Saturday 4 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 134-141

 

ಷಣ್ಮಾಸೇsತಿಗತೇSಪಶ್ಯನ್ಮೂಕಂ ನಾಮಾಸುರಂ ಗಿರೌ ।

ವರಾಹರೂಪಮಾಯಾತಂ ವಧಾರ್ತ್ಥಂ ಫಲ್ಗುನಸ್ಯ ಚ ॥೨೨.೧೩೪॥

ಆರು ತಿಂಗಳು ಕಾಲವಾದ ಮೇಲೆ ಆ ಬೆಟ್ಟದಲ್ಲಿ ಹಂದಿಯೊಂದು ಕಂಡಿತ್ತು,

ಅದು ಮೂಕನೆಂಬ ಅಸುರನಾಗಿದ್ದು ಅರ್ಜುನನ ವಧಿಸಲು ಬಂದಿತ್ತು

 

ತಂ ಜ್ಞಾತ್ವಾ ಫಲ್ಗುನೋ ವೀರಃ ಸಜ್ಯಂ ಕೃತ್ವಾ ತು ಗಾಣ್ಡಿವಮ್ ।

ಚಿಕ್ಷೇಪ ವಜ್ರಸಮಿತಾಂಸ್ತತ್ಕಾಯೇ ಸಾಯಕಾನ್ ಬಹೂನ್ ॥೨೨.೧೩೫॥

ಶೂರ ಅರ್ಜುನ ಮೂಕಾಸುರ ಬಂದಿದ್ದನ್ನು ತಿಳಿದ,

ತನ್ನ ಗಾಂಡೀವ ಧನುಸ್ಸನ್ನು ಸಜ್ಜುಗೊಳಿಸಿದ,

ವಜ್ರಾಯುಧ ಸಮ ಬಾಣಗಳವನ ಮೇಲೆಸೆದ.

 

ಕಿರಾತರೂಪಸ್ತಮನು ಸಭಾರ್ಯ್ಯಶ್ಚ ತ್ರಿಯಮ್ಬಕಃ ।

ಸ ಮಮಾರ ಹತಸ್ತಾಭ್ಯಾಮ್ ದಾನವಃ ಪಾಪಚೇತನಃ ॥೨೨.೧೩೬॥

ಶಿವನೂ ಪಾರ್ವತೀ ಸಮೇತ ಬೇಡವೇಷದಿಂದ ಅಲ್ಲಿದ್ದ,

ರುದ್ರದೇವನೂ ಅಸುರನ ಮೇಲೆ ಬಹಳ ಬಾಣ ಎಸೆದ.

ಎರಡೂ ಕಡೆಯಿಂದ ಹೊಡೆಸಿಕೊಂಡ ಅಸುರ ಉಸಿರೆಳೆದ.

 

ತೇನೋಕ್ತೋSಸೌ ಮಯೈವಾಯಂ  ವರಾಹೋSನುಗತೋSದ್ಯ ಹಿ ।

ತಮವಿದ್ಧ್ಯೋ ಯತಸ್ತ್ವಂ ಹಿ ತದ್ ಯುದ್ಧ್ಯಸ್ವ ಮಯಾ ಸಹ ॥೨೨.೧೩೭॥

ನನ್ನ ಬೇಟೆಯಾಗಿತ್ತು ಆ ವರಾಹ, ನೀನದನ್ನ ಹೊಡೆದದ್ಯಾವ ನ್ಯಾಯ.

ನನ್ನೊಡನೆ ನೀನು ಮಾಡೀಗ ಯುದ್ಧ, ಬೇಡ ವೇಷದ ಶಿವನು ಹೀಗೆ ನುಡಿದ.

 

ಇತ್ಯುಕ್ತಃ ಫಲ್ಗುನಃ ಪ್ರಾಹ ತಿಷ್ಠತಿಷ್ಠ ನ ಮೋಕ್ಷ್ಯಸೇ ।

ಇತ್ಯುಕ್ತ್ವಾ ತಾವುಭೌ ಯುದ್ಧಂ ಚಕ್ರತುಃ ಪುರುಷರ್ಷಭೌ ॥೨೨.೧೩೮॥

ಅರ್ಜುನ : 'ನಿಲ್ಲು ನಿಲ್ಲು ನಿನ್ನನ್ನು ಬಿಡುವುದಿಲ್ಲ' ಎಂದ,

ಪ್ರಾರಂಭವಾಯಿತಾಗ ಮಹಾಪುರುಷರ ಮಧ್ಯೆ ಯುದ್ಧ.

 

ತತ್ರಾಖಿಲಾನಿ ಚಾಸ್ತ್ರಾಣಿ ಫಲ್ಗುನಸ್ಯಾಗ್ರಸಚ್ಛಿವಃ ।

ತತೋSರ್ಜ್ಜುನಸ್ತು ಗಾಣ್ಡೀವಂ ಸಮಾದಾಯಾಭ್ಯತಾಡಯತ್ ॥೨೨.೧೩೯॥

ಆಗ ಅರ್ಜುನನ ಎಲ್ಲಾ ಬಾಣಗಳನ್ನು ಶಿವ ನುಂಗಿದ,

ಆನಂತರ ಅರ್ಜುನ ಗಾಂಡೀವವೆತ್ತಿ ಶಿವನ ಹೊಡೆದ.

 

ತದಪ್ಯಗ್ರಸದೇವಾಸೌ ಪ್ರಹಸನ್ ಗಿರಿಶಸ್ತದಾ ।

ಬಾಹುಯುದ್ಧಂ ತತಸ್ತ್ವಾಸೀತ್ ತಯೋಃ ಪುರುಷಸಿಂಹಯೋಃ ॥೨೨.೧೪೦॥

ನಸುನಗುತ್ತಾ ಸದಾಶಿವ ಗಾಂಡೀವವನ್ನೂ ನುಂಗಿದ,

ನಂತರ ನಡೆಯಿತು ಪುರುಷಸಿಂಹರ ಮಧ್ಯೆ ಬಾಹುಯುದ್ಧ.

 

ಪಿಣ್ಡೀಕೃತ್ಯ ತತೋ ರುದ್ರಶ್ಚಿಕ್ಷೇಪಾಥ ಧನಞ್ಜಯಮ್ ।

ಮೂರ್ಚ್ಛಾಮವಾಪ ಮಹತೀಂ ಫಲ್ಗುನೋ ರುದ್ರಪೀಡಿತಃ ॥೨೨.೧೪೧॥

ಬಾಹುಯುದ್ಧದಿ ಶಿವ ಅರ್ಜುನನ ಮುದ್ದೆ ಮಾಡಿ ಎಸೆದ,

ನೋವಿಗೊಳಗಾದ ಅರ್ಜುನ ಗಾಢವಾಗಿ ಮೂರ್ಛೆ ಹೋದ.

No comments:

Post a Comment

ಗೋ-ಕುಲ Go-Kula