Wednesday 22 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 01 - 03


।। ಓಂ ।।
ಕಂಸವಧಃ

ಗರ್ಗ್ಗಃ ಶೂರಸುತೋಕ್ತ್ಯಾ ವ್ರಜಮಾಯಾತ್ ಸಾತ್ವತಾಂ ಪುರೋಧಾಃ ಸಃ ।
ಚಕ್ರೇ ಕ್ಷತ್ರಿಯಯೋಗ್ಯಾನ್ ಸಂಸ್ಕಾರಾನ್ ಕೃಷ್ಣರೋಹಿಣೀಸೂನ್ವೋಃ ॥೧೩.೦೧॥
ಯಾದವರ ಪುರೋಹಿತರಾಗಿರುವ ಹೆಸರಾಂತ ಋಷಿ ಗರ್ಗಾಚಾರ್ಯ,
ವಸುದೇವನ ಮಾತಿನಂತೆ ನಂದಗೋಕುಲಕ್ಕೆ ನಡೆದು  ಬಂದರು ಆರ್ಯ.
ಮಾಡಿದರು ಕೃಷ್ಣಬಲರಾಮರಿಗೆ ಕ್ಷತ್ರಿಯಯೋಗ್ಯ ಜಾತಕರ್ಮಾದಿ ಸಂಸ್ಕಾರ.

ಊಚೇ ನನ್ದ ಸುತೋsಯಂ ತವ ವಿಷ್ಣೋರ್ನ್ನಾವಮೋ ಗುಣೈಃ ಸರ್ವೈಃ ।
ಸರ್ವೇ ಚೈತತ್ರಾತಾಃ ಸುಖಮಾಪ್ಸ್ಯನ್ತ್ಯುನ್ನತಂ ಭವತ್ಪೂರ್ವಾಃ ॥೧೩.೦೨ ॥
ಸಮಸ್ತ ಸಂಸ್ಕಾರಗಳ ಪೂರೈಸಿ ಗರ್ಗಾಚಾರ್ಯ ನಂದಗೆ ಹೇಳುತ್ತಾರೆ ಈ ಮಾತ,
ನಾರಾಯಣನಂತೆ  ಎಲ್ಲಾ ಗುಣಗಳಿಂದಲೂ ಪರಿಪೂರ್ಣ ಈ ನಿನ್ನ ಸುತ.
ನೀನೂ ನಿನ್ನವರೆಲ್ಲರೂ ಹೊಂದುತ್ತೀರಿ ಇವನಿಂದ ರಕ್ಷಣೆ ಸುಖ ಮತ್ತು ಹಿತ.

ಇತ್ಯುಕ್ತಃ ಸ ಮುಮೋದ ಪ್ರಯಯೌ ಗರ್ಗ್ಗೋsಪಿ ಕೇಶವೋsಥಾsಧ್ಯಃ ।
ಸ್ವಪದೈರಗ್ರಜಯುಕ್ತಶ್ಚಕ್ರೇ ಪುಣ್ಯಂ ವ್ರಜನ್ ವ್ರಜೋದ್ದೇಶಮ್ ॥೧೩.೦೩॥
ಹೀಗೆ ಗರ್ಗರಿಂದ ಹೇಳಲ್ಪಟ್ಟ ನಂದ,
ಹೊಂದಿದ ಅತ್ಯಂತವಾದ ಆನಂದ.
ನಂದನ ಅನುಜ್ಞೆ ಪಡೆದ ಗರ್ಗಾಚಾರ್ಯರದು ಅಲ್ಲಿಂದ ನಿರ್ಗಮನ,
ಅಣ್ಣನೊಡಗೂಡಿ ಕೃಷ್ಣ ಆ ಪ್ರಾಂತ್ಯದಲ್ಲಿ ಓಡಾಡಿ ಮಾಡಿದ ಗ್ರಾಮ ಪಾವನ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula