Monday 4 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 132 - 139

ಸ ತಸ್ಯ ದೃಷ್ಟಿಮಾತ್ರತೋ ಬಭೂವ ಭಸ್ಮಸಾತ್ ಕ್ಷಣಾತ್ ।
ಸ ಏವ ವಿಷ್ಣುರವ್ಯಯೋ ದದಾಹ ತಂ ಹಿ ವಹ್ನಿವತ್ ॥೧೭.೧೩೨॥
ಕಾಲಯವನ ಮುಚುಕುಂದನ ದೃಷ್ಟಿಗೆ ಸುಟ್ಟು ತಾನು  ಭಸ್ಮವಾದ ,
ದೇವತೆಗಳಿಗೆ ವರ ನೀಡಿದ್ದ ಅವಿನಾಶಿ ವಿಷ್ಣುವೇ ಅವನ ಸುಟ್ಟಿದ್ದ .

ವರಾಚ್ಛಿವಸ್ಯ ದೈವತೈರವಧ್ಯದಾನವಾನ್ ಪುರಾ ।
ಹರೇರ್ವರಾನ್ನಿಹತ್ಯ ಸ ಪ್ರಪೇದ ಆಶ್ವಿಮಂ ವರಮ್ ॥೧೭.೧೩೩॥
ಶಿವವರದಿಂದ ಅವಧ್ಯರಾಗಿದ್ದರು ದಾನವರು ,
ಅದರಿಂದ ದೇವತೆಗಳೂ ಆಗಿದ್ದರು ಅಸಮರ್ಥರು.
ಶ್ರೀಹರಿ ವರಬಲದಿಂದ ಮುಚುಕುಂದ ಮಾಡಿದನವರ ಸಂಹಾರ ,
ಯುದ್ಧಾನಂತರ ದೇವತೆಗಳಿಂದ ಪಡೆದನೊಂದು ವಿಲಕ್ಷಣ ವರ .

ಸುದೀರ್ಘಸುಪ್ತಿಮಾತ್ಮನಃ ಪ್ರಸುಪ್ತಿಭಙ್ಗಕೃತ್ ಕ್ಷಯಮ್ ।
ಸ್ವದೃಷ್ಟಿಮಾತ್ರತಸ್ತತೋ ಹತಃ ಸ ಯಾವನಸ್ತದಾ ॥೧೭.೧೩೪॥
ಎನಗಾಗಿದೆ ತುಂಬಾ ಆಯಾಸ ಬಳಲಿಕೆ ,
ಆಗಿದೆ ದೀರ್ಘಕಾಲದ ನಿದ್ರೆಯ ಬಯಕೆ .
ಮಲಗಿದ ನನಗೆ ನಿದ್ರಾಭಂಗ ಮಾಡುವವ ,
ಎಚ್ಚೆತ್ತ ನನ್ನ ನೋಟಕ್ಕೇ ಸಾಯಬೇಕವ ,
ಹಾಗೇ ಸಾವ ಪಡಕೊಂಡ ಕಾಲಯವನನವ .

ಅತಶ್ಚ ಪುಣ್ಯಮಾಪ್ತವಾನ್ ಸುರಪ್ರಸಾದತೋsಕ್ಷಯಮ್ ।
ಸ ಯೌವನಾಶ್ವಜೋ ನೃಪೋ ನ ದೇವತೋಷಣಂ ವೃಥಾ ॥೧೭.೧೩೫॥
ಮುಚುಕುಂದ ಕಾಲಯವನನ ಕೊಂದ ಕಾರಣ ,
ಬಂತವನಿಗೆ ಶ್ರೀಕೃಷ್ಣಕಾರ್ಯ ಮಾಡಿದ ಪುಣ್ಯ .
ಇವೆಲ್ಲಾ ದೇವತೆಗಳ ಅನುಗ್ರಹದ ಫಲ ,
ಕೈಬಿಡದೆ ಸಲಹುವ ದೇವತಾಸೇವಾಬಲ .

ತತೋ ಹರಿಂ ನಿರೀಕ್ಷ್ಯ ಸ ಸ್ತುತಿಂ ವಿಧಾಯ ಚೋತ್ತಮಾಮ್ ।
ಹರೇರನುಜ್ಞಯಾ ತಪಶ್ಚಚಾರ ಮುಕ್ತಿಮಾಪ ಚ ॥೧೭.೧೩೬॥
ಕಾಲಯವನ ಸುಟ್ಟು ಭಸ್ಮವಾದಮೇಲೆ ,
ಮುಚುಕುಂದಗೆ ಶ್ರೀಕೃಷ್ಣದರ್ಶನದ ಲೀಲೆ .
ಉತ್ತಮ ಸ್ತುತಿ ಮಾಡಿ ಕೃಷ್ಣನಾಜ್ಞೆಯಿಂದ ಮಾಡಿದ ತಪ ,
ಕಾಲಾಂತರದಿ ಮುಕ್ತಿ ಪಡೆದ ಮುಚುಕುಂದನೆಂಬ ನೃಪ .

ತತೋ ಗುಹಾಮುಖಾದ್ಧರಿರ್ವಿನಿಸ್ಸೃತೋ ಜರಾಸುತಮ್ ।
ಸಮಸ್ತಭೂಪಸಂವೃತಂ ಜಿಗಾಯ ಬಾಹುನೇಶ್ವರಃ ॥೧೭.೧೩೭॥
ಆನಂತರ ಶ್ರೀಕೃಷ್ಣ ಗುಹೆಯಿಂದ ಹೊರ ಬರುವ ವ್ಯಾಪಾರ ,
ಹೊಡೆದೋಡಿಸಿದ ಜರಾಸಂಧಾದಿಗಳ ಬಾಹುಯುದ್ಧ ದ್ವಾರ .
ಸರ್ವಸಮರ್ಥ ಭಗವಂತಗೆ ಇದ್ಯಾವ ಬಗೆಯ ಆಶ್ಚರ್ಯ .

ತಳೇನ ಮುಷ್ಟಿಭಿಸ್ತಥಾ ಮಹೀರುಹೈಶ್ಚ ಚೂರ್ಣ್ಣಿತಾಃ ।
ನಿಪೇತುರಸ್ಯ ಸೈನಿಕಾಃ ಸ್ವಯಂ ಚ ಮೂರ್ಚ್ಛಿತೋsಪತತ್ ॥೧೭.೧೩೮॥
ಕೃಷ್ಣನ ಅಂಗೈ ಮುಷ್ಠಿ ಮರಗಳ ಹೊಡೆತದಿಂದ ,
ನೆಲಕಚ್ಚಿದ ಸೈನಿಕರು-ಮೂರ್ಛಿತನಾದ ಜರಾಸಂಧ .

ಸಸಾಲ್ವಪೌಣ್ಡ್ರಚೇದಿಪಾನ್ ನಿಪಾತ್ಯ ಸರ್ವಭೂಭುಜಃ ।
ಸ ಪುಪ್ಲುವೇ ಜನಾರ್ದ್ದನಃ ಕ್ಷಣೇನ ತಾಂ ಕುಶಸ್ಥಲೀಮ್ ॥೧೭.೧೩೯॥
ಸಾಲ್ವ , ಪೌಂಡ್ರ , ಶಿಶುಪಾಲ ಮುಂತಾದ ರಾಜರನ್ನೆಲ್ಲ ,
ಸೋಲಿಸಿ ಕೆಡವಿ ದ್ವಾರಕೆಯತ್ತ ಹಾರಿದ ಹಿರಿಯಗೊಲ್ಲ.

No comments:

Post a Comment

ಗೋ-ಕುಲ Go-Kula