Monday 6 June 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 142-147

 

[ಹಾಗಿದ್ದರೆ – ‘ನಾನು ಭೂಮಿಯಮೇಲೆ ಇರುವಾಗ ಅರ್ಜುನನನ್ನು ಯಾರೊಬ್ಬರೂ ಗೆಲ್ಲುವುದಿಲ್ಲ’ ಎಂದು ಶ್ರೀಕೃಷ್ಣನ ವರವಿದ್ದರೂ ಕೂಡ, ಇಲ್ಲಿ ಏಕೆ ಅರ್ಜುನ ಪರಾಜಯವನ್ನು ಹೊಂದಿದ ಎಂದರೆ ಹೇಳುತ್ತಾರೆ- ]

 

ಪೂರ್ವಂ ಸಮ್ಪ್ರಾರ್ತ್ಥಯಾಮಾಸ ಶಙ್ಕರೋ ಗರುಡಧ್ವಜಮ್ ।

ಅವರಾಣಾಂ ವರಂ ಮತ್ತೋ ಯೇಷಾಂ ತ್ವಂ ಸಮ್ಪ್ರಯಚ್ಛಸಿ ॥೨೨.೧೪೨॥

 

ಅಜೇಯತ್ವಂ ಪ್ರಸಾದಾತ್ ತೇ ವಿಜೇಯಾಃ ಸ್ಯುರ್ಮ್ಮಯಾSಪಿ ತೇ ।

ಇತ್ಯುಕ್ತಃ ಪ್ರದದೌ ವಿಷ್ಣುರುಮಾಧೀಶಾಯ ತಂ ವರಮ್ ॥೨೨.೧೪೩॥

ಹಿಂದೆ ಶಿವಶಂಕರನು ಗರುಡಧ್ವಜ ವಿಷ್ಣುವಿನಲ್ಲಿ ಹೀಗೆಂದು ಬೇಡಿಕೊಂಡಿದ್ದ,

ಎನಗಿಂತ ಕೆಳಗಿನ ಅಜೇಯತ್ವ ವರವಿದ್ದವರನ್ನು ಗೆಲ್ಲಲು ನಾನಾಗಬೇಕು ಬದ್ಧ.

 

ತೇನಾಜಯಚ್ಛ್ವೇತವಾಹಂ ಗಿರಿಶೋ ರಣಮದ್ಧ್ಯಗಮ್ ।

ಕೇವಲಾನ್ ವೈಷ್ಣವಾನ್ ಮನ್ತ್ರಾನ್ ವ್ಯಾಸಃ ಪಾರ್ತ್ಥಾಯ ನೋ ದದೌ ॥೨೨.೧೪೪॥

 

ಏತಾವತಾSಲಂ ಭೀಷ್ಮಾದೇರ್ಜ್ಜಯಾರ್ತ್ಥಮಿತಿ ಚಿದ್ಧನಃ ।

ಕೇವಲೈರ್ವೈಷ್ಣವೈರ್ಮ್ಮನ್ತ್ರೈಃ ಸ್ವದತ್ತೈರ್ವಿಜಯಾವಹೈಃ ॥೨೨.೧೪೫॥

 

ಅತಿವೃದ್ಧಸ್ಯ ಪಾರ್ತ್ಥಸ್ಯ ದರ್ಪ್ಪಃ ಸ್ಯಾದಿತ್ಯಚಿನ್ತಯತ್ ।

ಪಾರ್ತ್ಥಃ ಸಙ್ಜ್ಞಾಮವಾಪ್ಯಾಥ ಜಯಾರ್ತ್ಥ್ಯಾರಾಧಯಚ್ಛಿವಮ್              ॥೨೨.೧೪೬॥

 

 ವ್ಯಾಸೋದಿತೇನ ಮನ್ತ್ರೇಣ ತಾನಿ ಪುಷ್ಪಾಣಿ ತಚ್ಛಿರಃ ।

ಆರುಹನ್ ಸ ತು ತಂ ಜ್ಞಾತ್ವಾ ರುದ್ರ ಇತ್ಯೇವ ಫಲ್ಗುನಃ ॥೨೨.೧೪೭॥

ಹಾಗಾಗಿ ರುದ್ರದೇವ ಅರ್ಜುನನೊಡನೆ ನಡೆದ ಯುದ್ಧದಲ್ಲಿ ಗೆದ್ದ,

ವ್ಯಾಸರು ಅರ್ಜುನನಿಗೆ ಮುಖ್ಯ ವಿಷ್ಣು ಮಂತ್ರ ನೀಡದಿರುವುದು ಸಿದ್ಧ.

ಮಾಡಿದ್ದರು -ಭೀಷ್ಮ ದ್ರೋಣರ ಗೆಲ್ಲಲು ಸಾಕಾಗುವ ಬೇರೆ ದೇವತೆಗಳ ಉಪದೇಶ,

ವೈಷ್ಣವ ಮಂತ್ರದಿಂದ ಅರ್ಜುನ ವಿಪರೀತ ಗೆಲುವು ಸಾಧಿಸಿ ಅಹಂ ಏರದಿರೋ ಉದ್ದೇಶ.

ಇತ್ತ ಮೂರ್ಛೆಯಿಂದ ಎದ್ದು ಕುಳಿತವನಾದ ಅರ್ಜುನ,

ಮಾಡಿದ:ವ್ಯಾಸರ್ಹೇಳಿದ ಮಂತ್ರದಿಂದ ಶಿವಾರಾಧನ.

ಅರ್ಜುನನರ್ಪಿಸಿದ ಪುಷ್ಪಗಳು ಏರಿದವು ಬೇಡ ವೇಷದ ಶಿವನ ಶಿರ,

ಆ ಬೇಡ ಶಿವನೇ ಎಂದರಿತ ಅರ್ಜುನ ಮಾಡಿದ ಶಿವನಿಗೆ ನಮಸ್ಕಾರ.

No comments:

Post a Comment

ಗೋ-ಕುಲ Go-Kula