ಭಾವ ಸ್ಪಂದನ by “ತ್ರಿವೇಣಿ ತನಯ”
ಎಚ್ಚರದ ನಡೆ
ಕಂಡ ಕಂಡಲ್ಲಿ ಕೈ ಚಾಚ ಬೇಡ,
ಕಂಡದ್ದೆಲ್ಲಾ ಎತ್ತಿ ಬಾಚ ಬೇಡ,
ದುಡಿದುಕೋ ಎರಡ್ಹೊತ್ತಿನ ಅನ್ನ,
ಪಡೆದುಕೋ ಸಿಕ್ಕಲ್ಲೆಲ್ಲಾ ತತ್ವಜ್ಞಾನ.
ಬಂಧು -ಬಳಗ
ಕೈ ಬಿಟ್ಟವರಿಗಾಗಿ ಕೊರಗಬೇಡ,
ಕೈ ಹಿಡಿದವರನೆಂದೂ ತೊರೆಯಬೇಡ,
ಹಿಡಿಯಲು ತೊರೆಯಲು ಎಷ್ಟರದು ಜೀವ?
ಪಡೆದು ಬಂದದ್ದನ್ನೇ ಭಗವಂತ ಕರುಣಿಸುವ.
ಬಿಚ್ಚಿಕೋ -ನೆಚ್ಚಿ ಕಚ್ಚಿಕೋ
ಮುಚ್ಚಿಡುವುದೇ ಬಿಚ್ಚುವುದಕ್ಕಾಗಿ,
ಬಿಚ್ಚದಿದ್ದರೆ ಮುಚ್ಚಿಡುವುದ್ಯಾತಕ್ಕಾಗಿ?
ತೆರೆದುಕೋ ನಿನ್ನ ನೀನು -ಬಿಚ್ಚಿಕೋ,
ತಕ್ಕಂಥ ಸ್ವಭಾವ ಕಂಡು -ಕಚ್ಚಿಕೋ.
ಪ್ರಭಾವದ ಶಕ್ತಿ-ಸ್ವಭಾವದಿಂದ ಮುಕ್ತಿ
ಮೀರಲೆತ್ನಿಸು ಪ್ರಭಾವ,
ಪ್ರಕಟವಾಗಲಿ ಸ್ವಭಾವ,
ಸ್ವಭಾವ ವಿಕಾಸವೇ ಮುಕ್ತಿ,
ಪ್ರಭಾವ ಅದ ಮುಚ್ಚುವ ದುಶ್ಯಕ್ತಿ.
ಭಯ - ಅಭಯ
ಉಳುವ ಯೋಗಿಗೆ ಬಡತನವಿಲ್ಲ,
ಭಗವದ್ಧ್ಯಾನಿಗೆ ಎಂದೂ ನೋವಿಲ್ಲ,
ಜಗಳ ದೂರವಿಡುವುದು -ಮೌನ,
ಭಯ ದೂರವಿಡುವುದು -ಜ್ಞಾನ.
[Contributed by Shri Govind Magal]
ಎಚ್ಚರದ ನಡೆ
ಕಂಡ ಕಂಡಲ್ಲಿ ಕೈ ಚಾಚ ಬೇಡ,
ಕಂಡದ್ದೆಲ್ಲಾ ಎತ್ತಿ ಬಾಚ ಬೇಡ,
ದುಡಿದುಕೋ ಎರಡ್ಹೊತ್ತಿನ ಅನ್ನ,
ಪಡೆದುಕೋ ಸಿಕ್ಕಲ್ಲೆಲ್ಲಾ ತತ್ವಜ್ಞಾನ.
ಬಂಧು -ಬಳಗ
ಕೈ ಬಿಟ್ಟವರಿಗಾಗಿ ಕೊರಗಬೇಡ,
ಕೈ ಹಿಡಿದವರನೆಂದೂ ತೊರೆಯಬೇಡ,
ಹಿಡಿಯಲು ತೊರೆಯಲು ಎಷ್ಟರದು ಜೀವ?
ಪಡೆದು ಬಂದದ್ದನ್ನೇ ಭಗವಂತ ಕರುಣಿಸುವ.
ಬಿಚ್ಚಿಕೋ -ನೆಚ್ಚಿ ಕಚ್ಚಿಕೋ
ಮುಚ್ಚಿಡುವುದೇ ಬಿಚ್ಚುವುದಕ್ಕಾಗಿ,
ಬಿಚ್ಚದಿದ್ದರೆ ಮುಚ್ಚಿಡುವುದ್ಯಾತಕ್ಕಾಗಿ?
ತೆರೆದುಕೋ ನಿನ್ನ ನೀನು -ಬಿಚ್ಚಿಕೋ,
ತಕ್ಕಂಥ ಸ್ವಭಾವ ಕಂಡು -ಕಚ್ಚಿಕೋ.
ಪ್ರಭಾವದ ಶಕ್ತಿ-ಸ್ವಭಾವದಿಂದ ಮುಕ್ತಿ
ಮೀರಲೆತ್ನಿಸು ಪ್ರಭಾವ,
ಪ್ರಕಟವಾಗಲಿ ಸ್ವಭಾವ,
ಸ್ವಭಾವ ವಿಕಾಸವೇ ಮುಕ್ತಿ,
ಪ್ರಭಾವ ಅದ ಮುಚ್ಚುವ ದುಶ್ಯಕ್ತಿ.
ಭಯ - ಅಭಯ
ಉಳುವ ಯೋಗಿಗೆ ಬಡತನವಿಲ್ಲ,
ಭಗವದ್ಧ್ಯಾನಿಗೆ ಎಂದೂ ನೋವಿಲ್ಲ,
ಜಗಳ ದೂರವಿಡುವುದು -ಮೌನ,
ಭಯ ದೂರವಿಡುವುದು -ಜ್ಞಾನ.
[Contributed by Shri Govind Magal]
No comments:
Post a Comment
ಗೋ-ಕುಲ Go-Kula