Thursday 2 December 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 23-28

[ದೇವರು ಅರ್ಜುನನ ಜೊತೆಗೆ ಬಲರಾಮ-ಪ್ರದ್ಯುಮ್ನ-ಅನಿರುದ್ಧ ಇವರನ್ನು ಏಕೆ ಕಳುಹಿಸಲಿಲ್ಲ ಎಂದರೆ:]

ನ್ಯಯೋಜಯತ್ ತತ್ಸಹಾಯೇ ಯಶಸ್ತೇಷ್ವಭಿರಕ್ಷಿತುಮ್  

ಪ್ರಿಯೋ ಹಿ ನಿತರಾಂ ರಾಮಃ  ಕೃಷ್ಣಸ್ಯಾನು ತಂ ಸುತಃ          ೨೧.೨೩

 

ಅನಿರುದ್ಧಃ ಕಾರ್ಷ್ಣ್ಣಿಮನು ಪ್ರದ್ಯುಮ್ನಾದ್ ಯೋsಜನಿಷ್ಟ ಹಿ

ರುಗ್ಮಿಪುತ್ರ್ಯಾಂ ರುಗ್ಮವತ್ಯಾಮಾಹೃತಾಯಾಂ ಸ್ವಯಮ್ಬರೇ      ೨೧.೨೪

ಬಲರಾಮ, ಪ್ರದ್ಯುಮ್ನ, ಅನಿರುದ್ಧಾದಿಗಳಿಗೆ ಅಪಕೀರ್ತಿ,

ಬಾರದೇ ಯಶಸ್ಸು ರಕ್ಷಣೆಯಾಗಲೆಂಬುದು ಕೃಷ್ಣನೀತಿ,

ಅವರನ್ನು ಅರ್ಜುನನೊಂದಿಗೆ ಕಳಿಸದಿದ್ದುದು ಅದೇ ರೀತಿ.

ಕೃಷ್ಣಗೆ ಅನುಕ್ರಮವಾಗಿ ಬಲುಪ್ರಿಯರಿವರು -ಬಲರಾಮ, ಪ್ರದ್ಯುಮ್ನ, ಅನಿರುದ್ಧ,

ಈ ಅನಿರುದ್ಧ ;ಪ್ರದ್ಯುಮ್ನ ಸ್ವಯಂವರದಿ ಕದ್ದು ತಂದ ರುಗ್ಮವತಿಯಲ್ಲಿ ಜನಿಸಿದ್ದ.

 

ರತಿರೇವ ಹಿ ಯಾ ತಸ್ಯಾಂ ಜಾತೋsಸೌ ಕಾಮನನ್ದನಃ

ಪೂರ್ವಮಪ್ಯನಿರುದ್ಧಾಖ್ಯೋ ವಿಷ್ಣೋಸ್ತನ್ನಾಮ್ನ ಏವಚ  ೨೧.೨೫

 

ಆವೇಶಯುಕ್ತೋ ಬಲವಾನ್ ರೂಪವಾನ್ ಸರ್ವಶಾಸ್ತ್ರವಿತ್

ತಸ್ಮಾತ್ ತಾಂಸ್ತ್ರಿನೃತೇ ಕೃಷ್ಣಃ ಪಾರ್ತ್ಥಸಾಹಾಯ್ಯಕಾರಣಾತ್   ೨೧.೨೬

 

ನ್ಯಯೋಜಯತ್ ಸೂತಿಕಾಲೇ ಬ್ರಾಹ್ಮಣ್ಯಾಃ ಫಲ್ಗುನಃ

ಅಸ್ತ್ರೈಶ್ಚಕಾರ ದಿಗ್ಬನ್ಧಂ ಕುಮಾರೋsಥಾಪಿತು ಕ್ಷಣಾತ್             ೨೧.೨೭

 

ಅದರ್ಶನಂ ಯಯೌ ಪಾರ್ತ್ಥೋ ವಿಷಣ್ಣಃ ಸಹ ಯಾದವೈಃ

ಅಧಿಕ್ಷಿಪ್ತೋ ಬ್ರಾಹ್ಮಣೇನ ಯಯೌ ಯತ್ರ ಶ್ರಿಯಃಪತಿಃ                ೨೧.೨೮

ಆ ರುಗ್ಮವತಿ ಮೂಲರೂಪದಲ್ಲಿ ಸಾಕ್ಷಾತ್ ರತಿ,

ಅನಿರುದ್ಧ ಮಗನಾದರೆ, ರತಿ ಕಾಮ ಸತಿ ಪತಿ.

ಈತನಲ್ಲಿತ್ತು 'ಅನಿರುದ್ಧ' ನಾಮಕ ಭಗವಂತನ ಆವೇಶ,

ಬಲಿಷ್ಠ, ರೂಪವಂತ,ಶಾಸ್ತ್ರಜ್ಞನಾಗಿದ್ದದ್ದು ಅವನ ವಿಶೇಷ.

 

ಅರ್ಜುನಗೆ ಸಹಾಯ ಮಾಡಲು ಈ ಮೂವರನ್ನು ಬಿಟ್ಟು,

ಮಿಕ್ಕೆಲ್ಲ ಯಾದವರನ್ನು ಕಳಿಸಿದ್ದು ದೈವಸಂಕಲ್ಪದ ಗುಟ್ಟು.

ಅರ್ಜುನ ವಿಪ್ರಪತ್ನಿಯ ಪ್ರಸವಕಾಲದಲ್ಲಿ ಮಾಡಿದ್ದ ಅಸ್ತ್ರದಿಗ್ಬಂಧನ,

ಆದರೂ ಹುಟ್ಟಿದಕ್ಷಣದಲ್ಲೇ ಮಗು ಕಾಣದಾದಾಗ ನಿಂದಿತನಾದ ಅರ್ಜುನ,

ವಿಷಾದದಿಂದ ಯಾದವರೊಂದಿಗೆ ಬಂದುಸೇರಿದ ಶ್ರೀಕೃಷ್ಣನ ಸನ್ನಿಧಾನ.


[Contributed by Shri Govind Magal]

No comments:

Post a Comment

ಗೋ-ಕುಲ Go-Kula