Monday 18 September 2017

Bhava Spandana - 16

ಭಾವ ಸ್ಪಂದನ by “ತ್ರಿವೇಣಿ ತನಯ
ನಿರ್ಲಿಪ್ತ -ಹರಿಚಿತ್ತ

ನೊಣಗಳು ಹುಡುಕುವುದು ದೇಹದ ಗಾಯದ ಭಾಗ,
ದುರ್ಜನರು ಹುಡುಕುವುದು ಲೋಪ ದೋಷದ ಜಾಗ,
ಎಂತಾದರಾಗಲಿ ಮನವಿರಲದು ನಿರ್ಲಿಪ್ತ,
ನಿನ್ನತನ ಹುಡುಕುತ್ತ ಒಪ್ಪುತಿರು ಹರಿಚಿತ್ತ.

ಮಡಿ -ಮನದ ನುಡಿ

ಅಹಂಕಾರವದು ಮಡಿಯಬೇಕು,
ಬಿದ್ದವರನೆತ್ತಲು ಮನ ಮಿಡಿಯಬೇಕು,
ನಾಲಿಗೆಯದು ಸತ್ಯ ಸವಿ ನುಡಿಯಬೇಕು,
ನಾಟಕ ಕಂಪನಿಯ ಸಂಗ ಕಡಿಯಬೇಕು.

ನಡೆ ನುಡಿ ಶುದ್ಧವಿರಲುಬೇಕು,
ಮುಚ್ಚು ಮರೆಯಾಟ ಬಿಟ್ಟಿರಬೇಕು,
ಶುದ್ಧಾಂತಕರಣದಿ ಸೇವೆ ಮಾಡಬೇಕು,
ನಿರಪೇಕ್ಷವಾಗಿ ಕೃಷ್ಣಾರ್ಪಣವೆನಬೇಕು.

ಸ್ವಭಾವ-ಪ್ರಭಾವ

ಸ್ವಭಾವ ಪ್ರಭಾವಗಳ ಹಗ್ಗ ಜಗ್ಗಾಟ,
ಬಹುತೇಕ ಪ್ರಭಾವದ್ದೇ -ಮೇಲಾಟ,
ಸಜ್ಜನರ ಸಂಗದಿಂದ ಸ್ವಭಾವ ಉತ್ಖನನ,
ಸ್ವಭಾವದ ಅರಿವಾಗೆ ಸಾಧನ ಉದ್ದೀಪನ.

ತುಂಬದ ಗಡಿಗೆ -ಅಪೂರ್ಣ ಅಡಿಗೆ

ತುಂಬಿದ ಕೊಡ ತುಳುಕುವುದಿಲ್ಲ,
ಖಾಲಿಯ ಕೊಡದ್ದು ಸದ್ದೇ ಎಲ್ಲ,
ಜಂಬದ ಪಂಡಿತ ತುಂಬದ ಗಡಿಗೆ,
ಅನುಭವಕೆ ಬಾರದ ಅಪೂರ್ಣ ಅಡಿಗೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula