Showing posts with label Pujya Bannanje Govindacharya. Show all posts
Showing posts with label Pujya Bannanje Govindacharya. Show all posts

Sunday, 16 September 2018

ಘನಪಾಠಿಗಳಿಗೂ ದಕ್ಕದ ಗಣಪತಿ. ಲೇಖನ : ಡಾ.ಬನ್ನ೦ಜೆ ಗೋವಿ೦ದಾಚಾಯ೯

ಶಿವ-ಪಾರ್ವತಿಯರ ಮಗನೆಂದು ಶೈವರಿಗೆ-ಶಾಕ್ತರಿಗೆ ಗಣಪತಿ ಪ್ರಿಯನಾದ.
ಅಷ್ಟೇ ಅಲ್ಲ, ಇದೇ ಗಣಪತಿ ಕೃಷ್ಣ-ರುಕ್ಮಿಣಿಯರ ಮಗನಾಗಿ ಚಾರುದೇಷ್ಣನಾದ. ಅದರಿಂದ ವೈಷ್ಣವರಿಗೂ ಪ್ರಿಯ.
ಅವನು ಕ್ಷಿಪ್ರಪ್ರಸಾದ.
ಪೂಜಿಸಿದವರಿಗೆ ಉಳಿದ ದೇವತೆಗಳಿಗಿಂತ ಬೇಗ ಫಲಕೊಡುವವನು. ಅದರಿಂದಲೂ ಅವನು ಎಲ್ಲರಿಗೂ ಇಷ್ಟದೇವತೆಯಾದ.


ಋಗ್ವೇದದಲ್ಲಿ ಒಂದು ಗಣಪತಿ ಮಂತ್ರ ಇದೆ -

ನಿಷು ಸೀದ ಗಣಪತೇ ಗಣೇಷು
ತ್ವಾಮಾಹುರ್ವಿಪ್ರತಮಂ ಕವೀನಾಮ್
ನ ಋತೇ ತ್ವತ್ ಕ್ರಿಯತೇ ಕಿಂಚನಾರೇ
ಮಹಾಮರ್ಕಂ ಮಘವನ್ ಚಿತ್ರಮರ್ಚ
(10.112.9)

ಈ ಮಂತ್ರದ ಋಷಿ ವಿರೂಪನ ಮಗ ನಭಃಪ್ರಭೇದನ. ಇದು ಗಣಪತಿಯ ಸ್ತುತಿಯಲ್ಲ. ಇಂದ್ರನ ಸ್ತುತಿ ಎನ್ನುತ್ತಾರೆ ಸಂಪ್ರದಾಯಜ್ಞರು. ಇಲ್ಲಿ ಬಂದ ಗಣಪತಿ ಎಂದರೆ ಆನೆಯ ಮೋರೆಯ, ಸೊಟ್ಟ ಸೊಂಡಿಲಿನ ಗಣಪತಿ ಅಲ್ಲ. ಇಂದ್ರನೆಂದರೆ ಸಗ್ಗದೊಡೆಯ, ಶಚೀಪತಿ ಇಂದ್ರನೂ ಅಲ್ಲ. ವೈದಿಕ ಪರಿಭಾಷೆಯಲ್ಲಿ ಮುಖ್ಯವಾಗಿ ಇಂದ್ರ ಎಂದರೆ ಇಡಿಯ ವಿಶ್ವವನ್ನು ನಿಯಂತ್ರಿಸುವ ಪರತತ್ವ. ಪರಮಪುರುಷ. ಪುರುಷೋತ್ತಮ.

ಈ ಮಂತ್ರದಲ್ಲಿ ನಭಃಪ್ರಭೇದನ ಕಂಡ ಅರ್ಥ- 'ಓ ಜೀವಗಣಗಳ ಒಡೆಯನಾದ ಪರಮಾತ್ಮನೆ, ಪೀಠದಲ್ಲಿ ಬಂದು ಕೂಡು. ಜ್ಞಾನಿಗಳ ತಂಡದಲ್ಲೆ ನೀನು ಎಲ್ಲರಿಗಿಂತ ಮಿಗಿಲಾದ ಜ್ಞಾನಿ, ಸರ್ವಜ್ಞ ಎನ್ನುತ್ತಾರೆ. ನಿನ್ನ ನೆರವಿಲ್ಲದೆ ಎಲ್ಲೂ ಯಾರೂ ಏನೂ ಮಾಡಲಾರರು. ಓ ಯಜ್ಞಾರಾಧ್ಯನೆ, ಪೂಜೆಕೊಳ್ಳುವವರಲ್ಲಿ ಮೊದಲಿಗ ನೀನು. ಜ್ಞಾನಾನಂದಗಳ ಅಚ್ಚರಿಯ ಮೂರ್ತಿ ನೀನು. ನನ್ನ ಮೂಲಕ ನೀನೇ ನಿನ್ನ ಪೂಜೆಯನ್ನು ಮಾಡಿಸಿಕೋ...’
ಇಲ್ಲಿ ಗಜಾನನನ ಸುಳಿವೇ ಇಲ್ಲ. ಜಗನ್ನಿಯಾಮಕನಾದ ಭಗವಂತನ ಪ್ರಾರ್ಥನೆ ಇದು.
                    .***

ಪ್ರಾಯಃ ಈ ಮಂತ್ರದ ಪ್ರಭಾವದಿಂದಲೇ ಒಂದು ಹೊಸ ಪಂಥ ಹುಟ್ಟಿಕೊಂಡಿತು. ಗಣಪತಿಯೇ ಸರ್ವಶಕ್ತ, ಗಣಪತಿಯೇ ಪರತತ್ವ ಎನ್ನುವ ಪಂಥ. ಇದರ ಅನುಯಾಯಿಗಳನ್ನು ಗಾಣಪತ್ಯರು ಅಥವಾ ಗಾಣಪತರು ಎಂದು ಕರೆಯುತ್ತಿದ್ದರು.

ಈಗ ಈ ಪಂಥ ಬಳಕೆಯಲ್ಲಿಲ್ಲ. ಅದು ಶಾಕ್ತರಲ್ಲಿ ಶೈವರಲ್ಲಿ ಅಂತರ್ಭಾವಗೊಂಡಿದೆ. ಪರಿಣಾಮವಾಗಿ ಪಂಚಾಯತನ ಪೂಜೆಯಲ್ಲಿ ಶಿವಪಾರ್ವತಿಯರ ಜತೆಗೆ ಗಣಪತಿಯೂ ಸೇರಿಕೊಂಡ. ಆದರೆ ವಾಸ್ತವವಾಗಿ ಈ ಮಂತ್ರದಲ್ಲಿ ಗಾಣಪತ್ಯರು ಪೂಜಿಸುವ ಗಣಪತಿಯ ಸುದ್ದಿಯೇ ಇಲ್ಲ.

ಬ್ರಹ್ಮಣಸ್ಪತಿಯಾದ ಗಣಪತಿ :
====================

ಋಗ್ವೇದದಲ್ಲಿ ಇನ್ನೊಂದು ಮಂತ್ರವಿದೆ -

ಗಣಾನಾಂ ತ್ವಾ ಗಣಪತಿಂ ಹವಾಮಹೇ...
(2.23.1)
ಈ ಮಂತ್ರದ ಋಷಿ ಗೃತ್ಯಮದ ಅಥವಾ ಶೌನಕ. ಇದರ ದೇವತೆ ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಎನ್ನುತ್ತದೆ ಅನುಕ್ರಮಣಿಕೆ. ಇದೂ ಒಂದು ಗೊಂದಲವೆ. ವಾಸ್ತವವಾಗಿ ಬೃಹಸ್ಪತಿ ಮತ್ತು ಬ್ರಹ್ಮಣಸ್ಪತಿ ಬೇರೆ ಬೇರೆ ದೇವತೆಗಳಲ್ಲ. ಅಮುಖ್ಯ ಅರ್ಥದಲ್ಲಿ ದೇವಗುರು ಬೃಹಸ್ಪತಿ. ಮುಖ್ಯ ಅರ್ಥದಲ್ಲಿ ವಾಕ್ಪತಿಗಳಾದ ಪ್ರಾಣ-ನಾರಾಯಣರು.

ಯಜುರ್ವೇದದ ತೈತ್ತಿರೀಯ ಸಂಹಿತೆಯಲ್ಲಿ ಈ ಮಂತ್ರ ಬಂದಿದೆ (2.3.14.3). ‘ಓ ಜೀವಗಣಗಳ, ಇಂದ್ರಿಯಗಣಗಳ ನೇತಾರನೆ, ಓ ವಾಗ್ದೇವತೆಯ ನಲ್ಲನೆ, ನಿನ್ನನ್ನು ನಾವು ನಮ್ಮತ್ತ ಬರುವಂತೆ ಆಹ್ವಾನಿಸುತ್ತಿದ್ದೇವೆ’ ಎನ್ನುತ್ತದೆ ಈ ಮಂತ್ರ. ಇಲ್ಲೂ ಸೊಟ್ಟ ಸೊಂಡಿಲಿನ ಗಣಪತಿಯ ಸೊಲ್ಲೇ ಇಲ್ಲ.

ಅಥರ್ವವೇದದ ವ್ರಾತ್ಯಕಾಂಡ
=====================
ಅಥರ್ವವೇದದ ಒಂದು ಕಾಂಡದ ಹೆಸರು-"ವ್ರಾತ್ಯಕಾಂಡ". ವೈದಿಕರು ಮತ್ತು ವೇದವ್ಯಾಖ್ಯಾನಕಾರರು ಈ ಅಪೂರ್ವಕಾಂಡವನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ವ್ರಾತ್ಯ ಶಬ್ದಕ್ಕೆ ಬಳಕೆಯ ಅರ್ಥ: ಸಾಮಾಜಿಕ ರೀತಿ ರಿವಾಜುಗಳನ್ನು ಧಿಕ್ಕರಿಸಿ ಸ್ವಚ್ಛಂದವಾಗಿ ಬದುಕುವವನು; ಲೋಕಬಾಹ್ಯ. ಅಂಥ ಒಬ್ಬ ಅವಧೂತ ಮುನಿಯಿದ್ದ. ಅವನ ಕುರಿತಾಗಿಯೇ ಈ ಕಾಂಡವಿದೆ ಎನ್ನುತ್ತಾರೆ ಸಾಯಣರು.

ಇವರ ಈ ವಿವರಣೆ ಯಾಕೋ ಇಷ್ಟವಾಗುವುದಿಲ್ಲ. ಸಂಸ್ಕೃತದಲ್ಲಿ ವ್ರಾತ ಎಂದರೆ ಸಮೂಹ-ಗಣ. ವ್ರಾತ್ಯ ಎಂದರೆ ಗುಂಪಿನ ನಾಯಕ-ಗಣಪತಿ. ಅದರಿಂದ ಇಡಿಯ ಕಾಂಡ ಗಣಪತಿಯ ಸ್ತುತಿರೂಪವಾಗಿದೆ. ವೇದಗಳಿಗೆ ಬರಿಯ ಮೇಲುನೋಟದ ಅರ್ಥವನ್ನಷ್ಟೆ ಹೇಳುವ ಕರ್ಮಠರಾದ ಸಾಯಣರಿಗೆ ಗಣಪತಿ ಪರವಾದ ಈ ಸುಂದರವಾದ ಅರ್ಥ ಏಕೆ ಹೊಳೆಯಲಿಲ್ಲ ಎನ್ನುವುದೊಂದು ವಿಸ್ಮಯ.

ಸತ್ಯಕಂಡ ಸಂಪೂರ್ಣಾನಂದರು
=====================

ಡಾ. ಸಂಪೂರ್ಣಾನಂದರು ಉತ್ತರಪ್ರದೇಶದ ಮುಖ್ಯಮಂತ್ರಿಗಳಾಗಿದ್ದವರು. ಅವರು ಸಂಸ್ಕೃತದಲ್ಲಿ ಒಂದು ಗ್ರಂಥವನ್ನು ಬರೆದಿದ್ದರು: "ವ್ರಾತ್ಯಕಾಂಡವಿಮರ್ಶಃ". ಅವರು ಈ ಕಾಂಡವನ್ನು ವಿಸ್ತಾರವಾಗಿ ವಿಮರ್ಶಿಸಿ ಸಾಯಣರ ಅರ್ಥವನ್ನು ಸಕಾರಣವಾಗಿ ನಿರಾಕರಿಸುತ್ತಾರೆ. ವಿಚಿತ್ರ ಅಲ್ಲವೇ?
ಒಬ್ಬ ರಾಜಕಾರಣಿಗೆ ಹೊಳೆದ ಸತ್ಯ ವೈದಿಕರಾದ ಸಾಯಣರಿಗೆ ಹೊಳೆಯಲಿಲ್ಲ. ಮಹಾನ್ ವೇದವಿದ್ವಾಂಸನಾಗಿದ್ದ ಒಬ್ಬ ಈ ದೇಶದಲ್ಲಿ ಒಂದು ಕಾಲದಲ್ಲಿ ಮುಖ್ಯಮಂತ್ರಿಯಾಗಿದ್ದ ಎನ್ನುವುದು ಇನ್ನೂ ಅಚ್ಚರಿಯ ಸಂಗತಿ. ಪ್ರಾಯಃ ಹೆಚ್ಚಿನ ವಿದ್ವಾಂಸರು ಗಮನಿಸದ ಈ ಗ್ರಂಥ ವೈದಿಕವ್ಮಾಯಕ್ಕೆ ಒಬ್ಬ ರಾಜಕಾರಣಿಯ ಅನನ್ಯ ಕಾಣಿಕೆ.

ಆದರೆ ಇಲ್ಲೂ ಆನೆಯ ಸೊಂಡಿಲಿನ ಸೊಲ್ಲೇ ಇಲ್ಲ. ಈ ಎಲ್ಲ ಕಾರಣಗಳಿಂದ ಅನೇಕ ಮಂದಿ ವಿಮರ್ಶಕರು ಭ್ರಮಿಸಿದ್ದುಂಟು: ಈ ಗಣಪತಿ ವೈದಿಕದೇವತೆಯಲ್ಲ, ಜನಪದರ ದೇವತೆ ಎಂದು.

ಗಣಪತಿಯ ಗಾಯತ್ರಿ
==============
ಇದೂ ಕೂಡಾ ಅರ್ವಾಚೀನ ವಿಮರ್ಶಕರ ದುಡುಕಿನ ನಿರ್ಧಾರ. ಏಕೆಂದರೆ ಆನೆಯ ಮೋರೆಯ ಗಣಪತಿಯ ಉಲ್ಲೇಖವೂ ಯಜುರ್ವೇದದ ಮಹಾನಾರಾಯಣೋಪನಿಷತ್ತಿನಲ್ಲಿದೆ-
ಏಕದಂತಾಯ ವಿದ್ಮಹೇ|
ವಕ್ರತುಂಡಾಯ ಧಿಮಹಿ|
ತನ್ನೋ ದಂತಿಃ ಪ್ರಚೋದಯಾತ್|

ಈ ಗಣಪತಿ ಗಾಯತ್ರಿಯ ಅರ್ಥ- ‘ಒಂದು ದಾಡೆಯ ಗಣಪನ ಅನುಗ್ರಹಕ್ಕಾಗಿ ನಾವು ಅವನ ಹಿರಿಮೆಯನ್ನು ಅರಿಯುತ್ತೇವೆ. ಸೊಟ್ಟ ಮೋರೆಯ ಗಣಪನನ್ನೇ ಚಿಂತಿಸುತ್ತೇವೆ. ಅಂಥ ಆನೆಯ ರೂಪದ ಗಣಪ ನಮ್ಮನ್ನು ಸನ್ಮಾರ್ಗದಲ್ಲಿ ಪ್ರೇರಿಸಲಿ..’
ನಮಗೆ ಬೇಕಾದ ವೈದಿಕ ಗಣಪತಿ ಇಲ್ಲಿ ಸಿಕ್ಕಿದ..

(ಇದು ದಿನಾಂಕ ೪ -೯-೨೦೧೬ ರ ವಿಜಯವಾಣಿ ದಿನಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ)

Sunday, 21 February 2016

ಪುರಂದರದಾಸರು ಭಗವಂತನಿಗಾಗಿ ಹಾಡಿದ ಸುಪ್ರಭಾತ - ಭಾಗ-5

ಪುರಂದರದಾಸರು, ಒಳಬಗೆಯಲ್ಲಿ ಭಗವಂತನ ಮಾನಸ ಪೂಜೆಯ ವಿಧಾನವನ್ನು ಹಾಡಿನ ಮುಂದಿನ ಸಾಲುಗಳಲ್ಲಿ ನೆನಪಿಸಿಕೊಳ್ಳುತ್ತಾರೆ...

"ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ
ಸುರರು ತಂದಿಹರಯ್ಯ ಸುಜನರೊಡೆಯ
ಅರವಿಂದಲೋಚನನೆ ಕೋಳಿ ಕೂಗಿತು ಕೇಳು
ಪುರಂದರ ವಿಠಲನೆ ಬೆಳಗಾಯಿತು"

ಇದು ದಾಸರು ತಮ್ಮ ಒಳಬಗೆಯಲ್ಲಿ ಕಂಡು ಆಡಿದ ಮಾತುಗಳು... ಹೊರಗೆ ತಿರುಪತಿಯ ಬೆಟ್ಟದಲ್ಲಿ ಪೂಜೆಗೆಂದು ದೇವತೆಗಳು ಬಂದು ನಿಂತಿದ್ದಾರೋ ಇಲ್ಲವೋ ಗೊತ್ತಿಲ್ಲ... ಆದರೆ, ದಾಸರ ಬಗೆಯ ಬೆಟ್ಟದಲ್ಲಿ ಮಾತ್ರ ಖಂಡಿತ ಬಂದು ನಿಂತಿದ್ದಾರೆ...

"ಅರಳಿ ಗಮಗಮಿಸುವ ಮಲ್ಲಿಗೆ , ಜಾಜಿ ಮುಂತಾದ ಕಂಪು ಸೂಸುವ ಹೂವುಗಳನ್ನು ತಂದು ನಿನ್ನ ಪೂಜೆಗೆಂದು ಸುರರು ನಿಂತಿದ್ದಾರೆ ಓ ಶ್ರೀನಿವಾಸನೇ" ಅನ್ನುತ್ತಾರೆ ದಾಸರು..

ವಿಶೇಷವಾಗಿ ಸುಗಂಧಯುಕ್ತವಾದ ಬಿಳಿಯ ಹೂವುಗಳು ವಿಷ್ಣುವಿನ ಆರಾಧನೆಗೆ ವಿಹಿತವಾದಂತವು ಎಂದು ಶಾಸ್ತ್ರಗಳು ಹೇಳುತ್ತವೆ.... ಅದಕೆಂದೆ ದಾಸರು ಇಲ್ಲಿ "ಪರಿಮಳದ ಪುಷ್ಪಗಳ " ಎಂಬ ವಿಶೇಷವನ್ನಿತ್ತು, ಮಲ್ಲಿಗೆ, ಜಾಜಿ ಮುಂತಾದ ಬಿಳಿಯ ಹೂಗಳನ್ನೇ ಉಲ್ಲೇಖಿಸಿದ್ದಾರೆ...

ಪೂಜೆಗೆ ಬಳಸುವ ಹೂವುಗಳಲ್ಲಿರುವ ಬೇರೆ ಬೇರೆ ದೇವತೆಗಳ ಸನ್ನಿಧಾನವನ್ನು ಒಂದು ಮಂತ್ರ ಹೀಗೆ ಹೇಳುತ್ತದೆ :

"ಪಾರಿಜಾತಸ್ಯ ಪುಷ್ಪೇಷು
ಆಂಜನೇಯಸ್ತದಾಜ್ಞೇಯಾ |
ಸೌಗಂಧಿಕೇ ಭೀಮಸೇನಃ
ಶ್ವೇತ ಪುಷ್ಪೇಷು ಶಂಕರಃ |
ಪುನ್ನಾಗ ಪುಷ್ಪೇ ಗರುಡಃ.....

ಪಾರಿಜಾತ ಪುಷ್ಪದಲ್ಲಿ ಆಂಜನೇಯನಿದ್ದಾನೆ...

ಕಲ್ಹಾರ (ಸೌಗಂಧಿಕ) ಪುಷ್ಪದಲ್ಲಿ ಭೀಮಸೇನನಿದ್ದಾನೆ...

ಪುನ್ನಾಗ ಪುಷ್ಪದಲ್ಲಿ ಗರುಡನಿದ್ದಾನೆ...

ಬಿಳಿಯ ಹೂಗಳಲ್ಲೆಲ್ಲ ಶಂಕರನಿದ್ದಾನೆ...

ಅದರಿಂದ ಬಿಳಿಯ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ...

ಅದೂ ಕೂಡ ಅರಳಿದ ಪುಷ್ಪಗಳು, ಏಕೆಂದರೆ, ಅರಳಿದಾಗ ಮಾತ್ರವೆ ಹೂವಿನ ಕಂಪು, ಚೆಲುವು ಪೂರ್ಣಪ್ರಮಾಣದಲ್ಲಿ ಅಭಿವ್ಯಕ್ತಗೊಳ್ಳುವುದು....

ಆಧ್ಯಾತ್ಮದ ನಮ್ಮ ಮಾನಸ ಪೂಜೆಯಲ್ಲಾಗುವಾಗ  ಈ ಹೂಗಳೆಂದರೆ ಏನು ?
ಮಹಾಭಾರತದ ಒಂದು ಮಾತು ಇದಕ್ಕೆ ಪುಷ್ಟಿಕೊಡುತ್ತದೆ...

"ಭಾವಾಷ್ಟ ಪುಷ್ಪವಿಧಿನಾ ಹರಿಮರ್ಚಯಾಮಿ"...

ನಮ್ಮ ಬಗೆಯ ಸಾತ್ವಿಕ ಭಾವಗಳೆ ಹೂವುಗಳು. ಇಂಥ ಎಂಟು ಬಗೆಯ ಹೂವುಗಳಿಂದ ಭಗವಂತನನ್ನು ಆರಾಧಿಸಬೇಕು ಅನ್ನುತ್ತದೆ ಮಹಾಭಾರತ...

ಹೂವುಗಳಿಗೆ ಇನ್ನೊಂದು ಹೆಸರು "ಸುಮನಸ್" ಅಂತ.. ನಮ್ಮ ಮನಸ್ಸು ಸುಮನಸ್ ಆದಾಗ, ಮನದ ಎಂಟು ಬಗೆಯ ಸದ್ಭಾವಗಳೇ ಆ ಎಂಟು ಹೂವುಗಳಾಗುತ್ತವೆ....

ಅಹಿಂಸಾ ಪ್ರಥಮಂ ಪುಷ್ಪಂ
ಪುಷ್ಪಂ ಇಂದ್ರಿಯ ನಿಗ್ರಹಃ |
ಸರ್ವಭೂತದಯಾ ಪುಷ್ಪಂ
ಕ್ಷಮಾ ಪುಷ್ಪಂ ವಿಶಿಷ್ಯತೇ |
ಜ್ಞಾನ ಪುಷ್ಪಂ ತಪಃ ಪುಷ್ಪಂ
ಧ್ಯಾನ ಪುಷ್ಪಂ ಚ ಸಪ್ತಮಮ್ |
ಸತ್ಯಂ ಚೈವಾಷ್ಟಮಂ ಪುಷ್ಪಂ
ಏಭಿಸ್ತುಷ್ಯತಿ ಕೇಶವಃ ||

ಅಹಿಂಸೆಯೇ ಮೊದಲ ಹೂವು. ಕಾಯದಿಂದ, ಮಾತಿನಿಂದ ಮತ್ತು ಮನಸ್ಸಿನಿಂದ ಪರರಿಗೆ ಕೇಡು ಬಗೆಯದಿರುವುದೇ ಅಹಿಂಸೆ...

ಇಂದ್ರಿಯನಿಗ್ರಹ ಎರಡನೆಯ ಹೂವು...

ಕೆಟ್ಟ ವಿಷಯಗಳತ್ತ ನಮ್ಮ ಇಂದ್ರಿಯಗಳು ಸುಳಿಯದಂತೆ ನಿಯಂತ್ರಣಗೊಳಿಸುವುದು...

ಎಲ್ಲ ಪ್ರಾಣಿ-ಪಕ್ಷಿಗಳತ್ತ ತೋರುವ ದಯೆಯೇ ಮೂರನೆಯ ಹೂವು...

ಅಂದರೆ, ಭಗವಂತನ ಸೃಷ್ಟಿಯ ಒಂದು ಸಣ್ಣ ಕೀಟವನ್ನೂ ಅನುಕಂಪೆಯಿಂದ ಕಾಣುವುದೇ "ಸರ್ವಭೂತದಯಾ"...

"ಕ್ಷಮಾ" ಗುಣವೇ ನಾಲ್ಕನೇ ಹೂವು....

 ನಮಗೆ ಕೇಡು ಬಗೆದವರ ಮೇಲೂ ಸೇಡು ಬಗೆಯದ ದಿವ್ಯ ಸಹನೆಯೇ ಕ್ಷಮೆ... ಇದೇ ಹಿರಿಯ ಹೂವು....

ಭಗವಂತನ ಬಗೆಗೆ ಆಳವಾಗಿ ಅರಿಯಬೇಕೆಂಬ ಅಧ್ಯಾತ್ಮದ ಅರಿವೇ

"ಜ್ಞಾನವೆಂಬ" ಐದನೆಯ ಹೂವು....

ತಾತ್ವಿಕ ಸಂಗತಿಗಳನ್ನು ಮನನ ಮಾಡುತ್ತಾ ಆಳವಾದ ಚಿಂತನೆಗೆ ನಿರಂತರ ತೊಡಗಿಕೊಳ್ಳುವುದೇ "ತಪಸ್ಸೆಂಬ" ಆರನೆಯ ಹೂವು....

ಭಗವಂತನಲ್ಲಿ ನಿರಂತರ ಮನಸ್ಸನ್ನು ನೆಲೆಗೊಳಿಸುವುದೇ "ಧ್ಯಾನವೆಂಬ" ಏಳನೇ ಹೂವು....

ನಿಜವನ್ನರಿತು ನಿಜವನ್ನೇ ಆಡುವ, ನುಡಿದಂತೆ ನಡೆವ, ನಡೆದಂತೆ ನುಡಿವ ದೀಕ್ಷೆಯೇ (Talk the Walk and Walk the Talk ಅಂತಾರಲ್ಲ ಹಾಗೆ.... )   "ಸತ್ಯವೆಂಬ" ಎಂಟನೆಯ ಹೂವು...

ಇಂಥ ಹೂವುಗಳ ಅರ್ಚನೆಯಿಂದ (ಕೇಶವ) ಭಗವಂತ ಸಂತುಷ್ಟನಾಗುತ್ತಾನೆ.... ಇವೇ ಎಂಟು ಭಾವಗಳು ನಮ್ಮ ಮನಸ್ಸು ಸತ್ಯ ಪ್ರಚುರವಾದಾಗ ಅರಳುವ ಹೂವುಗಳು ಅಥವಾ  ಅಧ್ಯಾತ್ಮದ ಮಲ್ಲಿಗೆ, ಮಂದಾರ, ಜಾಜಿ, ಪಾರಿಜಾತ, ನಂದಿಬೆಟ್ಟಲು, ಪುನ್ನಾಗ, ಕಮಲ, ಕಲ್ಹಾರಗಳು...

ಸತ್ವದ ಗುಣ ಬೆಳಕು, ಪ್ರಕಾಶ ಅದಕೆಂದೆ ಬಿಳಿಯ ಹೂವುಗಳು... ಭಕ್ತಿಯ ಕಂಪು ತುಂಬಿದ ಪರಿಮಳದ ಹೂವುಗಳು... ಇಂಥಾ ಸದ್ಭಾವದ ಬದುಕೇ ಭಗವಂತನಿಗೆ ನಾವು ಮಾಡಬೇಕಾದ "ಪುಷ್ಪಾರ್ಚನೆ"....

ಇಂಥಾ ಅಧ್ಯಾತ್ಮದ ಸತ್ಪಥದಲ್ಲಿ ನಮ್ಮನ್ನು ಸಾಧನೆಯತ್ತ ಕೊಂಡಯ್ಯಲು ನಮ್ಮ ಇಂದ್ರಿಯಗಳಲ್ಲಿದ್ದು ಇಂಥಾ ಪುಷ್ಪಗಳನ್ನು ಹಿಡಿದು ನಿಂತ ಸುರರೇ ತತ್ವಾಭಿಮಾನಿ ದೇವತೆಗಳು ಮತ್ತು ಜೀವ ಕಲೆಯ ಅಭಿಮಾನಿಯಾದ ಮುಖ್ಯ ಪ್ರಾಣದೇವರು...

ಆದ್ದರಿಂದಲೇ, ದಾಸರು ಹಾಡಿದರು "ಅರಳು ಮಲ್ಲಿಗೆ ಜಾಜಿ ಪರಿಮಳದ ಪುಷ್ಪಗಳ ಸುರರು ತಂದಿಹರಯ್ಯ "..

"ನಾನು ಮಾಡುತ್ತೇನೆ" ಎನ್ನುವುದು ಅಹಂಕಾರದ ಮಾತು "ಸುರರು ನನ್ನಿಂದ ಮಾಡಿಸುತ್ತಿದ್ದಾರೆ" ಎನ್ನುವುದು ಸಾತ್ವಿಕ ಉಪಾಸನೆ... ಸುರರು ನನ್ನೊಳಗಿದ್ದು ನನಗಾಗಿ ದೇವರಿಗೆ ಹೂವಿನ ಪೂಜೆ ಸಲ್ಲಿಸುತ್ತಿದ್ದಾರೆ, ತನ್ಮೂಲಕ ನನ್ನಿಂದ ಪೂಜೆ ಮಾಡಿಸುತ್ತಿದ್ದಾರೆ" ಎಂಬ ಅರಿವು ಇರಬೇಕು...

ಸರ್ವೇಂದ್ರಿಯಾಭಿಮಾನಿಸ್ಥ ಮುಖ್ಯಪ್ರಾಣಸ್ಥ ವಿಷ್ಣುನಾ |
ಪ್ರೇರಿತಃ ಶ್ರೀಶತುಷ್ಟ್ಯರ್ಥಂ ಕರಿಷ್ಯೇ ಕರ್ಮ ಚಾಖಿಲಮ್ ||

(ಇಂದ್ರಿಯಾಭಿಮಾನಿಗಳ ಒಳಗೆ ಮುಖ್ಯಪ್ರಾಣ ನಿಯಾಮಕನಾಗಿದ್ದಾನೆ. ಅವನೊಳಗೆ ಅವನಿಗೂ ನಿಯಾಮಕನಾಗಿ ನಾರಾಯಣನಿದ್ದಾನೆ. ಅವನ ಪ್ರೇರಣೆಯಿಂದಲೆ, ಅವನು ಪ್ರೀತನಾಗಲಿ ಎಂದೆ, ಅವರೆಲ್ಲ ಪ್ರೇರಿಸಿದಂತೆ ನಾನು ಕರ್ಮಗಳನ್ನು ಮಾಡುತ್ತೇನೆ...) ಈ ಅನುಸಂಧಾನವನ್ನು ದಾಸರು ತೋರಿಸಿಕೊಟ್ಟಿದ್ದಾರೆ....

ಮತ್ತೆ ದಾಸರು ಭಗವಂತನನ್ನು ಇಲ್ಲಿ "ಸುಜನರೊಡೆಯ" ಅಂತ ಕರೆದಿದ್ದಾರೆ.. ಇದರ ಉದ್ದೇಶವೇನು ? ವಾಸ್ತವವಾಗಿ ಸುಜನರಿಗೂ, ದುರ್ಜನರಿಗೂ ಅವನೇ ಒಡೆಯ..

ಯಾರ ಮನಸ್ಸು "ಸುಮನಸ್ಸೋ" ಅವರು ಸುಜನರು. ಯಾರ ಮನಸ್ಸಿನಲ್ಲಿ ಹೊಲಸು ತುಂಬಿದೆಯೋ ಅವರು ದುರ್ಜನರು..  
ಮನಸ್ಸಿನಲ್ಲಿ ಕೊಳೆ ತುಂಬಿರುವಾಗ ಅವರ ಭಾವ ಸದ್ಭಾವ ಆಗಲಾರದು.. ಅಂಥವರು ಭಾವ ಪುಷ್ಪಗಳಿಂದ ಪೂಜಿಸಲಾರರು.. ದುರ್ಭಾವದ ಪೂಜೆಯನ್ನು ದೇವರು ಸ್ವೀಕರಿಸುವುದಿಲ್ಲ... ಆದ್ದರಿಂದ ಭಗವಂತ ಸುಮನಸರ ಒಡೆಯ. "ಸುಜನರೊಡೆಯ"...

"ಅರವಿಂದಲೋಚನನೆ, ಕೋಳಿ ಕೂಗಿತು ಕೇಳು ಪುರಂದರವಿಠಲನೇ ಬೆಳಗಾಯಿತು"...

ಅಂತರಂಗದಲ್ಲಿ ಭಗವಂತನ ರೂಪವನ್ನು ಭಾವ ಪುಷ್ಪಗಳಿಂದ ಅರ್ಚಿಸಿದ ದಾಸರು ಪಾದಾದಿಕೇಶಾಂತ ಭಗವಂತನ ದರ್ಶನದ ಬಯಕೆಯಿಂದ, ಮೆಲ್ಲನೆ ತಲೆಯೆತ್ತಿ ಕಣ್ಣೆತ್ತಿ ನೋಡುತ್ತಾರೆ...

ಭಕ್ತನ ಮೇಲಣ ಮಮತೆಯಿಂದ ಭಗವಂತ ಅರಳಿನಿಂತ ತನ್ನ ತಾವರೆಗಣ್ಣುಗಳಿಂದ ಭಕ್ತನ ಮೇಲೆ ಬೀರಿದ ಕೃಪಾದೃಷ್ಟಿ ದಾಸರಿಗೆ ಅಭಯರಕ್ಷೆಯಾಗಿ ಗೋಚರವಾಗುತ್ತದೆ... 
ಆಗ ದಾಸರು ನುಡಿದ ಸಾಲುಗಳಿವು...

ಭಗವಂತ ಅರವಿಂದಲೋಚನ. ಅಂದರೆ ತಾವರೆಗಣ್ಣಿನ ಸುಂದರ ಮೂರ್ತಿ... ಉಪನಿಷತ್ತು ಕೂಡ ಹೀಗೇ ಹೇಳಿತು - "ತಸ್ಯ ಯಥಾ ಕಪ್ಯಾಸಂ ಪುಂಡರೀಕಮೇವಮಕ್ಷಿಣೀ".... ಅಂದರೆ, ನೀರಿನಲ್ಲಿ ಬೇರುಬಿಟ್ಟ ಹಸಿ ತಾವರೆಯೆಸಳಿನಂತೆ ಅವನ ಕಣ್ಣುಗಳು ರಸಸ್ಯಂದಿಯಾಗಿ ಸುಂದರವಾಗಿವೆ...

"ಅರವಿಂದ ರಾತ್ರಿಯ ಹೊತ್ತು ಮೊಗ್ಗಾಗಿ ಮುಚ್ಚಿಕೊಂಡು ಸೂರ್ಯೋದಯವಾದಾಗ ಅರಳಿಕೊಳ್ಳುತ್ತದೆ... ಭಗವಂತನೂ ಅರವಿಂದಲೋಚನ ಎಂದ ಮೇಲೆ  ಭಕ್ತರ ಬಗೆಯೊಳಗೆ ಜ್ಞಾನಸೂರ್ಯನ ಉದಯವಾಗಲೇ ಬೇಕಲ್ಲವೆ... ಹೀಗೆ "ಅರವಿಂದಲೋಚನ" ಎನ್ನುವುದು ಭಗವಂತನ ದೃಷ್ಟಿಯಲ್ಲಿ ತುಂಬಿದ ಕೃಪಾರಸ ಪೂರವನ್ನೂ , ಅನುಗ್ರಹೋನ್ಮುಖತೆಯನ್ನೂ ಸೂಚಿಸುವ ಪದ....

ಮುಂದೆ, ವಾತ್ಸಲ್ಯದ ಮಾತುಗಳಿಂದ ಮುದ್ದು ಮಕ್ಕಳನ್ನು ಮಮತಾ ಮಯಿ ತಾಯಿ ತಟ್ಟಿ ಎಬ್ಬಿಸುವಂತೆ ದಾಸರೂ ತನ್ನ ಹೃದಯ ತೊಟ್ಟಿಲಲ್ಲಿ ಮಲಗಿದ ಅಪ್ರಾಕೃತ ಶಿಶು "ಪ್ರಾಜ್ಞರೂಪೀ" ಭಗವಂತನನ್ನು ಏಳುವಂತೆ ರಮಿಸುತ್ತಾರೆ  - "ಕೋಳಿ ಕೂಗಿತು ಕೇಳು"....

ಹೊರಗಿನ ಅರ್ಥ ಸ್ಪಷ್ಟ... ಬೆಳಗಾಯಿತು ಎಂದು ಕೋಳಿಗೂ ತಿಳಿದಿದೆ... ಮನುಷ್ಯನಿಗೆ ತಿಳಿಯೋದು ಬೇಡವೆ ?
ಒಳಗೆ ಬೆಳಕಾದಾಗ ಒಳಗೂ ಕೋಳಿ ಕೂಗುತ್ತದೆ. ಒಳಬಗೆಯಲ್ಲಿ , ಹೃದಯದಲ್ಲಿ ಭಗವಂತ ನೆಲೆಸಿದ್ದಾನೆ. ಪ್ರಾಜ್ಞ ರೂಪದಿಂದ ಜೀವನಿಗೆ ನಿದ್ರೆ ಬರಿಸಿ ಪವಡಿಸಿದ್ದಾನೆ... ಜ್ಞಾನೋದಯವಾದಾಗ ಬೆಳಕು ಹರಿಯ ತೊಡಗಿದೆ... ಭ್ರೂಮಧ್ಯದ ಆಜ್ಞಾಚಕ್ರದಲ್ಲಿ ಉಷೆಯ ಕೆಂಪು ಮೂಡಿದೆ. ಹೃದಯದ ಅನಾಹತ ಚಕ್ರದಲ್ಲಿ ಅನಾಹತಧ್ವನಿಯ ಕೋಳಿ ಕೂಗುತ್ತಿದೆ... ಅದೇ Non-vibrative Sound... ಮೂಲಾಧಾರದಿಂದ ಹೊರಟ

ಧ್ವನಿ 'ಪರಾ' ಆಗಿ, 'ಪಶ್ಯಂತಿ' ಆಗಿ , ಹೃದಯ ಮಧ್ಯದಲ್ಲಿ 'ಮಧ್ಯಮಾ' ಆಗಿ ನಿನದಿಸುವ ನಾದ... ಈ ಅನಾಹತದ ನಾದ ಪುರಂದರದಾಸರಿಗೆ ಕೇಳಿಸಿತು. ಈ ಅಂತರ್ನಾದದ ಅನುಭವದ ಸಂತೋಷವನ್ನು ಅವರು ಭಗವಂತನ ಮುಂದೆ ತೋಡಿಕೊಳ್ಳುತ್ತಾರೆ : "ಕೋಳಿ ಕೂಗಿತು ಕೇಳು"....

ಆದ್ದರಿಂದ ಇನ್ನು ಸಹಸ್ರಾರದಲ್ಲಿ ಸೂರ್ಯೋದಯಕ್ಕೆ ಹೆಚ್ಚು ಹೊತ್ತು ಕಾಯಬೇಕಾಗಿಲ್ಲ.... ಅದೂ ಆಗಿಯೇ ಬಿಟ್ಟಿತು :  

"ಪುರಂದರ ವಿಠಲನೆ ಬೆಳಗಾಯಿತು"...

ಪುರಂದರದಾಸರಿಗೊಲಿದ ವಿಠ್ಠಲನೆ ಪುರಂದರವಿಠಲ... 'ಪುರ' ಎಂದರೆ ದೇಹ ಕೂಡ ಹೌದು. ದೇಹ ಬಂಧನವನ್ನು ಕಳಚುವುದರಿಂದ ಪುರಂದರನಾದ ವಿಠ್ಠಲನೇ  "ಪುರಂದರ ವಿಠ್ಠಲ". ಗುರು ವ್ಯಾಸತೀರ್ಥರು ದಾಸರಿಗೆ ಕೊಟ್ಟ ಪವಿತ್ರ ಮುದ್ರಿಕೆ ಇದು...

"ವಿಠ್ಠಲ" ಭಗವಂತನ ಪ್ರತ್ಯೇಕ ರೂಪವಲ್ಲ , ಶ್ರೀನಿವಾಸನೂ ಒಂದು ಅವತಾರವಲ್ಲ... ಕೃಷ್ಣನೇ ವಿಠ್ಠಲ, ಕೃಷ್ಣನೇ ಶ್ರೀನಿವಾಸ. ಪಂಢರಪುರದ ಶ್ರೀನಿವಾಸನೇ ವಿಠ್ಠಲ.  ತಿರುಪತಿಯ ವಿಠ್ಠಲನೇ ಶ್ರೀನಿವಾಸ...

ಇದು ಕೃಷ್ಣಾವತಾರದ ರೂಪವೇ ಎಂದು ಸೂಚಿಸುವುದಕ್ಕಾಗಿಯೇ ಈ ಹಾಡಿನ ಮೊದಲನೆಯ ಸೊಲ್ಲಿನಲ್ಲಿ "ವಾಸುದೇವನೆ" ಎಂಬ ಸಂಬೋಧನೆ ಬಂದಿದೆ... ವಸುದೇವ ತನಯನಾದ ಶ್ರೀಕೃಷ್ಣನೇ ವೇಂಗಡದ ಶ್ರೀನಿವಾಸ ಎನ್ನುವುದು ಇಲ್ಲಿ ಸ್ಪಷ್ಟ... ಹಾಗೇ ಬಾಲಕೃಷ್ಣನ ಲೀಲೆಯನ್ನು ನೆನಪಿಸಲು ಬಂದ ಇನ್ನೊಂದು ಸಾಲು "ಲೇಸಾಗಿ ಕೆನೆಮೊಸರು ಬೆಣ್ಣೆಯನೆ ಮೆದ್ದು"...

ವಿಠ್ಠಲ ಎನ್ನುವುದು ಕೃಷ್ಣನಿಗೆ ಅನುಭಾವಿಗಳಿಟ್ಟ ಹೆಸರು... ಮಹಾರಾಷ್ಟ್ರದಲ್ಲಿ ಇವನು ಪ್ರೀತಿಯ "ವಿಟ್ಟೂ", "ವಿಠೋಬ" ಆದರೆ ಕನ್ನಡ ದಾಸರ ಕೈಯಲ್ಲಿ ವಿಠಲ ಆದ....
ಸಂಸ್ಕೃತ ಪಂಡಿತರ ಕೈಯಲ್ಲಿ "ವೇಂಗಡ" "ವೇಂಕಟ" ಆದಂತೆ, ವಿಠಲ "ವಿಠ್ಠಲ"ನಾದ...

ವಿದ್ ಅಂದರೆ "ಜ್ಞಾನ"... ಜ್ಞಾನದ ಸ್ಥಲವೆ, ಹೃದಯ ಮಂದಿರವೆ "ವಿತ್ ಸ್ಥಲ" - ವಿಠ್ಠಲ... ಹೃದಯ ಮಂದಿರದಲ್ಲಿ ನೆಲೆಸಿರುವ ಭಗವಂತನೆ ನಿಜವಾದ "ವಿಠ್ಠಲ"... ಇದು ಅನುಭಾವದ ನೆಲೆಯಲ್ಲಿ ಗೋಚರವಾಗುವ ಅರ್ಥ...

"ಅರವಿಂದಲೋಚನನೆ , ಕೋಳಿ ಕೂಗಿತು ಕೇಳು....." - ಇನ್ನೊಂದು ನೆಲೆಯಿಂದ ನೋಡಿದಾಗ ಹೃದಯರಂಗದಲ್ಲಿರುವ ವಿಠ್ಠಲನೆ ಪ್ರಾಜ್ಞ. ಲೋಚನದಲ್ಲಿರುವ ವಿಶ್ವನೆ ಅರವಿಂದಲೋಚನ... ದಾಸರಿಗೆ ಅಪರೋಕ್ಷಾನುಭೂತಿಯ ಕೊನೆಯ ಸೂರ್ಯೋದಯದ ಪ್ರಾರ್ಥನೆಯ ಜತೆಗೆ, ನಮ್ಮ ಬದುಕಿನ ಅಸ್ಥಿರತೆಯ ಎಚ್ಚರ - ಕಾಲ ಮೀರುವ ಮುನ್ನ ಭಗವಂತನ ದರ್ಶನದ ಬಗೆಗಿನ ಕಾತರವೂ ಈ ಕೊನೆಯ ಸಾಲುಗಳಲ್ಲಿ ತುಂಬಿದೆ..

ಕಾಲಪುರುಷನ ಕೋಳಿ ಕೂಗುತಿದೆ. ಆ ಕರೆಗೆ ಪ್ರತಿಯೊಬ್ಬ ಜೀವನೂ ಓಗೊಡಲೇಬೇಕು.. ಆದ್ದರಿಂದ ಓ "ಪುರಂದರವಿಠ್ಠಲನೇ" ನೀನು ಬೇಗನೇ ಎದ್ದು ಬರಬೇಕು. ಈ ದೇಹ ಬಿದ್ದು ಹೋಗುವ ಮುನ್ನ ನಿನ್ನ ಅರಿವಿನ ಬೆಳಕಾಗಬೇಕು.... ಆದ್ದರಿಂದಲೇ ಭಕ್ತನಿಗೆ ಸುಪ್ರಭಾತದ ಬಗೆಗೆ ಅಷ್ಟೊಂದು ಕಾತರ.. ಪುರಂದರದಾಸರಿಗೆ ಆ ಭಯವಿಲ್ಲ...  ಕೋಳಿ ಕೂಗುವ ಮುನ್ನ ಅವರಿಗೆ ಬೆಳಗಾಯಿತು.. ಆ ಸಂತಸದಲ್ಲೇ ಅವರು ಹಾಡಿದರು...

ಏಳಯ್ಯ ಬೆಳಗಾಯಿತು
ಏಳು ನಾರಾಯಣ ಏಳು ಲಕ್ಷ್ಮೀರಮಣ
ಏಳು ಶ್ರೀಗಿರಿಯೊಡೆಯ ವೇಂಕಟೇಶ...

ಹೀಗೆ ಅಧ್ಯಾತ್ಮದ ಅನೇಕ ಮಜಲುಗಳಲ್ಲಿ ತನ್ನನ್ನು ತೆರೆದುಕೊಳ್ಳುವ, ಹೃದಯವನ್ನು ಮುಟ್ಟುವ, ಆತ್ಮಸಾಕ್ಷಿಯನ್ನು ತಟ್ಟಿ ಎಬ್ಬಿಸುವ ಈ ಸುಪ್ರಭಾತದ ಹಾಡು ಪುರಂದರದಾಸರ
ಅನುಭಾವಗೀತೆಗಳ ಸಾಲಿನಲ್ಲಿ ಒಂದು ಅನರ್ಘ್ಯ ಮಾಣಿಕ್ಯ....ಅದಕೆಂದೇ ಗುರುಗಳಾದ ಶ್ರೀವ್ಯಾಸತೀರ್ಥರು ಪುರಂದರದಾಸರ ಹಾಡುಗಳನ್ನು "ಕನ್ನಡದ ಉಪನಿಷತ್ತುಗಳು" ಎಂದೇ ಕರೆದರು... ಅಂದರೆ, ಅನುಭಾವದ ಆಳ ಮಾತ್ರ ಪುರಂದರದಾಸರದ್ದು , ನುಡಿಸಿದ್ದು ಪುರಂದರ ವಿಠಲ... ದಾಸರು ಏನನ್ನು ಯೋಚಿಸಿ ಹಾಡಿದರೋ ಅದಷ್ಟೇ ಇದರ ಅರ್ಥವಾಗ ಬೇಕಾಗಿಯೂ ಇಲ್ಲ. ಯಾರ ಅನುಭಾವಕ್ಕೆ ಎಂಥ ಭಾವ ಸ್ಫುರಿಸಿತೋ ಅದೆಲ್ಲವೂ ಅದರದರೇ ಭಾವ.. ಅದರದೇ ಪ್ರಭಾವ..  ಅನುಭಾವದ ರೀತಿಯೇ ಹಾಗೆ. ಏಕೆಂದರೆ ಈ ಹಾಡೇ ಒಂದು ದೈವೀ ಸ್ಫುರಣೆ, ಆರ್ಷದರ್ಶನ. ಅದರಿಂದಲೇ ಉಪನಿಷತ್ತು...

🙏🌸🙏🌸🙏🌸🙏🌸🙏🌸🙏


[Contributed by Shri Harish BS]

Friday, 19 February 2016

BHAGAVATPUJA by Vidyavachaspati Bannanje Govindacharya

(Original in Kannada. This translation By : Shri B.Gururajacharya)

Worship (Puja) of Bhagavaan is basically of two types ; Puja of the form of self and of the external form.
1) To perform Puja by seeing the Bhagavaan from one's mental eye is Atma Linga Puja (Self form - Worship). This is termed as Dhyaana (Meditation), or as Tapas ( Tapa Alochane ) by constant thinking; as Mental worship and as Internal Worship.

2) On the other hand, to perform puja of external forms is known as Baahya Linga Puja. Idols, (Representative forms) sacrificial fire and Rekha Sketches/graphics are the main forms externally prescribed for worship. To (visualize) see and worship Paramaatma in these forms is known as Bahya Linga Puja / Bahiranga Puja.

BhagavataPurana says as under:-

"archadow hR^idaye va api yatha labdhopacharakaih 
dravyakshiti- aatmalingani nispadya prokshya chasanam" 

This means: -
Through the Idols (pratima) as external forms or using own self as the internal form, HE should be worshiped as per one's capacity. These forms are mainly three types. They are Dravyalinga, Kshitilinga and Atmalinga. First two are meant for external worship. The third one is for internal worship. Atmalinga is that form of God which is seen during the meditation in one's mind ; This form of God is known as Vaasanaa Rupa (form of Mental Impression) as stated in the Shruti : Yadidamupaasate.

`Materialistic form is known as Dravyalinga. This may be the idol made of either metal or stone or earth or wood. Even the Homagni ie fire used in Homa is a `Material form'. Plain floor or plane earth (Bhoomi) is called Kshitilinga. The floor decorated with Mandalas is called Sthandila. (Mandala are Sketches drawn using lines as prescribed).

Acharya Madhwa's Tantra-saara-sangraha attaches much significance for the worship in Kshitilinga.
Poojyashcha Bhagavan nityam chakraabjaadikamandale. (God should be worshipped in Chakrabja and the like every day).

This Mandala worship has some more important aspects. If this Mandala is drawn on the plain floor it is Kshitilinga. Alternatively, if drawn carved or etched on stone or metal it is Dravyalinga.
If, on the other hand, it is drawn imaginary on the canvas of our own self' using mind as finger or visualized on the screen of our mind, then it becomes Atmalinga.

Thus, the Chakrabja Mandala worship encompasses all the types of worship. viz. Pujas in Dravyalinga, Kshitilinga & Atmalinga. ie. both external form and internal form of Puja. This greatness of Chakraabja Mandala Puja is depicted in the second part of the above Tantra-saara-sangraha Shloka as reproduced below.Achale hridaye vaa api chale vaa kevalasthale. - (1-44)

Let us explain this analytically as below.

1 a) Achale Hridaye - One method is to worship HIM in the heart of (at of the centre of) the Chakrabja engraved in the firmly static immovable stone (shila). This type comes under the category of Dravya Linga Puja.

b) Chale api vaa hridaye - To Engrave or draw the Chakrabja over the surface of a movable material like a sheet of a metal or wooden plank etc, and worship the Bhagavaan in it.
This is another way that also falls under the category of Dravya Linga Puja. But the category mentioned at (a) is Achala Dravya Linga (immovable) and that at (b) here is Chala (movable) Dravya Linga.

2. Kevalsthale vaa - To draw the Chakrabja Mandala simply over a sacred place (sthala / sthandila) using specified powders (Rangoli/Churna) and worship The Bhagavan there. This falls under the Kshiti Linga Puja category.

Thus, the above three ( 1 (a), (b) & 2) are Bahya Linga Puja varieties.
Similarly there are three varieties [ 3 (a), 3 (b), & 3 (c)] in the Atmaling Puja.

3. (a) Achale hridaye - Chakrabja Mandala is drawn mentally on the canvas of one's own mind and held firmly there to meditate upon the Bhagavan in it. This is meditation / dhyana.
3. (b) Chale api vaa - When it becomes not possible to hold constantly or steadily the Chakrabja Mandala figure in the mind due to the volatality or wavering nature of mind, repeat again & again visualising Chakrabja figure there and go on recollecting it while continuing meditation. This process is known as DhaaraNa which means holding, preserving or retaining the memory (of the Bhagavan).
3. (c) Kevalasthale vaa - In case the above two mental situations / conditions / status become not possible to achieve, this third method can be tried. Over the plain floor before / in front of you, draw Chakrabja lines using your mental fingers (by imagination) and memorise the Bhagavan there.
(It can be noticed here that the half line Achale ... alone gives the idea of all the six varieties (3+3) of Bahya and Atama linga puja in total).

* * *
A Shloka appearing in Bhagavata Purana (11-11-14) indicates the above details in its meaning by proper interpretation. In HIS own words, Bhagavan (Shri Krishna) enumerates the following eleven places / forms for HIS Puja.

"Suryognih brahmno gavo vaishnavah kham marujjalam
Bhuratma sarvabhutani bhadra pujapadani me".

1) Surya (the sun), 2. Homagni (sacrificial fire), 3. Brahma Jnani (Brahmana - One who has Knowledge of God), 4. Gow (cow) 5. Vishnu Bhakta (devotee of Vishnu), 6. Hrudayakasha (soul or one's heart), 7. Mukhya Prana (supreme of Vayus), 8. Jalam (water) 9. Bhumi (the earth), 10. Atma (ownbody) 11. Sarva Bhutani (all creatures)

Previously refered Shloka from Tantrasara Sangraha (1.44) also hidingly keeps and hints at all the above within its scope. Let us see how we can get at them.

1) Achale hridaye - Sun is the immovable symbol of God. In him the worship of Surya Narayana who is the real addressed Para Devata of Gayatri Mantra, as stated at Sooryamandalamadhyaga.... dhyeyah sadaasavitr mandalamadhya....

2) Chale api vaa hridaye - In the moving objects such as the sacrificial fire, the person who knows Brahma, the cow, the devotee of Vishnu, the water & the body. Worship of Bhagavan in these six forms is one of the methods.

3) Worshiping HIM in one's heart / soul or one's mind. This puja can be again of two varieties. i) When the Bhagavan's form could be held constantly within one's mind / heart or soul it is Dhyaana (meditation).

And ii) When it could not be held steadily in the mind but has to be recollected, revisualised intermittently, it is called DhaaraNa. - Khandasmrutih dhaarana syaat akhanda dhyaanamuchyate.4) Hridaye (Repeat the Hridaye Word again) :- This indicates the Bhagavat Puja in Mukhya Prana, the Supreme Vayu who is the closest to and most intimately loved by the Bhagavan. This mode of worship is of the highest order and of the highest liking to God. This is why all the worships should start with saying -Bhaaratiramana mukhyapranaantargata.

Mukhya Prana is both static (immovable) and dynamic (movable) form of Bhagavan. This is hinted at Achale hridaye vaa api chale... Commanding force for the moving air (wind) in the space is one form of Mukhya Prana. This is moving form, Bhuta Vayu.
The other form of Mukhya Prana is that which controls Prana Vayu, Apanavayu etc, in our body. This is immovable form Prana Vayu.

5) Achale chale api vaa - Pooja of the Bhagavan residing in the souls / hearts of the moving & static antimated beings.

6) Kevalasthale - God's worship in mere earth / ground. This is 'Sthandial or mandala aradhanam'
Yadavendra in his commentary for this part of shloka of Bhagavata ( Sthandile mantra hridayaih) has said Sthandile bhuvi kritamandale means a mandala drawn on a prepared piece of ground for the purpose of worship.
Veera Raghava of Ramanuja siddhaanta also endorses this by saying - "Bhooshabdena chakrabjadimandala samskrito desho vivakshitah.
(By the word the intended meaning is the place (ground) prepared perfected, & purified drawing Chakrabja etc.).

shri kRuShNARpanamasthu

Thursday, 18 February 2016

ಆಚಾರ್ಯ ಮಧ್ವರ "ಕಂದುಕ ಸ್ತುತಿಃ" - ಕನ್ನಡದ ಕನ್ನಡಿಯಲ್ಲಿ - ಪೂಜ್ಯ ಶ್ರೀಬನ್ನಂಜೆ ಗೋವಿಂದಾಚಾರ್ಯರಿಂದ

ಅಂಬರ ಗಂಗಾ ಚುಂಬಿತ ಪಾದಃ ಪದತಲವಿದಲಿತ ಗುರುತರ ಶಕಟಃ ||1||

ಕಾಲಿಯನಾಗಕ್ಷ್ವೇಳನಿಹಂತಾ ಸರಸಿಜ ನವದಲ ವಿಕಸಿತ ನಯನಃ ||2||

ಕಾಲಘನಾಲೀಕರ್ಬುರಕಾಯ ಶರಶತಶಕಲಿತರಿಪುಶತನಿವಹಃ ||3||

ಸಂತತಮಸ್ಮಾನ್ ಪಾತು ಮುರಾರಿ ಸತತಗಸಮಜವಖಗಪತಿನಿರತಃ ||4||
 🔹🔹🔹

"ಆಚಾರ್ಯ ಮಧ್ವರ" ಬಾಲ್ಯದ ರಚನೆ "ಕಂದುಕ ಸ್ತುತಿ" - ಕನ್ನಡದ ಕನ್ನಡಿಯಲ್ಲಿ - ಪೂಜ್ಯ ಶ್ರೀಬನ್ನಂಜೆ ಗೋವಿಂದಾಚಾರ್ಯರಿಂದ
🔹🔹🔹🔹🔹🔹🔹🔹🔹🔹🔹🔹🔹

ಆಕಾಶದಾ ಗಂಗೆ ಮುದ್ದಿಸಿದ ಮುದ್ದು ಕಾಲು |
ನಮ್ಮ ಕಿಟ್ಟನ ಕಾಲು ||1||

ದೊಡ್ಡ ಗಾಡಿಯನೊದ್ದು ಜಾಡಿಸಿದ ಪುಟ್ಟ ಕಾಲು |
ನಮ್ಮ ಕಿಟ್ಟನ ಕಾಲು ||2||

ಕಾಳಿಯನ ತಲೆ ಮೆಟ್ಟಿ ನಂಜಿಳಿಸಿ ಕುಣಿದ ಕಾಲು |
ನಮ್ಮ ಕಿಟ್ಟನ ಕಾಲು ||3||

ತಾವರೆಯ ಹೊಸ ಪಕಳೆ ಥೇಟ ಕಿಟ್ಟನ ಕಣ್ಣು |
ನಮ್ಮ ಕಿಟ್ಟನ ಕಣ್ಣು  ||4||

ಕರಿಮೋಡಗಳ ಹಾಗೆ ಎಣ್ಣೆಗಪ್ಪವನ ಮೈ |
ನಮ್ಮ ಕಿಟ್ಟನಿಗೆ ಜೈ ||5||

ಬಾಣಗಳ ಸುರಿಮಳೆಗೆ ಶತ್ರುಗಳು ಪರಾರಿ |
ನಮ್ಮ ಕಿಟ್ಟ ಮುರಾರಿ ||6||

ಎಂದೆಂದು ಪಾಲಿಸಲಿ ನಮ್ಮನು ಮುರಾರಿ |
ನಮ್ಮ ಕಿಟ್ಟ ಮುರಾರಿ ||7||

ಗಾಳಿಯಂತೋಡುವಾ ಗರುಡ ಹಕ್ಕಿಯ ನೇರಿ |
ನಮ್ಮ ಕಿಟ್ಟ ಮುರಾರಿ ||8||
             
          

"ಪುರಂದರದಾಸರು" ಭಗವಂತನಿಗಾಗಿ ಹಾಡಿದ ಸುಪ್ರಭಾತ - ಭಾಗ - 4

ಕುಂಡಲಿನಿಯಲ್ಲಿ ಮಲಗಿದ್ದ ಶೇಷ ಶಕ್ತಿಯನ್ನು  ಭಗವಂತನ ಅನುಗ್ರದಿಂದ ಎತ್ತರಕ್ಕೇರಿಸಿದಾಗಸಹಸ್ರಾರ ಚಕ್ರದಲ್ಲಿ ಶೇಷ ತನ್ನ ಸಾವಿರ ಹೆಡೆ ಬಿಚ್ಚಿ ನಿಲ್ಲುತ್ತಾನೆ... ಅಲ್ಲಿ ಪವಡಿಸಿದ ಶೇಷಶಯನನಾದ ಶ್ರೀನಿವಾಸ ಏಳು ಕಡಲುಗಳನ್ನು ಕಡೆದು ನಮ್ಮ ಭಕ್ತಿರಸದ ಬೆಣ್ಣೆಯಲ್ಲಿ ಮೂಡಿಬರಬೇಕು.. ಅದಕೆಂದೆ ದಾಸರು ಹಾಡಿದರು "ಶೇಷಶಯನನೆ, ಏಳು ಸಮುದ್ರಮಥನವ ಮಾಡು"...

ಈ ಏಳು ನಾಡೀಚಕ್ರಗಳಿಗೂ, ಸೂರ್ಯನ ಏಳು ಕುದುರೆಗಳಿಗೂ, ಅಂದರೆ ಸೂರ್ಯಕಿರಣದ ಏಳು ವರ್ಣಗಳಿಗೂ, ಅಗ್ನಿಯ ಏಳು ಜಿಹ್ವೆ (ಜ್ವಾಲೆ)ಗಳಿಗೂ ಪರಸ್ಪರವಾದ ಅಧ್ಯಾತ್ಮ ಸಂಬಂಧವಿದೆ.

ಈ ಏಳು ನಾಡೀಚಕ್ರಗಳಲ್ಲಿ ನಾಭಿ ಮತ್ತು ಮೂಲಾಧಾರದ ನಡುವಿನ ಚಕ್ರವನ್ನು ಈ ಎರಡರಲ್ಲೇ ಏಕೀಭವಿಸಿ ಆರೇ ಚಕ್ರಗಳನ್ನು ಕೆಲವು ಕಡೆ ಉಲ್ಲೇಖಿಸಿದ್ದಾರೆ :

"ಮೂಲೇ ಚ ನಾಭೌ ಹೃದಯೇಂದ್ರಯೋನಿ -

ಭ್ರೂಮಧ್ಯ ಮೂರ್ಧದ್ವಿಷಡಂತಕೇಷು|" (ತಂತ್ರಸಾರ ಸಂಗ್ರಹ)

ಮೂಲಾಧಾರ, ನಾಭಿ, ಹೃದಯ, ಕಂಠ, ಹುಬ್ಬುಗಳ ನಡುವಿನ ಭಾಗ ಮತ್ತು ನೆತ್ತಿಯಿಂದ 12 ಅಂಗಲು ಎತ್ತರದ ಪ್ರಭಾವಲಯ ಇವು ಆರು ನಾಡೀಚಕ್ರಗಳ ಸ್ಥಾನಗಳು...

ಪುರಂದರದಾಸರೇ ಇನ್ನೊಂದು ಹಾಡಿನಲ್ಲಿ ನಾಡೀಚಕ್ರಗಳು ಆರು ಅಂತ ಹಾಡಿದ್ದಾರೆ :

"ಆಧಾರ ಮೊದಲಾದ ಆರು | ಚಕ್ರ
ಶೋಧಿಸಿ ಬಿಡಬೇಕು ಈಷಣ ಮೂರು
ಸಾಧಿಸಿ ಸುಷುಮ್ನಾ ಏರು | ಅಲ್ಲಿ
ಭೇದಿಸಿ ನೀ ಪರಬ್ರಹ್ಮನ ಸೇರು"

ಒಂದು ದೃಷ್ಟಿಯಿಂದ ಇವೆಲ್ಲ ನಮ್ಮ ದೇಹದೊಳಗೇ ನೆಲೆಸಿರುವ ಒಂದೇ ಕಡಲು, ಅದಕ್ಕೆ ಏಳು ಸ್ತರಗಳಲ್ಲಿ ಏಳು ಹೆಸರುಗಳು... ಅದಕೆಂದೆ ದಾಸರು ಏಕವಚನದಲ್ಲೆಂಬಂತೆಯೆ ನುಡಿದರು : "ಸಮುದ್ರ ಮಥನವ ಮಾಡು"..

ಮುಂದಿನ ಸಾಲು-

"ದೇಶ ಕೆಂಪಾಯಿತೇಳಯ್ಯ ಹರಿಯೇ"

ಈ ಮಥನಕ್ರಿಯೆಗೆ ಸಾಧಕಜೀವ ಪಕ್ವಗೊಂಡು ಅಣಿಯಾದ ಬಗೆ ಇದು...

ಭೌತಿಕ ಪ್ರಪಂಚದಲ್ಲೂ ಅರುಣೋದಯವಾದಾಗ ಇರುಳ ಕತ್ತಲೆ ಸರಿದು ಉಷೆಯ ಕೆಂಪು ದಿಗ್ದೇಶಗಳನೆಲ್ಲ ತುಂಬುವ ಕಾಲ.. ಹೊರಗಿನಂತೆಯೆ ಒಳಗೂ ಒಂದು ದೇಶ ಇದೆ. ಅದೇ ನಮಗೆ ಸಾಧನೆಯ ಆದೇಶ ದೊರೆಯುವ ಪ್ರದೇಶ... ಇನ್ನೇನು ಅಂತರ್ಯಾಮಿಯ ಬಿಂಬೋದಯವಾಗಬೇಕು, ಆಗ ಉಷೆಯ ಕೆಂಬೆಳಕು ಆಜ್ಞಾಚಕ್ರದಲ್ಲಿ ಕಾಣಿಸುತ್ತದೆ... ಇದೇ ಮೂರನೆಯ ಕಣ್ಣು.. ಅಗ್ನಿನೇತ್ರ ತೆರೆದುಕೊಂಡಾಗ ಆ ಕೆಂಪು ಕಾಣಿಸಿಕೊಳ್ಳುತ್ತದೆ, ಮೂರು ಕಾಲಗಳೂ ತೆರೆದುಕೊಳ್ಳುತ್ತವೆ. ಅಂಥ ಸಾಧಕನಿಗೆ ಭೂತ ಭವಿಷ್ಯತ್ತುಗಳು ವರ್ತಮಾನದಷ್ಟೇ ಸಹಜ ಮತ್ತು ಸ್ಫುಟ... ಮುಂದೆ ಸಹಸ್ರಾರದಲ್ಲಿ ಸಹಸ್ರ ಕಿರಣಗಳೊಡನೆ ಉದಿಸುವ ಆ ದಿವ್ಯ ಸೂರ್ಯನ ದರ್ಶನಕ್ಕಾಗಿ ಭಕ್ತ ಕಾತರನಾಗಿದ್ದಾನೆ...

ಅಲ್ಲಿ "ಹರಿಯೇ" ಅನ್ನುವ ಸಂಬೋಧನೆ ತುಂಬ ಮಹತ್ವದ್ದು. 'ಹರಿ' ಎಂದರೆ ಸಂಸ್ಕೃತದಲ್ಲಿ ಸೂರ್ಯನೂ ಹೌದು, ನಾರಾಯಣನೂ ಹೌದು.. ಹೊರಗಿನ ಕತ್ತಲನ್ನು ಹರಿಸುವುದರಿಂದ ಸೂರ್ಯ ಹರಿ, ಒಳಗಿನ ಕತ್ತಲನ್ನು ಹರಿಸುವುದರಿಂದ ನಾರಾಯಣ ಹರಿ...

ಅದಕೆಂದೇ ಅವನನ್ನು "ಸೂರ್ಯನಾರಾಯಣ" ಎಂದೇ ಕರೆಯುತ್ತಾರೆ..

"ದಿನಮಣಿರ್ಭಾಸ್ವಾನ್ ವಿವಸ್ವಾನ್ ಹರಿಃ" ... 
"ಹರಿಂ ಹೃಷೀಕೇಶಮುದಾಹರಂತಿ"...

"ಏಳು ಹರಿಯೆ" ಎಂದರೆ "ಗಾಯತ್ರಿ ಪ್ರತಿಪಾದ್ಯನಾದ ನನ್ನ ಒಳಬಗೆಯ ಸೂರ್ಯನೆ, ಉದಿಸಿ ಬಾ " ಎಂದೇ ಅರ್ಥ... ನನ್ನ ಅಜ್ಞಾನವನ್ನೆಲ್ಲ ತೊಳೆದು ಬೆಳಕಾಗಿ ಬಾ, ನನ್ನ ಸಂಚಿತ ಕರ್ಮಗಳನ್ನೆಲ್ಲ ಪರಿಹರಿಸುವ ಹರಿಯಾಗಿ ಬಾ, ಆದ್ದರಿಂದಲೆ ಶೇಷಶಯನನ್ನು "ಹರಿಯೆ" ಎಂದರು ದಾಸರು..

"ಕ್ಷೀಯಂತೇ ಚಾಸ್ಯ ಕರ್ಮಾಣಿ
ತಸ್ಮಿನ್ ದೃಷ್ಟೆ ಪರಾವರೇ |"

(ಆ ಪರತತ್ವವನ್ನು ಕಂಡಾಗ ಜ್ಞಾನಿಯ ಕರ್ಮಗಳೆಲ್ಲ ನಾಶವಾಗಿ ಹೋಗುವುವು)

"ಜ್ಞಾನಾಗ್ನಿಃ ಸರ್ವ ಕರ್ಮಾಣಿ
ಭಸ್ಮಸಾತ್ ಕುರುತೇ ತಥಾ |"

(ಜ್ಞಾನದ ಬೆಂಕಿ ಕರ್ಮದ ಕಟ್ಟಿಗೆಯ ರಾಶಿಯನ್ನು ಸಂಪೂರ್ಣವಾಗಿ ಸುಟ್ಟು ಬಿಡುತ್ತದೆ)

ಇವೆಲ್ಲ ಮಾತುಗಳು - ಹರಿಯ ದರ್ಶನವಾದ ಮೇಲೂ ಪಾಪ ಪರಿಹಾರವಾಗದಿರುವುದುಂಟೇ ? ಎಂಬುದನ್ನು ಪುಷ್ಟೀಕರಿಸುತ್ತವೆ...


(ಮುಂದುವರೆಯುವುದು.... )

Wednesday, 17 February 2016

"ಮಧ್ವ ಲಾವಣಿ" - ರಚನೆ: ಡಾ||ಬನ್ನಂಜೆ ಗೋವಿಂದಾಚಾರ್ಯರು

ಈ ಸುಂದರವಾದ "ಮಧ್ವ-ಲಾವಣಿ"ಯನ್ನು ಆಚಾರ್ಯರು 30 ಶ್ಲೋಕಗಳಲ್ಲಿ ಮುಗಿಸಿಬಿಟ್ಟಿದ್ದಾರೆ...

ಒಂದು ವೇಳೆ 32 ಶ್ಲೋಕಗಳಾಗಿದ್ದಿದ್ದರೆ "ದ್ವಾತ್ರಿಂಶತ್ಗುಣಲಕ್ಷಣ"ಗಳ ಮೂಲಕ ಪರಿಪೂರ್ಣ ದೇಹಪ್ರಮಾಣ (Perfect Human Body) ಹೊಂದಿದ್ದಂತಹ ಶ್ರೀಮಧ್ವಾಚಾರ್ಯರಿಗೊಂದು ಪರಿಪೂರ್ಣ "ಲಾವಣಿ"ಯಾಗುತ್ತಿತ್ತು ಅಂದು ಕೊಂಡು ಮತ್ತೆ ಶ್ಲೋಕ ಸಂಖ್ಯೆಗಳ ಕಡೆ ಕಣ್ಣು ಹಾಯಿಸಿದೆ... ಆಚಾರ್ಯರೇ ಹೊಳೆಸಿದ್ದೇನೋ ಅನ್ನುವಂತೆ ನೋಡಿದರೆ ಶ್ಲೋಕದ ಕ್ರಮಸಂಖ್ಯೆ 21 ಎರಡುಬಾರಿ ಬಂದಿದೆ... ಮತ್ತೆ ಆಚಾರ್ಯರೆ ಬರೆದ ಪ್ರತಿ ನೋಡಿದರೆ ಅಲ್ಲೂ ಕ್ರಮಸಂಖ್ಯೆ 21 ಪುನರಾವರ್ತಿಯಾಗಿದೆ... ಆಗ ಲಾವಣಿಯ ಒಟ್ಟು ಶ್ಲೋಕಗಳು 31 ಆಯಿತು... ಲಾವಣಿಯ ಪಲ್ಲವಿ-ಅನುಪಲ್ಲವಿ ಶ್ಲೋಕ ಸೇರಿದರೆ ಸರಿಯಾಗಿ 32 ಶ್ಲೋಕಗಳಾಗುತ್ತವೆ...

ನನಗೆ ತಡೆಯಲಾರದ ಖುಷಿಯೋ ಖುಷಿ... ಅದನ್ನು ಹೀಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ....

"ಆಚಾರ್ಯರೆಂದರೆ ಶ್ರೀಬನ್ನಂಜೆ ಗೋವಿಂದಾಚಾರ್ಯರಯ್ಯಾ"....

🔹🔹🔹🔹🔹🔹🔹🔹🔹🔹🔹🔹🔹

ಕೇಳಿರಿ ಕೇಳಿರಿ ಚಂದದ ಕಥೆಯ
ಉಡುಪಿಯ ಕೃಷ್ಣನ ತಂದನ ಕಥೆಯ ||ಪಲ್ಲವಿ||
ಕೊಡಬೇಡಿ ಕೊಡಬೇಡಿ ಒಂದು ಚಿಕ್ಕಾಸು
ಹಾಳುಮಾಡದಿರಿ ಬಾಳಿನೊಂದೊಂದು ತಾಸು ||ಅನುಪಲ್ಲವಿ||

ದೇವರ ಆಣತಿ ತಲೆಯಲಿ ಹೊತ್ತು
ಅಂಜನೆಯುದರದಿ ಹುಟ್ಟಿತು ಕೂಸು |
ಬಾಲದ ಬೆಂಕಿಯ ರಿಂಗಣದಿಂದ
ಲಂಕಾ ಪಟ್ಟಣ ಸುಟ್ಟಿತು ಕೂಸು ||1||

ರಕ್ಕಸರೆಲ್ಲಾ ಬೆಕ್ಕಸ ಬೆರಗು
ರಾವಣನೆದೆಗೇ ಗುದ್ದಿತು ಕೂಸು |
ಕಪಿಗಳ ಕಿಲಕಿಲ ಕೇಳಿಸದಾಗ
ಗಂಧಮಾದನವನೆತ್ತಿತು ಕೂಸು ||2||

ಹಾರುವನಾ ಮನೆ-ಮಕ್ಕಳನುಳಿಸಲು
ಬಂಡಿ-ಅನ್ನವನು ಉಂಡಿತು ಕೂಸು |
ಅರಗಿನ ಮನೆಯನು ಬೆಂಕಿಯಲಿರಿಸಿ
ಪಾಂಚಾಲಿಯ ಕೈ ಹಿಡಿಯಿತು ಕೂಸು ||3||

ತನ್ನರಗಿಣಿಗೇ ಹೂವನು ತರಲು
ಮಣಿಮಂತನ ತಲೆ ಮಣಿಸಿತು ಕೂಸು |
ಏಳೂ - ಹನ್ನೊಂದೆದುರೆದುರಾಗಲು
ಕುರುಡನ ಮಕ್ಕಳ ಮುಗಿಸಿತು ಕೂಸು ||4||

ದೇವರ ಆಣತಿ ತಲೆಯಲಿ ಹೊತ್ತು
ಪಾಜಕದಲಿ ಮರು ಹುಟ್ಟಿತು ಕೂಸು |
ಬೆಂದ ಹುರುಳಿಯನು ಅಕ್ಕ ತಿನ್ನಿಸಲು
ಗಕ್ಕನೆ ಮುಕ್ಕಿತ್ತದನೂ ಕೂಸು ||5||

ಹಬ್ಬದ ಮನೆಯಲಿ ಕಣ್ಮರೆಯಾಗಿ
ಕಾನಂಗಿಯ ಗುಡಿಸೇರಿತು ಕೂಸು |
ಬನ್ನಂಜೆಯವನೂ ಜತೆಗೂಡಿರಲು
ಪನ್ನಂಗಶಯನನಿಗೆರಗಿತು ಕೂಸು ||6||

ಕುಂಜಾರಮ್ಮನ ಮುದ್ದಿನ ಕಂದ
ಆನಂದದ ಹೊಳೆ ಹರಿಸಿತು ಕೂಸು |
ನೇಯಂಪಳ್ಳಿಯ ದೇವಳದಲ್ಲಿ
ಶಿವಪುರಾಣಿಕನ ತಿದ್ದಿತು ಕೂಸು ||7||

ತಂದೆ ಮರೆತೊಂದು ಮರದ ಹೆಸರನ್ನು
ಥಟ್ಟನೇ ನೆನಪಿಸಿತು ದಿಟ್ಟ ಕೂಸು |
ಕಾಣುವ ಕಣ್ಣಿಗೆ ಸಂತಸವೀಯುತ
ಯಜ್ಞೋಪವೀತವ ಧರಿಸಿತು ಕೂಸು ||8||

ಮರೆಯಲಿ ಹೊಂಚುತ ಭುಸುಗುಡುತಿದ್ದ
ಘಟಸರ್ಪದ ತಲೆ ಚಚ್ಚಿತು ಕೂಸು |
ತೋಟದ ಮನೆಯಲಿ ಪಾಠವ ಕೇಳುತ
ಗುರುವಿಗೆ ಪಾಠವ ಕಲಿಸಿತು ಕೂಸು ||9||

ಲೋಕಕೆಲ್ಲ ತತ್ವಾಮೃತ ಹಂಚಲು
ಸಂನ್ಯಾಸಿಯಾಗಲು ಬಯಸಿತು ಕೂಸು |
ಅಚ್ಯುತ ಪ್ರಜ್ಞರ ಪುಣ್ಯದ ಪಾಕ
ದಂಡ-ಕಮಂಡಲು ಹಿಡಿಯಿತು ಕೂಸು ||10||

ಹದಿವರಯದಲೇ ಕಾವಿಯನುಟ್ಟು
ಗಂಗೆಯನುಡುಪಿಗೆ ಬರಿಸಿತು ಕೂಸು |
ವಾದಿಸಿಂಹನಾ ಶುಷ್ಕತರ್ಕಗಳ
ಮಗ್ಗುಲು ಮುರಿಯಿತು ಈ ಕೂಸು ||11||

ಭೌದ್ಧಕುಲಗುರು ಬುದ್ಧಿಸಾಗರನ
ಪೆದ್ದನಾಗಿಸಿತು ಗೆದ್ದು ಕೂಸು |
ಆನಂದತೀರ್ಥರೆಂಬಭಿಧಾನ ಪಡೆದು
ವೇದಾಂತ ರಾಜ್ಯವನಾಳಿತು ಕೂಸು ||12||

ಅನಂತಶಯನನ ಪದಗಳಿಗೆರಗಿ
ಸೂತ್ರ ಪ್ರವಚನ ಗೈಯುತ ಕೂಸು |
ತತ್ವಾಮೃತವನು ಎಲ್ಲರಿಗುಣಿಸುತ
ಶ್ರೀರಂಗನಾಥನಿಗೆರಗಿತು ಕೂಸು ||13||

ಸಹಸ್ರನಾಮಕೆ ನೂರರ್ಥವೆನ್ನುತ
ಕವಿಗಳಿಗಚ್ಚರಿ ಬರಿಸಿತು ಕೂಸು |
ಶ್ರೀಮದ್ಗೀತಾ ಭಾಷ್ಯವ ರಚಿಸಿ
ಬದರೀಶನ ಬಳಿ ಪಠಿಸಿತು ಕೂಸು ||14||

ಬಾದರಾಯಣನ ಕಾಣಲಿಕೆಂದು
ವ್ಯಾಸಾಶ್ರಮಕೇ ತೆರಳಿತು ಕೂಸು |
ನಾರಾಯಣನೇ ಹರಸುತಲಿತ್ತ
ಚಕ್ರಾಂಕಿತ ಶಿಲೆ ಪಡೆಯಿತು ಕೂಸು ||15||

ಬಾದರಾಯಣನ ನಾದಿನಾರಾಯಣನ
ಹರಕೆಯ ಹೊತ್ತು ಮರಳಿತು ಕೂಸು |
ಸಕಲ ಶಾಸ್ತ್ರಗಳ ಕಡೆದೂ ಕಡೆದೂ
ಸೂತ್ರಕೆ ಭಾಷ್ಯವ ರಚಿಸಿತು ಕೂಸು ||16||

ಕಾಲಿಗೆರಗಿದಾ ಶೋಭನ ಭಟ್ಟರ
ಪಾಲಿಗೆ ಕಲ್ಪದ್ರುಮವೀ ಕೂಸು |
ಅಚ್ಯುತಪ್ರಜ್ಞರ ಒಳಗಣ್ ತೆರೆಸಿ
ಚಕ್ರಶಂಖಗಳನೊತ್ತಿತು ಕೂಸು ||17||

ಹುಟ್ಟೂರಿನಿಂದ ಉಡುಪಿಗೆ ಬಂದ
ಕೃಷ್ಣನ ಕಡಲಿಂದೆತ್ತಿತು ಕೂಸು |
ತನಗೊಲಿದು ಬಂದನ ಆನಂದಕಂದನ
ಉಡುಪಿಯಲ್ಲಿ ನೆಲೆಗೊಳಿಸಿತು ಕೂಸು ||18||

ಈಶ್ವರ ದೇವನ ಅಗೆಯಲು ಹಚ್ಚಿ
ಕೆರೆಯಲಿ ನೀರನು ಹರಿಸಿತು ಕೂಸು |
ದೋಣಿಯೆ ಇಲ್ಲದ ಗಂಗೆಯ ದಾಟಿ
ಮುಸಲರ ನಾಡಿಗೆ ನಡೆಯಿತು ಕೂಸು ||19||

ಅಲ್ಲಾ ಎನ್ನುವ ಮುಲ್ಲಾಗಳಿಗೂ
ಎಲ್ಲಾ ಹರಿ - ಹೆಸರೆಂದಿತು ಕೂಸು |
ಮೆಚ್ಚಿದ ನವಾಬ ಜಹಗೀರಿತ್ತರೆ
ಮುಟ್ಟದೆ ಬದರಿಗೆ ತೆರಳಿತು ಕೂಸು ||20||

ಕಾಡಿನ ದರೋಡೆಕೋರರ ತಡೆಯಲು
ಉಪೇಂದ್ರತೀರ್ಥರ ಕಳಿಸಿತು ಕೂಸು |
ಹಸ್ತಿನ ಪುರದಲಿ ಮೈವೆತ್ತು ಬಂದು
ನಮಿಸಿದ ಗಂಗೆಯ ಹರಸಿತು ಕೂಸು ||21||

ಹತ್ತು ಮತ್ತೂ ಐದು ಜಟ್ಟಿ ಶಿಷ್ಯರನು
ಒಟ್ಟಿಗೇ ಜಾಡಿಸಿದ ಗಟ್ಟಿಗ ಕೂಸು |
ಹರಿಯಾಣತಿ ಬಲದಿಂದಲೆ ಭಾರತ-
ತಾತ್ಪರ್ಯನಿರ್ಣಯ ರಚಿಸಿತು ಕೂಸು ||21||

ಸಪಾದಲಕ್ಷಗ್ರಂಥವನೊಂದೇ
ವಾಕ್ಯದಿ ಖಂಡಿಸಿ ನಕ್ಕಿತು ಕೂಸು |
ಮದವೂರಿನ ಮದನೇಶ್ವರದಲಿ
ದೊರೆ ಜಯಸಿಂಹನ ಹರಸಿತು ಕೂಸು ||22||

ಕಾಲಡಿ ಕೆಂಪು ಉಗುರೂ ಕೆಂಪು
ತಂಪೋ ತಂಪು ಏಳಡಿ ಕೂಸು |
ಹದ್ದಿನ ಹರಡು ಮೊಣಗಾಲುರುಟು
ಆನೆಯ ಸೊಂಡಿಲೆ ತೊಡೆ ಗಡ ಕೂಸು ||23||

ಕಾವೀ ಸುತ್ತಿದ ಸೊಂಟವೆ ಸೊಗಸು
ಮೂರೂ ಲೋಕಕೆ ಒಡೆಯನು ಕೂಸು |
ಹೆಗಲಲುಣ್ಣೆಯ ಶಾಲು ಆಜಾನು ತೋಳು
ಚಂದಿರನ ನಾಚಿಸುವ ಚೆಲುಮೊಗದ ಕೂಸು ||24||

ಮೂರು ವಿಕ್ರಮದ ಪೆಜತ್ತಾಯರಿಗೆ
ಪರಮ‌ಾನುಗ್ರಹ ಮಾಡಿದ ಕೂಸು |
ಏಳೆಂಟು ದಿನದ ಹದವಾದ ವಾದದಲಿ
ಪಂಡಿತಾಚಾರ್ಯರನು ಗೆದ್ದ ಕೂಸು ||25||

ಪಂಡಿತರಿಗು ಪಂಡಿತ ಲಿಕುಚ ಪಂಡಿತರಿಂದ
ತತ್ವ ಪ್ರದೀಪವ ಬರೆಸಿತು ಕೂಸು |
ಅವರ ಕೋರಿಕೆಯಂತೆ ತಾನನುವ್ಯಾಖ್ಯಾನ
ನಮಗೆ ಕರುಣಿಸಿತು ಕರುಣಾಳು ಕೂಸು ||26||

ನಾಕು ಶಿಷ್ಯರ ಕೈಲಿ ನಾಕು ಅಧ್ಯಾಯಗಳ
ಒಟ್ಟಿಗೇ ಒರೆದು ಬರೆಯಿಸಿದ ಕೂಸು |
ತನ್ನ ಸೋದರಗೆ ತಪಸಿನಾಗರಗೆ
ಸಂನ್ಯಾಸ ದೀಕ್ಷೆಯನ್ನಿತ್ತ ಕೂಸು ||27||

ಎಲ್ಲರ ಮೀರಿಸಿ ಎತ್ತರಕೇರಿಸಿ
ತಾರದ ಗುಟ್ಟನ್ನರುಹಿತು ಕೂಸು |
ಒಟ್ಟು ಒಂಭತ್ತು ಯತಿಗಳಿಗೆ ಕೂಡಿ
ವೇದಾಂತ ರಾಜ್ಯವನಿತ್ತಿತು ಕೂಸು ||28||

ಹಸುರು ಕಾಳನ್ನು ಹಿಡಿದು ಜಪಿಸುತ್ತ
ಮೊಳಕೆ ಬರಿಸಿತು ಮಂತ್ರ ತಜ್ಞ ಕೂಸು |
ಗ್ರಹಣದಾ ಕತ್ತಲಲಿ ಕಾಲುಗುರ ಬೆಳಕಿಂದ
ಪಾಠ ಮಾಡಿದ ತೇಜಃಪುಂಜ ಕೂಸು ||29||

ಭಾರಿ ಬಂಡೆಯನು ಒಂದೇ ಕೈಲೆತ್ತಿ
ತುಂಗಭದ್ರೆಯ ತಡಿಯಲಿಟ್ಟ ಕೂಸು |
ಮರೆಯಲಿದ್ದು ನಮ ಹರಸುತಿರುವಂಥ
ಗೋವಿಂದವಿಟ್ಠಲನ ಮೋಕೆಯಾ ಕೂಸು ||30||

****