Saturday 22 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 50-54

 

ಅನನ್ತಶೀರ್ಷೋsನನ್ತಾಕ್ಷೋsನನ್ತಪಾದಕರೋರುಕಃ ।

ಅನನ್ತಗುಣಮಾಹಾತ್ಮ್ಯಶ್ಚಿದಾನನ್ದಶರೀರಕಃ                              ॥೨೧.೫೦॥

ಅನಂತವಾದ ತಲೆಗಳುಳ್ಳಾತ,

ಅನಂತವಾದ ಕಂಗಳುಳ್ಳಾತ,

ಅನಂತಪಾದ ಕರಕಮಲಗಳುಳ್ಳಾತ.

ಅನಂತವಾದ ಗುಣ ಮಹಾತ್ಮ್ಯವುಳ್ಳಾತ,

ಜ್ಞಾನಾನಂದವೇ ಮೈವೆತ್ತು ಬಂದ ತಾತ.

 

ಮದ್ವಶಾ ಏವ ಸರ್ವೇsಪಿ ತ್ವಂ ಚಾನ್ಯೇ ಚ ಧನಞ್ಜಯ।

ಮತ್ಪ್ರಸಾದಾದ್ ಬಲಂ ಚೈವ ವಿಜಯಶ್ಚಾಖಿಲಾ ಗುಣಾಃ ।

ತಸ್ಮಾನ್ನ ವಿಸ್ಮಯಃ ಕಾರ್ಯ್ಯೋ ನ ದರ್ಪ್ಪಶ್ಚ ತ್ವಯಾsನಘ         ॥೨೧.೫೧॥

ಎಲವೋ ಧನಂಜಯ, ನೀನೇ ಇರಲಿ, ಬೇರೆ ಯಾರೇ ಇರಲಿ ಎಲ್ಲರೂ ನನ್ನ ಕೈಗೊಂಬೆಗಳು,

ನನ್ನ ಅನುಗ್ರಹಮಾತ್ರದಿಂದಲೇ ಬರುವುದು ಬಲ, ವಿಜಯ ಮೊದಲಾದ ಎಲ್ಲಾ ಗುಣಗಳು.

ಈ ಕಾರಣದಿಂದ ಪಡಬೇಕಿಲ್ಲ ಆಶ್ಚರ್ಯ,

ಪಾಪವಿರದ ನಿನಗೆ ಬಾರದಿರಲಿ ಅಹಂಕಾರ.

 

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ’      ॥೨೧.೫೨॥

ನನ್ನ ಭಕ್ತನಾಗಿ ನನ್ನಲ್ಲೇ ಬಗೆಯನ್ನು ನೆಡು,

ನನ್ನನ್ನೇ ಪೂಜಿಸುತ್ತಾ ನನಗೇ ಪೊಡಮಡು.

ನನ್ನ ಸೇರುವೆ ನೀನು :ಇದೆಂದಿಗೂ ಅಲ್ಲ ಸುಳ್ಳು,

ಎನ್ನ ಪ್ರಿಯ ನೀನು :ಆಣೆ ಮಾಡಿ ಹೇಳುತ್ತಿದ್ದೇನೆ ಕೇಳು.

 

ಇತ್ಯುಕ್ತಃ ಪ್ರಣಿಪತ್ಯೈನಂ ಕ್ಷಮಸ್ವೇತ್ಯಾಹ ಫಲ್ಗುನಃ ।

ಉಷಿತ್ವಾ ಕತಿಚಿನ್ಮಾಸಾನ್ ಯಯುಃ ಸರ್ವೇಪಿ ಪಾಣ್ಡವಾಃ         ॥೨೧.೫೩॥

 

ಅನುಜ್ಞಾತಾಃ ಕೇಶವೇನ ಭಕ್ತಿನಮ್ರಧಿಯೋsಚ್ಯುತೇ ।

ಸಮ್ಭಾವಿತಾಃ ಕೇಶವೇನ ಸೌಹಾರ್ದ್ದೇನಾಧಿಕೇನ ಚ                  ॥೨೧.೫೪॥

ಇದೆಲ್ಲಾ ಕೇಳಿದ ಅರ್ಜುನ ಕೃಷ್ಣನಲ್ಲಿ ಕ್ಷಮೆ ಬೇಡುತ್ತಾ ಮಾಡಿದ ನಮಸ್ಕಾರ,

ಪಾಂಡವರೆಲ್ಲರೂ ಕೃಷ್ಣಸೇವೆ ಮಾಡುತ್ತಾ ಕೆಲ ತಿಂಗಳಿದ್ದದ್ದದು ದ್ವಾರಕಾಪುರ.

ಅವರಿಗೆಲ್ಲಾ ಇತ್ತು ಕೃಷ್ಣನಲ್ಲಿ ಬಾಗಿದ ಭಕ್ತಿಯ ಮನ,

ನಾರಾಯಣನಿಂದ ಸ್ವೀಕರಿಸಿದರು ಪ್ರೀತಿಯ ಬಹುಮಾನ.

ಕೃಷ್ಣನ ಆಜ್ಞೆ ಪಡೆದವರಾಗಿ ಸೇರಿಕೊಂಡರು ತಮ್ಮ ಪಟ್ಟಣ.

 

[ಇದು ಭಾಗವತದ ೧೦ನೇ ಸ್ಕಂಧದ ೧೦೩ನೇ ಅಧ್ಯಾಯದಲ್ಲಿ ಬರುವ ಕಥೆಯಾಗಿದ್ದು, ಅದನ್ನು ಇಲ್ಲಿ ಆಚಾರ್ಯರು ಕಾಲಕ್ರಮದಲ್ಲಿ ಪ್ರಸ್ತುತಪಡಿಸಿರುವುದನ್ನು ನಾವು ಗಮನಿಸಬೇಕು]

[Contributed by Shri Govind Magal]

No comments:

Post a Comment

ಗೋ-ಕುಲ Go-Kula