Showing posts with label Narasimha Stuti. Show all posts
Showing posts with label Narasimha Stuti. Show all posts

Tuesday, 26 January 2016

Narasimha Stuti - ಹೇಳದೇ ಉಳಿದದ್ದು The Unsaid, Post Script

ಹೇಳದೇ ಉಳಿದದ್ದು....
ಆಚಾರ್ಯರ ಈ ಸ್ತೋತ್ರ ಶುರುವಾಗುವುದು ಸ್ಥಂಭಂ ನಿರ್ಭಿದ್ಯ ಎಂದು. ಅಂದರೆ, ಸ್ಥಂಭವನ್ನು ಸೀಳಿ ಬಂದ ನರಸಿಂಹನ ಸ್ತೋತ್ರ.
ನರಸಿಂಹ ನಿಜವಾಗಿ ಸೀಳಿದ್ದು ಯಾವ ಸ್ಥಂಭ ? ಮೊದಲಿಗೆ, ಸ್ಥಂಭ ಎಂದರೇನು ಎಂದು ತಿಳಿಯೋಣ.
ಸ್ಥಂಭ- ಶಬ್ದ ನಿಷ್ಪನ್ನವಾದದ್ದು ಸ್ಥಭಿ- ಪ್ರತಿರೋಧೇ ಎಂಬ ಧಾತುವಿನಿಂದ. ಅರ್ಥ - ಪ್ರತಿರೋಧ ಒಡ್ಡುವಂಥದ್ದು ಎಂದು. ಅದಕ್ಕೇ, ಒಂದು ಕಟ್ಟಡವು ಯಾವ ಒತ್ತಡಕ್ಕೂ ಬೀಳದಹಾಗೆ ಎಲ್ಲಾ ಒತ್ತಡಗಳಿಗೂ ಪ್ರತಿರೋಧ ಒಡ್ಡುವಂಥ ಕಂಬವನ್ನು ಸ್ಥಂಭ ಎಂದು ಕರೆಯುವುದು.
ಇಲ್ಲೂ ಕೂಡ ಮೇಲ್ನೋಟಕ್ಕೆ ನರಸಿಂಹ ಸ್ಥಂಭವನ್ನು ಸೀಳಿಕೊಂಡು ಬಂದ ಎಂದೇ ಅನ್ನಿಸುತ್ತದೆ. ಆದರೆ, ಶಬ್ದದ ನಿರ್ವಚನದ ಆಳಕ್ಕಿಳಿದರೆ ಅಪೂರ್ವ ಅರ್ಥ ಹೊಳೆಯಬಲ್ಲುದು. ಹೇಗೆಂದರೆ, ಪ್ರಹ್ಲಾದನಂಥ ಒಬ್ಬ ಭಗವದ್ಭಕ್ತ, ಒಬ್ಬ ಸಾಧಕಜೀವ ತನ್ನ ಬಿಂಬರೂಪೀ ಭಗವಂತನ ಬಳಿಗೆ ಹೋಗಲಾರದಂತೆ ಪ್ರಬಲವಾಗಿ ಪ್ರತಿರೋಧ ಒಡ್ಡುವ ಶಕ್ತಿಯಾಗಿ ಹಿರಣ್ಯ ಕಶಿಪು ನಿಂತಿದ್ದ. ಹಾಗಾಗಿ ಭಗವಂತ, ತನ್ನ ಭಕ್ತನಿಗೂ ತನಗೂ ಅಡ್ಡವಾಗಿ ನಿಂತಿದ್ದ ಸ್ಥಂಭದಂಥ ಹಿರಣ್ಯ ಕಶಿಪುವನ್ನು ನಿರ್ಭಿದ್ಯ - ಸೀಳಿ, ನಿರ್ಯತ್ - ಬಂದ.
ಈ ಅರ್ಥವನ್ನೂ ಕೂಡ ಈಗ ನಡೆಯುತ್ತಿರುವ ಮಾಂತ್ರಿಕೀ ಉಪನಿಷತ್ ಪ್ರವಚನದಲ್ಲಿ ಆಚಾರ್ಯರು ಬಿಡಿಸಿ ಹೇಳಿದ ಸ್ಥಂಭ ಶಬ್ದದ ನಿರ್ವಚನದ ಆಧಾರದಿಂದಲೇ ಅನುಸಂಧಾನ ಮಾಡಿದ್ದು.
ಹೀಗೆ, ನಾವು ಕೇಳುವುದಕ್ಕೂ ಮುನ್ನವೇ ನಮ್ಮನ್ನು ಸರಿಯಾದ ಅರ್ಥಾನುಸಂಧಾನದ ದಾರಿಗೆ ತರುತ್ತಿರುವ ಆಚಾರ್ಯರ ಅನುಗ್ರಹ ನಿಜಕ್ಕೂ ಅನನ್ಯ.
ನರಸಿಂಹಾಷ್ಟಕದಂಥ ಒಂದು ಅಪೂರ್ವ ಕೃತಿಯ ಅರ್ಥಾನುಸಂಧಾನದ ಭಾಗ್ಯ ದೊರೆತದ್ದು ಕೂಡ ಆಚಾರ್ಯರು ಮತ್ತು ಇತರ ಆಚಾರ್ಯರು ಅನುಗ್ರಹಿಸಿದ ಜ್ಞಾನದ ಕಡಲಿನ ಒಂದು ತುಣುಕು ನನ್ನ ಮೇಲೆ ಬಿದ್ದ ಪುಣ್ಯದಿಂದಲೇ ಎಂಬ ನಮ್ರತೆಯೊಂದಿಗೆ ಈ ಅರ್ಥ ಚಿಂತನೆಯನ್ನು ಇಂದಿಗೆ ತಾತ್ಕಾಲಿಕವಾಗಿ ಮುಗಿಸುತ್ತೇನೆ. ನಮ್ಮನ್ನು ಭಗವಂತನೆಡೆಗೆ ಹೋಗದಂತೆ ತಡೆಯುವ ಅಜ್ಞಾನಾದಿ ಸ್ಥಂಭಗಳನ್ನೂ ಸಹ, ಆ ಭಗವಂತ ಸೀಳಿ, ಅವನೆಡೆಗೆ ನಮ್ಮ ದಾರಿಯನ್ನು ವ್ಯಸ್ಥೆಮಾಡಿ ಅನುಗ್ರಹಿಸಲೆಂದು ಪ್ರಾರ್ಥಿಸುತ್ತಾ,
ಇಷ್ಟು ದಿವಸ ನನ್ನೊಂದಿಗೆ ಸಹಕರಿಸಿದ ಶ್ರೀ ಪ್ರಸಾದ್ ಅವರಿಗೆ ಹಾಗೂ, ನನ್ನ ಪ್ರಯತ್ನವನ್ನು ಮೆಚ್ಚಿ ಉತ್ತೇಜಿಸಿದ ಬಳಗದ ಗೆಳೆಯರಿಗೆ ಹೃತ್ಪೂರ್ವಕ ವಂದನೆಗಳನ್ನು ಅರ್ಪಿಸುತ್ತೇನೆ. ಶ್ರೀ ಕೃಷ್ಣಾರ್ಪಣಮಸ್ತು.
(Contributed by Shri B R Krishna)
****

Monday, 25 January 2016

Narasimha Stuti 08

ಶ್ಲೋಕ - 8.
ಇಮಮಾಚಾರ್ಯ ಗೋವಿಂದೇ
ಸನ್ನಿಧಾಯ ಹರಿಸ್ತವಮ್ |
ರಚಯಾಮಾಸತು: ಪ್ರೇಮ್ಣಾ 
ಪ್ರಾಣನಾರಾಯಣೌ ಸ್ವಯಮ್ ||

ಪದಚ್ಛೆದ:

ಇಮಮ್ . ಆಚಾರ್ಯಗೋವಿಂದೇಸನ್ನಿಧಾಯ . ಹರಿಸ್ತವಮ್ ರಚಯಾಮಾಸತು: . ಪ್ರೇಮ್ಣಾ.   ಪ್ರಾಣನಾರಾಯಣೌ ಸ್ವಯಮ್ .

ಅನ್ವಯಾರ್ಥ:

ಆಚಾರ್ಯಗೋವಿಂದೇ - ಆಚಾರ್ಯಗೋವಿಂದನಲ್ಲಿ, ಸ್ವಯಂ - ಸಾಕ್ಷಾತ್ಪ್ರಾಣನಾರಾಯಣೌ - ವಾಯುದೇವರು 
ಮತ್ತು  ನಾರಾಯಣರಿಬ್ಬರೂ, ಸಂನಿಧಾಯ - ವಿಶೇಷವಾಗಿ ಇದ್ದುಕೊಂಡು, ಪ್ರೇಮ್ಣಾ - ಪ್ರೀತಿಯಿಂದ, ಇಮಂ ಹರಿಸ್ತವಂ - ಈ, ಹರಿಯ ಸ್ತೋತ್ರವನ್ನು, ರಚಯಾಮಾಸತು: - ರಚನೆ ಮಾಡಿಸಿದರು.

ತಾತ್ಪರ್ಯ : ಸಾಕ್ಷಾತ್ ಪ್ರಾಣ ನಾರಾಯಣರಿಬ್ಬರೂ ಪ್ರೀತಿಯಿಂದ ಆಚಾರ್ಯ ಗೋವಿಂದ ಎಂಬುವವರಲ್ಲಿ ವಿಶೇಷವಾಗಿದ್ದುಕೊಂಡು ಹರಿಯ ಈ ಹಾಡನ್ನು ರಚನೆಮಾಡಿಸಿದರು.

ಅನುಷ್ಟುಪ್ ಛಂದಸ್ಸಿನಲ್ಲಿರುವ ಈ ಶ್ಲೋಕದಲ್ಲಿ, ಈ  ಸ್ತೋತ್ರವನ್ನು ರಚಿಸಿದ್ದು ತಾವಲ್ಲವೆಂದೂ, ತಮ್ಮ ಮೇಲಿನ ಪ್ರೀತಿಯಿಂದ ಸಾಕ್ಷಾತ್ ವಾಯುದೇವರು ನಾರಾಯಣರಿಬ್ಬರೂ ತಮ್ಮಲ್ಲಿದ್ದುಕೊಂಡು ಹರಿಯ ಈ  ಸ್ತೋತ್ರವನ್ನು ರಚನೆಮಾಡಿಸಿದರೆಂದು ಆಚಾರ್ಯ ಗೋವಿಂದ ಎಂಬ ಈ ಕೃತಿಕಾರರು  ನಮ್ರವಾಗಿ  ನಿವೇದಿಸಿಕೊಂಡಿದ್ದಾರೆ.
****
Ślōka - 08

इममाचार्य गोविन्दे
सन्निधाय हरिस्तवम् |
रचयामास्तुः प्रेम्णा
प्राणनारायणौ स्वयम् ||

imamācārya gōvindē 
sannidhāya haristavam |
racayāmāsatu:
prēmṇā 
prāṇanārāyaṇau svayam ||

Padacchēda:

इममाचार्य . गोविन्दे . सन्निधाय . हरिस्तवम् . रचयामास्तुः . प्रेम्णा . प्राणनारायणौ . स्वयम्
imamācārya . gōvindē . sannidhāya . haristavam . racayāmāsatu: . prēmṇā . 
prāṇanārāyaṇau
. svayam .

Word Meanings:

इम आचार्यगोविन्दे (ācāryagōvindē) – in Acharya Govinda; स्वयम्(svayam) – directly; प्राणनारायणौ(prāṇanārāyaṇau) – the twosome of Vayudevaru and Narayana; सन्निधाय(sannidhāya) – residing in a special way; प्रेम्णा(prēmṇā) – with love; इमं हरिस्तवम्(imam haristavam) – this stotra of Hari; रचयामास्तुः(racayāmāsatuh) – made to compose

Tātparya:

Vayudevaru and Narayana, directly having conferred their loving blessings, upon the one named Ācharya Gōvinda, he was moved by them, to compose this paean.

In this ślōka set to anutup chandas, the composer, Ācharya Gōvinda, has admitted with all humility, that he did not compose this stōtra. He has attributed the composition to the indwelling Hari’s inspiration and to the love showered directly on him by both, Vāyudevaru and Nārāyaa.   

Sunday, 24 January 2016

Narasimha Stuti 07

ಶ್ಲೋಕ - 7.

ನರಕೇಸರಿಣಂ ಧಿಕೃತ ಹಿರಣ್ಯ ಕರಿಣಂ ಸೂಕರಿಣಮ್ |
ತೋಷಿತಬುಧಜನಹರಿಣಂ ವರಿನಂ ದರಿಣಂ ಸ್ಮರಾಮಿ ಮಂದರಿಣಮ್ ||

ಪದಚ್ಚೇದ

ನರಕೇಸರಿಣಮ್  . ಧಿಕೃತ ಹಿರಣ್ಯ ಕರಿಣಮ್ . . ಸೂಕರಿಣಮ್ . ತೋಷಿತಬುಧಜನಹರಿಣಮ್ . ವರಿನಮ್ . ದರಿಣಮ್ . ಸ್ಮರಾಮಿ . ಮಂದರಿಣಮ್

ಅನ್ವಯಾರ್ಥ:

ಧಿಕೃತ - ವಧಿಸಲ್ಪಟ್ಟಹಿರಣ್ಯ ಕರಿಣಂ - ಹಿರಣ್ಯ ಕಶಿಪು ಎಂಬ ಆನೆಯುಳ್ಳ, ಕೇಸರೀ - ಸಿಂಹ. ನರಕೇಸರಿಣಂನರಸಿಂಹನನ್ನು, - ಮತ್ತುಸೂಕರಿಣಂ - ವರಾಹನನ್ನು,   ತೋಷಿತ- ಸಂತುಷ್ಟರಾದ, ಬುಧಜನ - ಜ್ಞಾನಿಗಳುಳ್ಳ, ,  ಹರಿಣಂ - ಶ್ರೀ ಹರಿಯನ್ನು, ವರಿನಂ - (ಯದಸುಪ್ತಿಗತೋವರಿನಸ್ಸುಖವಾನ್ ಸುಖರೂಪಿಣಮಾಹುರತೋನಿಗಮಾ:)   : - ಜ್ಞಾನ, ಇನ - ಒಡೆಯ. ನಿದ್ರೆಯಲ್ಲೂ ಜ್ಞಾನದ ಹ್ರಾಸ ಇಲ್ಲದ ಪೂರ್ಣಜ್ಞಾನರೂಪನನ್ನು, ದರಿಣಂ - ಶಂಖವನ್ನು ಹಿಡಿದವನನ್ನುಮಂದರಿಣಂ - ಮಂದರ ಪರ್ವತವನ್ನು ಧರಿಸಿದ ಕೂರ್ಮನನ್ನುಸ್ಮರಾಮಿ - ಮನಸ್ಸಿನಲ್ಲಿ ಚಿಂತಿಸುತ್ತೇನೆ.

ತಾತ್ಪರ್ಯ:

ಹಿರಣ್ಯಾಕ್ಷನನ್ನು ಕೊಂದ ವರಾಹನನ್ನು,   ಹಿರಣ್ಯ ಕಶಿಪುವನ್ನು ಕೊಂದ ನರಸಿಂಹನನ್ನು, ಜ್ಞಾನಿಗಳಾದ ಜನರನ್ನು ಸಂತೋಷ ಪಡಿಸಿದ ಹರಿಯನ್ನುನಿದ್ರೆಯಲ್ಲೂ ಜ್ಞಾನದ ಹ್ರಾಸ ಇಲ್ಲದ ಪೂರ್ಣಜ್ಞಾನರೂಪನನ್ನು, ಶಂಖವನ್ನು ಹಿಡಿದ, ಮಂದರಧಾರಿ ಕೂರ್ಮನನ್ನು  (ಮಂದರಧಾರಿಗೋವರ್ಧನ ಧಾರಿ ಕೃಷ್ಣನನ್ನು ಕೂಡಾ) ಮನಸ್ಸಿನಲ್ಲಿ ಚಿಂತಿಸುತ್ತೇನೆ.  
ಆರ್ಯಾ ವೃತ್ತದಲ್ಲಿರುವ (ಮಾತ್ರಾ ಛಂದಸ್ಸು) ಶ್ಲೋಕದಲ್ಲಿ ಹಲವಾರು ಭಗವದ್ರೂಪಗಳ ಚಿಂತನೆ ಇದೆ. ಮತ್ತು ಅತ್ಯಂತ ಚಮತ್ಕಾರಿಕವಾದ, ಪದಜೋಡಣೆಯ ವ್ಯತ್ಯಾಸದೊಂದಿಗೆ ವಿವಿಧ ಅರ್ಥಗಳನ್ನು ಹೊರಡಿಸುವ ಪದಪುಂಜಗಳಿವೆ. ಕೇವಲ ಹಿರಣ್ಯ ಎಂಬ ಶಬ್ದದಿಂದ ಹಿರಣ್ಯಾಕ್ಷ ಹಿರಣ್ಯ ಕಶಿಪು ಎಂಬ ಎರಡು ಅರ್ಥ  ಹೊರಡಿಸುವ ಜಾಣ್ಮೆ ಇದೆ. ಆನೆಯನ್ನು ಸಿಂಹ ಕೊಲ್ಲುವುದು ರೂಡಿ. ಆದರೆ, ಹಿರಣ್ಯಕನೆಂಬ ಆನೆಯನ್ನು ಹಂದಿ (ವರಾಹ) ಕೊಂದಿದ್ದು ಆಶ್ಚರ್ಯ !! ಹಾಗೆಯೇ ಇನ್ನೊಂದು ಅದ್ಭುತವೆಂದರೆ, ಹರಿಣ ಎಂದರೆ ಜಿಂಕೆ. ಇಲ್ಲಿ, ಬುಧಜನರೆಂಬ ಜಿಂಕೆ. ಜಿಂಕೆಯನ್ನು ಸಂತೋಷಪಡಿಸಿದ್ದು ನರ ರೂಪದ ಸಿಂಹ. ಲೋಕದಲ್ಲಿ, ಸಿಂಹವೆಂದರೆ ಜಿಂಕೆಗಳಿಗೆ ಜೀವಭಯ. ಆದರೆ   ಅರೆ ಸಿಂಹ ಎಂದರೆ ಬುಧರೆಂಬ  ಜಿಂಕೆಗಳಿಗೆ ಆಪ್ಯಾಯಮಾನ. ಇಂಥ ವೈರುಧ್ಯಗಳ ಆಭಾಸವನ್ನು ಮಾಡುವ ಚಮತ್ಕಾರವಂತೂ ಅನ್ಯಾದೃಷ.
****

Saturday, 23 January 2016

Narasimha Stuti 06

ಶ್ಲೋಕ - 6.

ಯದುತ್ಸಂಗಾಸಂಗಾ ಜಗದುದಯಭಂಗಾಬ್ಧಿತನಯಾ
ಯದುದ್ಗೀತಾಗೀತಾ ವಿಷಯ ವಿಷಭೀತಾವನಕರೀ |
ಸುಧೀ ಮುದ್ರಾ ಭದ್ರಾ ದುರಿತಗಣ ವಿದ್ರಾವಣಕರೀ
ನಮಸ್ತಸ್ಮೈಕಸ್ಮೈಚಿದಮರಪುಷೇ ಸಿಂಹವಪುಷೇ ||

ಪದಚ್ಛೇದ :-

ಯತ್. ಉತ್ಸಂಗ . ಆಸಂಗಾ . ಜಗತ್ ಉದಯ ಭಂಗಾ . ಅಬ್ಧಿ ತನಯಾ .
ಯತ್ . ಉದ್ಗೀತಾ . ಗೀತಾ . ವಿಷಯ ವಿಷ ಭೀತಾ ಅವನಕರೀ . ಸುಧೀಮುದ್ರಾ ಭದ್ರಾ ದುರಿತಗಣ ವಿದ್ರಾವಣಕರೀ . ನಮ: . ತಸ್ಮೈ . ಕಸ್ಮೈಚಿತ್ . ಅಮರ ಪುಷೇ . ಸಿಂಹ ವಪುಷೇ  .

ಅನ್ವಯಾರ್ಥ :- ಯತ್ - ಯಾರ, ಉತ್ಸಂಗ - ತೊಡೆಯಲ್ಲಿ,   ಜಗತ್ - ಚರಾಚರ ಜಗತ್ತಿನ, ಉದಯ ಭಂಗಾ - ಸೃಷ್ಟಿ ಲಯಾದಿಗಳನ್ನು ಮಾಡುವ, ಅಬ್ಧಿ ತನಯಾ - ಸಮುದ್ರ ರಾಜನ ಮಗಳಾದ ಶ್ರೀ ದೇವಿಯು, ಆಸಂಗಾ - ಕುಳಿತಿರುವಳೋಯತ್-ಯಾರಿಂದ, ವಿಷಯ ವಿಷ  ಭೀತಾ - ಸಂಸಾರ ವಿಷಯವೆಂಬ ವಿಷದಿಂದ ಬೆದರಿದವರನ್ನು,   ಅವನಕರೀ - ಮೇಲಕ್ಕೆತ್ತುವ ( ಉದ್ಧಾರ ಮಾಡುವ) ಗೀತಾ - ಭಗವದ್ಗೀತೆಯು, ಉದ್ಗೀತಾ - ಹಾಡಲ್ಪಟ್ಟಿತೋ, ಯಾರ, ಸುಧೀ - ಜ್ಞಾನ, ಭದ್ರ - ಅಭಯ, ಮುದ್ರಾ - ಮುದ್ರೆಯು, ದುರಿತ ಗಣ - ಕಷ್ಟ ಕೋಟಲೆಗಳ ಗುಂಪನ್ನು, ವಿದ್ರಾವಣಕರೀ - ಕರಗಿಸಿ ಬಿಡುತ್ತದೆಯೋ, ತಸ್ಮೈ - ಅಂಥಾ, ಅಮರ ಪುಷೇ - ದೇವತಗಳನ್ನೂ ಪೋಷಿಸುವ, ಕಸ್ಮೈಚಿತ್ - ಇದಮಿತ್ಥಂ ಎಂದು ಹೇಳಲಾಗದ ಯಾವುದೋ ಒಂದು, ಸಿಂಹ ವಪುಷೇ - ಸಿಂಹದ ಶರೀರ ಉಳ್ಳವನಿಗೆ, ನಮ: ಕಾಯ ವಾಕ್ಪೂರ್ವಕ ನಮಸ್ಕಾರ.

ತಾತ್ಪರ್ಯ:-

ಯಾರ ತೊಡೆಯಲ್ಲಿ, ಜಗತ್ತಿನ ಸೃಷ್ಟಿ  ಸ್ಥಿತಿ ಪ್ರಳಯ ಸರ್ಗ ಮಹಾವಿಭೂತಿ ವೃತ್ತಿ ಪ್ರಕಾಶ ನಿಯಮಾವೃತಿ ಬಂಧ ಮೋಕ್ಷ ಎಂಬ ಎಲ್ಲವನ್ನು ಮಾಡುವ ಸಮುದ್ರ ರಾಜನ ಕುವರಿ ಕುಳಿತಿಹಳೋ, (ಲಕ್ಷ್ಮೀ ನಾರಾಯಣಯಾರು ತನ್ಮಾತ್ರಾ ರೂಪದ ಐಹಿಕ ವಿಷಯಗಳ ವಿಷಜಾಲದಲ್ಲಿ ಸಿಕ್ಕಿ ಒದ್ದಾಡುವವರ ಉದ್ಧಾರ ಮಾಡುವ ಹಾಡನ್ನು ಹಾಡಿದನೋ, ( ಗೀತಾಚಾರ್ಯ ಶ್ರೀ ಕೃಷ್ಣ) ಯಾರ ಮಂಗಳಕರವಾದ ಜ್ಞಾನ ಮುದ್ರೆ ಸಕಲ ದುರಿತಗಳ ರಾಶಿಯನ್ನು ಕರಗಿಸಿಬಿಡುವುದೋ, (ಹಯಗ್ರೀವಯಾರು ದೇವತೆಗಳನ್ನೂ ಪೋಷಿಸಿ ಕಾಯುವರೋ, (ಉಪೇಂದ್ರಅಂಥಾ ಯಾವುದೋ ಒಂದು ಸಿಂಹದ ರೂಪಕ್ಕೆ (ನರಸಿಂಹ) ನಮಸ್ಕಾರ.

ಶಿಖರಿಣೀ ವೃತ್ತ/ ಛಂದಸ್ಸಿನಲ್ಲಿರುವ ಶ್ಲೋಕವಂತೂ ಅಚ್ಚರಿಗಳ ಆಗರ.
ಅಘಟಿತ ಘಟನಾ ಸಮರ್ಥನಾದ ಭಗವಂತನ ಲೀಲೆಗಳನ್ನು ಅರಿಯಲಾರದೆ, ಯಾವ ರೂಪವನ್ನೂ ಸರಿಯಾಗಿ ಕಣ್ತುಂಬಿಕೊಳ್ಳಲಾರದೆ, ಇಂಥದ್ದೇ ವ್ಯಕ್ತಿಯೋ ಶಕ್ತಿಯೋ ಎಂದು ಅಂದಾಜಿಸಲಾರದೆ  ಒದ್ದಾಡುವ ಭಕ್ತನ ಅವಸ್ಥೆ ನಿಜಕ್ಕೂ ವಿಸ್ಮಯಾವಹ.

ಇಂಥಾ ಸ್ತೋತ್ರದ ಅರ್ಥ ಚಿಂತನೆ ಮಾಡುವ ನಮ್ಮ ಭಾಗ್ಯವೇ ಭಾಗ್ಯ.

ಶ್ಲೋಕದ ಒಂದೊಂದೂ ವಿಶೇಷಣ ಒಂದೊಂದು ಗ್ರಂಥಕ್ಕೆ ವಿಷಯ ಒದಗಿಸುವಷ್ಟು ಅರ್ಥಗರ್ಭಿತ. ಶ್ಲೋಕದ ಒಂದೊಂದು  ಶಬ್ದದ ಅರ್ಥಗಳ ಆಳಕ್ಕೆ ಹೋಗುತ್ತಿದ್ದರೆ ಆನಂದವೇ ಆನಂದಸ್ವಲ್ಪಮಟ್ಟಿಗೆ ಸಂಸ್ಕೃತ ಕಲಿತ ನನ್ನಂಥವನಿಗೆ  ಮಟ್ಟಿಗಿನ ಸ್ಫೂರ್ತಿ ದೊರಕುತ್ತಿದೆ ಎಂದರೆ, ಇಂಥ: ಆಚಾರ್ಯರ ಇತರ ಕೃತಿಗಳ ಹರವನ್ನು ಆಳವನ್ನು ಸ್ವಲ್ಪ ಮಟ್ಟಿಗೆ ತಿಳಿಯುವುದಕ್ಕಾಗಿಯಾದರೋ ಇನ್ನೂ ಹೆಚ್ಚಿನ  ಸಂಸ್ಕೃತ ಅಧ್ಯಯನ ಮಾಡುವ ಬಗ್ಗೆ ಇಂದೇ ಎಲ್ಲರೂ ಚಿಂತಿಸೋಣ.
****