Tuesday 7 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 148-156

 

ನಮಶ್ಚಕ್ರೇ ತತಃ ಪ್ರಾದಾದಸ್ತ್ರಂ ಪಾಶುಪತಂ ಶಿವಃ ।

ಅಸ್ತ್ರಂ ತದ್ ವಿಷ್ಣುದೈವತ್ಯಂ ಸಾಧಿತಂ ಶಙ್ಕರೇಣ ಯತ್ ॥೨೨.೧೪೮॥

 

ತಸ್ಮಾತ್ ಪಾಶುಪತಂ ನಾಮ ಸ್ವಾನ್ಯಸ್ತ್ರಾಣ್ಯಪರೇ ಸುರಾಃ ।

ದದುಸ್ತದೈವ ಪಾರ್ತ್ಥಾಯ ಸರ್ವೇ ಪ್ರತ್ಯಕ್ಷಗೋಚರಾಃ ॥೨೨.೧೪೯॥

ಆನಂತರ ಸದಾಶಿವನಿಂದ ಅರ್ಜುನನಿಗೆ ಪಾಶುಪತಾಸ್ತ್ರ ಪ್ರದಾನ,

ಗಮನಿಸಬೇಕು ಆ ಅಸ್ತ್ರವು ಶ್ರೀಮನ್ನಾರಾಯಣ ದೇವತೆಯ ಅಧೀನ.

ಅದನ್ನು ಶಿವನೇ ಸಾಕ್ಷಾತ್ಕರಿಸಿಕೊಂಡ ಋಷಿಯಾದ್ದರಿಂದ ಅದಕ್ಕನ್ನುವರು ಪಾಶುಪತ,

ಆನಂತರ ಉಳಿದೆಲ್ಲಾ ದೇವತೆಗಳೂ ಕೊಟ್ಟ ಅಸ್ತ್ರಗಳನ್ನು ಸ್ವೀಕರಿಸುತ್ತಾನೆ ಪಾರ್ಥ.

ಆ ದೇವತೆಗಳಿಂದ ಪ್ರತ್ಯಕ್ಷ ಗೋಚರವಾಗಿ ಅಸ್ತ್ರಗಳನ್ನು ಸ್ವೀಕರಿಸಿ ಆದ ಕೃತಾರ್ಥ.

 

ಇನ್ದ್ರೋSರ್ಜ್ಜುನಂ ಸಮಾಗಮ್ಯ ಪ್ರಾಹ ಪ್ರೀತೋSಸ್ಮಿ ತೇSನಘ ।

ರುದ್ರದೇಹಸ್ಥಿತಂ ಬ್ರಹ್ಮ ವಿಷ್ಣ್ವಾಖ್ಯಂ ತೋಷಿತಂ ತ್ವಯಾ ॥೨೨.೧೫೦॥

 

ತೇನ ಲೋಕಂ ಮಮಾSಗಚ್ಛ ಪ್ರೇಷಯಾಮಿ ರಥಂ ತವ ।

ಇತ್ಯುಕ್ತ್ವಾ ಪ್ರಯಯಾವಿನ್ದ್ರಸ್ತದ್ರಥೇನ ಚ ಮಾತಲಿಃ ॥೨೨.೧೫೧॥

ತದನಂತರ ಇಂದ್ರದೇವ ಅರ್ಜುನನ ಬಳಿಗೆ ಬಂದು ಹೀಗೆ ಹೇಳುತ್ತಾನೆ,

ಪಾಪದೂರ ಪಾರ್ಥ, ನಿನ್ನಿಂದ ರುದ್ರಾಂತರ್ಗತ ವಿಷ್ಣು ಪ್ರೀತನಾಗಿದ್ದಾನೆ.

ಭಗವತ್ಪ್ರೀತಿಯಾದದ್ದರಿಂದ ಸಹಜ ನಾನೂ ಆಗಿದ್ದೇನೆ ಸಂತೃಪ್ತ,

ಹರಿಪ್ರೇರಣೆಯಂತೆ ನೀನು ನನ್ನ ಲೋಕಕ್ಕೆ ಬರಲು ಕಳಿಸುತ್ತೇನೆ ರಥ.

ಇಷ್ಟು ಹೇಳಿದ ಇಂದ್ರದೇವ ಅಲ್ಲಿಂದ ತೆರಳುತ್ತಾನೆ,

ಮಾತಲಿ ರಥದೊಂದಿಗೆ ಅರ್ಜುನನಲ್ಲಿಗೆ ಬರುತ್ತಾನೆ.

 

ಆಯಾತ್ ಪಾರ್ತ್ಥಸ್ತಮಾರು‌ಹ್ಯ ಯಯೌ ತಾತನಿವೇಶನಮ್ ।

ಪೂಜಿತೋ ದೈವತೈಃ ಸರ್ವೈರಿದ್ರೇಣೈವ ನಿವೇಶಿತಃ ।

ತೇನ ಸಾರ್ದ್ಧಮುಪಾಸೀದತ್ ತಸ್ಮಿನ್ನೈನ್ದ್ರೇ ವರಾಸನೇ             ॥೨೨.೧೫೨॥

ಆ ರಥವೇರಿದ ಅರ್ಜುನ ಇಂದ್ರನ ಮನೆಗೆ ತೆರಳುತ್ತಾನೆ,

ಅಲ್ಲಿ ಎಲ್ಲಾ ದೇವತೆಗಳಿಂದ ಸತ್ಕಾರವನ್ನು ಸ್ವೀಕರಿಸುತ್ತಾನೆ.

ಇಂದ್ರನಿಂದಲೇ ಅವನ ಸಿಂಹಾಸನದಲ್ಲಿ ಆಸೀನನಾಗುತ್ತಾನೆ.

 

ಪ್ರೀತ್ಯಾ ಸಮಾಶ್ಲಿಷ್ಯ ಕುರುಪ್ರವೀರಂ ಶಕ್ರೋ ದ್ವಿತೀಯಾಂ ತನುಮಾತ್ಮನಃ ಸಃ ।

ಈಕ್ಷನ್ ಮುಖಂ ತಸ್ಯ ಮುಮೋದ ಸೋSಪಿ ಹ್ಯುವಾಸ ತಸ್ಮಿನ್ ವತ್ಸರಾನ್ ಪಞ್ಚ ಲೋಕೇ ॥೨೨.೧೫೩॥

ಇಂದ್ರ ಅರ್ಜುನಗೀಯುತ್ತಾನೆ ಪ್ರೀತಿಯ ಆಲಿಂಗನ,

ಇಂದ್ರನವೇ ಎರಡು ರೂಪಗಳ ಭವ್ಯವಾದ ಸಮ್ಮಿಲನ.

ಅರ್ಜುನನ ಮುಖ ನೋಡುತ್ತಾ ಇಂದ್ರ ಪಟ್ಟ ಬಹು ಸಂತೋಷ,

ಅರ್ಜುನನದಾಗುತ್ತದೆ ಇಂದ್ರಲೋಕದಲ್ಲೇ ಐದುವರ್ಷ ವಾಸ.

 

ಅಸ್ತ್ರಾಣಿ ತಸ್ಮಾ ಅದಿಶತ್ ಸ ವಾಸವೋ ಮಹಾನ್ತಿ ದಿವ್ಯಾನಿ ತದೋರ್ವಶೀ ತಮ್ ।

ಸಮ್ಪ್ರಾಪ್ಯ ಭಾವೇನ ತು ಮಾನುಷೇಣ ಮಾತಾ ಕುಲಸ್ಯೇತಿ ನಿರಾಕೃತಾSಭೂತ್ ॥೨೨.೧೫೪॥

ಇಂದ್ರನಿಂದ ಅರ್ಜುನನಿಗೆ ಮಹಾ ದಿವ್ಯಾಸ್ತ್ರಗಳ ಪ್ರದಾನ,

ಆಗ ಊರ್ವಶಿ ಬರುತ್ತಾಳೆ ಬಯಸಿ ಅರ್ಜುನನ ಮಿಲನ.

ಮಾನುಷಸಂಸ್ಕಾರದಿಂದವಳು ನನ್ನ ಕುಲದ ಹಿರಿಯಳು ಆಗುತ್ತಾಳೆ,

ನಿರಾಕರಿಸಿದ ಅರ್ಜುನ ಹೇಳುತ್ತಾನೆ:ಅವಳು ಮುತ್ತಜ್ಜಿ ಆಗುತ್ತಾಳೆ.

 

ಷಣ್ಢೋ ಭವೇತ್ಯೇವ ತಯಾSಭಿಶಪ್ತೇ ಪಾರ್ತ್ಥೇ ಶಕ್ರೋSನುಗ್ರಹಂ ತಸ್ಯ ಚಾದಾತ್ ।

ಸಂವತ್ಸರಂ ಷಣ್ಢರೂಪೀ ಚರಸ್ವ ನ ಷಣ್ಢತಾ ತೇ ಭವತೀತಿ ಧೃಷ್ಣುಃ ॥೨೨.೧೫೫॥

ನಿರಾಸೆಗೊಂಡ ಊರ್ವಶಿಯಿಂದ ಅರ್ಜುನಗೆ ನಪುಂಸಕನಾಗೆಂದು ಶಾಪ,

ಅರಿವೈರಿ ಇಂದ್ರ ಅನುಗ್ರಹಿಸಿ ಶಾಪಕ್ಕೆ ಕೊಟ್ಟ ವರವಾಗುವಂಥ ರೂಪ.

ಧರಿಸಿಕೊಂಡಿರು ಒಂದು ವರ್ಷ ಕಾಲ ನಪುಂಸಕ ವೇಷ,

ನೀನು ಹಾಗಿದ್ದರೂ ನಿನಗೆ ಅಂಟದು ಷಂಢತ್ವದ ದೋಷ.

 

ತತೋSವಸತ್ ಪಾಣ್ಡವೇಯೋ ಗಾನ್ಧರ್ವಂ ವೇದಮಭ್ಯಸನ್ ।

ಗನ್ಧರ್ವಾಚ್ಚಿತ್ರಸೇನಾತ್ತು ತಥಾSಸ್ತ್ರಾಣಿ ಸುರೇಶ್ವರಾತ್ ॥೨೨.೧೫೬॥

ಆನಂತರ ಅರ್ಜುನಗೆ ಸಂಗೀತ ನಾಟ್ಯ ಮುಂತಾದುದಕ್ಕೆ ಸಂಬಂಧಿಸಿದ ವೇದಾಭ್ಯಾಸ,

ಅದು ಚಿತ್ರಸೇನನಿಂದಲೂ, ಅಸ್ತ್ರಾಭ್ಯಾಸ ಇಂದ್ರನಿಂದಲೂ ಆಗುತ್ತಾ ಅಲ್ಲೇ ಅವನ ವಾಸ.

No comments:

Post a Comment

ಗೋ-ಕುಲ Go-Kula