Tuesday 19 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 31 - 34

ಇತೀರಿತಸ್ತೇನ ಸ ರಾಕ್ಷಸೋತ್ತಮೋ ವರಾದಮೋಘಂ ಪ್ರಜಹಾರ ವಕ್ಷಸಿ ।
ವಿಚೂರ್ಣ್ಣಿತೋsಸೌ ತದುರಸ್ಯಭೇದ್ಯೇ ಯಥೈವ ವಜ್ರೋ ವಿಪತೌ ವೃಥಾsಭವತ್ ॥೮.೩೧॥

ಈ ರೀತಿ ಹನುಮಂತನ ಮಾತ ಕೇಳಿದ ನಿಕುಂಭನಾಗ,
ಮಾಡಿದ ವರಬಲದ ವ್ಯರ್ಥವಾಗದ ಶಸ್ತ್ರಪ್ರಯೋಗ.
ಇಂದ್ರ ಪ್ರಯೋಗಿಸಿದ ವಜ್ರಾಯುಧ ಗರುಡನಲ್ಲಿ ವ್ಯರ್ಥವಾದ ರೀತಿ,
ನಿಕುಂಭನಾಯುಧ ಹನುಮನಭೇದ್ಯದೆದೆಗಪ್ಪಳಿಸಿ ಪುಡಿಯಾದ ಗತಿ.
 

ವಿಚೂರ್ಣ್ಣಿತೇ ನಿಜಾಯುಧೇ ನಿಕುಮ್ಭ ಏತ್ಯ  ಮಾರುತಿಮ್ ।
ಪ್ರಗೃಹ್ಯ ಚಾsತ್ಮನೋಂsಸಕೇ ನಿಧಾಯ ಜಗ್ಮಿವಾನ್ ದ್ರುತಮ್ ॥೮.೩೨॥

ನಿಕುಂಭ ನೋಡಿದ ತನ್ನಾಯುಧ ಪುಡಿಯಾದ ನೋಟ,
ಹನುಮನ ಹೆಗಲಲಿ ಹೊತ್ತುಕೊಂಡು ಆರಂಭಿಸಿದ ಓಟ.

ಪ್ರಗೃಹ್ಯ ಕಣ್ಠಮಸ್ಯ ಸ ಪ್ರಧಾನಮಾರುತಾತ್ಮಜಃ ।
ಸ್ವಮಾಶು ಮೋಚಯಮ್ಸ್ತತೋ ನ್ಯಪಾತಯದ್ ಧರಾತಳೇ ॥೮.೩೩॥

ಆಗ ಮುಖ್ಯಪ್ರಾಣನ ಮಗನಾದ ಹನುಮಂತ,
ರಕ್ಕಸನ ಕೊರಳ ಒತ್ತಿ ಗಟ್ಟಿಯಾಗಿ ಹಿಡಿದನಾತ.
ಹನುಮ ಬಿಡಿಸಿಕೊಂಡ ರಕ್ಕಸನ ಹಿಡಿತ,
ನಿಕುಂಭನ ನೆಲಕೆ ಬೀಳಿಸಿ ಕೆಡವಿದನಾತ.

ಚಕಾರ ತಂ ರಣಾತ್ಮಕೇ ಮಖೇ ರಮೇಶದೈವತೇ ।
ಪಶುಂ ಪ್ರಭಞ್ಜನಾತ್ಮಜೋ ವಿನೇದುರತ್ರ ದೇವತಾಃ ॥೮.೩೪॥

ಯುದ್ಧ ರೂಪವಾದ ಮಹಾವೈಷ್ಣವ ಯಾಗದಲ್ಲಿ,
ಹನುಮ ಕೊಟ್ಟ ನಿಕುಂಭನೆಂಬ ವಿಶೇಷ ಪಶುಬಲಿ.
ಆಯಿತು ನಿಕುಂಭನ ಸಂಹಾರ,
ದೇವತೆಗಳು ಹಾಕಿದರು ಜಯಕಾರ.

No comments:

Post a Comment

ಗೋ-ಕುಲ Go-Kula