Tuesday 5 July 2016

Sāra Saṅgama 33

ಸಾರ ಸಂಗಮ  by “ತ್ರಿವೇಣಿ ತನಯ

ಜ್ಞಾನದ ಲಾಂದ್ರ
ಹೊರಗೆ ಆಕಾಶದಲ್ಲಿ ಹೊಳೆವ ಚಂದ್ರ,
ಮನದಾಕಾಶದಲ್ಲಿ ಹತ್ತೇ ಇಲ್ಲ ಲಾಂದ್ರ,
ಚಂದ್ರನಿರದ ಆಕಾಶ ಬರೀ ಕತ್ತಲು,
ಲಾಂದ್ರವಿರದ ಮನವಾದೀತೆಂತು ಬೆತ್ತಲು?
ನಿಜ ಗಳಿಕೆ
ಮಾನವನಿಗೆ ಜ್ಞಾನವೇ ಭೂಷಣ,
ಬಾಹ್ಯಾಡಂಬರ-ವಸನ ಆಭರಣ,
ಸತತ ಕಲಿಕೆಯಿಂದಲೇ ನಿಜ ಗಳಿಕೆ,
ತುಂಬುವುದದೇ ಅಧ್ಯಾತ್ಮ ಕುಡಿಕೆ.
ಬಾಳೊಂದು ಒಗಟು
ಎಲ್ಲರ ಬಾಳೂ ಒಂದು ಒಗಟು,
ಬಿಡಿಸಲಾಗದ ಕ್ಲಿಷ್ಟ ಕಗ್ಗಂಟು,
ಅರಿತವರಿಗೆ ಗೊತ್ತದರ ಗುಟ್ಟು,
ಕಲಿಯುತ ಅರಿವ ಬುತ್ತಿಯ ಕಟ್ಟು.
ವೇದನೆ -ನಿವೇದನೆ
ಯಾರೆದುರು ನಿನ್ನ ಹೀನ ನಿವೇದನೆ?
ಎಲ್ಲರದೂ ತೀರಲಾರದ ವೇದನೆ,
ವೇದನೆ ಇರುವಲ್ಲಿ ಹ್ಯಾಗೆ ಸಾಧನೆ?
ಗಟ್ಟಿ ಹಿಡಿ-ವೇದ ಪ್ರತಿಪಾದ್ಯನನ್ನೇ.
ದೇವತಾ ಗಣ .ಜೀವ ಕಣ.
ಎಲ್ಲಾ ನಡೆಸುವುದೇ ದೇವತಾ ಗಣ,
ಇಲ್ಲವಾದರೆ ಎಲ್ಲವೂ ಭಣ ಭಣ,
ಬೃಹತ್ ವ್ಯಾಪಾರದಲಿ ನೀನೊಂದು ಕಣ,
ಎಂದೂ ಇರಲಿ ಶಾರಣ್ಯದ ಸ್ಮರಣ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula