದುರೆಳೆದು ತಂದ.

 

ಪಪ್ರಚ್ಛ ತಂ ಕೃಷ್ಣಪುರೋ ಯುಧಿಷ್ಠಿರ ಉದಾರಧೀಃ ।

ಕಲೇ ಕಿಮಿತಿ ಮೇ ರಾಷ್ಟ್ರಂ ವಿಪ್ಲಾವಯಸಿ ದುರ್ಮ್ಮತೇ ॥ ೩೦.೩೩ ॥

 

ಶ್ರೀಕೃಷ್ಣನ ಮುಂದೆ ಕಲಿಯನ್ನು ಕೇಳುತ್ತಾನೆ -ಪ್ರಜ್ಞಾವಂತ ಯುಧಿಷ್ಠಿರ,

‘ಎಲೈ ದುರ್ಬುದ್ಧಿಯ ಕಲಿಯೇ, ಏಕಾಗಿ ಹಾಳುಮಾಡುತ್ತಿರುವೆ ನನ್ನ ರಾಷ್ಟ್ರ '.

 

ಇತ್ಯುಕ್ತ ಆಹ ಕಾಲೋSಯಂ ದುರ್ಯ್ಯೋಧನನಿಪಾತನಮ್ ।

ಆರಭ್ಯ ಮಮ ತತ್ರ ತ್ವಂ ಬಲಾದಾಕ್ರಮ್ಯ ತಿಷ್ಠಸಿ ॥ ೩೦.೩೪ ॥

 

ತತೋ ಮಯಾ ಕೃತೋ ರಾಷ್ಟ್ರವಿಪ್ಲವಸ್ತೇ ನರಾಧಿಪ ।

ತಮಾಹ ರಾಜಾ ರಾಜ್ಞಾಂ ಹಿ ಬಲಾದ್ ರಾಜ್ಯಂ ಪ್ರತರ್ತ್ತತೇ ॥ ೩೦.೩೫ ॥

 

ಅಪಿ ಕಾಲಭವಂ ರಾಷ್ಟ್ರಂ ತ್ವದೀಯಂ ಮಾದೃಶೈರ್ನ್ನೃಪೈಃ ।

ಹ್ರಿಯತೇ ಬಲವದ್ಭಿರ್ಹಿ ರಾಜ್ಯಾಶಾ ತೇ ಕುತಸ್ತದಾ ॥ ೩೦.೩೬ ॥

 

ಈರೀತಿಯಾಗಿ ಯುಧಿಷ್ಠಿರನಿಂದ ಹೇಳಲ್ಪಟ್ಟ ಕಲಿ ಹೇಳುತ್ತಾನೆ-,

‘ದುರ್ಯೋಧನ ಬಿದ್ದಮೇಲಿನ ಕಾಲ ನನ್ನದು (ಕಲಿ ಕಾಲ) ತಾನೇ .

ಆದರೆ ನೀನು ನನ್ನ ಕಾಲದಲ್ಲಿ ನಡೆಸಿರುವೆ ಬಲಾತ್ಕಾರದಿಂದ ಆಕ್ರಮಣ ,

ನರಾಧಿಪನಾದ ಧರ್ಮರಾಜ, ಅದೇ ನನ್ನಿಂದ ನಿನ್ನ ರಾಷ್ಟ್ರವಿಪ್ಲವಕ್ಕೆ ಕಾರಣ’.

 

ಈರೀತಿಯಾಗಿ ಮಾತನಾಡುವ ಕಲಿಗೆ  ಧರ್ಮರಾಜ ಹೇಳುತ್ತಾನೆ-,

‘ರಾಜರ ಬಲದಿಂದಲೇ ರಾಜ್ಯವು ಪ್ರವೃತ್ತ ಆಗುವುದು ಸಹಜವೇನೇ.

ಇದು ನಿನ್ನ ಕಾಲ ಆಗಿರಬಹುದು,ಆದರೆ ನನ್ನ ಅಧೀನದ ರಾಜ್ಯಭಾರ,

ಹೀಗಿರುವಾಗ ನಿನಗಿರುವುದಿಲ್ಲ ಆಸೆಪಡುವ ಯಾವುದೇ ಹಕ್ಕಿನಾಧಾರ.

 

‘ಕಾಲೋ ವಾ ಕಾರಣಂ ರಾಜ್ಞೋ ರಾಜಾ ವಾ ಕಾಲಕಾರಣಮ್ ।

ಇತಿ ತೇ ಸಂಶಯೋ ಮಾ ಭೂದ್ ರಾಜಾ ಕಾಲಸ್ಯ ಕಾರಣಮ್’ ॥ ೩೦.೩೭ ॥

 

‘ಕಾಲ ರಾಜನಿಗೆ ಕಾರಣವೋ, ರಾಜ ಕಾಲಕ್ಕೆ ಕಾರಣವೋ ಎಂಬ ಸಂಶಯ ಬೇಡ.

ಯಾವ ರೀತಿಯ ರಾಜ ಇರುತ್ತಾನೋ, ಹಾಗೇ ಹಿಡಿಯುತ್ತದೆ ಕಾಲವು ತನ್ನ ಜಾಡ.

 

ತಮುವಾಚ ಕಲಿಃ ಕಾಲೇ ಮದೀಯೇ ತ್ವಾದೃಶಃ ಕುತಃ ।

ರಾಜಾನಂ ಪೂರ್ವಮಾವಿಶ್ಯ ವಿಪ್ರಾಂಶ್ಚ ಸ್ಯಾಮಹಂ ನೃಪ ॥ ೩೦.೩೮ ॥

 

ಈರೀತಿಯಾಗಿ ಹೇಳಿದಾಗ ಕಲಿ ಧರ್ಮರಾಜನಿಗೆ ಹೇಳುತ್ತಾನೆ- ,

‘ನನ್ನ ಕಾಲದಿ ನೀವೇಕೆ ಇದ್ದೀರಿ? ಮೊದಲು ರಾಜರಲ್ಲಿ ಪ್ರವೇಶಿಸುತ್ತೇನೆ.

ಆನಂತರ ಬ್ರಾಹ್ಮಣರಲ್ಲಿ ನನ್ನ ಪ್ರವೇಶ, ಆಗ ಎಲ್ಲವೂ ತಾನೇ ಆಗುತ್ತದೆ ನನ್ನ ವಶ.

 

ವಾಸುದೇವಸಹಾಯೇಷು ತೇಜೋ ಯುಷ್ಮಾಸು ಮೇ ನಹಿ ।

ಕ್ವ ರಾಜಾSಸಾವೃತೇ ಯುಷ್ಮಾನ್ ಯೋ ಮಯಾ ನಾಭಿಭೂಯತೇ ॥ ೩೦.೩೯ ॥

 

ಮದೀಯಕಾಲೇ ಭೂಪಾಲ ವಿಪ್ರವೇದವಿರೋಧಿನಿ ।

ಮದ್ದೃಷ್ಟಿಪಾತೇ ಕ್ವ ಗುಣಾಃ ಕ್ವ ವೇದಾಃ ಕ್ವ ಸುಯುಕ್ತಯಃ ॥ ೩೦.೪೦ ॥

 

ನಿಮಗಿದೆ ವಾಸುದೇವನ ಸಹಾಯ,  ಅದರಿಂದ ನನ್ನ ತೇಜಸ್ಸಾಗಿದೆ ಮಾಯ.

ಬ್ರಾಹ್ಮಣರಿಗೆ, ವೇದಗಳಿಗೆ ವಿರುದ್ಧವಾಗಿರುವ ನನ್ನ ಕಾಲದಲ್ಲಿ,

ನಿಮ್ಮನ್ನು ಬಿಟ್ಟು ಇನ್ಯಾವ ರಾಜರು ನನಗೆ ವಶವಾಗದೇ ಉಳಿವರಿಲ್ಲಿ?

ನನ್ನ ದೃಷ್ಟಿ ಬಿದ್ದ ಯಾವುದೇ ತಾಣ, ಅಲ್ಲಿನ್ಯಾವ ವೇದ? ಯುಕ್ತಿ? ಗುಣ?’.

