Saturday 29 June 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 30 - 33

ದೈತ್ಯಂ ಸ ವತ್ಸತನುಮಪ್ರಮಯಃ ಪ್ರಗೃಹ್ಯ ಕಂಸಾನುಗಂ ಹರವರಾದಪರೈರವದ್ಧ್ಯಮ್ ।
ಪ್ರಕ್ಷಿಪ್ಯ ವೃಕ್ಷಶಿರಸಿ ನ್ಯಹನದ್ ಬಕೋsಪಿ ಕಂಸಾನುಗೋsಥ ವಿಭುಮಚ್ಯುತಮಾಸಸಾದ ॥೧೩.೩೦॥
ಯಾರಿಂದಲೂ ತಿಳಿಯಲಾಗದಂಥ ಸಂಪೂರ್ಣ,
ಅವನು ಹೋಲಿಸಲಾಗದ ಪರಾಕ್ರಮದ ಶ್ರೀಕೃಷ್ಣ.
ರುದ್ರವರದಿಂದ -ಇನ್ಯಾರಿಂದಲೂ ಕೊಲ್ಲಲಾಗದ ಕಂಸನ ಭೃತ್ಯ,
ಕರುವಿನಂತೆಯೇ ಶರೀರ ಹೊಂದಿ ಬಂದಿದ್ದನವ ಆ ದೈತ್ಯ.
ಶ್ರೀಕೃಷ್ಣ ಮರದ ಮೇಲೆ ಎಸೆದು ಅವನ ಕೊಂದ,
ಕಂಸಭೃತ್ಯ ಬಕನೂ ಸರ್ವಶಕ್ತ ಕೃಷ್ಣನ ಬಳಿ ಬಂದ.

ಸ್ಕನ್ದಪ್ರಸಾದಕವಚಃ ಸ ಮುಖೇ ಚಕಾರ ಗೋವಿನ್ದಮಗ್ನಿವದಮುಂ ಪ್ರದಹನ್ತಮುಚ್ಚೈಃ;
ಚಚ್ಛರ್ದ್ದ ತುಣ್ಡಶಿರಸೈವ ನಿಹನ್ತುಮೇತಮಾಯಾನ್ತಮೀಕ್ಷ್ಯ ಜಗೃಹೇsಸ್ಯ ಸ ತುಣ್ಡಮೀಶಃ ॥೧೩.೩೧॥   
ಆ ಬಕ ಸ್ಕಂದಾನುಗ್ರಹದ ಕವಚ ಹೊಂದಿದ್ದ,
ತನ್ನ ಬಾಯಿಂದ ಶ್ರೀಕೃಷ್ಣನನ್ನೇ ಅವ ನುಂಗಿದ.
ಬೆಂಕಿಯಂತೆ ಚೆನ್ನಾಗಿ ಅವನೊಳಗೆ ಸುಡುತ್ತಿದ್ದ ಶ್ರೀಕೃಷ್ಣ,
ಬಕನಿಂದ ವಾಂತಿ ಮಾಡಿಸಿದ ಕೃಷ್ಣ ತೀವ್ರಗೊಳಿಸಿ ಉಷ್ಣ.
ಬಕ ತನ್ನ ಕೊಕ್ಕಿನಿಂದ ಕೃಷ್ಣನ ಕೊಲ್ಲಲು ಬಂದ,
ಹಾಗೆ ಬಂದ ಬಕನ ಕೊಕ್ಕನ್ನು ಶ್ರೀಕೃಷ್ಣ ಹಿಡಿದ.

ತುಣ್ಡದ್ವಯಂ ಯದುಪತಿಃ ಕರಪಲ್ಲವಾಭ್ಯಾಂ ಸಙ್ಗೃಹ್ಯ ಚಾsಶು ವಿದದಾರ ಹ ಪಕ್ಷಿದೈತ್ಯಮ್ ।
ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ  ಸಾಯಂ ಯಯೌ ವ್ರಜಭುವಂ ಸಹಿತೋsಗ್ರಜೇನ ॥೧೩.೩೨॥
ಯದುಪತಿ ಶ್ರೀಕೃಷ್ಣ ತನ್ನೆರಡು ಕೈಗಳಿಂದ,
ಅವನ ಕೊಕ್ಕೆಗಳ ಹಿಡಿದು ಸೀಳಿದ.
ಬ್ರಹ್ಮಾದಿಗಳ ಹೂಮಳೆ ಸ್ತೋತ್ರಗಳಿಂದ ವಂದಿತನಾಗಿ
ಶ್ರೀಕೃಷ್ಣ ವೃಂದಾವನಕ್ಕೆ ತೆರಳಿದ ತನ್ನ ಅಣ್ಣನ ಸಮೇತನಾಗಿ.

ಏವಂ ಸ ದೇವವರವನ್ದಿತಪಾದಪದ್ಮೋ ಗೋಪಾಲಕೇಷು ವಿಹರನ್ ಭುವಿ ಷಷ್ಠಮಬ್ದಮ್ ।
ಪ್ರಾಪ್ತೋ ಗವಾಮಖಿಲಪೋsಪಿ ಸ ಪಾಲಕೋsಭೂದ್ ವೃನ್ದಾವನಾನ್ತರಗಸಾನ್ದ್ರಲತಾವಿತಾನೇ ॥೧೩. ೩೩॥
ಈ ರೀತಿಯಾಗಿ ಶ್ರೇಷ್ಠ ದೇವತೆಗಳಿಂದ,
ಶ್ರೀಕೃಷ್ಣಪಾದಕಮಲಗಳವು ಸದಾವಂದ್ಯ.
ಗೋಪಾಲಕರೊಡನೆ ಆಡುತ್ತಾ ವಿವಿಧ ಆಟ,
ಭುವಿಯಲ್ಲಿ ಕೃಷ್ಣ ತನ್ನ ಆರನೇ ವರ್ಷಕ್ಕೆ ಕಾಲಿಟ್ಟ.
ತಾನಾಗಿದ್ದರೂ ಸರ್ವಜಗದ ಸರ್ವಕಾಲದ ಸರ್ವಪಾಲಕ,
ಬಳ್ಳಿಭರಿತ ವೃಂದಾವನಮಧ್ಯ ಕಂಡನಾಗಿ  ಗೋಪಾಲಕ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 26 - 29


ವೃನ್ದಾವನಯಿಯಾಸುಃ ಸ  ನನ್ದಸೂನುರ್ಬೃಹದ್ವನೇ ।
ಸಸರ್ಜ್ಜ ರೋಮಕೂಪೇಭ್ಯೋ ವೃಕಾನ್ ವ್ಯಾಘ್ರಸಮಾನ್ ಬಲೇ ॥೧೩.೨೬॥
ನಂದಗೋಪನ ಮಗನಾಗಿರುವ ಶ್ರೀಕೃಷ್ಣ,
ಗೋಕುಲ ಬಿಟ್ಟು ವೃಂದಾವನಕ್ಕೆ ಹೋಗಲಿಚ್ಛೆ ಪಟ್ಟ.
ಅದಕ್ಕಾಗಿ ತೋರಲೆಂದು ಪ್ರಬಲ ಕಾರಣ,
ನಿರ್ಮಿಸಲಿಚ್ಛಿಸಿದ ಭಯದ ವಾತಾವರಣ.
ಆ ಬೃಹದ್ವನದಲ್ಲಿ ತನ್ನ ರೋಮಕೂಪದಿಂದ,
ಹುಲಿಸದೃಶ ಅಸಂಖ್ಯ ತೋಳಗಳ ಸೃಷ್ಟಿ ಮಾಡಿದ.
ಅನೇಕಕೋಟಿಸಙ್ಘೈಸ್ತೈಃ ಪೀಡ್ಯಮಾನಾ ವ್ರಜಾಲಯಾಃ ।
ಯಯುರ್ವೃನ್ದಾವನಂ ನಿತ್ಯಾನನ್ದಮಾದಾಯ ನನ್ದಜಮ್ ॥೧೩.೨೭॥
ಎಲ್ಲಿ ನೋಡಿದರೂ ಕೋಟಿಕೋಟಿ ತೋಳಗಳ ಹಿಂಡು,
ಭಯಪೀಡಿತವಾಯಿತು ಗೋಕುಲವಾಸಿಗಳ ಆ  ದಂಡು.
ಕರೆದುಕೊಂಡು ನಿತ್ಯಾನಂದನಾದ ನಂದಪುತ್ರ ಕೃಷ್ಣನ,
ಗೋಕುಲವಾಸಿಗಳು ವಲಸೆಹೋಗಿ ಸೇರಿದರು ವೃಂದಾವನ.

ಇನ್ದಿರಾಪತಿರಾನನ್ದಪೂರ್ಣ್ಣೋ ವೃನ್ದಾವನೇ ಪ್ರಭುಃ ।
ನನ್ದಯಾಮಾಸ ನನ್ದಾದೀನುದ್ದಾಮತರಚೇಷ್ಟಿತೈಃ ॥೧೩.೨೮॥
ಆನಂದಪೂರ್ಣ ಸರ್ವಸಮರ್ಥ ಇಂದಿರಾಪತಿ ಗೋವಿಂದ,
ತನ್ನ ಉತ್ಕೃಷ್ಟ ಲೀಲೆಗಳಿಂದ ನಂದಾದಿಗಳಿಗೆ ನೀಡಿದ ಆನಂದ.

ಸ ಚನ್ದ್ರತೋ ಹಸತ್ಕಾನ್ತವದನೇನೇನ್ದುವರ್ಚ್ಚಸಾ ।
ಸಂಯುತೋ ರೌಹಿಣೇಯೇನ ವತ್ಸಪಾಲೋ ಬಭೂವ ಹ ॥೧೩.೨೯॥
ಚಂದ್ರಕಾಂತಿಗೂ ಮೀರಿದ ಮುಗುಳುನಗುವಿನಿಂದ,
ಶ್ರೀಕೃಷ್ಣನದು ಮನೋಹರವಾದ ಮುಖದ ಚೆಂದ.
ಚಂದ್ರಕಾಂತಿಯ ಬಲರಾಮನ ಕೂಡಿಕೊಂಡು,
ಮೇಯಿಸತಕ್ಕವನಾದ ಆಕಳಕರುಗಳ ಹಿಂಡು.

Tuesday 18 June 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 19 - 25

ಸುತಸ್ಯ ಮಾತೃವಶ್ಯತಾಂ ಪ್ರದರ್ಶ್ಯ ಧರ್ಮ್ಮಮೀಶ್ವರಃ ।
ಬಭಞ್ಜ ತೌ ದಿವಿಸ್ಪೃಶೌ ಯಮಾರ್ಜ್ಜುನೌ ಸುರಾತ್ಮಜೌ ॥೧೩.೧೯॥
ಶ್ರೀಕೃಷ್ಣ ತೋರಿದ ತಾಯಿಗೆ ವಶವಾಗುವುದು ಮಗನ ಧರ್ಮ,
ಮೂಲದಿ ಕುಬೇರಪುತ್ರರಾಗಿದ್ದ ಮತ್ತೀಮರಗಳ ಕಿತ್ತ ಮರ್ಮ.
ಗಗನಚುಂಬೀ ಅವಳಿಮತ್ತೀಮರಗಳ ಮುರಿದ ಬಾಲ ಶ್ಯಾಮ.

ಪುರಾ ಧುನಿಶ್ಚುಮುಸ್ತಥಾsಪಿ ಪೂತನಾಸಮನ್ವಿತೌ ।
ಅನೋಕ್ಷಸಂಯುತೌ ತಪಃ ಪ್ರಚಕ್ರತುಃ ಶಿವಾಂ ಪ್ರತಿ ।
ತಯಾ ವರೋsಪ್ಯವದ್ಧ್ಯತಾ ಚತುರ್ಷು ಚ ಪ್ರಯೋಜಿತಃ ॥೧೩.೨೦॥
ಹಿಂದೆ ದುನಿ ಮತ್ತು ಚುಮು ಎಂಬ ರಕ್ಕಸರಿಬ್ಬರು,
ಪೂತನೆ ಶಕಟನೊಂದಿಗೆ ಸೇರಿ ತಪವ ಮಾಡಿದ್ದರು.
ಪಾರ್ವತಿ ಕುರಿತ ತಪದಿಂದ ಅವಧ್ಯತ್ವ ಪಡೆದಿದ್ದರು.

ಅನನ್ತರಂ ತೃಣೋದ್ಭೃಮಿಸ್ತಪೋsಚರದ್ ವರಂ ಚ ತಮ್ ।
ಅವಾಪ ತೇ ತ್ರಯೋ ಹತಾಃ ಶಿಶುಸ್ವರೂಪವಿಷ್ಣುನಾ ॥೧೩.೨೧॥
ಧುನಿಶ್ಚುಮುಶ್ಚ ತೌ ತರೂ ಸಮಾಶ್ರಿತೌ ನಿಸೂದಿತೌ ।
ತರುಪ್ರಭಙ್ಗತೋsಮುನಾ ತರೂ ಚ ಶಾಪಸಮ್ಭವೌ ॥೧೩.೨೨॥
ಪುರಾ ಹಿ ನಾರದಾನ್ತಿಕೇ ದಿಗಮ್ಬರೌ ಶಶಾಪ ಸಃ ।
ಧನೇಶಪುತ್ರಕೌ ದ್ರುತಂ ತರುತ್ವಮಾಪ್ನುತಂ ತ್ವಿತಿ  ॥೧೩.೨೩॥
ದುನಿ ಮತ್ತು ಚುಮುಗೆ ಸಿಕ್ಕಿತು ಅವಧ್ಯತ್ವದ ವರ,
ತೃಣಾವರ್ತನೂ ಅದೇ ವರ ಪಡೆದ ತಪಸ್ಸಿನ ದ್ವಾರ.
ಶಿಶುಕೃಷ್ಣನಿಂದಾಗಿತ್ತು ಪೂತನೆ ಶಕಟ ತೃಣಾವರ್ತರ ಸಂಹಾರ.
ಮತ್ತೀಮರದಿ ಸೇರಿದ್ದ ಧುನಿ ಮತ್ತು ಚುಮು ಇಬ್ಬರು,
ಶ್ರೀಕೃಷ್ಣ ಆ ಮರಗಳ ಕಿತ್ತಾಗ ಸಂಹರಿಸಲ್ಪಟ್ಟಿದ್ದರು.
ಅವರಿಬ್ಬರಲ್ಲದೆ ಆ ಮರಗಳಲ್ಲಿ ಇನ್ನಿಬ್ಬರು ಶಾಪಗ್ರಸ್ತರಿದ್ದರು.
ಕುಬೇರನ ಮಕ್ಕಳಾದ ನಳಕೂಬರ -ಮಣಿಗ್ರೀವ,
ನಾರದೆದುರು ಬೆತ್ತಲೆಯಾಗಿ ಓಡಾಡಿದ ಪ್ರಭಾವ.
ಮರವಾಗಿ ಹುಟ್ಟಿ ಎಂದು ಶಪಿಸಿದ್ದರು ನಾರದ ಮಹಾನುಭಾವ.

ತತೋ ಹಿ ತೌ ನಿಜಾಂ ತನುಂ ಹರೇಃ ಪ್ರಸಾದತಃ ಶುಭೌ ।
ಅವಾಪತುಃ ಸ್ತುತಿಂ ಪ್ರಭೋರ್ವಿಧಾಯ ಜಗ್ಮತುರ್ಗ್ಗೃಹಮ್ ॥೧೩.೨೪॥
ಇದೀಗ ಕೃಷ್ಣಾನುಗ್ರಹದಿಂದ ಸಾತ್ವಿಕರಾದ ಕುಬೇರನ ಮಕ್ಕಳಿಬ್ಬರು,
ತಮ್ಮ ನೈಜದೇಹ ಹೊಂದಿ ನಾರಾಯಣನ ಸ್ತುತಿಸಿ ಸ್ವಗೃಹಕೆ ಹೊರಟರು.

ನಳಕೂಬರಮಣಿಗ್ರೀವೌ ಮೋಚಯಿತ್ವಾ ತು ಶಾಪತಃ ।
ವಾಸುದೇವೋsಥ ಗೋಪಾಲೈರ್ವಿಸ್ಮಿತೈರಭಿವೀಕ್ಷಿತಃ ॥೧೩.೨೫॥
ಹೀಗೆ ನಳಕೂಬರ ಮತ್ತು ಮಣಿಗ್ರೀವರದ್ದಾಗಿತ್ತು ಶಾಪದಿಂದ ಬಿಡುಗಡೆ,
ಇದನ್ನ ಮಾಡಿದ್ದ ಶ್ರೀಕೃಷ್ಣನ ಅಚ್ಚರಿಯಿಂದ ನೋಡಿತ್ತು ಗೋಪಾಲಕರ ಪಡೆ.
[Contributed by Shri Govind Magal]

Tuesday 11 June 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 14 - 18

ಅಥಾsತ್ತಯಷ್ಟಿಮೀಕ್ಷ್ಯ ತಾಂ ಸ್ವಮಾತರಂ ಜಗದ್ಗುರುಃ ।
ಪ್ರಪುಪ್ಲುವೇ ತಮನ್ವಯಾನ್ಮನೋವಿದೂರಮಙ್ಗನಾ ॥೧೩.೧೪॥
ನಂತರ ಕೋಲನ್ನು ತೆಗೆದುಕೊಂಡ ತನ್ನ ತಾಯಿಯ ನೋಡಿದ,
ಜಗದ್ಗುರು ಶ್ರೀಕೃಷ್ಣ ತನ್ನ ಲೀಲೆಯನ್ನು ತೋರುತ್ತಾ ಹಾರಿಓಡಿದ.
ಮನಸ್ಸಿಗೇ ನಿಲುಕದ ಮಹಾಮಹಿಮ ಅವನು,
ಯಶೋದೆ ಅವನನುಸರಿಸಿ ಓಡಿದಳು ತಾನು.

ಪುನಃ ಸಮೀಕ್ಷ್ಯ ತಚ್ಛ್ರಮಂ ಜಗಾಮ ತತ್ಕರಗ್ರಹಮ್ ।
ಪ್ರಭುಃ ಸ್ವಭಕ್ತವಶ್ಯತಾಂ ಪ್ರಕಾಶಯನ್ನುರುಕ್ರಮಃ ॥೧೩.೧೫॥
ಉತ್ಕೃಷ್ಟ ಪಾದವಿನ್ಯಾಸವುಳ್ಳ ಭಗವಂತ,
ನೋಡಿದ ಶ್ರಮದಿ ಬಳಲಿದ ತನ್ನ ತಾಯಿಯತ್ತ.
ತಾಯಿಯ ಕೈಸೆರೆಯಾಗಿ ಸಿಕ್ಕ ಜಗದ ಸ್ವಾಮಿ,
ತೋರಿದ ತಾನೆಂದೂ ವಶವಾಗುವ ಭಕ್ತಪ್ರೇಮಿ.

ಸದಾ ವಿಮುಕ್ತಮೀಶ್ವರಂ ನಿಬದ್ಧುಮಞ್ಜಸಾssದದೇ ।
ಯದೈವ ದಾಮ ಗೋಪಿಕಾ ನ ತತ್ ಪುಪೂರ ತಂ ಪ್ರತಿ ॥೧೩.೧೬॥
ನಿತ್ಯಮುಕ್ತನಾದವನು ಅವನು ಭಗವಂತ,
ಯಶೋದೆ ಹಗ್ಗ ತಂದಳವನ ಕಟ್ಟಬೇಕಂತ.
ಸಾಲದಾಯ್ತು ಹಗ್ಗ -ಅವ ಕಟ್ಟಲಾಗದ ವಿಮುಕ್ತ.

ಸಮಸ್ತದಾಮಸಞ್ಚಯಃ ಸುಸನ್ಧಿತೋsಪ್ಯಪೂರ್ಣ್ಣತಾಮ್ ।
ಯಯಾವನನ್ತವಿಗ್ರಹೇ ಶಿಶುತ್ವಸಮ್ಪ್ರದರ್ಶಕೇ ॥೧೩.೧೭॥
ಸೇರಿಸಿದಳು ಯಶೋದೆ ಅಲ್ಲಿದ್ದ ಎಲ್ಲಾ ಹಗ್ಗಗಳ ಸಮೂಹ,
ಬಂಧಿಸದಾಯಿತದು ಶಿಶುರೂಪಿ ಕೃಷ್ಣನ ಎಣೆಯಿರದ ದೇಹ.

ಅಬನ್ಧಯೋಗ್ಯತಾಂ ಪ್ರಭುಃ ಪ್ರದರ್ಶ್ಯ ಲೀಲಯಾ ಪುನಃ ।
ಸ ಏಕವತ್ಸಪಾಶಕಾನ್ತರಂ ಗತೋsಖಿಲಮ್ಭರಃ ॥೧೩.೧೮॥
ಸರ್ವಸಮರ್ಥ ಕೃಷ್ಣ ತೋರಿದ ತಾನು ಸಿಗುವವನಲ್ಲ ಅನಾಯಾಸವಾಗಿ,
ಮರುಕ್ಷಣವೇ ಕರುಕಟ್ಟುವ ಚಿಕ್ಕ ಹಗ್ಗದಿಂದ ಕಟ್ಟಿಸಿಕೊಂಡ ತಾನೇ ಬಾಗಿ. 

[Contributed by Shri Govind Magal]