Wednesday 18 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 11 - 15

ಅಥಾsಹ ಚೇದಿಭೂಪತಿಃ ಸದನ್ತವಕ್ರಕೋ ವಚಃ ।
ಪುರಾ ಹರೇರ್ಹಿ ಪಾರ್ಷದಃ ಪ್ರಸನ್ನಬುದ್ಧಿರೇಕದಾ ॥೧೭.೧೧॥
ಆ ನಂತರ ದಂತವಕ್ರನೊಂದಿಗಿದ್ದ ಚೇದಿರಾಜನಾದ  ಶಿಶುಪಾಲ ಮಾತಾಡುತ್ತಾನೆ,
ಪರಮಾತ್ಮನ ದ್ವಾರಪಾಲಕರಾಗಿದ್ದ ಹಿನ್ನೆಲೆಯಿಂದ ಭಕ್ತಿಯುಕ್ತ ಹಿತ ನುಡಿಯುತ್ತಾನೆ.

ಶೃಣುಷ್ವ ರಾಜಸತ್ತಮ ಪ್ರಭುಂ ಶಿವಸ್ವಯುಮ್ಭುವೋಃ ।
ಹರಿಂ ವದನ್ತಿ ಕೇಚಿದಪ್ಯದೋ ಭವೇನ್ನ ವೈ ಮೃಷಾ ॥೧೭.೧೨॥
ಕೇಳು ರಾಜರಲ್ಲಿ ಅಗ್ರಗಣ್ಯನಾದ ಓ ಜರಾಸಂಧ,
ಇದೆ ಬ್ರಹ್ಮರುದ್ರರಿಗೆ ನಾರಾಯಣ ರಾಜನೆಂಬ ವಾದ.
ಅದು ಸುಳ್ಳಲ್ಲ ಎಂಬುದು ನನ್ನ ಮನ ಮಿಡಿವ ನಾದ.

ತಥಾssವಯೋಶ್ಚ ದರ್ಶನೇ ಭವೇತ್ ಕದಾಚಿದೂರ್ಜ್ಜಿತಾ ।
ಅಮುಷ್ಯ ಭಕ್ತಿರನ್ಯಥಾ ಪುನಶ್ಚ ಜಾಯತೇ ಕ್ರುಧಾ ॥೧೭.೧೩॥
ನನಗೂ ದಂತವಕ್ರನಿಗೂ ಕೃಷ್ಣನಮೇಲೆ ಒಮ್ಮೊಮ್ಮೆ ಉಕ್ಕುವ ಶ್ರೇಷ್ಠ ಭಕ್ತಿ,
ಕೆಲವೊಮ್ಮೆ ತೂರಿಬರುವ ಉತ್ಕಟ ಕೋಪ ದ್ವೇಷ ಕ್ರೂರತ್ವ ಅಭಿವ್ಯಕ್ತಿ. 

ನ ಕಾರಣಂ ಚ ವಿದ್ಮಹೇ ನ ಸಂಶಯಃ ಪರೋ ಹರಿಃ ।
ವ್ರಜಾಮ ತಂ ಸುಖಾರ್ತ್ಥಿನೋ ವಯಂ ವಿಹಾಯ ಶತ್ರುತಾಮ್ ॥೧೭.೧೪॥
ಹೀಗೇಕೆ ಎಂಬ ಕಾರಣವದು ತಿಳಿದಿಲ್ಲ,
ಹರಿ ಉತ್ಕೃಷ್ಟ ಎಂಬುವಲ್ಲಿ ಸಂಶಯವಿಲ್ಲ.
ನಮಗೆ ಅವನೊಂದಿಗೆ ಶತ್ರುತ್ವವದು ಬೇಡ,
ಸುಖಕ್ಕಾಗಿ ಹಿಡಿಯೋಣ ಶರಣಾಗತಿ ಜಾಡ.

ಇದಂ ಹಿ ನಃ ಶುಭಪ್ರದಂ ನಚಾನ್ಯಥಾ ಶುಭಂ ಕ್ವಚಿತ್ ।
ಇತೀರಿತೋ ಜರಾಸುತೋ ದದರ್ಶ ತೌ ದಹನ್ನಿವ ॥೧೭.೧೫॥
ಹೀಗೆ ಮಾಡಿದರೆ ನಮಗೆ ಒಳ್ಳೆಯದು,
ಇಲ್ಲದಿರೆ ಒಳಿತಾಗುವುದಿಲ್ಲ ನಮಗೆಂದೂ.
ಕೇಳಿಸಿಕೊಂಡ ಜರಾಸಂಧ ಮೇಲಿನ ಮಾತ,
ಅವನತ್ತ ಬಿಟ್ಟನಾಗ ಸುಟ್ಟುಬಿಡುವ ನೋಟ.
[Contributed by Shri Govind Magal] 

Tuesday 10 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 06 - 10

ಕಿಮತ್ರ ನಃ ಕೃತಂ ಭವೇತ್ ಸುಖಾಯ ಹೀತಿ ತೇsಭ್ರುವನ್ ।
ಅಥಾಬ್ರವೀಜ್ಜರಾಸುತೋ ಜಯೀ ಪಯೋಬ್ಧಿಮನ್ದಿರಃ ।
ಕಿಲೈಷ ಪಕ್ಷಿವಾಹನೋ ಯತಶ್ಚ ನಾನ್ಯಥಾ ಭವೇತ್ ॥೧೭.೦೬॥
ಶ್ರೀಕೃಷ್ಣ ಗರುಡವಾಹನನಾಗಿ ಬಂದ ಸುದ್ದಿ ತಿಳಿದ ಆ  ರಾಜವೃಂದ,
ಚರ್ಚಿಸುತ್ತ ಕೇಳುತ್ತಾರೆ ಏನುಮಾಡಿದರೆ ನಮಗೆ ಹಿತ ಜರಾಸಂಧ.
ಜರಾಸಂಧ ನುಡಿದ -ಕ್ಷೀರಸಾಗರಶಾಯಿ ಉತ್ಕೃಷ್ಟ ಉನ್ನತ,
ಅವನು ಪಕ್ಷಿವಾಹನನಾಗಿ ಹೀಗೆ ಬಂದಿರುವುದೇ ಸಂಕೇತ.
ಆ ಹಾಲುಗಡಲವಾಸಿ ಗರುಡವಾಹನ,
ಅವನೇ ಇವನು- ಶ್ರೀಮನ್ನಾರಾಯಣ.

ಜಿತಾ ವಯಂ ಚ ಸರ್ವಶೋsಮುನೈಕಲೇನ ಸಂಯುಗೇ ।
ಅನೇಕಶೋ ನ ಸಙ್ಗತೈರ್ಜ್ಜಿತಃ ಕದಾಚಿದೇಷಹಿ ॥೧೭.೦೭॥
ಅಮುಷ್ಯ ಚಾಗ್ರಜಃ ಪುರಾ ನಿಹನ್ತುಮುದ್ಯತೋ ಹಿ ಮಾಮ್ ।
ಅದೃಶ್ಯವಾಕ್ಯತೋsತ್ಯಜತ್ ಪ್ರತಾಡನಾತ್ ಸುಪೀಡಿತಮ್ ॥೧೭.೦೮॥
ಇವನು ಏಕಾಂಗಿಯಾಗಿದ್ದಾಗಲೂ ಕೂಡಾ,
ನಮಗೆ ಪ್ರತಿಬಾರಿ ತೋರಿದ್ದಾನೆ ಸೋಲಿನ ಜಾಡ.
ನಾವೆಲ್ಲಾ ಒಟ್ಟಾಗಿ ಮಾಡಿದರೂ ಹೋರಾಟ,
ಅವನದೆಂದೂ ಸೋಲಿರದ ಗೆಲುವಿನಾಟ.

ಕಿಮಸ್ಯ ತೂಚ್ಯತೇ ಬಲಂ ವಯಂ ತೃಣೋಪಮಾಃ ಕೃತಾಃ ।
ಸಮಸ್ತಶೋ ಮೃಧೇಮೃಧೇ ಹಿ ಯೇನ ಚಾಕ್ಷತೇನ ಹಾ ॥೧೭.೦೯॥
ಇನ್ನು ಇವನ ಬಲದ ಬಗ್ಗೆ ವಿಶೇಷವಾಗಿ  ಹೇಳುವುದೇನು,
ಅವನೆದುರು ನಾವು ಹುಲ್ಲಿಗಿಂತ ಕಡಿಮೆಯಾಗಿಲ್ಲವೇನು.
ಪ್ರತಿಯುದ್ಧದಲ್ಲೂ ಅವನಿಗಾಗಿಲ್ಲ ನಾಶ,
ಗಾಯವೂಗೊಂಡಿಲ್ಲ ಅವನು ಲವಲೇಶ.

ಕಿಮತ್ರ ಕುರ್ವತಾಂ ಸುಖಂ ಭವೇದುದೀರ್ಣ್ಣಸಙ್ಕಟೇ ।
ಇತಿ ಬ್ರುವನ್ನವಾಙ್ ಮುಖಂ ನೃಪಶ್ಚಕಾರ ವಿಚ್ಛವಿ ॥೧೭.೧೦॥
ಮಹಾಸಂಕಟ ಪ್ರಾಪ್ತವಾಗಿರುವ ಇಂಥಾ ಪರಿಸ್ಥಿತಿಯಲ್ಲಿ,
ಸುಖ ಹೇಗೆಂದು ಕಳೆಗುಂದಿದ ತಲೆ ತಗ್ಗಿಸಿದ ಜರಾಸಂಧನಲ್ಲಿ.


ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 01 - 05

॥ ಓಂ ॥
ಗತೇsಥ ಚೇದಿಪೇ ಸ್ವಕಂ ಪುರಂ ಜಾನಾರ್ದ್ದನೋsಶೃಣೋತ್ ।
ಮೈವ ರುಗ್ಮಿಣೀತಿ ಯೋದ್ಯತಾಂ ಸ್ವಯಮ್ಬರಾಯ ತಾಮ್ ॥೧೭.೦೧॥
ಈ ರೀತಿಯಾಗಿ ಚೇದಿರಾಜನಾದ ದಮಘೋಷ ತನ್ನ ಪಟ್ಟಣಕ್ಕೆ ತೆರಳಿದ,
ರುಗ್ಮಿಣಿ ಹೆಸರಿಂದವತರಿಸಿದ ರಮೆಯ ಸ್ವಯಂಬರದ  ಸುದ್ದಿ ಜನಾರ್ದನ ತಿಳಿದ.

ಸ ರುಗ್ಮಿನಾಮಕೋsಗ್ರಜಃ ಶ್ರಿಯೋ ದ್ವಿಷನ್ ರಮಾಪತಿಮ್ ।
ಹರೇಃ ಪ್ರದಾತುಮುದ್ಯತಾಂ ನ್ಯವಾರಯದ್ಧರಿಪ್ರಿಯಾಮ್ ॥೧೭.೦೨॥
ರುಗ್ಮಿ ಎಂಬ ಹೆಸರಿಂದ ಕರೆಯಲ್ಪಡುತ್ತಿದ್ದ ರುಗ್ಮಿಣಿಯ ಅಣ್ಣ,
ಹರಿದ್ವೇಷದಿಂದ ಕೃಷ್ಣಗವಳ ಕೊಡದಿರಲು ತಾನಾದ ಕಾರಣ.

ಪ್ರಘೋಷಿತೇ ಸ್ವಯಮ್ಬರೇsಥ ತೇನ ಮಾಗಧಾದಯಃ  ।
ಸಮೀಯುರುಗ್ರಪೌರುಷಾಃ ಸಸಾಲ್ವಪೌಣ್ಡ್ರಚೇದಿಪಾಃ ॥೧೭.೦೩॥
ಅತ್ತ ಹೀಗೆ ಆಗುತ್ತಿರಲು ರುಗ್ಮಿಣಿದೇವಿಯ ಸ್ವಯಂಬರದ ಘೋಷಣೆ,
ನಿಮಿತ್ತವಾಯಿತು ಜರಾಸಂಧ ಸಾಲ್ವ ಪೌಂಡ್ರ ಶಿಶುಪಾಲರ ಜಮಾವಣೆ.

ತದಾ ಜಗಾಮ ಕೇಶವೋ ಜವೇನ ಕುಣ್ಡಿನಂ ಪುರಮ್ ।
ಸ್ಮೃತೋsಥ ತೇನ ಪಕ್ಷಿರಾಟ್ ಸಮಾಜಗಾಮ ಕೇಶವಮ್ ॥೧೭.೦೪॥

ಆಗ ಕೃಷ್ಣನಿಂದ ಸ್ಮರಿಸಲ್ಪಟ್ಟ ಗರುಡದೇವನ ಆಗಮನ.
ಗರುಡನೇರಿ ಕುಂಡಿನದೇಶದತ್ತ ಶ್ರೀಕೃಷ್ಣನ ಪ್ರಯಾಣ.

ಪತತ್ರವಾಯುನಾsಸ್ಯ ತೇ ನರೇಶ್ವರಾಃ ಪ್ರಪಾತಿತಾಃ ।
ಯದೇದೃಶಂ ಪತತ್ರಿಣೋ ಬಲಂ ಹರೇಃ ಕಿಮುಚ್ಯತೇ ॥೧೭.೦೫॥
ಗರುಡನ ರೆಕ್ಕೆಯ ಗಾಳಿಯ ಬಲ,
ಜರಾಸಂಧಾದಿಗಳು ಕಚ್ಚಿದರು ನೆಲ.
ಪಕ್ಷಿಯಾದ ಗರುಡನ ಬಲವೇ ಹೀಗೆ,
ಅದರೊಡೆಯ ಹರಿಯ ಬಲ ಇನ್ಹೇಗೆ. 

Sunday 8 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 16: 28 - 33

ಕೃಷ್ಣೋ ಜಿತ್ವಾ ಮಾಗಧಂ ರೌಹಿಣೇಯಯುಕ್ತೋ ಯಯೌ ದಮಘೋಷೇಣ ಸಾರ್ದ್ಧಮ್ ।
ಪಿತೃಷ್ವಸಾಯಾಃ ಪತಿನಾ ತೇನ ಚೋಕ್ತಃ ಪೂರ್ವಂ ಜಿತೇನಾಪಿ ಯುಧಿ ಸ್ಮ ಬಾನ್ಧವಾತ್ ॥೧೬.೨೮ ॥
ಕೃಷ್ಣ ಬಲರಾಮನೊಂದಿಗೆ ಮಾಗಧನನ್ನು ಗೆದ್ದ,
ಅತ್ತೆಯಗಂಡ ದಮಘೋಷನೊಡಗೂಡಿ ತೆರಳಿದ.
ಸೋತವನೊಂದಿಗೆ ಹೊರಟದ್ದು ಬಾಂಧವ್ಯದಿಂದ.

ಯಾಮಃ ಪುರಂ ಕರಿವೀರಾಖ್ಯಮೇವ ಮಹಾಲಕ್ಷ್ಮ್ಯಾಃ ಕ್ಷೇತ್ರಸನ್ದರ್ಶನಾಯ ।
ಶ್ರುತ್ವಾ ವಾಕ್ಯಂ ತಸ್ಯ ಯುದ್ಧೇ ಜಿತಸ್ಯ ಭೀತ್ಯಾ ಯುಕ್ತಸ್ಯಾsತ್ಮನಾ ತದ್ಯುತೋsಗಾತ್ ॥೧೬.೨೯ ॥
ಸೋತ ದಮಘೋಷ ಭಯದಿಂದ ಕರವೀರಪುರಕ್ಕೆ ಹೋಗೋಣವೆಂದ,
ಪರಾಜಿತನ ಮಾತಿನಂತೆ ಕೃಷ್ಣ  ಕರವೀರಪುರದೆಡೆ  ಅವನ ಜೊತೆ ತೆರಳಿದ.

ಗನ್ಧರ್ವೋsಸೌ ದನುನಾಮಾ ನರೋsಭೂತ್ ತಸ್ಮಾತ್ ಕೃಷ್ಣೇ ಭಕ್ತಿಮಾಂಶ್ಚಾsಸ ರಾಜಾ ।
ಪುರಪ್ರಾಪ್ತಾಂಸ್ತಾನ್ ಸ ವಿಜ್ಞಾಯ ಪಾಪಃ ಸೃಗಾಲಾಖ್ಯೋ ವಾಸುದೇವಃ ಕ್ರುಧಾssಗಾತ್ ॥೧೬.೩೦ ॥
ಈ ದಮಘೋಷ ಮೂಲತಃ ದನು ಎಂಬ ಗಂಧರ್ವ,
ಈಗ ಮನುಷ್ಯಲೋಕದಿ ಅವತರಿಸಿ ಬಂದಿರುವವ.
ಮೂಲಗಂಧರ್ವನಾದ್ದರಿಂದ ಕೃಷ್ಣಭಕ್ತಿಯುಳ್ಳವ,
ಸುದ್ದಿ ತಿಳಿದು ಅವರತ್ತ ಬಂದ ಸೃಗಾಲವಾಸುದೇವ.

ಸೂರ್ಯ್ಯಪ್ರದತ್ತಂ ರಥಮಾರುಹ್ಯ ದಿವ್ಯಂ ವರಾದವದ್ಧ್ಯಸ್ತಿಗ್ಮರುಚೇಃ ಸ ಕೃಷ್ಣಮ್ ।
ಯೋದ್ಧುಂ ಯಯಾವಮುಚಚ್ಚಾಸ್ತ್ರಙ್ಘಾಞ್ಛಿರಸ್ತಸ್ಯಾಥಾsಶು ಜಹಾರ ಕೃಷ್ಣಃ ॥ ೧೬.೩೧ ॥
ಆ ಸೃಗಾಲವಾಸುದೇವ ಸೂರ್ಯನಿತ್ತ ರಥವನ್ನು ಏರಿ,
ಅವಧ್ಯತ್ವ ಹೊಂದಿದವ ಯುದ್ಧಕ್ಕೆ ಬಂದ ಕೃಷ್ಣನ ಮೇಲೇರಿ.
ಕೃಷ್ಣನ ಮೇಲೆ ಸೃಗಾಲ ಅನೇಕ ಅಸ್ತ್ರಗಳ ಬಿಟ್ಟ,
ಶ್ರೀಕೃಷ್ಣ ನೋಡುತ್ತಲೇ ಅವನ ತಲೆ ತೆಗೆದುಬಿಟ್ಟ.

ದ್ವಿಧಾ ಕೃತ್ವಾ ದೇಹಮಸ್ಯಾರಿಣಾ ಚ ಪುತ್ರಂ ಭಕ್ತಂ ತಸ್ಯ ರಾಜ್ಯೇsಭಿಷಿಚ್ಯ ।
ಸ ಶಕ್ರದೇವಂ ಮಾಣಿಭದ್ರಃ ಪುರಾ ಯೋ ಯಯೌ ಪುರೀಂ ಸ್ವಾಂ ಸಹಿತೋsಗ್ರಜೇನ ॥೧೬.೩೨ ॥
ಶ್ರೀಕೃಷ್ಣ ಚಕ್ರದಿಂದ ಸೃಗಾಲನ ದೇಹವ ಎರಡಾಗಿ ಸೀಳಿದ,
ಅವನ ಮಗನಾದ ಭಕ್ತ ಶಕ್ರದೇವಗೆ ಅಭಿಷೇಕ ಮಾಡಿದ.
ರಾಜ್ಯಾಭಿಷೇಕದ ನಂತರ ಕೃಷ್ಣ ತನ್ನೂರಿಗೆ ತೆರಳಿದ,
ಮೂಲದಲ್ಲಿ ಈ ಶಕ್ರದೇವ ಮಣಿಭದ್ರನ (ಕುಬೇರನ) ಸೇವಕ,
ಅಣ್ಣನೊಡನೆ ಮಧುರೆಗೆ ಹೊರಟ ಕೃಷ್ಣ ಮುಗಿಸಿ ಅಭಿಷೇಕ.

ನೀತಿಂ ಬಲಿಷ್ಠಸ್ಯ ವಿಹಾಯ ಸೇನಾಂ ದೂರಾದ್ ಯುದ್ಧಂ ದರ್ಶಯಿತ್ವೈವ ಗುಪ್ತ್ಯೈ ।
ಸ್ವಸೇನಾಯಾಃ ಸರ್ವಪೂರ್ಣ್ಣಾತ್ಮಶಕ್ತಿಃ ಪುನಃ ಪುರೀಂ ಪ್ರಾಪ್ಯ ಸ ಪೂಜಿತೋsವಸತ್ ॥೧೬.೩೩ ॥
ಬಲಿಷ್ಠನೊಬ್ಬ ಸೇನೆಯನ್ನು ಬಿಟ್ಟು ದೂರದಿಂದ ತನ್ನ ದೇಶ ರಕ್ಷಿಸುವ ರೀತಿ,
ಕೃಷ್ಣ ತೋರಿದ ತನ್ನ ದೇಶದ ರಕ್ಷಣೆಗಾಗಿ ಯುದ್ಧ ಕೌಶಲ್ಯದ ವಿಶೇಷ ನೀತಿ.
ಮತ್ತೆ ಮಧುರೆಗೆ ತೆರಳಿ ಪೂಜಿತನಾದ ಕೃಷ್ಣನೆಂಬ ಸಾಟಿಯಿರದ ಪೂರ್ಣಶಕ್ತಿ.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸೃಗಾಲವಧೋ ನಾಮ ಷೋಡಶೋsದ್ಧ್ಯಾಯಃ ॥
ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ
ಶ್ರೀಮನ್ಮಹಾಭಾರತತಾತ್ಪರ್ಯನಿರ್ಣಯಾನುವಾದ,
ಸೃಗಾಲವಧ ಹೆಸರಿನ ಹದಿನಾರನೇ ಅಧ್ಯಾಯ,
                                         ಸೂತ್ರಧಾರ ಶ್ರೀಕೃಷ್ಣಗರ್ಪಿಸಿದ ಧನ್ಯತಾ ಭಾವ.

Saturday 7 March 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 16: 20 - 27


ಜರಾಸುತೋ ರೌಹಿಣೇಯೇನ ಯುದ್ಧಂ ಚಿರಂ ಕೃತ್ವಾ ತನ್ಮುಸಲೇನ ಪೋಥಿತಃ ।
ವಿಮೋಹಿತಃ ಪ್ರಾಪ್ತಸಂಜ್ಞಶ್ಚಿರೇಣ ಕ್ರುದ್ಧೋ ಗದಾಂ ತದುರಸ್ಯಭ್ಯಪಾತಯತ್ ॥೧೬.೨೦ ॥
ನಡೆಯಿತು ಜರಾಸಂಧ ಬಲರಾಮರ ದೀರ್ಘ ಸೆಣೆಸಾಟ,
ಒನಕೆ ಪೆಟ್ಟಿನಿಂದ ಜರಾಸಂಧನಾಗ ಪ್ರಜ್ಞಾಹೀನ ಆದನೋಟ.
ಬಹಳ ಹೊತ್ತಿನ ನಂತರ ಸುಧಾರಿಸಿಕೊಂಡ ಜರಾಸಂಧ,
ಕೋಪದಿಂದ ತನ್ನ ಗದೆಯ ಬಲರಾಮನ ಮೇಲೆಸೆದ.


ತೇನಾsಹತಃ ಸುಭೃಶಂ ರೌಹಿಣೇಯಃ ಪಪಾತ ಮೂರ್ಛಾಭಿಗತಃ ಕ್ಷಣೇನ ।
ಅಜೇಯತ್ವಂ ತಸ್ಯ ದತ್ತಂ ಹಿ ಧಾತ್ರಾ ಪೂರ್ವಂ ಗೃಹೀತೋ ವಿಷ್ಣುನಾ ರಾಮಗೇನ ॥೧೬.೨೧ ॥
ಅವನಿಂದ ಹೊಡೆತ ತಿಂದ ಬಲರಾಮ ಮೂರ್ಛೆಹೋದ,
ಬ್ರಹ್ಮನಿಂದ ಅಜೇಯತ್ವ ವರ ಪಡೆದಿದ್ದ ಜರಾಸಂಧ.
ಹಿಂದೆ ಜರಾಸಂಧನ ಹಿಡಿದದ್ದು ಬಲರಾಮನೊಳಗಿದ್ದ,
ಆ ಭಗವಂತನದೇ ಆದ ಸಂಕರ್ಷಣನ ಶಕ್ತಿಯಿಂದ.

ತಥಾಕೃತೇ ಬಲಭದ್ರೇ ತು ಕೃಷ್ಣೋ ಗದಾಮಾದಾಯ ಸ್ವಾಮಗಾನ್ಮಾಗಧೇಶಮ್ ।
ತತಾಡ ಜತ್ರೌ ಸ ತಯಾsಭಿತಾಡಿತೋ ಜಗಾಮ ಗಾಂ ಮೂರ್ಚ್ಛಯಾsಭಿಪ್ಲುತಾಙ್ಗಃ ॥೧೬.೨೨ ॥
ಬಲರಾಮಗೆ ಬಲವಾಗಿ ಹೊಡೆತ ಕೊಟ್ಟಾಗ  ಜರಾಸಂಧ,
ಕೃಷ್ಣ ಕೌಮೋದಕಿ ಹಿಡಿದು ಜರಾಸಂಧನ ಮೇಲೇರಿ ಹೋದ.
ಆ ಗದೆಯಿಂದ ಜರಾಸಂಧನ ಹೆಗಲಸಂದಿಗೆ ಹೊಡೆದ,
ಜರಾಸಂಧ ಒದ್ದಾಡಿ ಮೂರ್ಛೆಹೊಂದಿ ನೆಲಕ್ಕೆ ಒರಗಿದ.

ಅಥೋತ್ತಸ್ಥೌ ರೌಹಿಣೇಯಃ ಸಹೈವ ಸಮುತ್ತಸ್ಥೌ ಮಾಗಧೋsಪ್ಯಗ್ರ್ಯವೀರ್ಯ್ಯಃ ।
ಕ್ರುದ್ಧೋ ಗೃಹೀತ್ವಾ ಮೌಲಿಮಸ್ಯಾsಶು ರಾಮೋ ವಧಾಯೋದ್ಯಚ್ಚನ್ಮುಸಲಂ ಬಾಹುಷಾಳೀ ॥೧೬.೨೩ ॥
ತದನಂತರ ಬಲರಾಮ ಮೇಲೆದ್ದ,
ಪರಾಕ್ರಮಿ ಜರಾಸಂಧನೂ ಎದ್ದ.
ಕೋಪದಿಂದ ಬಲರಾಮ ಜರಾಸಂಧನ ತಲೆಗೂದಲ ಹಿಡಿದ,
ಬಲವಂತ ಬಲರಾಮ ಜರಾಸಂಧನ ಕೊಲ್ಲಲು ಒನಕೆ ಹಿಡಿದ.

ಅಥಾಬ್ರವೀದ್ ವಾಯುರೇನಂ ನ ರಾಮ ತ್ವಯಾ ಹನ್ತುಂ ಶಕ್ಯತೇ ಮಾಗಾಧೋsಯಮ್ ।
ವೃಥಾ ನ ತೇ ಬಾಹುಬಲಂ ಪ್ರಯೋಜ್ಯಮಮೋಘಂ ತೇ ಯದ್ ಬಲಂ ತದ್ವದಸ್ತ್ರಮ್ ॥೧೬.೨೪
ಆನಂತರ ಮುಖ್ಯಪ್ರಾಣನಿಂದ ಬಲರಾಮಗೆ ಅಶರೀರವಾಣಿ ಸಂದೇಶ,
ನೀನವನ ಕೊಲ್ಲಲಾರೆ ನಿನ್ನ ಬಲ ಅಸ್ತ್ರ ವ್ಯರ್ಥ ಮಾಡಬೇಡೆಂದು ಆದೇಶ.

ಅನ್ಯೋ ಹನ್ತಾ ಬಲವಾನಸ್ಯ ಚೇತಿ ಶ್ರುತ್ವಾ ಯಯೌ ಬಲಭದ್ರೋ ವಿಮುಚ್ಯ ।
ಜರಾಸುತಂ ಪುನರುದ್ಯಚ್ಛಮಾನಂ ಜಘಾನ ಕೃಷ್ಣೋ ಗದಯಾ ಸ್ವಯೈವ ॥೧೬. ೨೫ ॥
ಇನ್ನೊಬ್ಬ ಬಲಿಷ್ಠ ಇವನನ್ನು ಕೊಲ್ಲುತ್ತಾನೆ ಎಂಬ ಮಾತು,
ಜರಾಸಂಧನ ಅಲ್ಲೇ ಬಿಟ್ಟು ಬಲರಾಮನ ಆಚೆ ಕಳಿಸಿತು.
ಮತ್ತೆ ಅವನತ್ತ ಧಾವಿಸುತ್ತಿದ್ದ ಜರಾಸಂಧ,
ಕೃಷ್ಣ ಕೌಮೋದಕಿಯಿಂದ ಅವನ ಹೊಡೆದ.

ತೇನಾsಹತಃ ಸ್ತ್ರಸ್ತಸಮಸ್ತಗಾತ್ರಃ ಪಪಾತ ಮೂರ್ಚ್ಛಾಭಿಗತಃ ಸ ರಾಜಾ ।
ಚಿರಾತ್ ಸಙ್ಜ್ಞಾಂ ಪ್ರಾಪ್ಯ ಚಾನ್ತರ್ಹಿತೋsಸೌ ಸಮ್ಪ್ರಾದ್ರವದ್ ಭೀತಭೀತಃ ಸಲಜ್ಜಃ ॥೧೬.೨೬ ॥
ಕೃಷ್ಣನ ಏಟು ತಿಂದ ಜರಾಸಂಧಗೆ ಇಲ್ಲದಾಯ್ತು ತ್ರಾಣ,
ಅವನೆಲ್ಲಾ ಇಂದ್ರಿಯಗಳೂ ಕಳಕೊಂಡವು ನಿಯಂತ್ರಣ.
ಮೂರ್ಛೆಹೋಗಿ ಕೆಳಗೆ ಬಿದ್ದ ಜರಾಸಂಧ,
ಎದ್ದು ಭಯ ಲಜ್ಜೆಯಿಂದ ತಲೆಮರೆಸಿ ಓಡಿದ.

ಯಯೌ ಶಿಷ್ಟೈ ರಾಜಭಿಃ ಸಂಯುತಶ್ಚ ಪುರಂ ಜೀವೇತ್ಯೇವ ಕೃಷ್ಣೇನ ಮುಕ್ತಃ ।
ಪುನರ್ಯ್ಯುದ್ಧಂ ಬಹುಶಃ ಕೇಶವೇನ ಕೃತ್ವಾ ಜಿತೋ ರಾಜಗಣೈಃ ಸಮೇತಃ ॥೧೬.೨೭ ॥
ಕೃಷ್ಣ ಅವನನ್ನು 'ಬದುಕಿಕೋ ಹೋಗು' ಎಂದು ಬಿಟ್ಟಿದ್ದ,
ಉಳಿದವರ ಕೂಡಿಕೊಂಡು ಜರಾಸಂಧ ಪಟ್ಟಣಕೆ ಹೋದ.