Monday 9 May 2016

Sāra Saṅgama 29

ಸಾರ ಸಂಗಮ  by “ತ್ರಿವೇಣಿ ತನಯ

ಮಿತ -ಅಮಿತ

ಹುಟ್ಟು ಸಾವುಗಳ ಚಕ್ರ ಅಬಾಧಿತ,
ಎಲ್ಲವೂ ಇಲ್ಲಿ ಪೂರ್ವನಿಯೋಜಿತ,
ಮಿತಿ ಅರಿತು ನಡೆದರೆ ಸೊಗಸು ಸಂಸಾರ,
ತಿಳಿಯಬಲ್ಲವರ್ಯಾರು "ಅಮಿತ"ನ ವ್ಯಾಪಾರ.

ಆತ್ಮ -ಪರಮಾತ್ಮ

ಅನಾದಿಕಾಲದ ಋಣಾನುಬಂಧ,
ಜನ್ಮ ಜನ್ಮಾಂತರಗಳ ಬಿಡದ ಸಂಬಂಧ,
ಸಂಬಂಧದರಿವು ಸುಗಮ ಬದುಕಿಗೆ ದಾರಿ,
ಅರಿವಾಗದಿರೆ ಮೇಲೇರಲಾಗದ ದುರ್ಗಮ ಏರಿ .

ಹಾವು ಏಣಿಯಾಟ

ತಿಳಿದಿರು ಬಾಳೊಂದು ಹಾವು ಏಣಿಯಾಟ,
ಮೇಲೇರುತಿರುವಾಗ ಎಳೆವ ಹಾವಿನ ಕಾಟ,
ವಶಪಡಿಸಿಕೋ ಹಾವನ್ನು ಏರಿಸದನು ಮೇಲೆ,
ವಶಪಡಿಸಿಕೊಳ್ಳುವ ಕಲೆ ಕರುಣಿಸುವುದವನ ಲೀಲೆ.

ಅಸಮಾನ್ಯನ ಅನುಸಂಧಾನ

ಭಗವಂತ -ಜ್ಞಾನ ಸ್ವರೂಪ,
ಗ್ರಹಿಕೆ -ಸ್ವಭಾವ ಸ್ವರೂಪ,
ಕಲ್ಪನೆ -ನಮ್ಮ ನಮ್ಮ ಯೋಗ್ಯತೆ,
ಕುರುಡರು ಆನೆಯ ಕಂಡಂತೆ,
ಅವನಾಳ ವಿಸ್ತಾರ ಎಟುಕೀತೇ?
ತಾಯಿ ಲಕ್ಷ್ಮಿಗೇ ಸಿಕ್ಕಿಲ್ಲ ಅವನಳತೆ!!!.

ದಶಾವತಾರ ಮನನ -ಸದಾಚಾರದ ಜೀವನ

ಮತ್ಸ್ಯ -ನೆನೆದು ಭವಸಾಗರವ ಈಜು.
ಕೂರ್ಮ -ನೆನೆದು ಸಂಸಾರ ಭಾರ ಹೋರು.
ವರಾಹ -ನೆನೆದು ದುಷ್ಟರ ನಿಗ್ರಹಿಸು.
ನಾರಸಿಂಹ -ನೆನೆದು ಅರಿಗಳ ಗೆಲ್ಲು.
ವಾಮನ -ನೆನೆದು ಬೇಡುವುದನ್ನೇ ಬೇಡು.
ಪರಶುರಾಮ -ನೆನೆದು ದುಷ್ಟಶಕ್ತಿಗಳ ಗೆಲ್ಲು.
ದಾ .ರಾಮ -ಮರ್ಯಾದಾ ಗುಣಗಳ ಬೇಡು.
ಕೃಷ್ಣ -ನೆನೆದು ಸಮಯವರಿತು ಧರ್ಮ ಆಚರಿಸು.
ಬುದ್ಧ -ನೆನೆದು ಪ್ರಬುದ್ಧನಾಗು.
ಕಲ್ಕಿ -ನೆನೆದು ಕಲಿಬಾಧೆ ಗೆಲ್ಲು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula