Tuesday 5 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 7: 30 - 35

ವಿಚೂರ್ಣ್ಣಿತೇ ಧರಾತಳೇ ನಿಜೇ ಸುತೇ ಸ ರಾವಣಃ ।
ನಿಶಮ್ಯ ಶೋಕತಾಪಿತಸ್ತದಗ್ರಜಂ ಸಮಾದಿಶತ್ ॥೭.೩೦॥

ಮಗ ಅಕ್ಷಕುಮಾರನ ಮರಣವಾರ್ತೆ ಕೇಳಿದ ರಾವಣನಾದ ಶೋಕತಪ್ತ,
ಅವನಣ್ಣ ಇಂದ್ರಜಿತುವಿಗೆ ಯುದ್ಧಕ್ಕೆ ಹೋಗಲು ಆಜ್ಞೆಯ ಇತ್ತ.

ಅಥೇನ್ದ್ರಜಿನ್ಮಹಾಶರೈರ್ವರಾಸ್ತ್ರಸಮ್ಪ್ರಯೋಜಿತೈಃ ।
ತತಕ್ಷ ವಾನರೋತ್ತಮಂ ನಚಾಶಕದ್ ವಿಚಾಲನೇ ॥೭.೩೧॥

 ಇಂದ್ರಜಿತು ಬಳಸಿದ ಹನುಮನ ಮೇಲೆ ಉತ್ತಮ ಅಸ್ತ್ರಗಳನ್ನೆಲ್ಲ,
ಆದರೂ ಅವನನ್ನು ಅಲುಗಿಸಲೂ ಇಂದ್ರಜಿತುವಿಗೆ ಸಾಧ್ಯವಾಗಲಿಲ್ಲ.

ಅಥಾಸ್ತ್ರಮುತ್ತಮಂ ವಿಧೇರ್ಯ್ಯುಯೋಜ  ಸರ್ವದುಷ್ಷಹಮ್  ।
ಸ ತೇನ ತಾಡಿತೋ ಹರಿರ್ವ್ಯಚಿನ್ತಯನ್ನಿರಾಕುಲಃ ॥೭.೩೨॥
ನಂತರ ಇಂದ್ರಜಿತುವಿನಿಂದ ಬ್ರಹ್ಮಾಸ್ತ್ರದ ಪ್ರಯೋಗ,
ಕೊಂಚವೂ ವಿಚಲಿತನಾಗದ ಹನುಮ ಯೋಚಿಸಿದನಾಗ.

ಮಯಾ ವರಾ ವಿಲಙ್ಘಿತಾ ಹ್ಯನೇಕಶಃ ಸ್ವಯಮ್ಭುವಃ ।
ಸ ಮಾನನೀಯ ಏವ ಮೇ ತತೋsತ್ರ ಮಾನಯಾಮ್ಯಹಮ್ ॥೭.೩೩॥
ನನ್ನಿಂದಾಗಲೇ ಆಗಿದೆ ಅನೇಕ ಬ್ರಹ್ಮವರಗಳ ಉಲ್ಲಂಘನೆ,
ಸರ್ವದಾ ಬ್ರಹ್ಮದೇವ ನನಗೂ ಕೂಡಾ ಬಲು ಮಾನ್ಯನೆ.
ತೋರಿಕೊಳ್ಳುವೆ ಈಗ ಈ ಅಸ್ತ್ರಕ್ಕಾದಂತೆ ಬಂಧಿತ,
ಹೀಗೆಂದು ಮನದಲ್ಲೇ ಯೋಚಿಸಿದ ಹನುಮಂತ.




ಇಮೇ ಚ ಕುರ್ಯ್ಯುರತ್ರ ಕಿಂ ಪ್ರಹೃಷ್ಟರಕ್ಷಸಾಂ ಗಣಾಃ ।
ಇತೀಹ ಲಕ್ಷ್ಯಮೇವ ಮೇ ಸ ರಾವಣಶ್ಚ ದೃಶ್ಯತೇ ॥೭.೩೪॥

ಇದಂ ಸಮೀಕ್ಷ್ಯ ಬದ್ಧವತ್ ಸ್ಥಿತಂ ಕಪೀನ್ದ್ರಮಾಶು ತೇ ।
ಬಬನ್ಧುರನ್ಯಪಾಶಕೈರ್ಜ್ಜಗಾಮ ಚಾಸ್ತ್ರಮಸ್ಯ ತತ್ ॥೭.೩೫॥

ಗೊತ್ತಾಗುತ್ತದೆ ಸಂತಸಗೊಂಡ ರಕ್ಕಸರ ನಡವಳಿಕೆ,
ಸಿದ್ಧವಾಗುತ್ತದೆ ರಾವಣನ ಭೇಟಿಗೆ ಒಂದು ವೇದಿಕೆ.
ಇಂತು ಯೋಚಿಸಿದ ಹನುಮ ಬಂಧನಕ್ಕೊಳಗಾದವನಂತೆ ನಿಂತ,
ದೈತ್ಯಪಡೆಯವರ ಹಗ್ಗಗಳಿಂದ ಕಟ್ಟಿಸಿಕೊಂಡಾದ ಬಂಧಿತ.
ಬ್ರಹ್ಮಾಸ್ತ್ರ ಅವನ ಬಿಟ್ಟು ಹೋಯಿತಂತೆ ಆಗಿ ಅವಮಾನಿತ.


No comments:

Post a Comment

ಗೋ-ಕುಲ Go-Kula