Saturday 6 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 43 - 47

ಗೋಪೈರ್ಬಲಾದಿಭಿರುದೀರ್ಣ್ಣತರಪ್ರಮೋದೈಃ ಸಾರ್ದ್ಧಂ ಸಮೇತ್ಯ ಭಗವಾನರವಿನ್ದನೇತ್ರಃ ।
ತಾಂ ರಾತ್ರಿಮತ್ರ ನಿವಸನ್ ಯಮುನಾತಟೇ ಸ ದಾವಾಗ್ನಿಮುದ್ಧತಬಲಂ ಚ ಪಪೌ ವ್ರಜಾರ್ತ್ಥೇ ॥೧೩.೪೩॥
ಹೀಗೆ ಕಾಳಿಯನಾಗನ ಯಮುನೆಯಿಂದ ಓಡಿಸಿದ ಕಮಲಾಕ್ಷನಾದ ಶ್ರೀಶ,
ಬಲರಾಮ ಮುಂತಾದ ಗೋಪಾಲರೊಡನೆ ಮಾಡಿದ ಯಮುನಾತೀರದ ವಾಸ.
ಯಮುನಾತೀರದ ಕಾಳ್ಗಿಚ್ಚು ಕುಡಿದದ್ದು ತನ್ನ ಗ್ರಾಮ ನಾಶವಾಗದಿರಲೆಂಬುದ್ದೇಶ.

ಇತ್ಥಂ ಸುರಾಸುರಗಣೈರವಿಚಿನ್ತ್ಯದಿವ್ಯಕರ್ಮ್ಮಾಣಿ ಗೋಕುಲಗತೇsಗಣಿತೋರುಶಕ್ತೌ ।
ಕುರ್ವತ್ಯಜೇ ವ್ರಜಭುವಾಮಭವದ್ ವಿನಾಶ ಉಗ್ರಾಭಿಧಾದಸುರತಸ್ತರುರೂಪತೋsಲಮ್ ॥೧೩.೪೪॥
ತದ್ಗನ್ಧತೋ ನೃಪಶುಮುಖ್ಯಸಮಸ್ತಭೂತಾನ್ಯಾಪುರ್ಮ್ಮೃತಿಂ ಬಹಳರೋಗನಿಪೀಡಿತಾನಿ ।
ಧಾತುರ್ವರಾಜ್ಜಗದಭಾವಕೃತೈಕಬುದ್ಧಿರ್ವದ್ಧ್ಯೋ ನ ಕೇನಚಿದಸೌ ತರುರೂಪದೈತ್ಯಃ ॥೧೩.೪೫॥
ಈ ತೆರನಾಗಿ ದೇವತೆಗಳು ಮನುಷ್ಯರು ಯೋಚಿಸಲು ಅಸಾಧ್ಯವಾದ,
ಅಲೌಕಿಕ ಕೆಲಸಗಳ ಮಾಡುವ ಕೃಷ್ಣ ಮಿತಿಯಿರದ ಕಸುವಿಂದ ಬದ್ಧ.
ಮರದದೇಹ ಹೊತ್ತ ಉಗ್ರನಿಂದಾಯಿತು ವ್ರಜಜನಕೆ ವಿನಾಶ - ಬಾಧ.
ಆ ಅಸುರ ಮರ ಬೀರುವಂಥ ದುರ್ಗಂಧದಿಂದ,
ಮನುಷ್ಯ ಪಶುಗಳು ಪೀಡಿತವಾದವು ರೋಗದಿಂದ.
ಇವನಿಂದಾಗೇ ಕೆಲವಕ್ಕೆ ಸಂಭವಿಸಿತು ಮರಣ,
ಬ್ರಹ್ಮವರದಿಂದ ಅವಧ್ಯನಾಗಿದ್ದವ-ಅದು ಕಾರಣ.
ಜಗತ್ತಿನ ನಾಶವೇ ಅವನ ಏಕೈಕ ಉದ್ದೇಶ,
ಆ ಉಗ್ರದೈತ್ಯ ಮರದರೂಪದಲ್ಲಿದ್ದುದು ವಿಶೇಷ.



ಸಙ್ಕರ್ಷಣೇsಪಿ ತದುದಾರವಿಷಾನುವಿಷ್ಟೇ ಕೃಷ್ಣೋ ನಿಜಸ್ಪರ್ಶತಸ್ತಮಪೇತರೋಗಮ್ ।
ಕೃತ್ವಾ ಬಭಞ್ಜ ವಿಷವೃಕ್ಷಮಮುಂ ಬಲೇನ ತಸ್ಯಾನುಗೈಃ ಸಹ ತದಾಕೃತಿಭಿಃ ಸಮಸ್ತೈಃ ॥೧೩.೪೬॥
ದೈತ್ಯಾಂಶ್ಚ ಗೋವಪುಷ ಆತ್ತವರಾನ್ ವಿರಿಞ್ಚಾನ್ಮೃ ತ್ಯೂಜ್ಝಿತಾನಪಿ ನಿಪಾತ್ಯ ದದಾಹ ವೃಕ್ಷಾನ್ ।
ವಿಕ್ರೀಡ್ಯ ರಾಮಸಹಿತೋ ಯಮುನಾಜಲೇ ಸ ನೀರೋಗಮಾಶು ಕೃತವಾನ್ ವ್ರಜಮಬ್ಜನಾಭಃ ॥೧೩.೪೭॥
ಅವನ ತೀಕ್ಷ್ಣ ವಿಷದಿಂದ ಸಂಕರ್ಷಣಗೂ ಆಯಿತು ಸಂಕಟ ವಿಕಾರ,
ತನ್ನ ಸ್ಪರ್ಶಮಾತ್ರದಿಂದ ಕೃಷ್ಣಮಾಡಿದ ಬಲರಾಮನ ರೋಗಪರಿಹಾರ.
ಆ ವಿಷವೃಕ್ಷ ಕಿತ್ತುತ್ತಾ ಆ ರೂಪದಲ್ಲಿದ್ದ ಉಗ್ರಾಸುರನ ಕೊಂದ,
ಅದೇ ಆಕಾರದಲ್ಲಿದ್ದ ಅವನ ತಮ್ಮಂದಿರನ್ನೂ ನಾಶ ಮಾಡಿದ.
ಬ್ರಹ್ಮವರದಿಂದ ಅವಧ್ಯರಾದ ಗೋರೂಪದ ದೈತ್ಯರ ತೋಪಿನೊಂದಿಗೆ ಸುಟ್ಟ,
ನಂತರ ಕೃಷ್ಣ ಬಲರಾಮನೊಂದಿಗೆ ಯಮುನೆಯಲ್ಲಿ ಆಡಿದನಂತೆ ನೀರಾಟ.
ಹೀಗೆ ಶ್ರೀಕೃಷ್ಣ ಬಂದತೊಡಕುಗಳ ಪರಿಹರಿಸಿ ವ್ರಜವ ಮಾಡಿದ ರೋಗಮುಕ್ತ. 
[Contributed by Shri Govind Magal]

No comments:

Post a Comment

ಗೋ-ಕುಲ Go-Kula