Friday 1 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 124 - 131


ಸ ಬಾಹುನೈವ ಕೇಶವೋ ವಿಜಿತ್ಯ ಯಾವನಂ ಪ್ರಭುಃ ।
ನಿಹತ್ಯ ಸರ್ವಸೈನಿಕಾನ್ ಸ್ವಮಸ್ಯ ಯಾಪಯತ್ ಪುರೀಮ್ ॥೧೭.೧೨೪॥
ಕೃಷ್ಣ ಕೇವಲ ತನ್ನ ತೋಳುಗಳಿಂದ ಕಾಲಯವನನ ಗೆದ್ದ ,
ಅವನ ಸೈನಿಕರ ಕೊಂದು ಸಂಪತ್ತನ್ನು ತನ್ನೂರಿಗೆ ಕಳಿಸಿದ .

ಸಹಾಸ್ತ್ರಶಸ್ತ್ರಸಞ್ಚಯಾನ್ ಸೃಜನ್ತಮಾಶು ಯಾವನಮ್ ।
ನ್ಯಪಾತಯದ್ ರಥೋತ್ತಮಾತ್ ತಳೇನ ಕೇಶವೋsರಿಹಾ ॥೧೭.೧೨೫॥
ಶತ್ರುಸಂಹಾರಕನಾದ ಕೇಶವ ತಾನು ,
ಅಸ್ತ್ರಶಸ್ತ್ರ ಬಿಡುತ್ತಿದ್ದ ಕಾಲಯವನನನ್ನು ,
ಅವನ ರಥದಿಂದ ಕೆಳಗೆ ಉರುಳಿಸಿದನು .

ವಿವಾಹನಂ ನಿರಾಯುಧಂ ವಿಧಾಯ ಬಾಹುನಾ ಕ್ಷಣಾತ್ ।
ವಿಮೂರ್ಚ್ಛಿತಂ ನಚಾಹನತ್ ಸುರಾರ್ತ್ಥಿತಂ ಸ್ಮರನ್ ಹರಿಃ ॥೧೭.೧೨೬॥
ಕ್ಷಣಮಾತ್ರದಲ್ಲಿ ತನ್ನ ಬಾಹುಗಳಿಂದ ಭಗವಂತ ,
ಅವನನ್ನು ಮಾಡಿದ ಆಯುಧ ವಾಹನರಹಿತ ,
ದೇವತಾಪ್ರಾರ್ಥನೆಯಂತೆ ಉಳಿಸಿದ ಜೀವಸಹಿತ .

[ದೇವತೆಗಳ ಪ್ರಾರ್ಥನೆ ಏನಾಗಿತ್ತು?]

ಪುರಾ ಹಿ ಯೌವನಾಶ್ವಜೇ ವರಪ್ರದಾಃ ಸುರೇಶ್ವರಾಃ ।
ಯಯಾಚಿರೇ ಜನಾರ್ದ್ದನಂ ವರಂ ವರಪ್ರದೇಶ್ವರಮ್ ॥೧೭.೧೨೭॥
ಅನರ್ತ್ಥಕೋ ವರೋsಮುನಾ ವೃತೋsಪಿ ಸಾರ್ತ್ಥಕೋ ಭವೇತ್ ।
ಅರಿಂ ಭವಿಷ್ಯಯಾವನಂ ದಹತ್ವಯಂ ತವೇಶ್ವರ ॥೧೭.೧೨೮॥
ಯೌವನಾಶ್ವನ ಮಗ ಮಾಂಧಾತ , ಮಾಂಧಾತನ ಮಗ ಮುಚುಕುಂದ ,
ನಿರರ್ಥಕವಾಗಿ ಕಾಣುವ ವರವ ಪಡೆದಿದ್ದ ಹಿಂದೆ ಒಮ್ಮೆ ದೇವತೆಗಳಿಂದ .
ದೇವತೆಗಳಿಂದ ನಾರಾಯಣನಲ್ಲಿ ಪ್ರಾರ್ಥನೆ ,
ಆ ವರವ ಸತ್ಯ ಮಾಡಲವನಲ್ಲಿ ನಿವೇದನೆ ,
ಈಗ ವ್ಯರ್ಥವೆಂದು ಕಾಣುವ ಮುಚುಕುಂದ ಪಡೆದ ವರ ,
ಮುಂದೆ ಬರುವ ವೈರಿಕಾಲಯವನನ ಸುಟ್ಟಾಗಲಿ ಸಂಹಾರ .

ತಥಾsಸ್ತ್ವಿತಿ ಪ್ರಭಾಷಿತಂ ಸ್ವವಾಕ್ಯಮೇವ ಕೇಶವಃ ।
ಋತಂ ವಿಧಾತುಮಭ್ಯಯಾತ್ ಸ ಯೌವನಾಶ್ವಜಾನ್ತಿಕಮ್ ॥೧೭.೧೨೯॥
ಹಾಗೇ ಆಗಲಿ ಎಂದ ಕೃಷ್ಣ ಪರಮಾತ್ಮ ತಾನು ,
ಅದ ಸತ್ಯಮಾಡಲು ಮುಚುಕುಂದನಲ್ಲಿಗೆ ಹೋದನು.

ಸಸಙ್ಜ್ಞಕೋsಥ ಯಾವನೋ ಧರಾತಳಾತ್ ಸಮುತ್ಥಿತಃ ।
ನಿಪಾತ್ಯ ಯಾನ್ತಮೀಶ್ವರಂ ಸ ಪೃಷ್ಠತೋsನ್ವಯಾತ್ ಕ್ರುಧಾ ॥೧೭.೧೩೦॥
ಸ್ವಲ್ಪಕಾಲದ ನಂತರ ಮೂರ್ಛೆಯಿಂದೆದ್ದ ಕಾಲಯವನ ,
ಕೋಪದಿಂದ ಬೆನ್ನಟ್ಟಿಹೋದ ಓಡುತ್ತಿದ್ದ ಶ್ರೀಕೃಷ್ಣನನ್ನ .

ಹರಿರ್ಗ್ಗುಹಾಂ ನೃಪಸ್ಯ ತು ಪ್ರವಿಶ್ಯ ಸಂವ್ಯವಸ್ಥಿತಃ ।
ಸ ಯಾವನಃ ಪದಾsಹನನ್ನೃಪಂ ಸ ತಂ ದದರ್ಶ ಹ ॥೧೭.೧೩೧॥
ಕೃಷ್ಣ ಪ್ರವೇಶಿಸಿದ ಮುಚುಕುಂದ ಮಲಗಿದ್ದ ಗುಹೆಯೊಳಗೆ ,
ಹಿಂಬಾಲಿಸಿ ಬಂದ ಕಾಲಯವನಗೆ ಕಾಣದಂತೆ ನಿಂತ ಮರೆಗೆ .
ಕಾಲಯವನ ಮಲಗಿದ್ದ ಮುಚುಕುಂದನ ಒದ್ದ ,
ಒಡನೆ ಮುಚುಕುಂದ ಅವನ ನೋಡುತ ಮೇಲೆದ್ದ .

No comments:

Post a Comment

ಗೋ-ಕುಲ Go-Kula