ಪುನಶ್ಚ ಮನ್ತ್ರಿಪುತ್ರಕಾನ್ ಸ ರಾವಣಪ್ರಚೋದಿತಾನ್ ।
ಮಮರ್ದ್ಧ ಸಪ್ತ ಪರ್ವತಪ್ರಭಾನ್ ವರಾಭಿರಕ್ಷಿತಾನ್ ॥೭.೨೨॥
ಬಲಾಗ್ರಗಾಮಿನಸ್ತಥಾ ಸ ಶರ್ವವಾಕ್ಸುಗರ್ವಿತಾನ್ ।
ನಿಹತ್ಯ ಸರ್ವರಕ್ಷಸಾಂ ತೃತೀಯಭಾಗಮಕ್ಷಿಣೋತ್ ॥೭.೨೩॥
ರುದ್ರದೇವನ
ವರಗಳಿಂದ ರಕ್ಷಿತ,
ಬಲಿಷ್ಠ
ಮಂತ್ರಿಪುತ್ರರವರು ಸಪ್ತ.
ಬೆಟ್ಟ ಸದೃಶರಾದ ಆ
ರಾಕ್ಷಸರು,
ಹನುಮನ ತುಳಿತಕ್ಕೆ
ಪುಡಿಯಾದರು.
ವರಬಲದಿಂದ
ದರ್ಪಿತವಾದ ರಾಕ್ಷಸರ ರಾವಣನ ಸೇನೆ,
ಸಂಹರಿಸಿದ ಹನುಮ
ಸೇನೆಯ ಮೂರನೇ ಒಂದು ಭಾಗವನ್ನೇ.
ಅನೌಪಮಂ ಹರೇರ್ಬಲಂ ನಿಶಮ್ಯ ರಾಕ್ಷಸಾಧಿಪಃ ।
ಕುಮಾರಮಕ್ಷಮಾತ್ಮನಃ ಸಮಂ ಸುತಂ ನ್ಯಯೋಜಯತ್ ॥೭.೨೪॥
ಕಪಿಯ ಬಲ
ಅಸದೃಶವೆಂದು ಅರಿತ ರಾವಣ,
ಸಮಬಲದ ಮಗ
ಅಕ್ಷಕುಮಾರನ ಮಾಡಿದ ನಿಯೋಜನ.
ಸ ಸರ್ವಲೋಕಸಾಕ್ಷಿಣಃ ಸುತಂ ಶರೈರ್ವವರ್ಷ ಹ ।
ಶಿತೈರ್ವರಾಸ್ತ್ರಮನ್ತ್ರಿತೈರ್ನ್ನಚೈನಮಭ್ಯಚಾಲಯತ್ ॥೭.೨೫॥
ಸಕಲಲೋಕಸಾಕ್ಷಿಯಾದ
ವಾಯುಪುತ್ರ ಹನುಮಂತ,
ಎಲ್ಲರ ಅಂತರ್ಯಾಮಿ
ಜೀವದ ಉಸಿರಾಗಿ ಇರುವಾತ.
ಅಕ್ಷಕುಮಾರ
ಸುರಿಸಿದ ತೀಕ್ಷ್ಣ ಮಂತ್ರಿತ ಬಾಣಗಳ ಅನವರತ,
ಯಾವುದಕ್ಕೂ ಜಗ್ಗದೆ
ಬಗ್ಗದೇ ನಿಂತ ಬಲದಮೂಲ ಹನುಮಂತ.
ಸ ಮಣ್ಡಮಧ್ಯಕಾಸುತಂ ಸಮೀಕ್ಷ್ಯ ರಾವಣೋಪಮಮ್ ।
ತೃತೀಯ ಏಷ ಚಾಂಶಕೋ ಬಲಸ್ಯ ಹೀತ್ಯಚಿನ್ತಯತ್ ॥೭.೨೬॥
ಹನುಮ ಕಂಡ ರಾವಣನ
ಮಗ ಅಕ್ಷಕುಮಾರ,
ರಾವಣಸದೃಶನವನು ಅವನ
ಬಲ ಅಪಾರ.
ಹನುಮಂತ ತನ್ನಲ್ಲೇ
ಯೋಚಿಸಿದನಂತೆ ಆಗ,
ಇವನಿರಬೇಕು
ರಾವಣಬಲದ ಮೂರನೇ ಒಂದು ಭಾಗ.
ನಿದಾರ್ಯ್ಯ ಏವ ರಾವಣಃ ಸ ರಾಘವಸ್ಯ ನಾನ್ಯಥಾ ।
ಯದೀನ್ದ್ರಜಿನ್ಮಯಾ ಹತೋ ನಚಾಸ್ಯ ಶಕ್ತಿರೀಕ್ಷ್ಯತೇ ॥೭.೨೭ ॥
ರಾವಣನನ್ನು ನಾನು
ಮಾಡುವುದಿಲ್ಲ ಸಂಹಾರ,
ಆಗಲೇಬೇಕವನು
ರಾಮಬಾಣಕ್ಕೇ ಆಹಾರ.
ಬರಲಿರುವ
ಇಂದ್ರಜಿತುವನ್ನು ಸಂಹರಿಸಿದರೆ ನಾನು,
ಲೋಕಕ್ಕಾಗುವುದಿಲ್ಲ
ಅವನ ಶಕ್ತಿ ಪರಿಚಯ ತಾನು.
ಅತಸ್ತಯೋಃ ಸಮೋ ಮಯಾ ತೃತೀಯ ಏಷ ಹನ್ಯತೇ ।
ವಿಚಾರ್ಯ್ಯ ಚೈವಮಾಶು ತಂ ಪದೋಃ ಪ್ರಗೃಹ್ಯ ಪುಪ್ಲುವೇ ॥೭.೨೮॥
ಕಾರಣ ರಾವಣ
ಇಂದ್ರಜಿತುಗಳ ಸಂಹಾರ ಸಲ್ಲದು,
ಅಕ್ಷಕುಮಾರನ ಮೇಲೆ
ಕಳಿಸುವುದೇ ಒಳ್ಳೆಯದು.
ಕಾಲುಗಳಲ್ಲಿ ಅವನ
ಹಿಡಿದ,
ಹಿಡಿದಂತೇ ತಾ ಮೇಲೆ
ಹಾರಿದ.
ಸ ಚಕ್ರವದ್ ಭ್ರಮಾತುರಂ ವಿಧಾಯ ರಾವಣಾತ್ಮಜಮ್ ।
ಅಪೋಥಯದ್ ಧರಾತಳೇ ಕ್ಷಣೇನ ಮಾರುತೀ ತನುಃ ॥೭.೨೯॥
ಅಕ್ಷಕುಮಾರ ಹನುಮನ
ಕೈಯ ಆಟದ ಚಕ್ರವಾದ,
ಗರಗರನೆ
ತಿರುಗಿಸುತ್ತವನ ಎತ್ತಿ ನೆಲಕ್ಕೆ ಅಪ್ಪಳಿಸಿದ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula