Tuesday 29 January 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 195 - 198

ತತೋsಸುರಾಸ್ತೇ ನಿಹತಾ ಅಶೇಷಾತ್ವಯಾ ತ್ರಿಭಾಗಾ ನಿಹತಾಶ್ಚತುರ್ತ್ಥಮ್ ।
ಜಘಾನ ವಾಯುಃ ಪುನರೇವ ಜಾತಾಸ್ತೇ ಭೂತಳೇ 
ಧರ್ಮ್ಮಬಲೋಪಪನ್ನಾಃ ॥೧೧.೧೯೫॥

ದೈತ್ಯ ಕಾಲನೇಮಿಯ ಸಂಹಾರವಾದ ಆನಂತರ,
ಅಸುರರ ಮೂರು ಭಾಗ ನಿನ್ನಿಂದಾಯ್ತು ಸಂಹಾರ.
ಮುಖ್ಯಪ್ರಾಣ ಮುಗಿಸಿದ ಉಳಿದೊಂದು ಭಾಗದ ವ್ಯಾಪಾರ,
ಪಾರಂಪರಿಕ ಧರ್ಮಬಲದಿ ಭುವಿಯಲ್ಲಿ ಹುಟ್ಟಿದರು  ಆಗಿ ಭೂಭಾರ.

ರಾಜ್ಞಾಂ ಮಹಾವಂಶಸುಜನ್ಮನಾಂ ತು ತೇಷಾಮಭೂದ್ ಧರ್ಮ್ಮಮತಿರ್ವಿಪಾಪಾ ।
ಶಿಕ್ಷಾಮವಾಪ್ಯ ದ್ವಿಜಪುಙ್ಗವಾನಾಂ ತ್ವದ್ಭಕ್ತಿರಪ್ಯೇಷು ಹಿ ಕಾಚನ ಸ್ಯಾತ್ ॥೧೧.೧೯೬॥

ಭಾಗವತರಾದ ದೊಡ್ಡ ರಾಜವಂಶದಲ್ಲಿ ಆ ದೈತ್ಯರ ಹುಟ್ಟು,
ಪಾಪರಹಿತ ಧರ್ಮಪ್ರಜ್ಞೆ ಅವರಲ್ಲಿ ಬೆಳೆಯುತ್ತಿರುವ ಗುಟ್ಟು.
ಶ್ರೇಷ್ಠಬ್ರಾಹ್ಮಣರ ಪ್ರಭಾವದಿ ಭಕ್ತಿಅಂಶ ಹುಟ್ಟಿರಲೂ ಉಂಟು.

ತ್ವದ್ಭಕ್ತಿಲೇಶಾಭಿಯುತಃ ಸುಕರ್ಮ್ಮಾ ವ್ರಜೇನ್ನ ಪಾಪಾಂ ತು ಗತಿಂ ಕಥಞ್ಚಿತ್ ।
ದೈತ್ಯೇಶ್ವರಾಣಾಂ ಚ ತಮೋsನ್ಧಮೇವ ತ್ವಯೈವ ಕ್ಲೃಪ್ತಂ ನನು 
ಸತ್ಯಕಾಮ ॥೧೧.೧೯೭॥

ನಿನ್ನಲ್ಲಿ ಲೇಶಭಕ್ತಿಯ ಹೊಂದಿ ಸತ್ಕರ್ಮ ಮಾಡಿದವ ಎಂದೂ ನರಕ ಹೊಂದಲಾರ,
ಹೇ ಸತ್ಯಕಾಮ ಸತ್ಯಸಂಕಲ್ಪ ಮಹಾದೈತ್ಯರಿಗೆ ಅಂಧಂತಮಸ್ಸೆಂದು ನಿಂದೇ ನಿರ್ಧಾರ.

ಧರ್ಮಸ್ಯ ಮಿತ್ಥ್ಯಾತ್ವಭಯಾದ್ ವಯಂ ತ್ವಾಮಥಾಪಿವಾ ದೈತ್ಯಶುಭಾಪ್ತಿಭೀಷಾ ।
ಸಮ್ಪ್ರಾರ್ತ್ಥಯಾಮೋ ದಿತಿಜಾನ್ ಸುಕರ್ಮ್ಮಣಸ್ತ್ವದ್ಭಕ್ತಿತಶ್ಚ್ಯಾವಯಿತುಂ ಚ 
ಶೀಘ್ರಮ್ ॥೧೧.೧೯೮॥

ಪುಣ್ಯಕರ್ಮ ವ್ಯರ್ಥವಾದೀತು ಎಂಬುದು ನಮ್ಮ ಭಯ,
ದೈತ್ಯರಿಗೆ ಹೇಗೆ ಸದ್ಗತಿಯಾದೀತು ಎಂಬ ದ್ವಂದ್ವದ ಭಾವ.
ಧರ್ಮ ವೇದವಾಕ್ಯ ಎಂದೆಂದೂ ಆಗಬಾರದಲ್ಲವೇ ಸುಳ್ಳು,
ದೈತ್ಯರನ್ನು ಸುಕರ್ಮ ಭಕ್ತಿಯಿಂದ ವಿಮುಖರಾಗಿಸಿ ತಳ್ಳು. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula