Thursday 13 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 15: 56 60

ಇತ್ಯುಕ್ತಮಾತ್ರವಚನೇ ಸ ತು ಕೀಟಕೋsಸ್ಯ ರಾಮಸ್ಯ ದೃಷ್ಟಿವಿಷಯತ್ವತ ಏವ ರೂಪಮ್ ।
ಸಮ್ಪ್ರಾಪ್ಯ ನೈಜಮತಿಪೂರ್ಣ್ಣಗುಣಸ್ಯ ತಸ್ಯವಿಷ್ಣೋರನುಗ್ರಹತ ಆಪ ವಿಮಾನಗಃ ಸ್ವಃ ॥೧೫.೫೬॥
ಈರೀತಿಯಾಗಿ ಹೇಳುತ್ತಿರುವಂತೆಯೇ ಕರ್ಣ,
ಕೀಟದ ಮೇಲೆ ಬೀಳಲು ರಾಮನದೃಷ್ಟಿಕಿರಣ.
ಕೀಟರೂಪದ ಹೇತಿಗೆ ತನ್ನ ಮೂಲರೂಪ ಬಂತು,
ವಿಷ್ಣುವಿನನುಗ್ರಹದಿಂದ ಸ್ವರ್ಗಲೋಕಕ್ಕೆ ತೆರಳಿತು.

ಅಥಾsಹ ರಾಮಸ್ತಮಸತ್ಯವಾಚೋ ನ ತೇ ಸಕಾಶೇ ಮಮ ವಾಸಯೋಗ್ಯತಾ ।
ತಥಾsಪಿ ತೇ ನೈವ ವೃಥಾ ಮದೀಯಾ ಭಕ್ತಿರ್ಭವೇಜ್ಜೇಷ್ಯಸಿ ಸರ್ವಶತ್ರೂನ್ ॥೧೫.೫೭॥
ಸುಳ್ಳು ಹೇಳಿದ ಕರ್ಣಗೆ ಪರಶುರಾಮರಿಂದ ಶಾಪ,
ತನ್ನಲ್ಲಿರಲು ಯೋಗ್ಯತೆಯಿಲ್ಲೆಂದು ತೋರಿದ ಕೋಪ.
ಆದರೂ ನೀನು ನನ್ನಲ್ಲಿಟ್ಟಿರುವ ಭಕ್ತಿ ಆಗದು ವ್ಯರ್ಥ,
ಶತ್ರುಗಳನ್ನೆಲ್ಲ ಗೆಲ್ಲಲಾಗುತ್ತೀಯ ನೀನು ಸಮರ್ಥ.

ಅಸ್ಪರ್ದ್ಧಮಾನಂ ನ ಕಥಞ್ಚನ ತ್ವಾಂ ಜೇತಾ ಕಶ್ಚಿತ್ ಸ್ಪರ್ದ್ಧಮಾನಸ್ತು ಯಾಸಿ ।
ಪರಾಭೂತಿಂ ನಾತ್ರ ವಿಚಾರ್ಯಮಸ್ತಿ ಪ್ರಮಾದೀ ತ್ವಂ ಭವಿತಾ ಚಾಸ್ತ್ರಸಙ್ಘೇ ॥೧೫.೫೮॥
ನೀನು ಸ್ಪರ್ಧಾಭಾವದಿಂದ ಯುದ್ಧ ಮಾಡದಿರೆ ನಿನ್ನನ್ನ ಗೆಲ್ಲುವರಿಲ್ಲ,
ಸ್ಪರ್ಧೆ ಮಾಡಿದರೆ ಸೋಲುವೆ -ಮರೆವವು ಕಲಿತ ಅಸ್ತ್ರಶಸ್ತ್ರಗಳೆಲ್ಲ.
ಮೇಲೆ ಹೇಳಿದ್ದ ವಿಷಯದಲ್ಲಿ ಮತ್ತೆ ನನ್ನ ಮರುಪರಿಶೀಲನೆ ಇಲ್ಲ.

ಯಾಹೀತಿ ತೇನೋಕ್ತ ಉದಾರಕರ್ಮ್ಮಣಾ ಕರ್ಣ್ಣೋ  ಯಯೌ ತಂ ಪ್ರಣಮ್ಯೇಶಿತಾರಮ್ ।
ತಥೈಕಲವ್ಯೋsಪಿ ನಿರಾಕೃತೋsಮುನಾ ದ್ರೋಣೇನ ತಸ್ಯ ಪ್ರತಿಮಾಂ ವನೇsರ್ಚ್ಚಯತ್ ॥೧೫.೫೯॥
ಹೋಗು ಎಂದು ಪರಶುರಾಮದೇವರಿಂದ ಹೇಳಲ್ಪಟ್ಟ ಕರ್ಣ,
ದೇವರಿಗೆ ನಮಸ್ಕರಿಸಿ ಅಲ್ಲಿಂದ ಹೊರಡಲು ಕರ್ಣಗಾಯ್ತು ಕಾರಣ.
ಹಾಗೇ ದ್ರೋಣರಿಂದ ಏಕಲವ್ಯ ನಿರಾಕರಿಸಲ್ಪಟ್ಟಿದ್ದ,
ಅವರ ಪ್ರತಿಮೆಯನ್ನು ಕಾಡಿನಲ್ಲಿಟ್ಟು ಪೂಜಿಸುತ್ತಿದ್ದ.

ತತಃ ಕದಾಚಿದ್ ಧೃತರಾಷ್ಟ್ರಪುತ್ರೈಃ ಪಾಣ್ಡೋಃ ಸುತಾ ಮೃಗಯಾಂ ಸಮ್ಪ್ರಯಾತಾಃ ।
ಅಗ್ರೇ ಗಚ್ಛನ್ ಸಾರಮೇಯೋ ರುರಾವ ಧರ್ಮ್ಮಾತ್ಮಜಸ್ಯಾತ್ರ ವನೇ ಮೃಗಾರ್ತ್ಥೀ ॥೧೫.೬೦॥
ಧೃತರಾಷ್ಟ್ರನ ಮಕ್ಕಳೊಂದಿಗೆ ಪಾಂಡುಕುಮಾರರು ಬೇಟೆಗೆ ಹೊರಟಾಗ,
ಧರ್ಮರಾಜನ ಬೇಟೆನಾಯಿಯು ಮೃಗಾರ್ಥಿಯಾಗಿ ಚೆನ್ನಾಗಿ ಬೊಗಳಿತಾಗ.

No comments:

Post a Comment

ಗೋ-ಕುಲ Go-Kula