Wednesday 20 May 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 17: 154 - 163

ಅಥಾಪರೇ ಚ ಯಾದವಾ ವಿಜಿತ್ಯ ತದ್ಬಲಂ ಯಯುಃ ।
ಪುರೈವ ರುಗ್ಮಿಪೂರ್ವಕಾಃ ಪ್ರಜಗ್ಮುರಚ್ಯುತಂ ಪ್ರತಿ ॥೧೭.೧೫೪॥
ಬೇರೆ ಯಾದವರು ಜರಾಸಂಧ ಶಿಶುಪಾಲರ ಸೈನ್ಯ ಸೋಲಿಸಿ ಹೊರಟರು ,
ಇದಕ್ಕೆ ಮೊದಲು ರುಗ್ಮಿ ಮುಂತಾದವರು ಭಗವಂತನ ಬೆನ್ನೇರಿ ಬಂದಿದ್ದರು .

ಸಹೈಕಲವ್ಯಪೂರ್ವಕೈಃ ಸಮೇತ್ಯ ಭೀಷ್ಮಕಾತ್ಮಜಃ ।
ಹರಿಂ ವವರ್ಷ ಸಾಯಕೈಃ ಸ ಸಿಂಹವನ್ನ್ಯವರ್ತ್ತತ ॥೧೭.೧೫೫॥
ಏಕಲವ್ಯ ಮುಂತಾದವರ ಕೂಡಿದ ಭೀಷ್ಮಕಪುತ್ರ ರುಗ್ಮಿ ಬಾಣಗಳಿಂದ ,
ಕೃಷ್ಣನ ಪೀಡಿಸಬಂದಾಗ ಭಗವಂತ ಸಿಂಹದಂತೆ ಅವನತ್ತ ತಿರುಗಿದ .

ಅಕ್ಷೋಹಿಣೀತ್ರಯಂ ಹರಿಸ್ತದಾ ನಿಹತ್ಯ ಸಾಯಕೈಃ ।
ಅವಾಹನಾಯುಧಂ ವ್ಯಧಾನ್ನಿಷಾದಪಂ ಶರೈಃ ಕ್ಷಣಾತ್ ॥೧೭.೧೫೬॥
ಶ್ರೀಹರಿ ಮಾಡಿದ ಸಂಹಾರ-ಮೂರು ಅಕ್ಷೋಹಿಣಿ ಸೇನಾ ,
ಬೇಡನಾಯಕ ಏಕಲವ್ಯನ ಮಾಡಿದ ವಾಹನ ಶಸ್ತ್ರಹೀನ .

ಶರಂ ಶರೀರನಾಶಕಂ ಸಮಾದದಾನಮೀಶ್ವರಮ್ ।
ಸ ಏಕಲವ್ಯ ಆಶು ತಂ ವಿಹಾಯ ದುದ್ರುವೇ ಭಯಾತ್ ॥೧೭.೧೫೭॥
ಶರೀರನಾಶಕ ಬಾಣವ ಭಗವಂತ ಎತ್ತಿಕೊಳ್ಳುತ್ತಿರುವ ನೋಟ ,
ಕಂಡ ಏಕಲವ್ಯ ಭಯದಿಂದ ರಣಭೂಮಿ ಬಿಟ್ಟು ಕಿತ್ತ ಓಟ .

ಧನುರ್ಭೃತಾಂ ವರೇ ಗತೇ ರಣಂ ವಿಹಾಯ ಭೂಭೃತಃ ।
ಕರೂಶರಾಜಪೂರ್ವಕಾಃ ಕ್ಷಣಾತ್ ಪ್ರದುದ್ರುವುರ್ಭಯಾತ್ ॥೧೭.೧೫೮॥
ಓಡುತ್ತಿರಲು ಯುದ್ಧರಂಗದಿಂದ ಏಕಲವ್ಯನೆಂಬ ಶ್ರೇಷ್ಠ ಧನುರ್ಧಾರಿ ,
ದಂತವಕ್ರ ಮೊದಲಾದವರು ಹಿಡಿದರು ಭಯದಿಂದ ಅದೇ ದಾರಿ .

ಅಥಾsಸಸಾದ ಕೇಶವಂ ರುಷಾ ಸ ಭೀಷ್ಮಕಾತ್ಮಜಃ ।
ಶರಾಮ್ಬುಧಾರ ಆಶು ತಂ ವಿವಾಹನಂ ವ್ಯಧಾದ್ಧರಿಃ ॥೧೭.೧೫೯॥
ಅವರ ನಿರ್ಗಮನಾನಂತರ ರುಗ್ಮಿ ಬಾಣಗಳ ಮಳೆಗರೆಯುತ್ತ ಬಂದ ,
ಕೂಡಲೇ ಶ್ರೀಕೃಷ್ಣಪರಮಾತ್ಮ ಅವನ ರಥವನ್ನು ಕತ್ತರಿಸಿ ಹಾಕಿದ .

ಚಕರ್ತ್ತ ಕಾರ್ಮ್ಮುಕಂ ಪುನಃ ಸ ಖಡ್ಗಚರ್ಮ್ಮಭೃದ್ಧರೇಃ ।
ರಥಂ ಸಮಾರುಹಚ್ಛರೈಶ್ಚಕರ್ತ್ತ ಖಡ್ಗಮೀಶ್ವರಃ ॥೧೭.೧೬೦॥
ರುಗ್ಮಿಯ ಬಿಲ್ಲನ್ನು ಕೃಷ್ಣ ಕಡಿದಾಗ ಮತ್ತೆ ಕತ್ತಿ ಗುರಾಣಿ ಸಮೇತ ,
ಎದುರಿಸಿದ ಕೃಷ್ಣ ತನ್ನ ರಥವೇರಿದ ರುಗ್ಮಿಯ ಖಡ್ಗವ ಕತ್ತರಿಸುತ್ತ .

ಶರೈರ್ವಿತಸ್ತಿಮಾತ್ರಕೈರ್ವಿಧಾಯ ತಂ ನಿರಾಯುಧಮ್ ।
ಪ್ರಿಯಾವಚಃ ಪ್ರಪಾಲಯನ್ ಜಘಾನ ನೈನಮಚ್ಯುತಃ ॥೧೭.೧೬೧॥
ಹನ್ನೆರಡಂಗುಲ ಬಾಣಗಳಿಂದ ರುಗ್ಮಿಯ ಮಾಡಿದ ನಿರಾಯುಧ ,
ರುಗ್ಮಿಣಿಯ ಮಾತ ಕೇಳುತ್ತಾ ಕೃಷ್ಣ ಮಾಡಲಿಲ್ಲ ಅವನ ವಧ .

ನಿಬದ್ಧ್ಯ ಪಞ್ಚಚೂಳಿನಂ ವಿಧಾಯ ತಂ ವ್ಯಸರ್ಜ್ಜಯತ್ ।
ಜಗಜ್ಜನಿತ್ರಯೋರಿದಂ ವಿಡಮ್ಬನಂ ರಮೇಶಯೋಃ ॥೧೭.೧೬೨॥
ಕೃಷ್ಣ ಅವನ ಕಟ್ಟಿ ಐದು ಜುಟ್ಟ ಇಟ್ಟು ,
ಕಳಿಸಿಬಿಟ್ಟ ಅವನನ್ನು ಬಿಟ್ಟು ಕೊಟ್ಟು ,
ಜಗದ್ಮಾತಾಪಿತರ ವಿಡಂಬನೆಯ ಗುಟ್ಟು .

ಸದೈಕಮಾನಸಾವಪಿ ಸ್ವಧರ್ಮ್ಮಶಾಸಕೌ ನೃಣಾಮ್ ।
ರಮಾ ಹರಿಶ್ಚ ತತ್ರ ತೌ ವಿಜಹ್ರತುರ್ಹಿ ರುಗ್ಮಿಣಾ ॥೧೭.೧೬೩॥
ಒಂದೇ ಮನೋಧರ್ಮದ ಲಕ್ಷ್ಮೀನಾರಾಯಣರಲ್ಲಿ ಎಂದೂ ಇಲ್ಲ ಭೇದ ,
ಯುಧ್ಧದಂಗಳದಲ್ಲಿ ಅವರು ತೋರಿದ್ದು ಲೋಕಧರ್ಮದ ವಿನೋದ .

No comments:

Post a Comment

ಗೋ-ಕುಲ Go-Kula