Wednesday 20 September 2017

Bhava Spandana - 17

ಭಾವ ಸ್ಪಂದನ by “ತ್ರಿವೇಣಿ ತನಯ

ಪಕ್ಷಮಾಸವೂ ನೀನೆ-ಪರ್ವಕಾಲವೂ ನೀನೆ

ಹಬ್ಬ ಹರಿದಿನ ಶ್ರಾದ್ಧ ಪಕ್ಷ,
ಎಲ್ಲದರಲಿ ಅವನ ದೀಕ್ಷ,
ಎಲ್ಲ(ದ)ರ ನಿಯಾಮಕ ಅವನು,
ಅಸ್ವತಂತ್ರ ಜೀವ ಮಾಡಲಾರ ಏನೂ.

ಸಾವಿರದವನ ಸಹಸ್ರನಾಮ

ಸಾವಿರದ ವಿಷ್ಣುವಿನ ಸಹಸ್ರನಾಮ,
ಜಪಿಸಲು ಜೀವವದುವೆ ಪವಿತ್ರನೇಮ,
ಆದೀತು ಜೀವನವೇ ಉತ್ಕೃಷ್ಟ ಹೋಮ,
ಶರಣಾಗಲಿ ಜೀವ -ಅವ ಸಾರ್ವಭೌಮ.

ಬೇಡ ದಾಹ -ಬಿಡು ವ್ಯಾಮೋಹ

ತೃಪ್ತಿಯೇ ಇರದ ಅತಿಮೋಹ ದಾಹ,
ಕಪಟಾಚರಣೆ ಮೇಲೆಯೇ ವ್ಯಾಮೋಹ,
ಭ್ರಾಂತ ಮನಸಿನ ವಕ್ರ ನೋಟ,
ಕೆಡುಕಿನುದ್ದೇಶದ ಕೊಳಕು ಆಟ.

ತಿಳಿ ಸ್ವಭಾವ-ಬೇಡ ಪ್ರಭಾವ

ಎನಿತು ನೋಡಿದರೂ ಜೀವಗಳ ಸ್ವಭಾವ ಮೂರು,
ಮಿಶ್ರಣದಿ ಹೊರ ಹೊಮ್ಮೀತು ಬಗೆ ಬಗೆ ಹಲವಾರು,
ಸ್ವಭಾವಗಳ ಪ್ರಶ್ನಿಸಲು ಜೀವ ನೀನ್ಯಾರು?
ಇದ್ದದಿದ್ದಂತೆ ಒಪ್ಪು ಬೇಡ ತಕರಾರು.

ಪ್ರಯತ್ನವಿರಲಿ ಸತತ ತಿಳಿ ನಿನದ್ಯಾವ ಬೇರು?
ಪ್ರಾಮಾಣಿಕ ನಡತೆಯಲಿ ಬೆಳೆಸದನ ಎರೆದು ನೀರು,
ಒಮ್ಮೆ ಅರಿವಾಗಲು ನಿನ್ನದ್ಯಾವ ರೀತಿ,
ರೀತಿ ವಿಕಸಿಸುವುದೇ ನಿಜಬಾಳಿನ ನೀತಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula