Saturday 30 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 94 - 98

ರಥಂ ಸಮಾರುಹ್ಯ ಪುನಃ ಸ ಕಾರ್ಮ್ಮುಕಃ  ಸಮಾರ್ಗ್ಗಣೋ ರಾವಣ ಆಶು ರಾಮಮ್ ।
ಅಭ್ಯೇತ್ಯ ಸರ್ವಾಶ್ಚ ದಿಶಶ್ಚಕಾರ ಶರಾನ್ಧಕಾರಾಃ ಪರಮಾಸ್ತ್ರವೇತ್ತಾ ॥೮.೯೪॥

ರಾವಣ ಶ್ರೀರಾಮನ ನುಡಿಯ ಕೇಳಿದ,
ಅಸ್ತ್ರಜ್ಞನಾದ ಅವ ಸಿದ್ಧವಾಗಿ ರಥವನೇರಿದ.
ಸಮಸ್ತ ದಿಕ್ಕಿಗೂ ಸುರಿಸಿದ ಬಾಣಗಳ ಮಳೆ,
ಬಾಣಗಳಿಂದಾವೃತವಾಗಿ ಕವಿಯಿತಂತೆ ಕತ್ತಲೆ.

ರಥಸ್ಥಿತೇsಸ್ಮಿನ್ ರಜನೀಚರೇಶೇ ನ ಮೇ ಪತಿರ್ಭೂಮಿತಳೇ ಸ್ಥಿತಃ ಸ್ಯಾತ್ ।
ಇತಿ ಸ್ಮ ಪುತ್ರಃ ಪವನಸ್ಯ ರಾಮಂ ಸ್ಕನ್ದಂ ಸಮಾರೋಪ್ಯ ಯಯೌ ಚ ರಾಕ್ಷಸಮ್ ॥೮.೯೫॥

ರಾವಣ ರಥದಲ್ಲಿ ನಿಂತು ಯುದ್ಧ ಮಾಡುತ್ತಿರಲು,
ರಾಮಚಂದ್ರ ನೆಲದಿ ನಿಂತು ಯುದ್ಧ ಮಾಡುತಿರಲು,
ಅದ ಸಹಿಸದಾದ ರಾಮಬಂಟ ಹನುಮಂತ,
ರಾಮನ ಹೆಗಲಲಿ ಹೊತ್ತು ಹೊರಟ ರಾವಣನತ್ತ.

ಪ್ರಹಸ್ಯ ರಾಮೋsಸ್ಯ ಹಯಾನ್ ನಿಹತ್ಯ ಸೂತಂ ಚ ಕೃತ್ವಾ ತಿಲಶೋ ಧ್ವಜಂ ರಥಮ್ ।
ಧನೂಂಷಿ ಖಡ್ಗಂ ಸಕಲಾಯುಧಾನಿ ಚ್ಛತ್ರಂ ಚ ಸಞ್ಛಿದ್ಯ ಚಕರ್ತ್ತ ಮೌಲಿಮ್ ॥೮.೯೬॥

ನಸುನಗುತಲೇ ಶ್ರೀರಾಮಚಂದ್ರ,
ಮಾಡಿದ ರಾವಣನೆಲ್ಲಾ ಪರಿಕರ ಛಿದ್ರ.
ರಾವಣನ ಸಾರಥಿ ಕುದುರೆಗಳ ಕೊಂದ,
ರಥ ಧ್ವಜ ಬಿಲ್ಲು ಬಾಣಗಳ ಮುರಿದ.
ಛತ್ರ ಕತ್ತರಿಸಿದ ಕಿರೀಟವ ತುಂಡರಿಸಿದ.

ಕರ್ತ್ತವ್ಯಮೂಢಂ ತಮವೇಕ್ಷ್ಯ ರಾಮಃ ಪುನರ್ಜ್ಜಗಾದಾsಶು ಗೃಹಂ ಪ್ರಯಾಹಿ ।
ಸಮಸ್ತಭೋಗಾನನುಭೂಯ ಶೀಘ್ರಂ ಪ್ರತೋಷ್ಯ ಬನ್ಧೂನ್ ಪುನರೇಹಿ ಮರ್ತ್ತುಮ್ ॥೮.೯೭॥

ದಿಗ್ಭ್ರಾಂತನಾದ ರಾವಣ ಕಂಗೆಟ್ಟು ನಿಂತ,
ಅವನ ಕುರಿತು ಹೇಳುತ್ತಾನೆ ದಶರಥ ಸುತ.
ಹೋಗು ಎಲ್ಲಾ ಭೋಗಗಳ ಅನುಭವಿಸು,
ಮರಣಾನಂತರದ ಕೊಡುಗೆಗಳ ವಿತರಿಸು.
ಇದೀಗಲೇ ಹೊರಡು ನೀ ರಾವಣ,
ಸಿದ್ಧವಾಗಿ ಬಾ ಎದುರಿಸಲು ಮರಣ.

ಇತೀರಿತೋsವಾಗ್ವದನೋ ಯಯೌ ಗೃಹಂ ವಿಚಾರ್ಯ್ಯ ಕಾರ್ಯ್ಯಂ ಸಹ ಮನ್ತ್ರಿಭಿಃ ಸ್ವಕೈಃ ।
ಹತಾವಶೇಷೈರಥ ಕುಮ್ಭಕರ್ಣ್ಣಪ್ರಬೋಧನಾಯಾsಶು ಮತಿಂ ಚಕಾರ ॥೮.೯೮॥

ಕೇಳಿದ ರಾವಣ ತಲೆತಗ್ಗಿಸಿ ಹೊರಟ ಮನೆಯತ್ತ,
ಅಳಿದುಳಿದವರಲ್ಲಿ ವಿಚಾರಿಸಿದ ಮುಂದೇನು ಎತ್ತ.
ತಮ್ಮ ಕುಂಭಕರ್ಣ ದೀರ್ಘ ನಿದ್ರೆಯಲ್ಲಿದ್ದ,
ಶೀಘ್ರದಿ ಅವನ ಎಚ್ಚರಿಸಲು ನಿರ್ಧರಿಸಿದ.

Friday 29 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 89 - 93


ಪ್ರಕರ್ಷತಿ ತ್ವೇವ ನಿಶಾಚರೇಶ್ವರೇ ತಥೈವ ರಾಮಾವರಜಂ ತ್ವರಾನ್ವಿತಃ ।
ಸಮಸ್ತಜೀವಾಧಿಪತೇಃ ಪರಾ ತನುಃ ಸಮುತ್ಪಪಾತಾಸ್ಯ ಪುರೋ ಹನೂಮಾನ್ ॥೮.೮೯॥

ರಾವಣ ತ್ವರೆಯಿಂದ ಕೂಡಿ ಲಕ್ಷ್ಮಣನನ್ನು ಭರದಿ  ಎಳೆಯುತ್ತಿದ್ದಾಗ,
ಎಲ್ಲಾ ಜೀವರಧಿಪತಿ ಮುಖ್ಯಪ್ರಾಣಾವತಾರ  ಹನುಮ ರಾವಣನೆದುರಾದನಾಗ.

ಸ ಮುಷ್ಟಿಮಾವರ್ತ್ತ್ಯ ಚ ವಜ್ರಕಲ್ಪಂ ಜಘಾನ ತೇನೈವ ಚ ರಾವಣಂ ರುಷಾ ।
ಪ್ರಸಾರ್ಯ್ಯ ಬಾಹೂನಖಿಲೈರ್ಮ್ಮುಖೈರ್ವಮನ್  ಸ ರಕ್ತಮುಷ್ಣಂ ವ್ಯಸುವತ್ ಪಪಾತ ॥೮.೯೦॥

ಹನುಮ ತನ್ನ ವಜ್ರಕಲ್ಪ ಮುಷ್ಟಿಯನ್ನು ಬಿಗಿ ಮಾಡಿ ರಾವಣನನ್ನು ಸಿಟ್ಟಿನಿಂದ ಗುದ್ದಿದ.
ಪ್ರಹಾರ ತಡೆಯಲಾಗದ ರಾವಣ  ತನ್ನೆಲ್ಲಾ  ಮುಖಗಳಿಂದ ರಕ್ತ ಕಕ್ಕುತ್ತಾ ಹೆಣದಂತೆ ಬಿದ್ದ.

ನಿಪಾತ್ಯರಕ್ಷೋಧಿಪತಿಂ ಸ ಮಾರುತಿಃ ಪ್ರಗೃಹ್ಯ ಸೌಮಿತ್ರಿಮುರಙ್ಗಶಾಯಿನಃ ।
ಜಗಾಮ ರಾಮಾಖ್ಯತನೋಃ ಸಮೀಪಂ ಸೌಮಿತ್ರಿಮುದ್ಧರ್ತ್ತುಮಲಂ ಹ್ಯಸೌ ಕಪಿಃ ॥೮.೯೧॥

ರಾಕ್ಷಸರ ಒಡೆಯನಾದ ರಾವಣನನ್ನು ಹೊಡೆದು ಕೆಡವಿದ ಹನುಮಂತ,
ಲಕ್ಷ್ಮಣನ ಹಿಡಿದು ಹೊರಟ ರಾಮನೆಂಬ  ಶೇಷಶಾಯಿ ನಾರಾಯಣನತ್ತ,
ಲಕ್ಷ್ಮಣನನ್ನೆತ್ತಲು ಈ ಹನುಮಂತನಲ್ಲದೇ ಇನ್ಯಾರು  ಸಮರ್ಥ?

ಸ ರಾಮಸಮ್ಸ್ಪರ್ಷನಿವಾರಿತಕ್ಲಮಃ ಸಮುತ್ಥಿತಸ್ತೇನ ಸಮುದ್ಧೃತೇ ಶರೇ ।
ಬಭೌ ಯಥಾ ರಾಹುಮುಖಾತ್ ಪ್ರಮುಕ್ತಃ ಶಶೀ ಸುಪೂರ್ಣ್ಣೋ ವಿಕಚಸ್ವರಶ್ಮಿಭಿಃ ॥೮.೯೨॥

ರಾಮನ ಸಂಸ್ಪರ್ಶದಿಂದ ತನ್ನೆಲ್ಲಾ ಶ್ರಮವನ್ನು ಲಕ್ಷ್ಮಣ ಕಳೆದುಕೊಂಡ.
ರಾಮನಿಂದ ತನ್ನ ಹಣೆಯಲ್ಲಿದ್ದ ಬಾಣ ಕೀಳಲ್ಪಡಲು ಆತ ಎಚ್ಚರಗೊಂಡ.
ಹೇಗೆ ರಾಹುವಿನಿಂದ ಮುಕ್ತನಾದ ಪೂರ್ಣಚಂದ್ರನ ಬೆಳಕು,
ಹಾಗೇ ಲಕ್ಷ್ಮಣನಾದ ತನ್ನ ಪೂರ್ಣಶಕ್ತಿ ವೀರ್ಯದ ಸರಕು.

ಸ ಶೇಷಭೋಗಾಭಮಥೋ ಜನಾರ್ದ್ದನಃ ಪ್ರಗೃಹ್ಯ ಚಾಪಂ ಸಶರಂ ಪುನಶ್ಚ ।
ಸುಲಬ್ಧಸಙ್ಜ್ಞಂ ರಜನೀಚರೇಶಂ ಜಗಾದ ಸಜ್ಜೀಭವ ರಾವಣೇತಿ ॥೮.೯೩॥

ಹೀಗೆ ಲಕ್ಷ್ಮಣನು ಸಂಪೂರ್ಣ ಸ್ವಸ್ಥನಾದ ನಂತರ ,  ಹಾವಂತೆ ದಪ್ಪವಾದ ಬಿಲ್ಲು ಬಾಣ ಹಿಡಿದ ರಾಮಚಂದ್ರ.
ಎಚ್ಚರಾದ ಮತ್ತು  ಆಯಾಸದಿಂದ ಚೇತರಿಸಿಕೊಂಡ ರಾವಣಗೆ,
 ಎಲೈ ರಾವಣನೇ, ಸಿದ್ಧನಾಗು” ಎಂದು ರಾಮನೆಚ್ಚರಿಸಿದ ಬಗೆ.
[Contributed by Shri Govind Magal]

Thursday 28 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 83 - 88

ತತೋ ಯಯೌ ರಾಘವಮೇವ ರಾವಣೋ ನಿವಾರಯಾಮಾಸ ತಮಾಶು ಲಕ್ಷ್ಮಣಃ ।
ತತಕ್ಷತುಸ್ತಾವಧಿಕೌ ಧನುರ್ಭೃತಾಂ ಶರೈಃ ಶರೀರಾವರಣಾವದಾರಣೈಃ ॥೮.೮೩॥

ತದನಂತರ ರಾವಣ ಶ್ರೀರಾಮನತ್ತ  ಯುದ್ಧಕ್ಕೆಂದು ನಡೆದ.
ಹೀಗೆ ಹೊರಟ ರಾವಣನನ್ನು ಶೀಘ್ರವಾಗಿ  ಲಕ್ಷ್ಮಣ ತಡೆದ.
ಬಿಲ್ಲುಗಾರರಲ್ಲೇ  ಉತ್ತಮರಾದ ಅವರಿಬ್ಬರು,
ಕವಚ ಸೀಳುವ ಬಾಣಗಳಿಂದ ಯುದ್ಧ ಮಾಡಿದರು.

ನಿವಾರಿತಸ್ತೇನ ಸ ರಾವಣೋ ಭೃಶಂ ರುಷಾsನ್ವಿತೋ ಬಾಣಮಮೋಘಮುಗ್ರಮ್ ।
ಸ್ವಯಂಭುದತ್ತಂ ಪ್ರವಿಕೃಷ್ಯ ಚಾsಶು ಲಲಾಟಮಧ್ಯೇ ಪ್ರಮುಮೋಚ ತಸ್ಯ ॥೮.೮೪॥

ಲಕ್ಷ್ಮಣನಿಂದ ತಡೆಯಲ್ಪಟ್ಟ ಸಿಟ್ಟಿನಿಂದ ಕೂಡಿದ ರಾವಣ,
ಸೆಳೆದು ಬಿಟ್ಟ  ಬ್ರಹ್ಮದತ್ತ ವ್ಯರ್ಥವಾಗದ ಭಯಂಕರ ಬಾಣ,
ಗುರಿ ಇಟ್ಟಿದ್ದ  ಅದನ್ನು ಲಕ್ಷ್ಮಣನ ಹಣೆಯ ಮಧ್ಯದ ತಾಣ.

ಭೃಶಾಹತಸ್ತೇನ ಮುಮೋಹ ಲಕ್ಷ್ಮಣೋ ರಥಾದವಪ್ಲುತ್ಯ ದಶಾನನೋsಪಿ ।
ಕ್ಷಣಾದಭಿದ್ರುತ್ಯ ಬಲಾತ್ ಪ್ರಗೃಹ್ಯ ಸ್ವಭಾಹುಭಿರ್ನ್ನೆತುಮಿಮಂ ಸಮೈಚ್ಛತ್ ॥೮.೮೫॥

ಆ ಬಾಣದಿಂದ ಗಟ್ಟಿಯಾಗಿ ಹೊಡೆಯಲ್ಪಟ್ಟ ಲಕ್ಷ್ಮಣ ಮೂರ್ಛಿತನಾದ
ತಕ್ಷಣ ರಾವಣ ತನ್ನ ರಥದಿಂದ ಕೆಳಗೆ ಹಾರಿ ಲಕ್ಷ್ಮಣನಿದ್ದಲ್ಲಿಗೆ ಓಡಿಬಂದ.
ತನ್ನಿಪ್ಪತ್ತು ಬಾಹುಗಳಿಂದ ಲಕ್ಷ್ಮಣನನ್ನು ಲಂಕೆಗೆ ಹೊತ್ತೊಯ್ಯಲು ಅನುವಾದ.

ಸಮ್ಪ್ರಾಪ್ಯ ಸಙ್ಜ್ಞಾಂ ಸ ಸುವಿಹ್ವಲೋsಪಿ ಸಸ್ಮಾರ ರೂಪಂ ನಿಜಮೇವ ಲಕ್ಷ್ಮಣಃ ।
ಶೇಷಂ ಹರೇರಂಶಯುತಂ ನಚಾಸ್ಯ ಸ ಚಾಲನಾಯಾಪಿ ಶಶಾಕ ರಾವಣಃ ॥೮.೮೬॥

ಒಂದಷ್ಟು ವಿಚಲಿತನಾದರೂ ಲಕ್ಷ್ಮಣ,
ಸ್ಮರಣೆ ಮಾಡಿದ ಭಗವದ್ರೂಪ ಸಂಕರ್ಷಣ.
ಯಾವಾಗೊದಗಿತೋ ಲಕ್ಷ್ಮಣಗೆ ಮೂಲರೂಪದ ಸ್ಮರಣಾಶಕ್ತಿ,
ಲಕ್ಷ್ಮಣನ ಅಲುಗಾಡಿಸಲೂ ಆಗಲಿಲ್ಲ ರಾವಣನ ಯಾವ ಯುಕ್ತಿ.

ಬಲಾತ್ ಸ್ವದೋರ್ಭಿಃ ಪ್ರತಿಗೃಹ್ಯ ಚಾಖಿಲೈರ್ಯ್ಯದಾ ಸ ವೀರಂ ಪ್ರಚಕರ್ಷ ರಾವಣಃ ।
ಚಚಾಲ ಪೃಥ್ವೀ ಸಹಮೇರುಮನ್ದರಾ ಸಸಾಗರಾ ನೈವ ಚಚಾಲ ಲಕ್ಷ್ಮಣಃ ॥೮.೮೭॥

ರಾವಣ ತನ್ನೆಲ್ಲಾ ಕೈಗಳಿಂದ ಲಕ್ಷ್ಮಣನ ಬಲಿಷ್ಠವಾಗಿ ಹಿಡಿದು ಎಳೆದ ಆ ಪ್ರಯತ್ನ,
ಮೇರು-ಮಂದಾರ ಪರ್ವತ ಸಮುದ್ರ ಕೂಡಿರುವ ಭೂಮಿಗಾಯಿತಂತೆ ಕಂಪನ,
ಇಷ್ಟೆಲ್ಲಾ ಆದರೂ ಅಲ್ಲೋಲಕಲ್ಲೋಲ,
ಲಕ್ಷ್ಮಣನ ಅಲುಗಾಡಿಸಲು ಅವನಿಂದಾಗಲಿಲ್ಲ




ಸಹಸ್ರಮೂರ್ಧ್ನೋsಸ್ಯ ಬತೈಕಮೂರ್ಧ್ನಿ ಸಸಪ್ತಪಾತಾಳಗಿರೀನ್ದ್ರಸಾಗರಾ ।
ಧರಾsಖಿಲೇಯಂ ನನು ಸರ್ಷಪಾಯತಿ ಪ್ರಸಹ್ಯ ಕೋ ನಾಮ ಹರೇತ್ ತಮೇನಮ್ ॥೮.೮೮॥

ಸಾವಿರ ಹೆಡೆಗಳುಳ್ಳ  ಶೇಷನ ಒಂದು ಹೆಡೆಯಲ್ಲಿ ,
ಏಳು ಪಾತಾಳ ಲೋಕ ಮತ್ತು ದೊಡ್ಡಬೆಟ್ಟಗಳಲ್ಲಿ ,
ಸಾಗರಗಳೂ,ಸಮಗ್ರ ಭೂಮಿ ಸಾಸಿವೆಯಂತೆ ಅಲ್ಲಿ.
ಅಂತಹ ಶೇಷನ ಅವತಾರಿಯಾದ ಲಕ್ಷ್ಮಣನನ್ನು,
ಯಾರು ತಾನೇ ಎಳೆದೊಯ್ಯಲು ಸಾಧ್ಯವಿನ್ನು.


Wednesday 27 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 77 - 82

ಅಥೋ ಹನೂಮಾನುರಗೇನ್ದ್ರಭೋಗಸಮಂ ಸ್ವಬಾಹುಂ ಭೃಶಮುನ್ನಮಯ್ಯ ।
ತತಾಡ ವಕ್ಷಸ್ಯದಿಪಂ ತು ರಕ್ಷಸಾಂ ಮುಖೈಃ ಸ ರಕ್ತಂ ಪ್ರವಮನ್ ಪಪಾತ ॥೮.೭೭॥

ಆನಂತರ ರಾವಣನ ಎದುರುಗೊಂಡ ರಾಮಬಂಟ ಹನುಮಂತ,
ಸರ್ಪಶರೀರದಂಥ ತನ್ನ ಕೈಯಿಂದ ರಾವಣನೆದೆಗೆ ಗುದ್ದಿದನಾತ.
ಹತ್ತೂ ಮುಖಗಳಿಂದ ರಕ್ತ ಕಾರುತ್ತಾ ರಾವಣನಾದ ಮೂರ್ಛಿತ.

ಸ ಲಬ್ಧಸಙ್ಜ್ಞಃ ಪ್ರಶಶಂಸ ಮಾರುತಿಂ ತ್ವಯಾ ಸಮೋ ನಾಸ್ತಿ ಪುಮಾನ್ ಹಿ ಕಶ್ಚಿತ್ ।
ಕಃ ಪ್ರಾಪಯೇದನ್ಯ ಇಮಾಂ ದಶಾಂ ಮಾಮಿತೀರಿತೋ ಮಾರುತಿರಾಹ ತಂ ಪುನಃ ॥೮.೭೮॥

ಪ್ರಜ್ಞೆ ಬಂದ ನಂತರ ಹನುಮನ ಹೊಗಳುತ್ತಾ ಹೇಳುತ್ತಾನೆ ರಾವಣ,
ನನಗೀ ಅವಸ್ಥೆ ತಂದ ನಿನಗೆ ಯಾರೂ ಇಲ್ಲವೇ ಇಲ್ಲ ಸಮಾನ.
ರಾವಣನ ಕುರಿತು ಹೇಳುತ್ತಾನೆ ಮಾರುತಿ ರೂಪದ ಪವಮಾನ.




ಅತ್ಯಲ್ಪಮೇತದ್ ಯದುಪಾತ್ತಜೀವಿತಃ ಪುನಸ್ತ್ವಮಿತ್ಯುಕ್ತ ಉವಾಚ ರಾವಣಃ ।
ಗೃಹಾಣ ಮತ್ತೋsಪಿ ಸಮುದ್ಯತಂ ತ್ವಂ ಮುಷ್ಟಿಪ್ರಹಾರಂ ತ್ವಿತಿ ತಂ ಪುಪೋಥ ॥೮.೭೯॥

ತಿಂದಮೇಲೂ ನಾನು ಕೊಟ್ಟಂಥ ಆ ಏಟು,
ಬದುಕುಳಿದಿರಲು ಅದತ್ಯಲ್ಪವೆಂಬುದೇ ಗುಟ್ಟು.
ರಾವಣ ಹೇಳುತ್ತಾನೆ ತಗೋ ನನ್ನದೂ ಹೊಡೆತ,
ಗಟ್ಟಿಯಾಗಿ ಮಾರುತಿಗೆ ಮುಷ್ಠಿ ಪ್ರಹಾರವನ್ನಿತ್ತನಾತ.

ಕಿಞ್ಚಿತ್ ಪ್ರಹಾರೇಣ ತು ವಿಹ್ವಲಾಙ್ಗವತ್ ಸ್ಥಿತೇ ಹಿ ತಸ್ಮಿನ್ನಿದಮನ್ತರಂ ಮಮ ।
ಇತ್ಯಗ್ನಿಸೂನುಂ ಪ್ರಯಯೌ ಸ ರಾವಣೋ ನಿವಾರಿತೋ ಮಾರುತಿನಾsಪಿ ವಾಚಾ ॥೮.೮೦॥

ಸ್ವೀಕರಿಸಿ ರಾವಣನ  ಬಲವಾದ ಹೊಡೆತ,
ಹನುಮಂತ  ಕಂಡ ಆದಂತೆ ಸ್ವಲ್ಪ ಭ್ರಾಂತ.
ಇದುವೇ ಸುಸಮಯ ಎಂದರಿತುಕೊಂಡ ಆ ದಶಕಂಠ,
ಹನುಮನ ಕರೆಗೂ ನಿಲ್ಲದೆ ಹೊರಟ ಅಗ್ನಿಪುತ್ರ ನೀಲನತ್ತ.

ತಮಾಪತನ್ತಂ ಪ್ರಸಮೀಕ್ಷ್ಯ ನೀಲೋ ಧನುರ್ಧ್ವಜಾಗ್ರಾಶ್ವರಥೇಷು ತಸ್ಯ ।
ಚಚಾರ ಮೂರ್ದ್ಧಸ್ವಪಿ ಚಞ್ಚಲೋsಲಂ ಜಳೀಕೃತಸ್ತೇನ ಸ ರಾವಣೋsಪಿ ॥೮.೮೧॥

ತನ್ನತ್ತ ಬರುತ್ತಿರುವ ರಾವಣನ ನೋಡಿದ ನೀಲ,
ಎಲ್ಲೆಡೆ ಹಾರಾಡಿದ ನಿಲ್ಲದೇ ಒಂದೆಡೆಗೆ ಅಚಲ.
ಧನುಸ್ಸು ,ಧ್ವಜ ,ರಥ ,ರಾವಣನ ತಲೆ ಎಲ್ಲೆಡೆ ನೀಲನ ಹಾರಾಟ,
ನೀಲನ ಚಟುವಟಿಕೆಯಿಂದ ವಿಚಲಿತನಾದ ರಾವಣ ಕಂಗೆಟ್ಟ.

ಸ ಕ್ಷಿಪ್ರಮಾದಾಯ ಹುತಾಶನಾಸ್ತ್ರಂ ಮುಮೋಚ ನೀಲೇ ರಜನೀಚರೇಶಃ ।
ಸ ತೇನ ಭೂಮೌ ಪತಿತೋ ನಚೈನಂ ದದಾಹ ವಹ್ನಿಃ ಸ್ವತನುರ್ಯ್ಯತೋsಸೌ ॥೮.೮೨॥

ಆನಂತರ ರಾವಣ ನೀಲನಿಂದ ಒಂದಂತರ ಸಾಧಿಸಿದ,
ಆಗ್ನೇಯಾಸ್ತ್ರ ಅಭಿಮಂತ್ರಿಸಿ ನೀಲನ ಮೇಲೆ ಪ್ರಯೋಗಿಸಿದ.
ಹೊಡೆತಕ್ಕೆ ಕೆಳಕ್ಕೇನೋ ಬಿದ್ದನವ  ನೀಲ,
ಸ್ವಯಂ ಅಗ್ನಿಯಾದವಗೆ ಸುಡಲಿಲ್ಲ ಜ್ವಾಲಾ.
[Contributed by Shri Govind Magal]

Tuesday 26 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 70 - 76

ತತಃ ಸ ಸಜ್ಜೀಕೃತಮಾತ್ತಧನ್ವಾ ರಥಂ ಸಮಾಸ್ಥಾಯ ನಿಶಾಚರೇಶ್ವರಃ ।
ವೃತಃ ಸಹಸ್ರಾಯುತಕೋಟ್ಯನೀಕಪೈರ್ನ್ನಿಶಾಚರೈರಾಶು ಯಯೌ ರಣಾಯ ॥೮.೭೦॥

ಆಗ ರಾತ್ರಿ ತಿರುಗುವವರ ಒಡೆಯ ಸಜ್ಜಾಗಿ ಬಿಲ್ಲ ಹಿಡಿದು ರಥವನೇರಿದ.
ಹತ್ತು ಸಹಸ್ರಕೋಟಿ ಸೇನಾಧಿಪತಿಗಳ ಬೃಹತ್ ಸೇನೆಯ ಕೂಡಿದ,
ರಾಕ್ಷಸರ  ಪಡೆಯ ಒಡಗೂಡಿ ಬೇಗನೆ ಯುದ್ಧ ಭೂಮಿಗೆ ನಡೆದ.

ಬಲೈಸ್ತು ತಸ್ಯಾಥ ಬಲಂ ಕಪೀನಾಂ ನೈಕಪ್ರಕಾರಾಯುಧಪೂಗಭಗ್ನಮ್ ।
ದಿಶಃ ಪ್ರದುದ್ರಾವ ಹರೀನ್ದ್ರಮುಖ್ಯಾಃ ಸಮಾರ್ದ್ದಯನ್ನಾಶು ನಿಶಾಚರಾಂಸ್ತದಾ ॥೮.೭೧॥

ರಾವಣನ ಸೈನ್ಯಗಳಿಂದ ಧಕ್ಕೆಗೊಳಗಾದ ಕಪಿಸೈನ್ಯದ ಹಿನ್ನಡೆ.
ರಾಕ್ಷಸರನ್ನು ಬಿಡದೆ ಮರ್ಧಿಸಿತು ವೀರ ಕಪಿಶ್ರೇಷ್ಠರ ಆ ಪಡೆ.

ಗಜೋ ಗವಾಕ್ಷೋ ಗವಯೋ ವೃಷಶ್ಚ ಸಗನ್ಧಮಾದಾ ಧನದೇನ ಜಾತಾಃ ।
ಪ್ರಾಣಾದಯಃ ಪಞ್ಚ ಮರುತ್ಪ್ರವೀರಾಃ ಸ ಕತ್ಥನೋ ವಿತ್ತಪತಿಶ್ಚ ಜಘ್ನುಃ ॥೮.೭೨॥

ಗಜ ,ಗವಾಕ್ಷ ,ಗವಯ ,ವೃಷ ಮತ್ತು ಗಂಧಮಾದ,
ಮುಖ್ಯಪ್ರಾಣನ ಮಕ್ಕಳಾದವರಿಗೆ ಕತ್ಥನ ತಂದೆಯಾದ.
ಕತ್ಥನನೆಂಬ ಕಪಿಯಾಗಿ ಅವತರಿಸಿದ್ದ ಕುಬೇರ,
ಇವೆರೆಲ್ಲರಿಂದಾಯಿತು ಯುದ್ಧವೆಂಬ ವ್ಯಾಪಾರ.

ಶರೈಸ್ತು ತಾನ್ ಷಡ್ಬಿರಮೋಘವೇಗೈರ್ನ್ನಿಪಾತಯಾಮಾಸ ದಶಾನನೋ ದ್ರಾಕ್ ।
ಅಥಾಶ್ವಿಪುತ್ರೌ ಚ ಸಜಾಮ್ಬವನ್ತೌ ಪ್ರಜಹ್ನತುಃ ಶೈಲವರೈಸ್ತ್ರಿಭಿಸ್ತಮ್ ॥೮.೭೩॥

ಅವರ ಮೇಲೆ ಎಣೆಯಿರದ ವೇಗದ ಆರು ಬಾಣಗಳಿಂದ,
ರಾವಣ ಮಾಡಿದ  ದಾಳಿಗೆ ಕೆಳಗೆ ಬಿದ್ದ ಕಪಿ ವೃಂದ.
ಆನಂತರ ಜಾಂಬವಂತನಕೂಡಿ ಅಶ್ವಿಪುತ್ರರಾದ ಮೈಂದ  ವಿವಿದ,
ಮೂರು ಪರ್ವತ ಹಿಡಿದು ರಾವಣನೆದುರಿಸಿದ ಯುದ್ಧಶೈಲಿಯ ವಿಧ.

ಗಿರೀನ್ ವಿದಾರ್ಯ್ಯಾsಶು ಶರೈರಥಾನ್ಯಾಞ್ಛರಾನ್ ದಶಾಸ್ಯೋsಮುಚದಾಶು ತೇಷು ।
ಏಕೈಕಮೇಭಿರ್ವಿನಿಪಾತಿತಾಸ್ತೇ ಸಸಾರ ತಂ ಶಕ್ರಸುತಾತ್ಮಜೋsಥ ॥೮.೭೪॥

ರಾವಣ ಅವರೆಸೆದ ಬೆಟ್ಟಗಳ ತನ್ನ ಬಾಣಗಳಿಂದ ಸೀಳಿದ,
ಬೇರೆ ಬಾಣಗಳ ಬಿಟ್ಟು ಒಬ್ಬೊಬ್ಬರನ್ನೂ ಕೆಳಗೆ ಕೆಡವಿದ.
ಆನಂತರ ರಾವಣನ ಎದುರಿಸಲು ಬಂದ ವಾಲಿಪುತ್ರ ಅಂಗದ.

ಶಿಲಾಂ ಸಮಾದಾಯ ತಮಾಪತನ್ತಂ ಬಿಭೇದ ರಕ್ಷೋ ಹೃದಯೇ ಶರೇಣ ।
ದೃಢಾಹತಃ ಸೋsಪ್ಯಗಮದ್ ಧರಾತಳಂ ರವೇಃ ಸುತೋsಥೈನಮಭಿಪ್ರಜಗ್ಮಿವಾನ್ ॥೮.೭೫॥

ದೊಡ್ಡ ಬೆಟ್ಟದೊಂದಿಗೆ ಬಂದ ಅಂಗದ,
ಅವನೆದೆಗೆ ರಾವಣ ಬಾಣದಿ ಹೊಡೆದ.
ಅಂಗದ ಕೆಳಗೆ ಬಿದ್ದು ಮೂರ್ಛಿತನಾದ,
ಆಗ ಸುಗ್ರೀವ ರಾವಣಗೆ ಎದುರಾದ.

ತದ್ದಸ್ತಗಂ ಭೂರುಹಮಾಶು ಬಾಣೈರ್ದ್ದಶಾನನಃ ಖಣ್ಡಶ ಏವ ಕೃತ್ವಾ ।
ಗ್ರೀವಾಪ್ರದೇಶೇsಸ್ಯ ಮುಮೋ ಚ ಬಾಣಂ ಭೃಶಾಹತಃ ಸೋsಪಿ ಪಪಾತ ಭೂಮೌ ॥೮.೭೬॥

ಸುಗ್ರೀವ ಹಿಡಿದು ಬಂದ ದೊಡ್ಡ ಮರ,
ಬಾಣದಿಂದ ಕತ್ತರಿಸಿದನದನ ದಶಶಿರ.
ಅವನ ಕೊರಳ ಭಾಗಕ್ಕೆ ಬಾಣ ಪ್ರಯೋಗಿಸಿದ,
ಬಲವಾದ ಹೊಡೆತಕ್ಕೆ ಸುಗ್ರೀವ ನೆಲಕೆ ಬಿದ್ದ.
[Contributed by Shri Govind Magal]

Monday 25 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 63 - 69


ಹತೇಷು ಪುತ್ರೇಷು ಸ ರಾಕ್ಷಸೇಶಃ ಸ್ವಯಂ ಪ್ರಯಾಣಂ ಸಮರಾರ್ತ್ಥಮೈಚ್ಛತ್ ।
ಸಜ್ಜೀಭವತ್ಯೇವ ನಿಶಾಚರೇಶೇ ಖರಾತ್ಮಜಃ ಪ್ರಾಹ ಧನುರ್ದ್ಧರೋತ್ತಮಃ ॥೮.೬೩॥

ಮಕ್ಕಳು ಹತರಾಗುತಿರಲು ರಾವಣ ತಾನೇ ಯುದ್ಧಕೆ ಹೊರಡಲು ಬಯಸಿದ,
ಅವ ಅನುವಾಗುತಿರುವಂತೆ ಉತ್ತಮ ಧನುರ್ಧಾರಿ ಖರನ ಪುತ್ರ ತಾ ನುಡಿದ.

ನಿಯುಙ್ಕ್ಷ್ವ ಮಾಂ ಮೇ ಪಿತುರನ್ತಕಸ್ಯ ವಧಾಯ ರಾಜನ್ ಸಹಲಕ್ಷ್ಮಣಂ ತಮ್ ।
ಕಪಿಪ್ರವೀರಾಂಶ್ಚ ನಿಹತ್ಯ ಸರ್ವಾನ್ ಪ್ರತೋಷಯೇ ತ್ವಾಮಹಮದ್ಯ ಸುಷ್ಠು ॥೮.೬೪॥

ರಾಜನೇ ನನ್ನ ತಂದೆಯ ಕೊಂದವನನ್ನು ಕೊಲ್ಲಲು ಕೊಡು ನನಗೆ ಅವಕಾಶ,
ಲಕ್ಷ್ಮಣಸಮೇತ ಸಮಸ್ತ ಕಪಿಗಳ ಕೊಂದು ನೀಡುವೆ ನಿನಗೆ ಸಂತೋಷ.

ಇತೀರಿತೇsನೇನ ನಿಯೋಜಿತಃ ಸ ಜಗಾಮ ವೀರೋ ಮಕರಾಕ್ಷನಾಮಾ ।
ವಿಧೂಯ ಸರ್ವಾಂಶ್ಚ ಹರಿಪ್ರವೀರಾನ್ ಸಹಾಙ್ಗದಾನ್ ಸೂರ್ಯ್ಯಸುತೇನ ಸಾಕಮ್ ॥೮.೬೫॥

ಹೀಗೆ ಹೇಳಿದ ಮಕರಾಕ್ಷ ರಾವಣನಿಂದ ಆಜ್ಞಪ್ತನಾಗಿ ಯುದ್ಧಕ್ಕೆ ನಡೆದ.
ಅಂಗದ ಮುಂತಾದ ಕಪಿವೀರರನ್ನು ಸುಗ್ರೀವನೊಡನೆ ಓಡಿಸುವವನಾದ.
ಸಮಸ್ತ ಕಪಿವೀರರನ್ನು ನಿರಾಕರಿಸುತ್ತಾ ಶ್ರೀರಾಮನ ಬಳಿಗೇ  ಸಾಗಿದ.

ಅಚಿನ್ತಯನ್  ಲಕ್ಷ್ಮಣಬಾಣಸಙ್ಘಾನವಜ್ಞಯಾ ರಾಮಮಥಾsಹ್ವಯದ್ ರಣೇ ।
ಉವಾಚ ರಾಮಂ ರಜನೀಚರೋsಸೌ ಹತೋ ಜನಸ್ಥಾನಗತಃ ಪಿತಾ ತ್ವಯಾ ॥೮.೬೬॥
ಕೇನಾಪ್ಯುಪಾಯೇನ ಧನುರ್ದ್ಧರಾಣಾಂ ವರಃ ಫಲಂ ತಸ್ಯ ದದಾಮಿ ತೇsದ್ಯ ।
ಇತಿ ಬ್ರುವಾಣಃ ಸ ಸರೋಜಯೋನೇರ್ವರಾದವದ್ಧ್ಯೋsಮುಚದಸ್ತ್ರಸಙ್ಘಾನ್ ॥೮.೬೭॥

ಮಕರಾಕ್ಷ ಲಕ್ಷ್ಮಣನ ಬಾಣಗಳ ಅನಾದರದಿಂದ ಲೆಕ್ಕಿಸದೇ ನಡೆದ,
ಯುದ್ಧಕ್ಕೆ ಶ್ರೀರಾಮಚಂದ್ರನನ್ನೇ ಆಹ್ವಾನಿಸುತ್ತಾ ಹೀಗೆ ಹೇಳಿದ.
ಶ್ರೇಷ್ಠ ಧನುರ್ಧಾರಿಯಾದ ನನ್ನ ತಂದೆಯ ಮೋಸದಿ ನೀ ಕೊಂದೆ,
ಅದಕೆ ಪ್ರತಿಫಲವ ನಾನು ಕೊಡಲು ಬಂದಿರುವೆ ನಿನಗಿಂದೇ.
ಹೀಗೆ ಹೇಳುತ್ತಿದ್ದವ ಅವಧ್ಯನಾಗಿದ್ದ ಬ್ರಹ್ಮ ವರದಿಂದ,
ಅಂಥಾ ಮಕರಾಕ್ಷ ರಾಮನೆಡೆಗೆ ಅಸ್ತ್ರಗಳ ಬಿಡುತ್ತಿದ್ದ.

ಪ್ರಹಸ್ಯ ರಾಮೋsಸ್ಯ ನಿವಾರ್ಯ್ಯ ಚಾಸ್ತ್ರೈರಸ್ತ್ರಾಣ್ಯಮೇಯೋsಶನಿಸನ್ನಿಭೇನ ।
ಶಿರಃ ಶರೇಣೋತ್ತಮಕುಣ್ಡಲೋಜ್ಜ್ವಲಂ ಖರಾತ್ಮಜಸ್ಯಾಥ ಸಮುನ್ಮಮಾಥ ॥೮.೬೮॥

ಅಪ್ರಮೇಯ ಶ್ರೀರಾಮ ನಸುನಗುತಾ ಅವನ ಅಸ್ತ್ರಗಳ ತಡೆದ,
ವಜ್ರಾಯುಧದಂಥ ಬಾಣದಿ ಕುಂಡಲದಿ ಹೊಳೆವ ಅವನ ಶಿರವ ತರಿದ.

ವಿದುದ್ರುವುಸ್ತಸ್ಯ ತು ಯೇsನುಯಾಯಿನಃ ಕಪಿಪ್ರವೀರೈರ್ನ್ನಿಹತಾವಶೇಷಿತಾಃ ।
ಯಥೈವ ಧೂಮ್ರಾಕ್ಷಮುಖೇಷು ಪೂರ್ವಂ ಹತೇಷು ಪೃಥ್ವೀರುಹಶೈಲಧಾರಿಭಿಃ ॥೮.೬೯॥

ಹಿಂದೆ ಧೂಮ್ರಾಕ್ಷ ಮುಂತಾದವರು ಹತರಾದಾಗ ಹೇಗೆ ಓಡಿದ್ದರೋ ಹಾಗೆ,
ಮರ ಬೆಟ್ಟ ಹಿಡಿದ ಕಪಿಗಳಿಂದ ಹತರಾಗದುಳಿದವರ ಪಲಾಯನಗೈದ ಬಗೆ.

Sunday 24 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 58 - 62

ವವರ್ಷತುಸ್ತಾವತಿಮಾತ್ರವೀರ್ಯ್ಯೌ ಶರಾನ್ ಸುರೇಶಾಶನಿತುಲ್ಯವೇಗಾನ್ ।
ತಮೋಮಯಂ ಚಕ್ರತುರನ್ತರಿಕ್ಷಂ ಸ್ವಶಿಕ್ಷಯಾ ಕ್ಷಿಪ್ರತಮಾಸ್ತಬಾಣೈಃ ॥೮.೫೮॥

ಲಕ್ಷ್ಮಣ ಅತಿಕಾಯರಿಬ್ಬರೂ ಅತ್ಯಂತ ಪರಾಕ್ರಮಿಗಳಾಗಿದ್ದರು,
ಇಂದ್ರನ ವಜ್ರಾಯುಧದಷ್ಟು ವೇಗದ   ಬಾಣಗಳ ಸುರಿಸಿಕೊಂಡರು.
ಅಭ್ಯಾಸ ಕೌಶಲಗಳಿಂದ ಬಾಣಗಳ ಮಳೆಗರೆದರು ಸತತ,
ಬಾಣಮೋಡಗಳಿಂದಾಯಿತು ಅಂತರಿಕ್ಷ ಕತ್ತಲಿಂದಾವೃತ.


ಶರೈಃ ಶರಾನಸ್ಯ ನಿವಾರ್ಯ್ಯ ವೀರಃ ಸೌಮಿತ್ರಿರಸ್ತ್ರಾಣಿ ಮಹಾಸ್ತ್ರಜಾಲೈಃ ।
ಚಿಚ್ಛೇದ ಬಾಹೂ ಶಿರಸಾ ಸಹೈವ ಚತುರ್ಭುಜೋsಭೂತ್ ಸ ಪುನದ್ದ್ವಿಷೀರ್ಷಃ ॥೮.೫೯॥

ವೀರಲಕ್ಷ್ಮಣ ತನ್ನ ಬಾಣಗಳಿಂದ ಅವನ ಬಾಣಗಳ ತಡೆದ ,
ತನ್ನಸ್ತ್ರಗಳಿಂದ ಅವನಸ್ತ್ರಗಳ ತಡೆದು ನಿಲ್ಲಿಸುತ ಕತ್ತರಿಸಿದ.
ಲಕ್ಷ್ಮಣ ಅವನ ಬಾಹು ಶಿರಸ್ಸನ್ನು ಕತ್ತರಿಸಲಾಗ,
ನಾಕು ಬಾಹು ಎರಡು ತಲೆಗಳಿರುವವನಾದನಾಗ.

ಛಿನ್ನೇಷು ತೇಷು ದ್ವಿಗುಣಾಸ್ಯಬಾಹುಃ ಪುನಃ ಪುನಃ ಸೋsಥ ಬಭೂವ ವೀರಃ ।
ಉವಾಚ ಸೌಮಿತ್ರಿಮಥಾನ್ತರಾತ್ಮಾ ಸಮಸ್ತಲೋಕಸ್ಯ ಮರುದ್ ವಿಷಣ್ಣಮ್ ॥೮.೬೦॥

ಲಕ್ಷ್ಮಣ ಅವನ ಆ ಬಾಹು ಶಿರಸ್ಸುಗಳ ಛೇದಿಸಿದ,
ಆತ ಮತ್ತೆರಡರಷ್ಟು ಬಾಹು ಶಿರಸ್ಸುಗಳುಳ್ಳವನಾದ.
ಹೀಗೇ ಇದೇ  ರೀತಿ ಪುನರಾವರ್ತಿಸುತ್ತಿರುವಾಗ,
ವಿಷಣ್ಣ ಲಕ್ಷ್ಮಣಗೆ ಸರ್ವಾಂತರ್ಯಾಮಿ ಪ್ರಾಣ ನುಡಿದನಾಗ.

ಬ್ರಹ್ಮಾಸ್ತ್ರತೋsನ್ಯೇನ ನ ವಧ್ಯ ಏಷ ವರಾದ್ ವಿಧಾತುಃ ಸುಮುಖೇತ್ಯದೃಶ್ಯಃ ।
ರಕ್ಷಃಸುತಸ್ಯಾಶ್ರವಣೀಯಮಿತ್ಥಮುಕ್ತ್ವಾ ಸಮೀರೋsರುಹದನ್ತರಿಕ್ಷಮ್ ॥೮.೬೧॥

ಸುಂದರಮೊಗದವನೇ ಅವನಿಗಿದೆ ಬ್ರಹ್ಮವರ,
ಬ್ರಹ್ಮಾಸ್ತ್ರದಿಂದಲ್ಲದೇ ಆಗದವನ ಸಂಹಾರ.
ಅತಿಕಾಯಗೆ ಕಾಣದಂತೆ ಕೇಳದಂತೆ ಲಕ್ಷ್ಮಣಗೆ ಹೇಳಿದ,
ಅಷ್ಟು ಹೇಳಿದ ವಾಯುಪುತ್ರ ಹನುಮ ಅಂತರಿಕ್ಷಕ್ಕೆ ಹಾರಿದ.

ಅಥಾನುಜೋ ದೇವತಮಸ್ಯ ಸೋsಸ್ತ್ರಂ ಬ್ರಾಹ್ಮಂ ತನೂಜೇ ದಶಕನ್ಧರಸ್ಯ ।
ಮುಮೋಚ ದಗ್ಧಃ ಸರಥಾಶ್ವಸೂತಸ್ತೇನಾತಿಕಾಯಃ ಪ್ರವರೋsಸ್ತ್ರವಿತ್ಸು ॥೮.೬೨॥

ಆಗ ರಾಮನನುಜ ಲಕ್ಷ್ಮಣ ಮಾಡಿದ ಅತಿಕಾಯನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ,
ಉತ್ತಮ ಅಸ್ತ್ರಜ್ಞನಾದ ಅತಿಕಾಯ ರಥ ಕುದುರೆ ಸಾರಥಿಗಳೊಂದಿಗೆ ಭಸ್ಮವಾದನಾಗ.