Saturday 4 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 124-133

 

ಕೃತಕೃತ್ಯೇ ತಥಾ ಭೀಮೇ ಸ್ಥಿತೇ ಧರ್ಮ್ಮಾತ್ಮಜೋ ಹಿ ಸಃ ।

ಭೀಷ್ಮದ್ರೋಣಾದಿವಿಜಯಃ ಕಥಂ ಸ್ಯಾದಿತ್ಯಚಿನ್ತಯತ್ ॥೨೨.೧೨೪॥

ಆನಂತರ ತಾನಂದುಕೊಂಡ ಕೆಲಸ ಮುಗಿಸಿದ ಭೀಮಸೇನ ಸುಮ್ಮನಾದ,

ಯುಧಿಷ್ಠಿರ, ಭೀಷ್ಮ ದ್ರೋಣರ ಗೆಲ್ಲುವ ಬಗೆ ಹೇಗೆಂದು ಯೋಚಿಸಿದ.

 

ನಿವಾರಣಂ ಗುರೂಣಾಂ ಹಿ ಭೀಮ ಇಚ್ಛತಿ ನ ಕ್ವಚಿತ್ ।

ತಸ್ಮಾತ್ ತೇ ಹ್ಯರ್ಜ್ಜುನೇನೈವ ನಿವಾರ್ಯ್ಯಾ ಇತ್ಯಚಿನ್ತಯತ್ ॥೨೨.೧೨೫॥

ಭೀಮಸೇನ ಗುರುಹಿರಿಯರ ತಡೆಯುವುದ ಬಯಸದ ಕಾರಣ,

ಭೀಷ್ಮ ದ್ರೋಣರೊಡನೆ ಯುದ್ಧ ಮಾಡಲು ಯೋಗ್ಯ ಅರ್ಜುನ.

 

ಆಪದ್ಯೇವ ಹಿ ಭೀಮಸ್ತಾನ್ ನಿವಾರಯತಿ ನಾನ್ಯಥಾ ।

ಏವಂ ಚಿನ್ತಾಸಮಾವಿಷ್ಟಂ ವಿಜ್ಞಾಯೈವ ಯುಧಿಷ್ಠಿರಮ್ ॥೨೨.೧೨೬॥

 

ಸರ್ವಜ್ಞಃ ಸರ್ವಶಕ್ತಿಶ್ಚ ಕೃಷ್ಣದ್ವೈಪಾಯನೋSಗಮತ್ ।

ನೃಪತಿಂ ಬೋಧಯಾಮಾಸ ಚಿನ್ತಾವ್ಯಾಕುಲಮಾನಸಮ್ ॥೨೨.೧೨೭॥

ಭೀಮಸೇನ ಆಪತ್ಕಾಲದಲ್ಲಿ ಮಾತ್ರ ಭೀಷ್ಮಾದಿಗಳ ತಡೆಯುವ,

ಅವಶ್ಯವಿದ್ದರೆ ಹೋರಾಡುವ, ಇರದಿರೆ ಸುಮ್ಮನೇ ಬಿಟ್ಟುಬಿಡುವ.

ಹೀಗೆ ಯುಧಿಷ್ಠಿರನನ್ನು ಕಾಡುತ್ತಿರಲು ಇಂತಹಾ ವಿಚಾರಧಾರೆ,

ಅಲ್ಲಿಗೆ ಸರ್ವಜ್ಞರಾದ ಸರ್ವಶಕ್ತ ವೇದವ್ಯಾಸರು ಬರುತ್ತಾರೆ

ಕಂಗೆಟ್ಟಿರುವ ಧರ್ಮರಾಜನಿಗೆ ಉಪದೇಶವನ್ನು ಮಾಡುತ್ತಾರೆ.

 

ಇಮಂ ಮನ್ತ್ರಂ ವದಿಷ್ಯಾಮಿ ಯೇನ ಜೇಷ್ಯತಿ ಫಲ್ಗುನಃ ।

ಭೀಷ್ಮದ್ರೋಣಾದಿಕಾನ್ ಸರ್ವಾನ್ ತಂ ತ್ವಂ ವದ ಧನಞ್ಜಯೇ ॥೨೨.೧೨೮॥

 

ಇತ್ಯುಕ್ತ್ವೈವಾವದನ್ಮನ್ತ್ರಂ ಸರ್ವದೈವತದೃಷ್ಟಿದಮ್ ।

ನ ಸ್ವಯಂ ಹ್ಯವದತ್ ಪಾರ್ತ್ಥೇ ಫಲಾಧಿಕ್ಯಂ ಯತೋ ಭವೇತ್ ॥೨೨.೧೨೯॥

ಯಾವ ಈ ಒಂದು ಮಂತ್ರದಿಂದ ಅರ್ಜುನನಿಗೆ,

ಲಭ್ಯವಾಗುವುದು ಭೀಷ್ಮ ದ್ರೋಣರ ಗೆಲ್ಲುವ ಬಗೆ.

ನಿನಗೆ ಮಾಡುತ್ತೇನೆ ಅಂಥದೊಂದು ಮಂತ್ರದ ಉಪದೇಶ,

ನಿನ್ನದು : ಅದನ್ನು ಅರ್ಜುನನಿಗೆ ಉಪದೇಶಿಸುವ ಕೆಲಸ.

ಧರ್ಮರಾಯಗೆ ನೀಡಿದರು ಎಲ್ಲಾ ದೇವತೆಗಳ ಪ್ರತ್ಯಕ್ಷವನ್ನು ನೀಡುವ ಮಂತ್ರ,

ಫಲಾಧಿಕ್ಯವಾಗಬಾರದೆಂಬುದು ಅರ್ಜುನನಿಗೆ ತಾವೇ ಹೇಳದಿರುವ ತಂತ್ರ.

 

ಭೀಷ್ಮದ್ರೋಣಾದಿವಿಜಯ ಏತಾವದ್ ವೀರ್ಯ್ಯಮೇವ ಹಿ ।

ಅಲಂ ನಾತೋSಧಿಕಂ ಕಾರ್ಯ್ಯಮೇತಾವದ್ ಯೋಗ್ಯಮಸ್ಯ ಚ ॥೨೨.೧೩೦॥

ಭೀಷ್ಮ ದ್ರೋಣರನ್ನು ಗೆಲ್ಲಲು ಇದು ಸಾಕಾಗುತ್ತದೆ,

ಆ ಜಯಕ್ಕಿಂತಧಿಕ ಅರ್ಜುನಗೆ ಯಾವುದಿರುತ್ತದೆ.

 

ಫಲ್ಗುನಸ್ಯೇತಿ ಭಗವಾನ್ ನ ಸ್ವಯಂ ಹ್ಯವದನ್ಮನುಮ್ ।

ಗತೇ ವ್ಯಾಸೇ ಭಗವತಿ ಸರ್ವಜ್ಞೇ ಸರ್ವಕರ್ತ್ತರಿ ॥೨೨.೧೩೧॥

 

ಧರ್ಮ್ಮರಾಜೋSದಿಶನ್ಮನ್ತ್ರಂ ಫಲ್ಗುನಾಯ ರಹಸ್ಯಮುಮ್ ।

ತಮಾಪ್ಯ ಫಲ್ಗುನೋ ಮನ್ತ್ರಂ ಯಯೌ ಜ್ಯೇಷ್ಠೌ ಪ್ರಣಮ್ಯ ಚ  ॥೨೨.೧೩೨॥

 

ಯಮಜೌ ಚ ಸಮಾಶ್ಲಿಷ್ಯ ಗಿರಿಮೇವೇನ್ದ್ರಕೀಲಕಮ್ ।

ತಪಶ್ಚಚಾರ ತತ್ರಸ್ಥಃ ಶಙ್ಕರಸ್ಥಂ ಹರಿಂ ಸ್ಮರನ್ ॥೨೨.೧೩೩॥

ವೇದವ್ಯಾಸರು ಎಲ್ಲರ ಯೋಗ್ಯತೆ ಅರಿತ ಸರ್ವಜ್ಞ ಸರ್ವೇಶ,

ಹಾಗಾಗಿ ಅರ್ಜುನಗೇ ಮಾಡಲಿಲ್ಲ ಆ ಮಂತ್ರದ ಉಪದೇಶ.

ಸರ್ವನಿಯಾಮಕ,ಸರ್ವಜ್ಞ ವೇದವ್ಯಾಸರು ತೆರಳುತ್ತಾರೆ,

ಧರ್ಮಜ ರಹಸ್ಯದಿ ಅರ್ಜುನಗೆರೆಯುತ್ತಾನೆ ಮಂತ್ರಧಾರೆ.

ಮಂತ್ರ ಪಡೆದ ಅರ್ಜುನ ಹಿರಿಯರಿಬ್ಬರಿಗೆ ನಮಸ್ಕರಿಸುತ್ತಾನೆ,

ನಕುಲ ಸಹದೇವರ ಆಲಿಂಗಿಸಿ ಇಂದ್ರಕೀಲಕದತ್ತ ತೆರಳುತ್ತಾನೆ.

ಅಲ್ಲಿ ರುದ್ರಾಂತರ್ಯಾಮಿಯಾದ ಶ್ರೀಹರಿಯನ್ನು,

ಅರ್ಜುನ ಸ್ಮರಿಸುತ್ತಾ ಮಾಡುತ್ತಾನೆ ತಪಸ್ಸನ್ನು.

No comments:

Post a Comment

ಗೋ-ಕುಲ Go-Kula