Sunday 7 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 48 - 50

ಸಪ್ತೋಕ್ಷಣೋsತಿಬಲವೀರ್ಯ್ಯಯುತಾನದಮ್ಯಾನ್  ಸರ್ವೈರ್ಗ್ಗಿರೀಶವರತೋ ದಿತಿಜಪ್ರಧಾನಾನ್ ।
ಹತ್ವಾ ಸುತಾಮಲಭದಾಶು ವಿಭುರ್ಯ್ಯಶೋದಾಭ್ರಾತುಃ ಸ ಕುಮ್ಭಕಸಮಾಹ್ವಯಿನೋsಪಿ ನೀಲಾಮ್ ॥೧೩.೪೮॥
ರುದ್ರವರದಿಂದ ಎಲ್ಲರಿಂದ ನಿಗ್ರಹಿಸಲು ಅಶಕ್ಯರಾದ,
ಅತಿಬಲ ವೀರ್ಯದ ಏಳು ಗೂಳಿಗಳ ರೂಪದಲ್ಲಿದ್ದ,
ಸರ್ವಶಕ್ತ ಶ್ರೀಕೃಷ್ಣ ಆ ಏಳು ದೈತ್ಯರ ಕೊಂದ,
ಯಶೋದೆ ಅಣ್ಣ ಕುಂಭಕಪುತ್ರಿ ನೀಲಾಳ ಪಡೆದ.

ಯಾ ಪೂರ್ವಜನ್ಮನಿ ತಪಃ ಪ್ರಥಮೈವ ಭಾರ್ಯ್ಯಾ ಭೂಯಾಸಮಿತ್ಯಚರದಸ್ಯ ಹಿ ಸಙ್ಗಮೋ ಮೇ ।
ಸ್ಯಾತ್ ಕೃಷ್ಣಜನ್ಮನಿ ಸಮಸ್ತವರಾಙ್ಗನಾಭ್ಯಃ ಪೂರ್ವಂ ತ್ವಿತಿ ಸ್ಮ ತದಿಮಾಂ ಪ್ರಥಮಂ ಸ ಆಪ ॥೧೩.೪೯॥
ಹರಿಯ ಕೃಷ್ಣಾವತಾರದಲ್ಲಿ ತಾನು ಅವನ ಜ್ಯೇಷ್ಠಪತ್ನಿ ಆಗಬೇಕು,
ನೀಲಾಳ ಪೂರ್ವಜನ್ಮದ ತಪಸ್ಸದು-ತಾ ಮೊದಲು ಕೃಷ್ಣನ ಸೇರಬೇಕು.
ಹಾಗೇ ನೀಲಾಳ ಪಡೆದ- ಪ್ರಶ್ನಾತೀತನ ಇಚ್ಛೆಯಂತೆ ಎಲ್ಲ ನಡೆಯಬೇಕು.

ಅಗ್ರೇ ದ್ವಿಜತ್ವತ ಉಪಾವಹದೇಷ ನೀಲಾಂ ಗೋಪಾಙ್ಗನಾ ಅಪಿ ಪುರಾ ವರಮಾಪಿರೇ ಯತ್ ।
ಸಂಸ್ಕಾರತಃ ಪ್ರಥಮಮೇವ ಸುಸಙ್ಗಮೋ ನೋ ಭೂಯಾತ್ ತವೇತಿ ಪರಮಾಪ್ಸರಸಃ ಪುರಾ ಯಾಃ ॥೧೩.೫೦॥
ಆಗಿನ್ನೂ ಶ್ರೀಕೃಷ್ಣಗೆ ಆಗಿರಲಿಲ್ಲ ಉಪನಯನ ಸಂಸ್ಕಾರ,
ಉಪನಯನಕ್ಕೆ ಮೊದಲೇ ನೀಲಾಳ ವರಿಸಿದ ವ್ಯಾಪಾರ.
ಗೋಪಿಯರಿಗಿತ್ತು ಉಪನಯನಕ್ಕೆ ಮೊದಲೇ ಅವನ ಸಂಗದ ವರ.
ಗೋಪಿಯರೆಲ್ಲ ಮೂಲತಃ ಅಪ್ಸರಾಸ್ತ್ರೀಯರೆಂಬುದು ಗಮನಾರ್ಹ.
(ಸಂಸಾರದ ಲೇಪವೇ ಇರದ ಜ್ಞಾನಾನಂದ ಶರೀರಕ್ಕೆ ಯಾವ ಸಂಸ್ಕಾರ).

No comments:

Post a Comment

ಗೋ-ಕುಲ Go-Kula