Wednesday 17 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 55 - 57

ಪಕ್ಷದ್ವಯೇನ ವಿಹರತ್ಸ್ವಥ ಗೋಪಕೇಷು ದೈತ್ಯಃ ಪ್ರಲಮ್ಬ ಇತಿ ಕಂಸವಿಸೃಷ್ಟ ಆಗಾತ್ ।
ಕೃಷ್ಣಸ್ಯ ಪಕ್ಷಿಷು ಜಯತ್ಸು ಸ ರಾಮಮೇತ್ಯ ಪಾಪಃ ಪರಾಜಿತ ಉವಾಹ ತಮುಗ್ರರೂಪಃ ॥೧೩.೫೫॥
ಗೋಪಾಲಕರೆಲ್ಲರೂ ಎರಡು ಗುಂಪುಗಳಾಗಿ ಆಟವಾಡುತ್ತಿದ್ದಾಗ,
ಕಂಸ ಕಳುಹಿಸಿದ ಪ್ರಲಂಬನೆಂಬ ದೈತ್ಯ ಬಾಲಕ ರೂಪದಲ್ಲಿ ಬಂದನಾಗ.
ಶ್ರೀಕೃಷ್ಣನ ಗುಂಪಿನವರು ಆಟದಲ್ಲಿ ಹೊಂದುತ್ತಿರಲು ಗೆಲುವು,
ಗೆದ್ದವರನ್ನು ಸೋತವರು ಹೊರಬೇಕೆಂಬುದು ಆಟದ ನಿಲುವು.
ಸೋತಗುಂಪಿನ ಪ್ರಲಂಬ ಬಲರಾಮನನ್ನು ಹೊತ್ತ,
ಅದರಂತೆಯೇ ಶ್ರೀಧಾಮನೆಂಬುವ ಶ್ರೀಕೃಷ್ಣನನ್ನು  ಹೊತ್ತ.
ಬಲರಾಮನ ಹೊತ್ತ ಪ್ರಲಂಬ ತೋರಿದ ತಾನೆಂಥ ದೈತ್ಯ

ಭೀತೇನ ರೋಹಿಣಿಸುತೇನ ಹರಿಃ ಸ್ತುತೋsಸೌ ಸ್ವಾವಿಷ್ಟತಾಮುಪದಿದೇಶ ಬಲಾಭಿಪೂರ್ತ್ತ್ಯೈ  ।
ತೇನೈವ ಪೂರಿತಬಲೋsಮ್ಬರಚಾರಿಣಂ ತಂ ಪಾಪಂ ಪ್ರಲಮ್ಬಮುರುಮುಷ್ಟಿಹತಂ ಚಕಾರ ॥೧೩.೫೬॥
ಈ ಘಟನೆಯಲ್ಲಿ ಭಯಗೊಂಡ ಬಲರಾಮ,
ರೋಹಿಣೀಪುತ್ರನಿಂದ ಸ್ತುತಿಸಲ್ಪಟ್ಟ ಶ್ಯಾಮ.
ಅವನ ಬಲವೃದ್ಧಿಗೆ ಕೃಷ್ಣ ಮಾಡಿದ ನಾ ನಿನ್ನಲ್ಲಿ ಆವಿಷ್ಟನಾಗಿದ್ದೇನೆಂಬ ಉಪದೇಶ,
ಆ ದೈವಬಲದಿಂದ ಬಲರಾಮ ಗುದ್ದಿ ಮಾಡಿದ ಆಕಾಶಸಂಚಾರಿ ದೈತ್ಯನ ದೇಹನಾಶ.

ತಸ್ಮಿನ್ ಹತೇ ಸುರಗಣಾ ಬಲದೇವನಾಮ ರಾಮಸ್ಯ ಚಕ್ರುರತಿತೃಪ್ತಿಯುತಾ ಹರಿಶ್ಚ।
ವಹ್ನಿಂ ಪಪೌ ಪುನರಪಿ ಪ್ರದಹನ್ತಮುಚ್ಚೈರ್ಗ್ಗೋಪಾಂಶ್ಚ ಗೋಗಣಮಗಣ್ಯಗುಣಾರ್ಣ್ಣವೋsಪಾತ್ ॥೧೩.೫೭॥
ಹೀಗೆ ಪ್ರಲಂಬಾಸುರ ಹೊಂದುತ್ತಿರಲು ತನ್ನ ಸಾವಿನ ನೋವ,
ತೃಪ್ತರಾದ ದೇವತೆಗಳು ಬಲರಾಮಗಿಟ್ಟ ಹೆಸರು ಬಲದೇವ.
ಎಣೆಯಿರದ ಗುಣಸಾಗರನವ ಶ್ರೀಕೃಷ್ಣ,
ಕುಡಿದುಬಿಟ್ಟ ಕಾಡ್ಗಿಚ್ಚಿನ ಆ ತೀಕ್ಷ್ಣ ಉಷ್ಣ.
ರಕ್ಷಿಸಿದ ಗೋವುಗಳ ಗೋವಳರ ಶ್ರೀಕೃಷ್ಣ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula