Tuesday 12 June 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 8: 07 - 09

ಸಬ್ರಹ್ಮಕಾಃ ಸುರಗಣಾಃ ಸಹದೈತ್ಯಮರ್ತ್ತ್ಯಾಃ ಸರ್ವೇ ಸಮೇತ್ಯ ಚ ಮದಙ್ಗುಲಿಚಾಲನೇsಪಿ ।
ನೇಶಾ ಭಯಂ ನ ಮಮ ರಾತ್ರಿ ಚರಾದಮುಷ್ಮಾಚ್ಛುದ್ಧಸ್ವಭಾವ ಇತಿ ಚೈನಮಹಂ 
ವಿಜಾನೇ ॥೮.೦೭॥

ಬ್ರಹ್ಮಾದಿ ದೇವತಾ ಸಮೂಹವಾಗಲೀ,
ದಾನವ ,ಬಲವಂತ ಮಾನವರಾಗಲೀ,
ಎಲ್ಲರೂ ಒಟ್ಟಾಗಿ ಸೇರಿ ಬಂದರೂ,
ನನ್ನೊಂದು ಬೆರಳನ್ನೂ ಅಲುಗಿಸಲಾರರು.
ನನಗಿಲ್ಲ ಈ ರಕ್ಕಸನಿಂದ್ಯಾವ ಭಯ,
ಗೊತ್ತೆನಗೆ ಇವನು ಶುದ್ಧ ಸ್ವಭಾವದವ.

ಇತ್ಯುಕ್ತವಾಕ್ಯ ಉತ ತಂ ಸ್ವಜನಂ ವಿಧಾಯ ರಾಜ್ಯೇsಭ್ಯಷೇಚಯದಪಾರಸುಸತ್ತ್ವರಾಶಿಃ ।
ಮತ್ವಾತೃಣೋಪಮಮಶೇಷಸದನ್ತಕಂ ತಂ ರಕ್ಷಃಪತಿಂ ತ್ವವರಜಸ್ಯ ದದೌ ಸ 
ಲಙ್ಕಾಮ್ ॥೮.೦೮॥

ಹೀಗೆ ಮಾತಾಡಿದ ಶ್ರೀರಘುಕುಲತೇಜ,
ಭೃತ್ಯನ ಮಾಡಿದ ಲಂಕಾದೇಶದ ರಾಜ.
ಆದರೇನಂತೆ ಬಲವಂತ ಯಮಸ್ವರೂಪಿಯಾದ  ರಾವಣ,
ರಾಮನೆದುರು ತೃಣಸಮಾನವಾಗಿ ಅಭಿಷಿಕ್ತನಾದ ವಿಭೀಷಣ.

ಕಲ್ಪಾನ್ತಮಸ್ಯ ನಿಶಿಚಾರಿಪತಿತ್ವಪೂರ್ವಮಾಯುಃ ಪ್ರದಾಯ ನಿಜಲೋಕಗತಿಂ ತದನ್ತೇ ।
ರಾತ್ರಿತ್ರಯೇsಪ್ಯನುಪಗಾಮಿನಮೀಕ್ಷ್ಯ ಸೋsಬ್ಧಿಂಚುಕ್ರೋಧ ರಕ್ತನಯನಾನ್ತಮಯುಞ್ಜದಬ್ಧೌ॥೮.೦೯॥

ಕಲ್ಪಾಂತ್ಯದವರೆಗೂ ಇರುವ ರಾಕ್ಷಸಾಧಿಪತ್ಯಕ್ಕೆ ಆಯುಷ್ಯ,
ವಿಭೀಷಣಗಿತ್ತ ಕೊನೆಯಲ್ಲಿ ತನ್ನ ಲೋಕ ಪ್ರಾಪ್ತಿಯ ಭವಿಷ್ಯ.
ಇಷ್ಟೆಲ್ಲಾ ಅನುಗ್ರಹವಿತ್ತ ಶ್ರೀರಾಮಚಂದ್ರ  ವಿಭೀಷಣಗೆ,
ಕೆಂಗಣ್ಣ ಬಿಟ್ಟ ತ್ರಿರಾತ್ರಿಯಾದರೂ ಬಾರದ ವರುಣನೆಡೆಗೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula