Saturday 2 September 2017

Bhava Spandana - 11

ಭಾವ ಸ್ಪಂದನ by “ತ್ರಿವೇಣಿ ತನಯ


ವಿಶ್ವಮತ ಕೊಟ್ಟ ವಿಶ್ವಗುರು

ವಿಶ್ವಮತ ಕೊಟ್ಟ ಏಕೈಕ ವಿಶ್ವಗುರು ಮಧ್ವಾಚಾರ್ಯ,
ಧಾರ್ಮಿಕ ವೈಜ್ಞಾನಿಕವಾಗಿ ಸಮ್ಮತ ಸೂತ್ರ ಕೊಟ್ಟ ಆರ್ಯ,
ಸಕಲ ಚೇತನ ಜಡ ಸರ್ವಾಂತರ್ಯಾಮಿ ಭಗವಂತನೆಂದ,
ಸಕಲ ಚರಾಚರ ವಸ್ತು ನಾದ ವೇದಗಳು ಅವನ ನಾಮವೆಂದ,
ದೇವತೆಗಳು ಅನೇಕ ನಿಯಾಮಕ ದೇವ ಒಬ್ಬನೇ ಎಂದ,
ಯಾರನ್ನೇ ಪೂಜಿಸು ಎಲ್ಲರಂತರ್ಯಾಮಿ ಹರಿಯೆಂದ,
ಭಗವದ್ ಹಿರಿಮೆ ನಮ್ಮ ಸೀಮೆ ಅರಿತು ಬಾಳಿದರೆ ಭೂಮಿ ನಾಕ,
ಅಜ್ಞಾನದ ಬೇಲಿ ಕಟ್ಟಿಕೊಂಡು ನಾವು ಮಾಡಿಕೊಂಡಿದ್ದೇವೆ ನರಕ.

ತಾರತಮ್ಯ

ಸೃಷ್ಟಿಯಲಿ ಒಂದರಂತೆ ಇನ್ನೊಂದಿಲ್ಲ,
ಜೀವಸ್ವಭಾವ ಬೇರೆ ಬೇರೆಯೇ ಎಲ್ಲ,
ದೊರೆ ದೊರೆಯೇ ಪ್ರಜೆ ಪ್ರಜೆಯೇ,
ಮುಕುತಿಯೆನೆ ಸ್ವಭಾವ ವಿಕಾಸವೇ.

ಮಾವು ಬೇವಾಗಲ್ಲ ಬೇವು ಮಾವಾಗಲ್ಲ,
ಹಾಲು ಹಾಲಾಹಲವಲ್ಲ ಹಾಲಾಹಲ ಹಾಲಲ್ಲ,
ತ್ರಿವಿಧಗುಣ -ಸ್ವಭಾವಗಳ ಮೂಲ ದ್ರವ್ಯ,
ಅದೇ ಭಗವಂತ ತೋರುತಿಹ ಸೃಷ್ಟಿಕಾವ್ಯ.

ಸಾಧನೆ-ಅನುಕ್ಷಣದ ಚಲನೆ 

ಬದುಕಿನಲ್ಲಿ ಅಲ್ಲ --ಸಾಧನೆ,
ಅನುಕ್ಷಣದ ಬದುಕೇ ಸಾಧನೆ,
ಆಗದಿರಲದು ಬರೀ ವೇದನೆ,
ಸ್ವಚ್ಛವಿರಲಿ ಮನವೆಂಬ ಮನೆ,
ಮನಕ್ಕಿಳಿದರೆ ಸದ್ ಬೋಧನೆ,
ಸರಳಾತಿ ಸರಳವದು ಆಚರಣೆ.
[Contribute by Shri Govind Magal]

No comments:

Post a Comment

ಗೋ-ಕುಲ Go-Kula