Friday 28 January 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 60-64

 

ಉತ್ತರೋತ್ತರತಃ ಸರ್ವೇ ಸುಖೇ ಶತಗುಣೋತ್ತರಾಃ ।

ಅನನ್ತಜನಸಮ್ಪೂರ್ಣ್ಣಾ ಅಪಿ ತೇ ಹೀಚ್ಛಯಾ ಹರೇಃ       ॥೨೧.೬೦॥

 

ಅವಕಾಶವನ್ತೋ ದಿವ್ಯತ್ವಾತ್ ಪೂರ್ಯ್ಯನ್ತೇ ನ ಕದಾಚನ ।

ಸರ್ವಕಾಮಸುಖೈಃ ಪೂರ್ಣ್ಣಾ ದಿವ್ಯಸ್ತ್ರೀಪುರುಷೋಜ್ಜ್ವಲಾಃ ॥೨೧.೬೧॥

ಸ್ವರ್ಗದಿಂದ ವೈಕುಂಠದವರೆಗೆ ಇರುವ ಲೋಕಗಳಲ್ಲಿನ ಸುಖ,

ಕ್ರಮೇಣ ಮೇಲು ಮೇಲಕ್ಕೆ ಒಂದರಿಂದೊಂದು ನೂರ್ಪಟ್ಟು ಅಧಿಕ.

ಅಲ್ಲಿದೆ ಅನಂತ ಜೀವರಾಶಿಗಳ ಶಾಶ್ವತ ವಾಸ,

ಎಲ್ಲರಿಗುಂಟು ಸಂದಣಿಯಿರದ ವಿಶೇಷ ಅವಕಾಶ.

ಈ ಲೋಕಗಳು ಎಲ್ಲಾ ಸುಖ ಸಮೃದ್ಧಿಯಿಂದ ಭರಿತ,

ಅಲೌಕಿಕ ಸ್ತ್ರೀಪುರುಷರಿಂದ ಲೋಕಗಳಿವು ಶೋಭಿತ.

 

[ಭೂಲೋಕದಿಂದ ಸತ್ಯಲೋಕದತನಕ ಅಂತರಿಕ್ಷಲೋಕಗಳನ್ನು ನೋಡಿದೆವು. ಅದೇ ರೀತಿ ಕೆಳಗೆ ಏಳು ಪಾತಾಳ ಲೋಕಗಳಿವೆ-  ಅತಳ, ವಿತಳ, ಸುತಳ, ತಳಾತಳ, ಮಹಾತಳ, ರಸಾತಳ ಮತ್ತು  ಪಾತಾಳ)]

 

ದಿವ್ಯರತ್ನಸಮಾಕೀರ್ಣ್ಣಂ ತಥಾ ಪಾತಾಳಸಪ್ತಕಮ್ ।

ಅಧಸ್ತಾಚ್ಛೇಷದೇವೇನ ಬಲಿನಾ ಸಮಧಿಷ್ಠಿತಮ್ ॥೨೧.೬೨॥

ದಿವ್ಯ ರತ್ನಗಳಿಂದ ತುಂಬಿರುವವುಗಳು,

ಅವು ಏಳು ಪಾತಾಳ ಲೋಕಗಳು.

ಶೇಷನಿಂದ ಹೊರಲ್ಪಟ್ಟ ಲೋಕಗಳು.

 

ಕಾಮಭೋಗಸಮಾಯುಕ್ತಾ ಬಹುವರ್ಷಸಹಸ್ರಿಣಃ ।

ಸಪ್ತದ್ವೀಪೇಷು ಪುರುಷಾ ನಾರ್ಯ್ಯಶ್ಚೋಕ್ತಾಃ ಸುರೂಪಿಣಃ ॥೨೧.೬೩॥

ಕೆಳಗಿನ ಲೋಕದಲ್ಲಿರುವವರದು ಬಯಸಿದ ಭೋಗ ಪಡೆದ ದೀರ್ಘ ಬಾಳು,

ಏಳೂ ದ್ವೀಪಗಳಲ್ಲಿರುವ ಸ್ತ್ರೀ ಪುರುಷರುಗಳು ಅತ್ಯಂತ ಸ್ಫುರದ್ರೂಪಿಗಳು.

 

ಏಷಾಂ ಚ ಸರ್ವಲೋಕಾನಾಂ ಧಾತಾ ನಾರಾಯಣಃ ಪರಃ ।

ವಿಷ್ಣುಲೋಕಸ್ಥಿತೋ ಮುಕ್ತೈಃ ಸದಾ ಸರ್ವೈರುಪಾಸ್ಯತೇ             ॥೨೧.೬೪॥

ಈ ಎಲ್ಲಾ ಲೋಕಗಳನ್ನೂ ಹೊತ್ತಿರುವ ಏಕೈಕ ಮಹಾತ್ರಾಣ,

ಮುಕ್ತಲೋಕದಲ್ಲಿದ್ದು ಮುಕ್ತರಿಂದ ಸ್ತುತಿಗೊಂಬ ನಾರಾಯಣ.

 

[ಹೀಗೆ ಒಟ್ಟಿನಲ್ಲಿ ಇಲ್ಲಿ ಆಚಾರ್ಯರು ಭಾಗವತದ ಐದನೇ ಸ್ಕಂಧದಲ್ಲಿ ಹೇಳಿದ ಭೂಗೋಳ ವರ್ಣನೆ, ಖಗೋಳ ವರ್ಣನೆ ಮತ್ತು ವಿಷ್ಣುಪುರಾಣಾದಿಗಳಲ್ಲಿ ಹೇಳಿರುವ ಇಡೀ ಬ್ರಹ್ಮಾಂಡ ವರ್ಣನೆ ಈ ಮೂರನ್ನೂ ಸಮಷ್ಟಿಯಾಗಿ, ಎಲ್ಲವನ್ನೂ ಒಟ್ಟಿಗೆ ವ್ಯಾಖ್ಯಾನ ಮಾಡಿ ನಮಗೆ ನೀಡಿದ್ದಾರೆ].


[Contributed by Shri Govind Magal]

No comments:

Post a Comment

ಗೋ-ಕುಲ Go-Kula