Tuesday 4 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 51 - 55

ಅಙ್ಕೇ ನಿಧಾಯ ಸ ಕದಾಚಿದಮುಷ್ಯ ರಾಮಃ ಶಿಶ್ಯೇ ಶಿರೋ ವಿಗತನಿದ್ರ ಉದಾರಬೋಧಃ ।
ಸಂಸುಪ್ತವತ್ ಸುರವರಃ ಸುರಕಾರ್ಯ್ಯಹೇತೋರ್ದ್ದಾತುಂ ಚ ವಾಲಿನಿಧನಸ್ಯ ಫಲಂ ತದಸ್ಯ॥೧೫.೫೧॥
ಜ್ಞಾನಾನಂದಮಯ ದೇಹಿಯಾದ ಪರಶುರಾಮ,
ತೋರಿದ ಕರ್ಣನ ತೊಡೆಮೇಲೆ ಮಲಗಿದ ನೇಮ.
ದೇವತಾಕಾರ್ಯ ಹಾಗೂ ಕರ್ಣಗೆ ಕೊಡಲು ವಾಲಿಯ ಕೊಂದ ಫಲ,
ಪರಶುರಾಮನಾಡಿದ ನಿದ್ರಿಸಿದವನಂತೆ ಪೂರ್ವನಿಶ್ಚಿತ ನಾಟಕದ ಜಾಲ.

ತತ್ರಾsಸ ರಾಕ್ಷಸವರಃ ಸ ತು ಹೇತಿನಾಮಾ ಕಾಲೇ ಮಹೇನ್ದ್ರಮನುಪಾಸ್ಯ ಹಿ ಶಾಪತೋsಸ್ಯ ।
ಕೀಟಸ್ತಮಿನ್ದ್ರ ಉತ ತತ್ರ ಸಮಾವಿವೇಶ ಕರ್ಣ್ಣಸ್ಯ ಶಾಪಮುಪಪಾದಯಿತುಂ ಸುತಾರ್ತ್ಥೇ ॥೧೫.೫೨॥
ಆಗಲೇ ಸೇವಾಕಾಲದಿ ಮಹೇಂದ್ರನ ಸೇವಿಸದಿರುವ ಆಟ,
ಹೇತಿ ಎಂಬ ಅಸುರ ಇಂದ್ರಶಾಪದಿಂದಾಗಿದ್ದ ಒಂದು ಕೀಟ.
ಮಗನಿಗಾಗಿ ಕರ್ಣಗೆ ಶಾಪಕೊಡಿಸಲು ಕೀಟಪ್ರವೇಶ ಒಂದಾಟ.

ಕರ್ಣ್ಣಃ ಸಕೀಟತನುಗೇನ ಕಿರೀಟಿನೈವ ಹ್ಯೂರೋರಧಸ್ತನತ ಓಪರಿಗಾತ್ವಚಶ್ಚ ।
ವಿದ್ಧಃ ಶರೇಣ ಸ ಯಥಾ ರುಧಿರಸ್ಯ ಧಾರಾಂ ಸುಸ್ರಾವ ತಂ ವಿಗತನಿದ್ರ ಇವಾsಹ ರಾಮಃ ॥೧೫.೫೩॥
ಕೀಟಶರೀರದಲ್ಲಿನ ಹೇತಿಯೊಂದಿಗಿದ್ದ ಇಂದ್ರ,
ಕರ್ಣನ ತೊಡೆತಳ ಕೊರೆದು ಮಾಡ್ತಿದ್ದ ರಂಧ್ರ.
ಆಗ ಹರಿಯತೊಡಗಿತು ಧಾರಾಕಾರ ರಕ್ತದ ಕೋಡಿ,
ಎಚ್ಚತ್ತವನಂತೆ ರಾಮ ಕೇಳಿದ ಅದನ್ನೆಲ್ಲ ನೋಡಿ.

ಕಿಂ ತ್ವಂ ನ ಚಾಲಯಸಿ ಮಾಂ ರುಧಿರಪ್ರಸೇಕೇ ಪ್ರಾಪ್ತೇsಪಿ ಪಾವನವಿರೋಧಿನಿ ಕೋsಸಿ ಚೇತಿ ।
ತಂ ಪ್ರಾಹ ಕರ್ಣ್ಣ ಇಹ ನೈವ ಮಯಾ ವಿಧೇಯೋ ನಿದ್ರಾವಿರೋಧ ಇತಿ ಕೀಟ ಉಪೇಕ್ಷಿತೋ ಮೇ॥೧೫.೫೪ ॥
ಅಪವಿತ್ರ ರಕ್ತಸ್ಪರ್ಶವಾದಾಗಲೂ ನೀನೆನ್ನ ಎಬ್ಬಿಸಲಿಲ್ಲ,
ಯಾರ್ಹೇಳು ನೀನು ಎನಗೆ ಅನುಮಾನ ಆಗುತ್ತಿದೆಯಲ್ಲ.
ಕರ್ಣನೆಂದ ಸಹಿಸಿದ್ದೆ ನಿಮ್ಮ ನಿದ್ದೆ ಭಂಗ ಆಗಬಾರದಲ್ಲ.

ಜಾತ್ಯಾsಸ್ಮಿ ಸೂತ ಉತ ತೇ ತನಯೋsಸ್ಮಿ ಸತ್ಯಂ ತೇನಾಸ್ಮಿ ವಿಪ್ರ ಇತಿ ಭಾರ್ಗ್ಗವವಂಶಜೋsಹಮ್ ।
ಅಗ್ರೇsಬ್ರವಂ ಭವತ ಈಶ ನಹಿ ತ್ವದನ್ಯೋ ಮಾತಾ ಪಿತಾ ಗುರುತರೋ ಜಗತೋsಪಿ ಮುಖ್ಯಃ ॥೧೫.೫೫ ॥
ಲೋಕಜಾತಿಯಿಂದ ನಾನು ಒಬ್ಬ ಸೂತ,
ಜಗದ್ಪಿತ ನಿನ್ನ ಮಗನಾಗಿರುವುದೂ ಸತ್ಯ.
ಹಾಗಾಗೇ ಹೇಳಿದೆ ನಾನು ಭೃಗುಕುಲದಿ ಹುಟ್ಟಿದ ಬ್ರಾಹ್ಮಣ,
ನೀನಲ್ಲವೇ ಮಾತಾ ಪಿತಾ ಗುರು ಸಕಲ ಜಗದ ಕಾರಣ. 

No comments:

Post a Comment

ಗೋ-ಕುಲ Go-Kula