Saturday 29 February 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 16: 01 - 06

. ಸೃಗಾಲವಧಃ
॥ ಓಂ ॥
ಕಾಲೇ ತ್ವೇತಸ್ಮಿನ್ ಭೂಯ ಏವಾಖಿಲೈಶ್ಚ ನೃಪೈರ್ಯ್ಯುಕ್ತೋ ಮಾಗಧೋ ಯೋದ್ಧುಕಾಮಃ ।
ಪ್ರಾಯಾದ್ ಯದೂಂಸ್ತತ್ರ ನಿತ್ಯಾವ್ಯಯಾತಿಬಲೈಶ್ವರ್ಯ್ಯೋsಪೀಚ್ಛಯಾsಗಾತ್ ಸ ಕೃಷ್ಣಃ ॥೧೬.೦೧॥
ರಾಜಕುಮಾರರು ದ್ರೋಣರ ಬಳಿ ಅಸ್ತ್ರಶಿಕ್ಷಣ ಪಡೆಯುತ್ತಿದ್ದ ಕಾಲ,
ಎಲ್ಲಾ ರಾಜರೊಂದಿಗೆ ಯಾದವರ ಮೇಲೆ ಜರಾಸಂಧನ ಯುದ್ಧಜಾಲ.
ಮಧುರೆಯಲ್ಲೂ ಎಲ್ಲೆಲ್ಲೂ ಯಾವಾಗಲೂ ಇರುವ ಭಗವಂತ,
ನಾಶವಿರದ ಸರ್ವಶಕ್ತ ಸ್ವಯಿಚ್ಛೆಯಿಂದಲೇ ತಾನು ಓಟಕಿತ್ತ.

ಸನ್ದರ್ಶಯನ್ ಬಲಿನಾಮಲ್ಪಸೇನಾದ್ಯುಪಸ್ಕರಾಣಾಂ ಬಹಳೋಪಸ್ಕರೈಶ್ಚ ।
ಪ್ರಾಪ್ತೇ ವಿರೋಧೇ ಬಲಿಭಿರ್ನ್ನಿತಿಮಗ್ರ್ಯಾಂ ಯಯೌ ಸರಾಮೋ ದಕ್ಷಿಣಾಶಾಂ ರಮೇಶಃ ॥೧೬. ೦೨ ॥
ಬಲಿಷ್ಠಸೈನ್ಯ ಯುದ್ಧಸಾಧನಗಳಿರುವವರಿಂದ ಆದಾಗ ದಾಳಿ,
ಯುದ್ಧತಂತ್ರ ನೀತಿ ತೋರುತ್ತಾನೆ ಕೃಷ್ಣ ತಾನು ದಕ್ಷಿಣದೆಡೆ ತೆರಳಿ.

ಸೋsನನ್ತವೀರ್ಯ್ಯಃ  ಪರಮೋsಭಯೋsಪಿ ನೀತ್ಯೈ ಗಚ್ಛನ್ ಜಾಮದಗ್ನ್ಯಂ ದದರ್ಶ ।
ಕ್ರೀಡಾರ್ತ್ಥಮೇಕೋsಪಿ ತತೋsತಿದುರ್ಗ್ಗಂ ಶ್ರುತ್ವಾ ಗೋಮನ್ತಂ ತತ್ರ ಯಯೌ ಸಹಾಗ್ರಜಃ॥೧೬.೦೩ ॥
ಎಣೆಯಿರದ ವೀರ್ಯ ಎಂದೂ ಬತ್ತದ ಧೈರ್ಯದ ಭಗವಂತ,
ಪಲಾಯನಗೈಯ್ಯುತ್ತಾ ತೋರಿದ ಪರಶುರಾಮನ ಭೇಟಿಯಾಟ.
ಭಗವಂತನ ಅವತಾರಗಳಲ್ಲಿ ಎಂದೂ ಯಾವತ್ತೂ ಭೇದವಿಲ್ಲ,
ಅಣ್ಣನೊಂದಿಗೆ ಗೋಮಂತಕ ಪರ್ವತಕ್ಕೆ ಹೊರಟ ಹಿರಿಗೊಲ್ಲ.

ತದಾ ದುಗ್ಧಾಬ್ಧೌ ಸಂಸೃಸ್ಥೈಃ ಸುರಾದ್ಯೈಃ ಪೂಜಾಂ ಪ್ರಾಪ್ತುಂ ಸ್ಥಾನಮೇಷಾಂ ಚ ಯೋಗ್ಯಮ್ ।
ಮುಕ್ತಸ್ಥಾನಾದಾಪ ನಾರಾಯಣೋsಜೋ ಬಲಿಶ್ಚಾsಗಾತ್ ತತ್ರ ಸನ್ದೃಷ್ಟುಮೀಶಮ್ ॥ ೦೪ ॥
ಆಗ ಕ್ಷೀರಸಾಗರದಲ್ಲಿ ಅಮುಕ್ತ ದೇವಾದಿಗಳಿಂದ,
ಸೇವೆಗೊಳ್ಳಲು ಅಮುಕ್ತಸ್ಥಾನಕ್ಕೆ ಹರಿ ತಾ ಬಂದ,
ಬಲಿಯೂ ಆಗ ನಾರಾಯಣನ ನೋಡಲಲ್ಲಿಗೆ ಬಂದ.

ತತ್ರಾಸುರಾವೇಶಮಮುಷ್ಯ ವಿಷ್ಣುಃ ಸನ್ದರ್ಶಯನ್ ಸುಪ್ತಿಹೀನೋsಪಿ ನಿತ್ಯಮ್ ।
ಸಂಸುಪ್ತವಚ್ಛಿಶ್ಯ ಉದಾರಕರ್ಮ್ಮಾ ಸಙ್ಯಾಯೈ ದೇವಾನಾಂ ಮುಖಮೀಕ್ಷ್ಯಾಪ್ರಮೇಯಃ ॥ ೦೫ ॥
ಉತ್ಕೃಷ್ಟ ಕರ್ಮವುಳ್ಳ ಯಾರಿಂದ ಪೂರ್ಣ ತಿಳಿಯಲಾಗದ ಭಗವಂತ,
ಬಲಿಯ ಅಸುರಾವೇಶವನ್ನು ಈ ಜಗತ್ತಿಗೆಲ್ಲಾ ತೋರಿಸುವ ನಿಮಿತ್ತ,
ದೇವತೆಗಳಿಗೆಲ್ಲಾ ನಿದ್ರೆ ಮಾಡುವಂತಿರಲು ನೀಡಿ ಸೂಚನೆ,
ತಾನೂ ತೋರಿದ ನಿದ್ರಿಸುವವನಂತೆ ಮಲಗಿದ ರೂಪವನ್ನೆ.

ದೇವಾಶ್ಚ ತದ್ಭಾವವಿದೋsಖಿಲಾಶ್ಚ ನಿಮೀಲಿತಾಕ್ಷಾಃ ಶಯನೇಷು ಶಿಶ್ಯಿರೇ ।
ತದಾ ಬಲಿಸ್ತಸ್ಯ ವಿಷ್ಣೋಃ ಕೀರೀಟಮಾದಾಯಗಾಜ್ಜಹಸುಃ ಸರ್ವೇದೇವಾಃ ॥ ೧೬.೦೬ ॥
ಭಗವಂತನಿಚ್ಛೆಯಂತೆ ಎಲ್ಲಾ ದೇವತೆಗಳಿಂದ ಮಲಗಿದ ಆಟ,
ಬಲಿ ಅಲ್ಲಿಗೆ ಬಂದು ವಿಷ್ಣುಕಿರೀಟ ಎತ್ತಿಕೊಂಡು ಓಡಿದ ಓಟ.
ಸಾಕ್ಷಿಯಾದ ಎಲ್ಲಾ ದೇವತೆಗಳು ಬೀರಿದರು ನಗುವಿನನೋಟ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula