ಅಥ ಪ್ರಗೃಹ್ಯ ತಂ ಕಪಿಂ ಸಮೀಪಮಾನಯಂಶ್ಚ ತೇ ।
ನಿಶಾಚರೇಶ್ವರಸ್ಯ ತಂ ಸ ಪೃಷ್ಟವಾಂಶ್ಚ ರಾವಣಃ ॥೭.೩೬॥
ಕಪೇ ಕುತೋsಸಿ ಕಸ್ಯ ವಾ ಕಿಮರ್ತ್ಥಮೀದೃಶಂ ಕೃತಮ್ ।
ಇತೀರಿತಃ ಸ ಚಾವದತ್ ಪ್ರಣಮ್ಯ ರಾಮಮೀಶ್ವರಮ್ ॥೭.೩೭॥
ದೈತ್ಯಪಡೆ ಹಿಡಿದು
ತಂದಿತು ಮಹಾಕಪಿಯ ರಾವಣನ ಬಳಿಗೆ,
ತನ್ನೆದುರು ನಿಂತ
ಹನುಮನ ಕುರಿತು ಹೇಳುತ್ತಾನೆ ರಾವಣ ಹೀಗೆ.
ಎಲೈ ಕಪಿಯೇ
ಎಲ್ಲಿಂದ ಬಂದಿರುವೆ,
ನೀನು ಯಾರ ದಾಸನಾಗಿ
ನಿಂದಿರುವೆ,
ಯಾವ ಕಾರಣಕೆ ಈ
ರೀತಿ ಮಾಡಿರುವೆ.
ಈ ರೀತಿ
ಪ್ರಶ್ನಿತನಾದ ಹನುಮಂತ,
ರಾಮಗೆ ವಂದಿಸಿ
ಉತ್ತರಿಸಲು ನಿಂತ.
ರಘೂತ್ತಮಸ್ಯ ಮಾರುತಿಂ ಕುಲಕ್ಷಯೇ ತವೇಶ್ವರಮ್ ॥೭.೩೮॥
ಬಲು ಪರಾಕ್ರಮಿ
ಶ್ರೀರಾಮನ ದೂತ ಹನುಮಂತ ನಾನು,
ನಿನ್ನ ಕುಲ ನಾಶ
ಮಾಡುವುದರಲ್ಲಿ ಸಮರ್ಥ ತಿಳಿ ನೀನು.
ನ ಚೇತ್ ಪ್ರದಾಸ್ಯಸಿ ತ್ವರನ್ ರಘೂತ್ತಮಪ್ರಿಯಾಂ ತದಾ ।
ಸಪುತ್ರಮಿತ್ರಬಾನ್ಧವೋ ವಿನಾಶಮಾಶು ಯಾಸ್ಯಸಿ ॥೭.೩೯॥
ತಕ್ಷಣ ನೀನು
ರಾಮಪತ್ನಿ ಸೀತೆಯ ರಾಮಗೆ ಒಪ್ಪಿಸದಿದ್ದಲ್ಲಿ,
ಮಕ್ಕಳು ಬಂಧು
ಮಿತ್ರರ ಸಮೇತ ವಿನಾಶ ಹೊಂದುವೆಯಿಲ್ಲಿ.
ನ ರಾಮಬಾಣಧಾರಣೇ ಕ್ಷಮಾಃ ಸುರೇಶ್ವರಾ ಅಪಿ ।
ವಿರಿಞ್ಚಶರ್ವಪೂರ್ವಕಾಃ ಕಿಮು ತ್ವಮಲ್ಪಸಾರಕಃ ॥೭.೪೦॥
ಪ್ರಕೋಪಿತಸ್ಯ ತಸ್ಯ ಕಃ ಪುರಃಸ್ಥಿತೌ ಕ್ಷಮೋ ಭವೇತ್ ।
ಸುರಾಸುರೋರಗಾದಿಕೇ ಜಗತ್ಯಚಿನ್ತ್ಯಕರ್ಮಣಃ ॥೭.೪೧॥
ರಾಮಬಾಣ ತಡೆವ
ಶಕ್ತಿ ಯಾವ ದೇವತೆಗಳಿಗೂ ಇಲ್ಲ,
ಬ್ರಹ್ಮ ರುದ್ರ
ಮೊದಲಾದವರಿಗೂ ಆ ಸಾಮರ್ಥ್ಯ ಇಲ್ಲ.
ಅತಿ ಕಡಿಮೆ ಬಲ
ಹೊಂದಿರುವ ನಿನ್ನಿಂದ ಹೇಗೆ ಸಾಧ್ಯ ತಡೆ,
ಮುನಿದ
ರಾಮಗೆದುರಾಗಲಾರದು ದೇವತೆಗಳ ಅಸುರರ ಪಡೆ.
ಶ್ರೀರಾಮಚಂದ್ರ ಅವ
ಸರ್ವಶಕ್ತ,
ಅವನೆದುರಿಸಲು ಯಾರಿಲ್ಲ ಸಮರ್ಥ.
No comments:
Post a Comment
ಗೋ-ಕುಲ Go-Kula