Monday 4 September 2017

Bhava Spandana - 12

ಭಾವ ಸ್ಪಂದನ by “ತ್ರಿವೇಣಿ ತನಯ

ಗಣಿತ -ಅಗಣಿತ

ಬೇಕಿಲ್ಲ ನಮಗೆ ಶುದ್ಧ ತತ್ವ ಶುದ್ಧ ಗಣಿತ,
ಎನಿತು ಒಲಿದಾನು ಅವನು ಅಗಣಿತ,
ಇಲ್ಲದ ಶೇಷ್ಠತೆ ಮೆರೆಸುವ ಹುಚ್ಚು ಚಪಲ,
ಹಾಲೆಂದು ಭ್ರಮಿಸಿ ಕುಡಿವ ಹಾಲಾಹಲ.

ಸೃಷ್ಟಿ -ಕಾಣುವುದದಾಗಿ ಸಮಷ್ಟಿ

ಸೃಷ್ಟಿ ಹುಟ್ಟು ಎಂದರೆ ಆಕಾರದ ಸಾಕಾರ,
ತತ್ವವ್ಯಾವೂ ಹೊಸದಾಗಿ ಆಗಲ್ಲ ಆವಿಷ್ಕಾರ,
ನೂಲಿನಿಂದ ಬಟ್ಟೆ ಮಣ್ಣಿನಿಂದ ಮಡಕೆ,
ರೇತಸ್ಸಿಗೆ ತಾಯಗರ್ಭದಿ ಮೂಳೆ ಮಾಂಸದ ತಡಿಕೆ.

ಮನದ ತೆರೆ -ಸ್ವಭಾವದ ಮೇರೆ

ಬರುವ ಸ್ಫುರಣೆಗಳೆಲ್ಲ ಈ ಜೀವಸ್ವಭಾವದ ಸಂಕೇತ,
ಯಾವುವೂ ಸರ್ವತ್ರಸತ್ಯವಲ್ಲ ಹೀಗೆಂದು ಇದಮಿತ್ಥ,
ಭಾವನೆಗಳೆಲ್ಲಾ ಬದಲಾಗುವ ಸಮುದ್ರ ತೆರೆಯೆಂತೆ,
ಅವರವರ ತೀರಕ್ಕೆ ತಳ್ಳುತ್ತಾ ಸೇರಿಸುವುದಂತೆ.

ಅಲ್ಪಮತ -ಬಹುಮತ

ಬಹುಮತವಿರುವಲ್ಲಿ ಸತ್ಯ ತತ್ವ ಇರೊಲ್ಲ,
ತರ್ಕಬದ್ಧ ತತ್ವಕ್ಕೆ ಬಹುಮತವಿರಲಿಕ್ಕಿಲ್ಲ,
ತತ್ವದೊಂದಿಗೆ ಇದ್ದ ಪಾಂಡವರು ಬರೀ ಐದು,
ತತ್ವದಿಂದ ದೂರಿದ್ದ ಕೆಟ್ಟ ಕೌರವರು ನೂರೊಂದು.

ತಪ್ಪು ಒಪ್ಪು -ಸ್ವಭಾವದ ಚಿಪ್ಪು

ಮನ ಒಪ್ಪಿದರೆ ಒಪ್ಪಿ ಅಪ್ಪು,
ಒಪ್ಪದಿರೆ ಅಪ್ಪಿದ್ದೇ ಅದು ಒಪ್ಪು,
ಸ್ವಭಾವದಂತೆಯೇ ತಪ್ಪು ಒಪ್ಪು,
ಅನುಭವಸಿದ್ಧ ವೇದಮಾತಲ್ಲ ತಪ್ಪು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula