Tuesday 26 October 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 21: 01-05

 ॥ ಓಂ ॥

                           ಮಹಾಭಾರತ ತಾತ್ಪರ್ಯ ನಿರ್ಣಯ- ಏಕವಿಂಶೋsಧ್ಯಾಯಃ ಪಾಣ್ಡವರಾಜ್ಯಲಾಭಃ]

                                                       ಪಾಣ್ಡವವನಪ್ರವೇಶಃ

ಜನಾರ್ದ್ದನಾಜ್ಞಯಾ ಮಯಃ ಸಮಸ್ತಕೌತುಕೋತ್ತರಾಮ್ ।

ಸಭಾಂ ವಿಧಾಯ ಭೂಭೃತೇ ದದೌ ಗದಾಂ ವೃಕೋದರೇ ॥೨೧.೦೧॥

ಶ್ರೀಕೃಷ್ಣನ ಆಜ್ಞೆಯನ್ನು ಸ್ವೀಕರಿಸಿದವನಾದ ಮಯಾಸುರ,

ಮಾಡಿದ ಸಭಾಭವನವಾಗಿತ್ತು ಅಚ್ಚರಿ ಉತ್ತಮತೆಗಳ ಆಗರ.

ಅಂತಹಾ ಅಪೂರ್ವ ಸಭಾಭವನವನ್ನು ಧರ್ಮರಾಜಗೆ ಕೊಟ್ಟ,

ಹಾಗೆಯೇ ಭೀಮಸೇನನಿಗಾಗಿ ಒಂದು ಗದೆಯನ್ನೂ ತಂದಿಟ್ಟ.

 

ಸ ವಾಯುಧಾರಿತಾಂ ಗದಾಂ ಹಿ ಯೌವನಾಶ್ವಭೂಭೃತಾ ।

ಪ್ರಸಾದತೋsಸ್ಯ ಲಮ್ಭಿತಾಮವಾಪ್ಯ ಮೋದಮಾಪ ಹ ॥೨೧.೦೨॥

ಮುಖ್ಯಪ್ರಾಣನ ದಯದಿಂದ ಆ ಗದೆಯ ಧರಿಸಿದ್ದ ಮುಚುಕುಂದ,

ಮಯನ ಮೂಲಕ ಮತ್ತೆ ಅದನ ಪಡೆದ ಭೀಮಗೆ ಆಯಿತು ಆನಂದ.

 

ಪುನಶ್ಚ ವತ್ಸರದ್ವಯಂ ಸಮುಷ್ಯ ಕೇಶವೋ ಯಯೌ ।

ಸಮರ್ಚ್ಚಿತಶ್ಚ ಪಾಣ್ಡವೈರ್ವಿಯೋಜನೇsಸ್ಯ ಚಾಕ್ಷಮೈಃ ॥೨೧.೦೩॥

ಖಾಂಡವವನ ದಹನದ ನಂತರದ ಎರಡು ವರುಷ,

ಶ್ರೀಕೃಷ್ಣ ಮಾಡಿಕೊಂಡಿದ್ದ ಇಂದ್ರಪ್ರಸ್ತದಲ್ಲಿಯೇ ವಾಸ.

ಕೃಷ್ಣ ವಿಯೋಗವನ್ನು ಸಹಿಸುವಲ್ಲಿ ಪಾಂಡವರು ಆಗಿದ್ದರೂ  ಅಸಮರ್ಥ,

ಅವರಿಂದ ಉತ್ತಮ ಪೂಜೆಗೊಂಡು ದ್ವಾರಕೆಗೆ ಹೊರಟ ಸರ್ವಸಮರ್ಥ.

 

ತತೋ ವಸನ್ ಸ್ವಪುರ್ಯ್ಯಜಃ ಕ್ವಚಿದ್ ರವಿಗ್ರಹೇ ಹರಿಃ ।

ಸದಾರಪುತ್ರಬಾನ್ಧವಃ ಸಮನ್ತಪಞ್ಚಕಂ ಯಯೌ ॥೨೧.೦೪॥

ಹುಟ್ಟೇ ಇರದ ಶ್ರೀಕೃಷ್ಣ ದ್ವಾರಕೆಯಲ್ಲಿದ್ದಾಗ ಒಂದು ಸೂರ್ಯಗ್ರಹಣದ ಸಮಯ,

ತನ್ನ ಅನೇಕ ಬಾಂಧವರು ಪತ್ನೀ ಪುತ್ರರೊಂದಿಗೆ ಕುರುಕ್ಷೇತ್ರಕ್ಕೆ ಬಂದ ಚಿನ್ಮಯ.

 

ಪೃಥಾಸುತಾಶ್ಚ ಸರ್ವಶಃ ಸದಾರಪುತ್ರಮಾತೃಕಾಃ ।

ಕ್ಷಿತೀಶ್ವರಾಶ್ಚ ಸರ್ವಶಃ ಪ್ರಿಯಾಪ್ರಿಯಾ ಹರೇಶ್ಚ ಯೇ ॥೨೧.೦೫॥

ಪೃಥೆಯ ಪುತ್ರರಾದ ಪಾಂಡವರೆಲ್ಲರೂ,

ಸಂಸಾರ ಸಮೇತರಾಗಿ ಅಲ್ಲಿಗೆ ಬಂದರು.

ಭಗವಂತನಿಗೆ ಪ್ರಿಯರು -ಅಪ್ರಿಯರು,

ಮತ್ತೆಲ್ಲಾ ರಾಜರುಗಳು ಅಲ್ಲಿಗೆ ಬಂದರು.

[Contributed by Shri Govind Magal]

No comments:

Post a Comment

ಗೋ-ಕುಲ Go-Kula