 

 

ಜಗಾದ ನೃಪತಿಃ ಸತ್ಯಂ ಕಲೇ ವಕ್ಷ್ಯನೃತೋSಪಿ ಸನ್ ।

ಮೋಚಯೇ ತ್ವರ್ತ್ತವಚನಾದ್ ಯದಾSಸ್ಮತ್ಸನ್ತತೇಃ ಪರಮ್ ॥ ೩೦.೪೧ ॥

 

ವಿಲುಮ್ಪಸ್ಯಖಿಲಾನ್ ಧರ್ಮ್ಮಾನ್ ಕರಂ ತತ್ರಾಪಿ ನೋSರ್ಪ್ಪಯ ।

ಸೀಮಾSSಧಿರ್ಬಹುವಾಕ್ಯಂ ಚ ತುಲಾಮಾನೇ ಚ ಮೇ ಕರಃ ॥ ೩೦.೪೨ ॥

 

ಈರೀತಿ ಕಲಿಯು ಹೇಳಿದಾಗ ರಾಜನಾದ ಯುಧಿಷ್ಠಿರನು ಹೇಳುತ್ತಾನೆ – ,

‘ಕಲಿಯೇ, ನೀನು ಸುಳ್ಳೇ ಮೈವೆತ್ತು ಬಂದಿದ್ದರೂ ನುಡಿಯುತ್ತಿರುವೆ ಸತ್ಯವನ್ನೆ.                    

ಅದಕ್ಕಾಗಿ ನಿನ್ನನ್ನು ಮಾಡುತ್ತೇನೆ ಬಿಡುಗಡೆ ,

ನಮ್ಮ ಸಂತತಿ ಮುಗಿದ ಬಳಿಕವೇ ನಿನ್ನ ನಡೆ.

ಆದರೆ ನಮ್ಮ ಸಂತತಿ ಮುಗಿದಮೇಲೂ ಕೂಡಾ ನೀನು ನಮಗೆ ನಾಲ್ಕು ವಿಧದ ಕರವನ್ನು ನೀಡತಕ್ಕದ್ದು.

ಗಡಿ ಅಥವಾ ಅಡವಿಟ್ಟ ವಸ್ತು,  ಬಹುಜನರ ಸಾಕ್ಷಿ, ತುಲಾ ಹಾಗೂ ಮಾನ ಇವುಗಳಲ್ಲಿ ನೀನು ಪ್ರವೇಶಿಸಕೂಡದು. ಇವುಗಳನ್ನು  ಕರವಾಗಿ ನೀನು ನನಗೆ ಕೊಡತಕ್ಕದ್ದು.’

 

ನೈವಾತಿಕ್ರಮಮೇತೇಷಾಂ ಕುರು ಸರ್ವಾತ್ಮನಾ ಕ್ವಚಿತ್ ।

ತಮಾಹ ಭಗವಾನ್ ಕೃಷ್ಣೋ ಯಾವತ್ ಪಾಣ್ಡವಸನ್ತತಿಃ ॥ ೩೦.೪೩ ॥

 

ತಾವನ್ನ ತೇ ಭವೇಚ್ಛಕ್ತಿಃ ಪ್ರವೃತ್ತಸ್ಯಾಪಿ ಭೂತಳೇ ।

ಪಾಣ್ಡವೇಭ್ಯಃ ಪರಂ ಯಾವತ್ ಕ್ಷೇಮಕಃ ಕ್ರಮವರ್ದ್ಧಿತಾ ॥ ೩೦.೪೪ ॥

 

ಯಾವುದೇ ರೀತಿಯಿಂದ ಇವುಗಳಲ್ಲಿ ತಲೆ ತೂರಿಸುವಂತಿಲ್ಲ ಎಂದು ಧರ್ಮರಾಜ ಹೇಳಿದಾಗ ಶ್ರೀಕೃಷ್ಣ ಹೇಳುತ್ತಾನೆ- ,

‘ಎಲ್ಲಿಯ ತನಕ ಪಾಂಡವ ಸಂತತಿ ಇರುತ್ತದೋ ಅಲ್ಲಿಯ ತನಕ ನೀನು ಭೂಮಿಯಲ್ಲಿ ಪ್ರವೃತ್ತನಾದರೂ ಶಕ್ತಿಹೀನನೇ.

ಪಾಂಡವರ ಸಂತತಿ ಕೊನೆಯಾದ ಮೇಲೆ,

ಅಂದರೆ ಕ್ಷೇಮಕನ ಅಂತ್ಯವಾದ ಮೇಲೆ, ಕಾಲಾನಂತರ ನಿನಗೆ ಕ್ರಮವಾಗಿ ಶಕ್ತಿ, ವೃದ್ಧಿಯಾಗುವಂತಿದೆ ವಿಧಿಯ ನಿಯತಿ.

 

ಕ್ಷೇಮಕಾತ್ ಪರತಃ ಪೂರ್ತ್ತಿಂ ಶಕ್ತಿಸ್ತೇ ಯಾಸ್ಯತಿ ದ್ಧ್ರುವಮ್ ।

ನ ದ್ರಷ್ಟವ್ಯಂ ಭೂತಳಂ ತೇ ಕುತ ಏವ ಸ್ಪೃಶೇರ್ಭುವಮ್ ॥ ೩೦.೪೫ ॥

 

ಯಾವತ್ ಪಾರ್ಥಾ ಅಹಂ ಚಾತ್ರ ತತೋ ಭುವಿ ಪದಂ ಕುರು ।

ಇತ್ಯುಕ್ತೋ ವಾಸುದೇವೇನ ಮೋಚಿತೋ ಧರ್ಮ್ಮಜೇನ ಚ ॥ ೩೦.೪೬ ॥

 

ತಾನ್ ಪ್ರಣಮ್ಯ ಯಯೌ ಪಾರೇ ಸಮುದ್ರಸ್ಯಾಶ್ರಯದ್ ಗುಹಾಮ್ ।

ಪಾರ್ತ್ಥಾಶ್ಚ ಕೃಷ್ಣಸಹಿತಾ ರಕ್ಷನ್ತಃ ಕ್ಷ್ಮಾಂ ಮುದಂ ಯಯುಃ ॥ ೩೦.೪೭ ॥

 

ಕ್ಷೇಮಕ ರಾಜನ ನಂತರ ನಿನ್ನ ಶಕ್ತಿ ಸಂಪೂರ್ಣವಾಗಿ  ನಿನಗೆ ಬರುವುದು. ಪಾಂಡವರು,ನಾನು ಭೂಮಿಯಲ್ಲಿರುವ ತನಕ ಭೂಮಿ ಬಗ್ಗೆ ನೀ ಯೋಚಿಸಬಾರದು. ಇನ್ನು ಭೂಮಿಯ ಮುಟ್ಟುವ ಮಾತೆಂತು? ಆನಂತರ ಭೂಮಿಯ ಮೇಲೆ ಹೆಜ್ಜೆ ಇಡು. ಈರೀತಿಯಾಗಿ ಪರಮಾತ್ಮ ಹೇಳಿದಾಗ, ಧರ್ಮರಾಜ ಕಲಿಯನ್ನು ಬಿಟ್ಟನಾಗ.

 

ಆಗ ಕಲಿ ಅವರೆಲ್ಲರಿಗೂ ನಮಸ್ಕರಿಸಿ ಅಲ್ಲಿಂದ ತೆರಳಿದ ,

ಸಮುದ್ರದಾಚೆಯ ದಡದ ದ್ವೀಪದಲ್ಲಿರುವ ಗುಹೆ ಸೇರಿದ.

ಇತ್ತ ಪಾಂಡವರು ಶ್ರೀಕೃಷ್ಣನಿಂದ ಕೂಡಿ, ಭೂರಕ್ಷಿಸಿದವರಿಗೆ, ಆನಂದದ ಕೋಡಿ.

 

ಏವಂ ಪಾರ್ತ್ಥಾನ್ ಪ್ರತಿಷ್ಠಾಪ್ಯ ಶಕ್ರಪ್ರಸ್ಥೇ ತು ಸಾರ್ಜ್ಜುನಃ ।

ಕ್ರೀಡನ್ ದಿವ್ಯಾಃ ಕಥಾಃ ಪ್ರಾಹ ಪುತ್ರಶೋಕಾಪನುತ್ತಯೇ ॥ ೩೦.೪೮ ॥

 

ಈರೀತಿ ಶ್ರೀಕೃಷ್ಣಪರಮಾತ್ಮ ಚೆನ್ನಾಗಿ ಪಾಂಡವರನ್ನು ನೆಲೆಗೊಳಿಸಿದ,

ಅರ್ಜುನನಿಂದ ಕೂಡಿಕೊಂಡು ಇಂದ್ರಪ್ರಸ್ಥದಲ್ಲಿದ್ದು, ವಿಹರಿಸುತ್ತಿದ್ದ.

ಅರ್ಜುನನ ಪುತ್ರಶೋಕ ನಿವಾರಣೆಗಾಗಿ , ಅಲೌಕಿಕ ಕಥೆಗಳ ಹೇಳುತ್ತಿದ್ದ ಗೀತಾಯೋಗಿ.

 

ಗೀತೋಕ್ತಂ ವಿಸ್ಮೃತಂ ಚಾಸ್ಮೈ ಪುನರ್ವಿಸ್ತರತೋSವದತ್ ।

ವಾಣೀ ಪ್ರಾಣೋ ವಾಸುದೇವ ಇತ್ಯೇತೈರಖಿಲಂ ತತಮ್ ॥ ೩೦.೪೯ ॥

 

ಗೀತೆಯಲ್ಲಿ ತಾನು ಹೇಳಿರುವುದರಲ್ಲಿ ಅರ್ಜುನ ಮರೆತಿರುವುದನ್ನು ,

ಮತ್ತೆ ಶ್ರೀಕೃಷ್ಣ ವಿಸ್ತಾರವಾಗಿ ಅರ್ಜುನನಿಗೆ ವಿವರಿಸಿ ಹೇಳಿದನು.

ಇಡೀ ಜಗತ್ತು ಭಾರತೀದೇವಿ, ಮುಖ್ಯಪ್ರಾಣ, ವಾಸುದೇವ,

ಎನ್ನುವ ಈ ಮೂವರಿಂದ ವ್ಯಾಪಿಸಲ್ಪಟ್ಟಿದೆ ಎಂಬ ಭಾವ.

 

 

ಸರ್ವೋತ್ತಮತ್ವಮೇತೇಷಾಂ ಸರ್ವಮೇತದ್ವಶೇ ಜಗತ್ ।

ಉತ್ತರೋತ್ತರಮೇತೇSಪಿ ಗುಣೋಚ್ಚಾಸ್ತದ್ವಶೇSಪರೇ ॥ ೩೦.೫೦ ॥

 

ಈ ಮೂವರಿಗಿದೆ ಎಲ್ಲರಿಗಿಂತ ಉತ್ತಮತ್ವ , ಈ ಜಗತ್ತು ಇವರ ಅಧೀನದಲ್ಲಿರುವ ತತ್ವ.

ಉತ್ತರೋತ್ತರ ಇವರು ಗುಣದಲ್ಲಿ ಅಧಿಕರು, ಮತ್ತು ಅವರ ವಶದಲ್ಲಿ ಉಳಿದವರಿರುವರು.

 

ಇತ್ಥಂ ಹರೇರ್ವಶೇ ಸರ್ವಗುಣಪೂರ್ಣ್ಣಶ್ಚ ಸ ಪ್ರಭುಃ ।

ಏಕ ಏವ ನಚಾನ್ಯೋSಸ್ತಿ ಪ್ರಾಣೋಚ್ಚಾ ತದಧೋ ರಮಾ ॥ ೩೦.೫೧ ॥

 

ಪರಮಾತ್ಮ ಎಲ್ಲಾ ಗುಣಗಳಿಂದ ಪೂರ್ಣ , ಅವನಂತೆ ಇನ್ನೊಬ್ಬನಿಲ್ಲ ಎಂಬುದೇ ಕಾರಣ. ಉಳಿದವರೆಲ್ಲರೂ ಕೂಡಾ ಭಗವಂತನ ವಶ , ಪ್ರಾಣಗೆತ್ತರದ ಲಕ್ಷ್ಮಿಯದು ಹರಿಯ ಕೆಳವಾಸ.

 

ಸ ಹುತಾಶ ಇತಿ ಪ್ರೋಕ್ತೋ ಹುತಮತ್ತ್ಯಖಿಲಂ ಯತಃ ।

ವಾಕ್ಪ್ರಾಣಮದ್ಧ್ಯಗೋ ನಿತ್ಯಂ ಧಾರಯತ್ಯಖಿಲಂ ಜಗತ್ ॥ ೩೦.೫೨ ॥

 

ಅಂತಹ ಪರಮಾತ್ಮನನ್ನು ಕರೆಯುತ್ತಾರೆ ಹುತಾಶಃ ,

(ಪ್ರಾಣ ಮತ್ತು ಭಾರತೀಯರಿಂದ ಕೊಡಲ್ಪಡುವ ಈ ಪ್ರಪಂಚವನ್ನು ಉಣ್ಣುವವ ಹುತಾಶಃ).

ಮಾತು ಮತ್ತು ಕ್ರಿಯೆಯಿಂದ ಭಗವಂತ ಇಡೀ ಪ್ರಪಂಚದಲ್ಲಿ  ವ್ಯಾಪ್ತ.

(ಮಾತಿಗಭಿಮಾನಿ ಭಾರತೀಯಾದರೆ, ಕ್ರಿಯೆಗೆ ಅಭಿಮಾನಿ ಮುಖ್ಯಪ್ರಾಣ.

ಅವರಿಬ್ಬರೂ ಕೊಡುವ ಜಗದ ತುತ್ತನ್ನು ಇಟ್ಟುಕೊಳ್ಳುವವನು ನಾರಾಯಣ).

ಅಂತಹ ಭಗವಂತ ಇಡೀ ಪ್ರಪಂಚವನ್ನು ಹೊತ್ತು ನಿಂತಿರುವ ಶಕ್ತ.

 

ಸ ಈಶೋ ಬ್ರಹ್ಮರುದ್ರಾದ್ಯಾ ಜೀವಾ ಏವ ಪ್ರಕೀರ್ತ್ತಿತಾಃ ।

ಯೇ ತಸ್ಯಾನಾದಿಸದ್ಭಕ್ತಾ ಮುಕ್ತಿಯೋಗ್ಯಾ ಹಿ ತೇ ಸ್ಮೃತಾಃ ॥ ೩೦.೫೩ ॥

 

ಇಂತಹ ನಾರಾಯಣನು ಎಲ್ಲರ ಒಡೆಯ. ಬ್ರಹ್ಮ-ರುದ್ರಾದಿಗಳೂ‘ಜೀವರೇ’ಎಂಬ ಭಾವ. ಯಾರು ಅನಾದಿಕಾಲದಿಂದ ಪರಮಾತ್ಮನ ಭಕ್ತರಾಗಿದ್ದಾರೆ, ಅವರೆಲ್ಲರೂ ಮುಕ್ತಿಗೆ ಯೋಗ್ಯರು ಎಂದು ಹೇಳಲ್ಪಟ್ಟಿದ್ದಾರೆ.

 

ಅನಾದಿದ್ವೇಷಿಣೋ ಯೇSಸ್ಮಿಂಸ್ತಮೋಯೋಗ್ಯಾಃ ಸುಪಾಪಿನಃ ।

ಮಿಶ್ರಾ ಮದ್ಧ್ಯಾ ಇತಿ ಜ್ಞೇಯಾಃ ಸಂಸಾರಪರಿವರ್ತ್ತಿನಃ ॥ ೩೦.೫೪ ॥

 

ಪರಮಾತ್ಮನನ್ನು ಅನಾದಿಕಾಲದಿಂದ ದ್ವೇಷಮಾಡುವವರು,

ಪಾಪಿಗಳು ಮತ್ತು ತಮಸ್ಸಿಗೆ ಹೋಗಲು ಯೋಗ್ಯರಾದವರು.

ಸ್ವಲ್ಪ ದ್ವೇಷ, ಸ್ವಲ್ಪ ಭಕ್ತಿಯವರು ಮಧ್ಯಮರು   ಎನಿಸಿಕೊಳ್ಳುವರು.

ಅಂತವರು ಸಂಸಾರದಲ್ಲಿಯೇ ಮತ್ತೆ ಮತ್ತೆ ಸುತ್ತುತ್ತಿರುವವರು.

 

ಏವಂ ಜೀವಾಸ್ತ್ರಿಧಾ ಪ್ರೋಕ್ತಾ ಭವನ್ತ್ಯೇತೇ ನಚಾನ್ಯಥಾ ।

ತಾರತಮ್ಯಂ ಚ ವಿಜ್ಞೇಯಂ ಲಿಙ್ಗೈರ್ದ್ದೈಹಿಕಮಾನಸೈಃ ॥ ೩೦.೫೫ ॥

 

ಈರೀತಿಯಾಗಿ ಈ ಬ್ರಹ್ಮಾಂಡದಲ್ಲಿರುವ ಎಲ್ಲಾ ತರದ ಜೀವರೂ ,

ಕೂಡಾ ಮೂರೇ ರೀತಿಯಾಗಿರುವುದು ಹೊರತು ಬೇರೆ ಇಲ್ಲ ಯಾರೂ.

ಅವರ ದೈಹಿಕ ಮತ್ತು ಮಾನಸಿಕ ಲಕ್ಷಣ, ತಾರತಮ್ಯವ ತಿಳಿಸಿಕೊಡುವ ಮಾಪನ.

 

ವಿಷ್ಣೋರ್ಲ್ಲಿಙ್ಗಾನುಸಾರಿತ್ವತಾರತಮ್ಯಾತ್ ತದೀಕ್ಷಣಮ್ ।

ವಿಷ್ಣೋಸ್ತದನುಗಾನಾಂ ಚ ಪ್ರೀತಿಕೃದ್ ಧರ್ಮ್ಮ ಈರಿತಃ ॥ ೩೦.೫೬ ॥

 

ಅಧರ್ಮ್ಮೋSನ್ಯ ಇಯಂ ನಿಷ್ಠಾ ಪ್ರಲಾಪಃ ಕಿಂ ಕರಿಷ್ಯತಿ ।

ಏವಮಾದ್ಯನುಶಾಸ್ಯಾಜಃ ಪಾರ್ತ್ಥಂ ಪಾರ್ತ್ಥೈಃ ಸುಸತ್ಕೃತಃ  ॥ ೩೦.೫೭ ॥

 

ಕಥಞ್ಚಿತ್ ತಾನವಸ್ಥಾಪ್ಯ ಸುದೂರಾನುಗತಾನ್ ಪ್ರಭುಃ ।

ಸುಭದ್ರಾಸಹಿತಃ ಪ್ರಾಯಾದ್ ಯಾನೇನ ದ್ವಾರಕಾಪುರೀಮ್ ॥ ೩೦.೫೮ ॥

 

ಪರಮಾತ್ಮನನ್ನು ಮುಂದೆ ಇಟ್ಟುಕೊಂಡು, ಕಾಣಬೇಕು ಭಕ್ತಿಯ ತಾರತಮ್ಯದ ಜಾಡು .

ನಾರಾಯಣನಿಗೆ ಮತ್ತು ಅವನ ಭಕ್ತರಿಗೆ ಯಾವುದರಿಂದ ಪ್ರೀತಿ, ಉಂಟುಮಾಡಲ್ಪಡುತ್ತದೋ,

ಅದುವೇ ಧರ್ಮವೆಂಬುದು ನೀತಿ.ಪ್ರೀತಿಯನ್ನು ಉಂಟುಮಾಡದೇ ಇರುವುದೆಲ್ಲ ಅಧರ್ಮ.

ಇದೇ ನಿಶ್ಚಿತ , ಉಳಿದದ್ದೆಲ್ಲವೂ ವ್ಯರ್ಥ ಎಂಬ ಮರ್ಮ.

ಇವೇ ಮೊದಲಾಗಿ ಅರ್ಜುನನಿಗೆ ಶ್ರೀಕೃಷ್ಣಪರಮಾತ್ಮನು ಉಪದೇಶಿಸಿದ, ಪಾಂಡವರಿಂದ ಸತ್ಕೃತನಾಗಿ, ತನ್ನ ಬೀಳ್ಕೊಡಲು ಬಹಳ ದೂರ ಹಿಂಬಾಲಿಸಿದ, ಎಲ್ಲರನ್ನೂ  ಹೇಗೋ ನಿಲ್ಲುವಂತೆ ಮಾಡಿದ.

ಸುಭದ್ರೆಯಿಂದ ಕೂಡಿಕೊಂಡು ಶ್ರೀಕೃಷ್ಣ ರಥವನ್ನೇರಿ ದ್ವಾರಕಾ ನಗರಕ್ಕೆ ಮರಳಿದ.

 

No comments:

Post a Comment

ಗೋ-ಕುಲ Go-Kula