Monday 22 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 62 - 66

ಕೃಷ್ಣೋsಥ ವೀಕ್ಷ್ಯ ಪುರುಹೂತಮಹಪ್ರಯತ್ನಂ ಗೋಪಾನ್ ನ್ಯವಾರಯದವಿಸ್ಮರಣಾಯ ತಸ್ಯ ।
ಮಾ ಮಾನುಷೋsಯಮಿತಿ ಮಾಮವಗಚ್ಛತಾಂ ಸ ಇತ್ಯವ್ಯಯೋsಸ್ಯ ವಿದಧೇ ಮಹಭಙ್ಗಮೀಶಃ ॥೧೩.೬೨ ॥

ಆನಂತರ ಇಂದ್ರಪೂಜೆ ಮತ್ತು ಜಾತ್ರೆಗಾಗಿ ಗೋವಳರ ಸಿದ್ಧತೆಯ ಪ್ರಸಂಗ,
ಇಂದ್ರ ತನ್ನನ್ನು ಮಾನವನೆಂದು ತಿಳಿಯದಿರಲಿ ಎಂದು ಕೃಷ್ಣ ಅದ ಮಾಡಿದ ಭಂಗ.

ಗೋಪಾಂಶ್ಚ ತಾನ್ ಗಿರಿಮಹೋsಸ್ಮದುರುಸ್ವಧರ್ಮ್ಮ ಇತ್ಯುಕ್ತಿಸಚ್ಛಲತ ಆತ್ಮಮಹೇsವತಾರ್ಯ್ಯ ।
ಭೂತ್ವಾsತಿವಿಸ್ತೃತತನುರ್ಬುಭುಜೇ ಬಲಿಂ ಸ ನಾನಾವಿಧಾನ್ನರಸಪಾನಗುಣೈಃ ಸಹೈವ ॥೧೩.೬೩॥

ಗೋಪಾಲಕರಿಗೆ ಕೃಷ್ಣ ವಿವರಿಸಿದ ಪರ್ವತಪೂಜೆಯೇ ತಮ್ಮ ಧರ್ಮ,
ತನ್ನ ಮೋಡಿಯಿಂದೆಲ್ಲರ ಒಪ್ಪಿಸಿದ್ದು ಅಂತರ್ಯಾಮಿ ಮಾಡಿದ ಮರ್ಮ.
ಗೋವರ್ಧನಪರ್ವತದಲ್ಲಿ ಶ್ರೀಕೃಷ್ಣ ತಾನೇ ಹೊಂದಿದ ದೇಹವದು ವಿಸ್ತಾರ,
ಸ್ವೀಕರಿಸಿದ ತಾನು ಬಲಿ ರೂಪದ ಅನ್ನ ರಸ ಪಾನೀಯ ಬಗೆಬಗೆಯ ಆಹಾರ.

ಇನ್ದ್ರೋsಥ ವಿಸ್ಮೃತರಥಾಙ್ಗಧರಾವತಾರೋ ಮೇಘಾನ್ ಸಮಾದಿಶದುರೂದಕಪೂಗವೃಷ್ಟ್ಯೈ।
ತೇ ಪ್ರೇರಿತಾಃ ಸಕಲಗೋಕುಲನಾಶನಾಯ ಧಾರಾ ವಿತೇರುರುರುನಾಗಕರಪ್ರಕಾರಾಃ   ॥೧೩.೬೪॥

ಚಕ್ರಧರ ಹರಿಯ ಅವತಾರ ಕೃಷ್ಣ ಎಂಬುದ ಮರೆತಿದ್ದ ಇಂದ್ರ,
ಮೋಡಗಳಿಗೆ ಆಜ್ಞಾಪಿಸಿದ ಸುರಿಸಲು ಮಳೆಯ ಧಾರಾಕಾರ.
ಸಮಸ್ತ ಗೋಕುಲ ನಾಶಕ್ಕಾಗಿ ಬಂದ ಆ ಮೋಡಗಳು,
ಸುರಿಸಿದ ಮಳೆಹನಿಯ ಗಾತ್ರವದಾಗಿತ್ತು ಆನೆಸೊಂಡಿಲು.

ತಾಭಿರ್ನ್ನಿಪೀಡಿತಮುದೀಕ್ಷ್ಯ ಸ ಕಞ್ಜನಾಭಃ ಸರ್ವಂ ವ್ರಜಂ ಗಿರಿವರಂ ಪ್ರಸಭಂ ದಧಾರ ।
ವಾಮೇನ ಕಞ್ಜದಲಕೋಮಳಪಾಣಿನೈವ ತತ್ರಾಖಿಲಾಃ ಪ್ರವಿವಿಶುಃ ಪಶುಪಾಃ ಸ್ವಗೋಭಿಃ  ॥೧೩.೬೫॥

ಆ ಜಲಧಾರೆಯಿಂದ ಪೀಡಿತರಾದ ಗೋಕುಲವಾಸಿಗಳ ಕೃಷ್ಣ ನೋಡಿದ,
ತಾವರೆ ಎಲೆಯಂಥ ತನ್ನ ಎಡಗೈಯಿಂದ ಗೋವರ್ಧನವ ಎತ್ತಿ ಹಿಡಿದ.
ನಿರ್ಮಿತವಾಯಿತು ಆಗ ಪರ್ವತದ ಕೆಳಗೆ ರಕ್ಷಿತ ಪ್ರದೇಶ,
ಗೋವಳಗೋವುಗಳೆಲ್ಲ ಮಾಡಿದರು ಬೆಟ್ಟದಡಿ ಪ್ರವೇಶ.

ವೃಷ್ಟ್ವೋರುವಾರ್ಯ್ಯಥ ನಿರನ್ತರಸಪ್ತರಾತ್ರಂ ತ್ರಾತಂ ಸಮೀಕ್ಷ್ಯ ಹರಿಣಾ ವ್ರಜಮಶ್ರಮೇಣ ।
ಶಕ್ರೋsನುಸಂಸ್ಮೃತಸುರಪ್ರವರಾವತಾರಃ ಪಾದಾಮ್ಬುಜಂ ಯದುಪತೇಃ ಶರಣಂ ಜಗಾಮ ॥೧೩.೬೬॥

ಹೀಗೆ ಇಂದ್ರ ಸುರಿಸಿದ ಏಳುದಿನ ಭಾರೀ ನಿರಂತರ ಮಳೆ,
ಕೃಷ್ಣನಿಂದ ಸುರಕ್ಷಿತವಾಗಿತ್ತು ನಂದಗೋಕುಲದ ಆ ಇಳೆ.
ಇಂದ್ರನಿಗಾಯಿತು ನೆನಪು ಕೃಷ್ಣ ಭಗವಂತನ ಅವತಾರ,
ಇವ ನಾರಾಯಣನೇ ಎಂದರಿತು ಶರಣಾದ ಪುರಂದರ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula