Wednesday 31 October 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 10: 47 - 51

ಇತೀರಿತಶ್ಚಕ್ರಧರೇಣ ತಾಂ ಮುನಿರ್ಜ್ಜಗಾಮ ಮಾರ್ತ್ತಾಣ್ಡಸುತಾಂ ಸಮುದ್ರಗಾಮ್
ಉತ್ತಾರಯನ್ತೀಮಥ ತತ್ರ ವಿಷ್ಣುಃ ಪ್ರಾದುರ್ಬಭೂವಾsಶು ವಿಶುದ್ಧಚಿದ್ಧನಃ   ॥೧೦.೪೭

ರೀತಿ ಭಗವಂತನಿಂದ ಹೇಳಲ್ಪಟ್ಟ ಮುನಿ ಪರಾಶರ,
ಸೇರಿದ;ಸಮುದ್ರ ಸೇರಲು ಹೊರಟಿದ್ದ ಯಮುನಾ ನದಿತೀರ.
ಅಲ್ಲಿ ನದಿ ದಾಟಿಸುತ್ತಿದ್ದ ಸತ್ಯವತಿಯ ಸಾರಿ ಸೇರಿದ,
ಆಗ ನಾರಾಯಣ ಅವರ ಮಗನಾಗಿ ಆವಿರ್ಭವಿಸಿದ.

ವಿದೋಷವಿಜ್ಞಾನಸುಖೈಕರೂಪೋsಪ್ಯಜೋ ಜನಾನ್ ಮೋಹಯಿತುಂ 
ಮೃಷೈವ
ಯೋಷಿತ್ಸು ಪುಂಸೋ ಹ್ಯಜನೀವ ದೃಷ್ಯತೇ ಜಾಯತೇ ಕ್ವಾಪಿ 
ಬಲಾದಿವಿಗ್ರಹಃ  ೧೦.೪೮

ಯಥಾ ನೃಸಿಂಹಾಕೃತಿರಾವಿರಾಸೀತ್ ಸ್ತಮ್ಭಾತ್ ತಥಾ ನಿತ್ಯತನುತ್ವತೋ ವಿಭುಃ
ಆವಿರ್ಭವದ್ ಯೋಷಿತಿ ನೋ ಮಲೋತ್ಥಸ್ತಥಾsಪಿ ಮೋಹಾಯ ನಿದರ್ಶಯೇತ್ 
ತಥಾ ೧೦.೪೯

ದೋಷವಿರದ ವಿಜ್ಞಾನಸುಖಗಳೇ ಮೈದಾಳಿ ಬಂದ ಶ್ರೀಮನ್ನಾರಾಯಣ,
ಜನರ ಮೋಹನಕ್ಕೆ ತೋರುವ ತನ್ನ ಹುಟ್ಟಿಗೆ ಪುರುಷ ಸ್ತ್ರೀಸಂಗ ಕಾರಣ.
ಬಲವೇ ಮೈವೆತ್ತಿ ಬಂದ ನಾರಾಯಣಗೆ ಹುಟ್ಟೆಲ್ಲಿ,
ಕಂಬದಿ ಬಂದ ನರಸಿಂಹನಂತೆ ತೂರಿಬಂದ ಹೆಣ್ಣಲ್ಲಿ.
ಶುಕ್ಲ ಶೋಣಿತ ಮಲದಿಂದಾಗಲ್ಲ ಅವನ ಜನನ,
ತೋರುತ್ತಾನೆ ಮಾಡಲು ಅಯೋಗ್ಯ ಜನಮೋಹನ.

ಸ್ತ್ರೀಪುಂಪ್ರಸಙ್ಗಾತ್ ಪರತೋ ಯತೋ ಹರಿಃ ಪ್ರಾದುರ್ಭವತ್ಯೇಷ ವಿಮೋಹಯನ್ 
ಜನಮ್
ಅತೋ ಮಲೋತ್ಥೋsಯಮಿತಿ ಸ್ಮ ಮನ್ಯತೇ 
ಜನೋsಶುಭಃ ಪೂರ್ಣ್ಣಗುಣೈಕವಿಗ್ರಹಮ್  ೧೦.೫೦

ಯಾವ ಕಾರಣದಿಂದ ಗಂಡು ಹೆಣ್ಣಿನ ಸಂಪರ್ಕದ ನಂತರ ಆಗುತ್ತದವನ ಪ್ರಾದುರ್ಭಾವ,
ಅದೇ ಕಾರಣದಿಂದಾಗುತ್ತದೆ ಅಯೋಗ್ಯರಿಗೆ ಅವನು ಹುಟ್ಟಿದ್ದು ಶುಕ್ಲಶೋಣಿತದಿಂದೆಂಬ ಭಾವ.

ದ್ವೀಪೇ ಭಗಿನ್ಯಾಃ ಯಮಸ್ಯ ವಿಶ್ವಕೃತ್ ಪ್ರಕಾಶತೇ ಜ್ಞಾನಮರೀಚಿಮಣ್ಡಲಃ
ಪ್ರಭಾಸಯನ್ನಣ್ಡಬಹಿಸ್ತಥಾsನ್ತಃ ಸಹಸ್ರಲಕ್ಷಾಮಿತಸೂರ್ಯ್ಯದೀಧಿತಿಃ  ೧೦.೫೧

ಯಮನ ತಂಗಿಯಾದ ಯಮುನೆಯ ದ್ವೀಪ,
ವಿಶ್ವ ಸೃಷ್ಟಿಸಿ ಜ್ಞಾನಕಾಂತಿ ತೋರಿದ ಪ್ರತಾಪ.
ಆವಿರ್ಭವಿಸಿದ ಜ್ಞಾನಕಾಂತಿಯುಳ್ಳ ನಾರಾಯಣ,
ಬ್ರಹ್ಮಾಂಡದೊಳಹೊರಗಾದ ಅನಂತಜ್ಯೋತಿ ಕಿರಣ.

No comments:

Post a Comment

ಗೋ-ಕುಲ Go-Kula