Tuesday 26 September 2017

Bhava Spandana - 19


ಭಾವ ಸ್ಪಂದನ by “ತ್ರಿವೇಣಿ ತನಯ
ಪರಭಾರೆ
ನೀನಾಗೇ ಬರಲಿಲ್ಲ ನಿನ್ನಿಚ್ಛದಿ ಹೋಗಲಾರೆ,
ಮಧ್ಯದಿ ಎಂಥದು ಅರ್ಥವಿರದ ಪರಭಾರೆ?
ಇರುವ ಮೂರು ದಿನ ಪ್ರೀತಿಸುತ ಬಾಳು,
ಹಾರಾಡಿದವರು ಏನು ಒಯ್ದಿದ್ದಾರೆ ಹೇಳು!
ನಡತೆ -ತಪವಂತೆ!
ಚೂರಿ ಹಿಡಿದು ಚುಚ್ಚಿದರಷ್ಟೇ ಅಲ್ಲ ಕ್ರೌರ್ಯ,
ನಡತೆ ಬಿರುಮಾತುಗಳದೂ ಅದೇ ತಾತ್ಪರ್ಯ,
ಪ್ರೀತಿಸಲಾಗದಿದ್ದರೆ ನೋಯಿಸದಿರು ಯಾರನ್ನ,
ಮಾನವತ್ವವ ಮೆರೆ ಮನುಜ ಕಣ್ಮುಚ್ಚುವ ಮುನ್ನ.
ಕಾಣದ ಸ್ನೇಹಿತ
ಹುಡುಕಿದರೆ ಸಿಗದವನು,
ಜತೆಗಿದ್ದೂ ಕಾಣದವನು,
ಎಲ್ಲರೊಳು ಇರುವವನು,
ಎಲ್ಲರಂತಲ್ಲ ಅವನು.
ಲೋಕದ ಸ್ನೇಹಿತ
ಕಲಿತ ವಿದ್ಯೆ ಬುದ್ಧಿ ಪರದೇಶದಲ್ಲಿ,
ಅನುಕೂಲ ಸತಿಯು ಮನೆಯಲ್ಲಿ,
ತಕ್ಕ ಔಷಧಿಯದು ಅನಾರೋಗ್ಯದಲ್ಲಿ,
ಸತ್ಕರ್ಮಗಳವು ನೋಡು ಮರಣದಲ್ಲಿ.
ನೋಟ -ಅನುಭವದ ಆಟ
ಕಾಣುವುದು ನಾವಲ್ಲ,
ಕರುಣಿಸಬೇಕವ- ನಲ್ಲ,
ಎದೆಯೊಳಗೆ ಹರಿವ ಜೀವ ಝರಿ,
ಅನುಭವ ಕೊಡಬೇಕವನೇ ಹರಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula