Thursday 14 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 140 - 145


ಸಸಙ್ಜ್ಞಕಾಃ ಸಮುತ್ಥಿತಾಸ್ತತೋ ನೃಪಾಃ ಪುನರ್ಯ್ಯಯುಃ ।
ಜಿಗೀಷವೋsಥ ರುಗ್ಮಿಣೀಂ ವಿಧಾಯ ಚೇದಿಪೇ ಹರಿಮ್ ॥೧೭.೧೪೦॥
ಶ್ರೀಕೃಷ್ಣ ದ್ವಾರಕೆಗೆ ಹೋದಮೇಲೆ ,
ಪ್ರಜ್ಞೆಗೊಂಡ ರಾಜರೆಲ್ಲ ಎದ್ದರುಮೇಲೆ .
ತಮ್ಮ ರಾಜ್ಯಗಳಿಗೆ ಹಿಂತಿರುಗಿದ ಲೀಲೆ .
ಕೆಲಕಾಲಾನಂತರದಲ್ಲಿ -ರುಗ್ಮಿಣಿಯ ಶಿಶುಪಾಲಗೆ ಕೊಟ್ಟು ,
ಕೃಷ್ಣಗವಮಾನಿಸಿ ಅವನ ಗೆಲ್ಲಬೇಕೆಂಬ ರಾಜರುಗಳ ಪಟ್ಟು ,
ಮತ್ತೊಮ್ಮೆ ಸೇರಿಸಿತು  ಅವರನೆಲ್ಲರ ಕುಂಡಿನಪುರದಲ್ಲಿ ಒಟ್ಟು .

ಸಮಸ್ತರಾಜಮಣ್ಡಲೇ ವಿನಿಶ್ಚಯಾದುಪಾಗತೇ ।
ಸಭೀಷ್ಮಕೇ ಚ ರುಗ್ಮಿಣೀ ಪ್ರದಾತುಮುದ್ಯತೇ ಮುದಾ ॥೧೭.೧೪೧॥
ಸಮಸ್ತಲೋಕಯೋಷಿತಾಂ ವರಾ ವಿದರ್ಭನನ್ದನಾ ।
ದ್ವಿಜೋತ್ತಮಂ ಹರೇಃ ಪದೋಃ ಸಕಾಶಮಾಶ್ವಯಾತಯತ್ ॥೧೭.೧೪೨॥
ಹೀಗೆ ರಾಜಸಮೂಹದಿಂದ ರುಗ್ಮಿಣಿಯ ಶಿಶುಪಾಲಗೆ ಕೊಡಿಸುವ ನಿರ್ಧಾರ ,
ಶ್ರೇಷ್ಠ ವೈದರ್ಭೀ ಆಗ ದ್ವಿಜೋತ್ತಮನೊಬ್ಬನ ಕೃಷ್ಣನ ಬಳಿ ಕಳಿಸುವ ವ್ಯಾಪಾರ .

ನಿಶಮ್ಯ ತದ್ವಚೋ ಹರಿಃ ಕ್ಷಣಾದ್ ವಿದರ್ಭಕಾನಗಾತ್ ।
ತಮನ್ವಯಾದ್ಧಲಾಯುಧಃ ಸಮಸ್ತಯಾದವೈಃ ಸಹ ॥೧೭.೧೪೩॥
ಶ್ರೀಕೃಷ್ಣ ರುಗ್ಮಿಣಿಯ ಮಾತ ಕೇಳಿ ತಕ್ಷಣ ಕುಂಡಿನಪುರಕ್ಕೆ ಹೊರಟ ,
ಬಲರಾಮ ಯಾದವಸೇನೆಯೊಡನೆ ಅವನ ಹಿಂಬಾಲಿಸಿದ ಆಟ.

ಸಮಸ್ತರಾಜಮಣ್ಡಲಂ ಪ್ರಯಾನ್ತಮೀಕ್ಷ್ಯ ಕೇಶವಮ್ ।
ಸುಯತ್ತಮಾತ್ತಕಾರ್ಮುಕಂ ಬಭೂವ ಕನ್ಯಕಾವನೇ ॥೧೭.೧೪೪॥
ಕೇಶವ ಬರುತ್ತಿರುವ ಸುಳಿವು ಪಡೆದ ರಾಜರುಗಳ ಹಿಂಡು ,
ಜಮಾಯಿಸಿತು ಗೌರಿಗುಡಿಯಬಳಿ ಶಸ್ತ್ರಾಸ್ತ್ರ ಹಿಡಕೊಂಡು.

ಪುರಾ ಪ್ರದಾನತಃ ಸುರೇಕ್ಷಣಚ್ಛಲಾದ್ ಬಹಿರ್ಗ್ಗತಾಮ್ ।
ರಥೇ ನ್ಯವೇಶಯದ್ಧರಿಃ ಪ್ರಪಶ್ಯತಾಂ ಚ ಭೂಭೃತಾಮ್ ॥೧೭.೧೪೫॥
ಕುಲದೇವತಾ ದರ್ಶನ ರುಗ್ಮಿಣಿಗೆ ಹೊರಬರಲು ಒಂದು ನೆಪ ,
ಎಲ್ಲ ನೋಡುತ್ತಿರಲು ತನ್ನ ರಥದಲ್ಲವಳ ಕೂರಿಸಿಕೊಂಡ ಭೂಪ .

No comments:

Post a Comment

ಗೋ-ಕುಲ Go-Kula