Wednesday 30 August 2017

Bhava Spandana - 10

ಭಾವ ಸ್ಪಂದನ by “ತ್ರಿವೇಣಿ ತನಯ
ದೇವಹೂತಿಯ ಅನುಭಾವ

ಆಲದ ಎಲೆಯ ಮೇಲೆ ನಿನ್ನ ಶಯನ,
ಬ್ರಹ್ಮಾಂಡವಿರದಾಗ ನೀ ವೇದಾಸೀನ,
ಜಗವ ಹೊತ್ತ ನಿನ್ನನ್ನ ನಾನು ಹೊತ್ತೆ,
ಏನು ಕರುಣೆ ಎಂಥಾ ಸೌಭಾಗ್ಯವಿತ್ತೆ.

ಬಿಂಬ -ಯಾರಲ್ಲಿ ಉಂಬ?

ಬಂದ ಕೃಷ್ಣ ರಾಯಭಾರಿಯಾಗಿ ಸಂಧಾನಕ್ಕೆ,
ಯಾರಲ್ಲಿಯೂ ಒಪ್ಪಿ ನಿಲ್ಲಲಿಲ್ಲವ ಊಟಕ್ಕೆ,
ಎಲ್ಲರಿಗಿಂತ ವಿದುರ ಆರ್ದ್ರ --ಜ್ಞಾನಿ,
ಅವನಲ್ಲಿ ತಂಗಿ ಸವಿದ ಆತಿಥ್ಯ ವಿಜ್ಞಾನಿ.

ಸಾಧಕನ ಮಾತು-ಅಮೂಲ್ಯ ಮುತ್ತು

ಯಾರ ಮನದ ಸದಿಚ್ಛೆಯ ಮಾತು,
ಹೊಮ್ಮುವುದದಾಗಿ ಅಮೂಲ್ಯ ಮುತ್ತು,
ನುಡಿದಂತೆ ನಡೆವವ ಅವನು ಸಾಧು,
ಹರಿಯಾಜ್ಞೆಯಂತೆ ನಡೆವ ಎಲ್ಲರ ಬಂಧು.

ಆತ್ಮಾವಲೋಕನ

ತತ್ವಜ್ಞಾನವದು ಪ್ರಸಾರ ಪ್ರಚಾರಕ್ಕಲ್ಲ,
ಕಾಣಸಿಗುವುದೀಗ ಪಾಠಒಪ್ಪಿಸೋ ಪರಿಯೆಲ್ಲ,
ಅನುಭಾವಿ ಸಾಧಕನಿಂದ ಹರಿಯಬೇಕು,
ಕೇಳುವ ಮನ ಅನುಭವಿಸಿ ತಿಳಿಯಬೇಕು.

ಸಾಧನೆ -ಬೇಡ ವೇದನೆ

ಸಾಧನೆ ಶ್ರವಣ ಮನನ ಕಾರ್ಯಕ್ರಮವಲ್ಲ,
ಪ್ರತಿಯುಸಿರ ನಡೆಯ ನಡವಳಿಕೆಯೇ ಎಲ್ಲ,
ದೃಢವಾಗಲು ಈ ಜ್ಞಾನ-ನಾನು ಏನೂ ಅಲ್ಲ,

ಕಣ್ರೆಪ್ಪೆಯಂತೆ ಕಾಯುವ ಅವ ಲಕುಮೀನಲ್ಲ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula