Tuesday 9 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 51 - 54

ತತ್ರಾಥ ಕೃಷ್ಣಮವದನ್ ಸಬಲಂ ವಯಸ್ಯಾಃ ಪಕ್ವಾನಿ ತಾಲಸುಫಲಾನ್ಯನುಭೋಜಯೇತಿ ।
ಇತ್ಯರ್ತ್ಥಿತಃ ಸಬಲ ಆಪ ಸ ತಾಲವೃನ್ದಂ ಗೋಪೈರ್ದ್ದುರಾಸದಮತೀವ ಹಿ ಧೇನುಕೇನ ॥೧೩.೫೧॥
ತಾಳಮರದ ಒಳ್ಳೆಯ ಹಣ್ಣುಗಳನ್ನು ತಿನ್ನುವ ಬಯಕೆ,
ಕೃಷ್ಣನಲ್ಲಿ ತನ್ನ ಗೆಳೆಯರಿಂದ ಅವನ್ನು ತಿನ್ನಿಸೆಂಬ ಬೇಡಿಕೆ.
ತಾಳಮರದ ತೋಪಲ್ಲಿ ಧೇನುಕಾಸುರನಿದ್ದುದರಿಂದ ದುರ್ಗಮವಾಗಿದ್ದ ಪ್ರದೇಶ,
ಬಲರಾಮ ಮತ್ತು ಸಹಗೋಪಾಲಕರ ಕೂಡಿಕೊಂಡು ಕೃಷ್ಣ ಮಾಡಿದ ಪ್ರವೇಶ.

 ವಿಘ್ನೇಶತೋ ವರಮವಾಪ್ಯ ಸ ದೃಷ್ಟದೈತ್ಯೋ ದೀರ್ಘಾಯುರುತ್ತಮಬಲಃ ಕದನಪ್ರಿಯೋsಭೂತ್ ।
 ನಿತ್ಯೋದ್ಧತಃ ಸ ಉತ ರಾಮಮವೇಕ್ಷ್ಯ ತಾಲವೃನ್ತಾತ್ ಫಲಾನಿ ಗಳಯನ್ತಮಥಾಭ್ಯಧಾವತ್ ।
 ತಸ್ಯ ಪ್ರಹಾರಮಭಿಕಾಙ್ಕ್ಷತ ಆಶು ಪೃಷ್ಠಪಾದೌ ಪ್ರಗೃಹ್ಯ ತೃಣರಾಜಶಿರೋsಹರತ್ ಸಃ ॥೧೩.೫೨॥
ಅತ್ಯಂತ ದುಷ್ಟನಾಗಿದ್ದನವ ದೈತ್ಯ ಧೇನುಕಾಸುರ,
ದೀರ್ಘಾಯುಷಿಯಾಗಿದ್ದ ಪಡೆದು ಗಣಪತಿ ವರ.
ಆ ರಕ್ಕಸ ಬಲಶಾಲಿಯೂ ರಣೋತ್ಸಾಹಿಯೂ ಆಗಿದ್ದ,
ಹಣ್ಣು ಬೀಳಿಸುವ ಬಲರಾಮನ ಕಂಡು ಅಲ್ಲಿಗೆ ಓಡಿಬಂದ.
ಬಲರಾಮಗೆ ಒದೆಯಲು ಬಂದವನ ಹಿಂಗಾಲನ್ನು  ಕೃಷ್ಣ ಹಿಡಿದ,
ಎತ್ತಿ ಅವನ ಮೇಲಕ್ಕೆಸೆಯಲು ಆಯಿತವನ ಕತ್ತೆ ತಲೆಯ ಛೇದ.

ತಸ್ಮಿನ್ ಹತೇ ಖರತರೇ ಖರರೂಪದೈತ್ಯೇ ಸರ್ವೇ ಖರಾಶ್ಚ ಖರತಾಲವನಾನ್ತರಸ್ಥಾಃ ।
ಪ್ರಾಪುಃ ಖರಸ್ವರತರಾ ಖರರಾಕ್ಷಸಾರಿಂ ಕೃಷ್ಣಂ ಬಲೇನ ಸಹಿತಂ ನಿಹತಾಶ್ಚ ತೇನ ॥೧೩.೫೩॥
ಅತಿಭಯಂಕರವಾದ ಕತ್ತೆಯ ರೂಪದಲ್ಲಿದ್ದ ದೈತ್ಯ ಸತ್ತನಾಗ,
ಕೃಷ್ಣಬಲರಾಮರಿಗೆದುರಾಯ್ತು ಕತ್ತೆಯ ರೂಪದಲ್ಲಿದ್ದ ದೈತ್ಯಹಿಂಡಾಗ.
ಕೃಷ್ಣ ಅವರನ್ನೆಲ್ಲಾ ಮುಗಿಸಿದ ಬಾರಿಸುತ್ತಾ ಅವರ ಮರಣಮೃದಂಗ.

ಸರ್ವಾನ್ ನಿಹತ್ಯ ಖರರೂಪಧರಾನ್ ಸ ದೈತ್ಯಾನ್ ವಿಘ್ನೇಶ್ವರಸ್ಯ ವರತೋsನ್ಯಜನೈರವದ್ಧ್ಯಾನ್ ।
ಪಕ್ವಾನಿ ತಾಲಸುಫಲಾನಿ ನಿಜೇಷು ಚಾದಾದ್ ದುರ್ವಾರಪೌರುಷಗುಣೋದ್ಭರಿತೋ ರಮೇಶಃ॥೧೩.೫೪॥
ತಾಲತೋಪಿನೊಳಗಿನ ಕತ್ತೆಯ ರೂಪದಲ್ಲಿದ್ದ ರಕ್ಕಸರ ಪಡೆ,
ಹೊಂದಿತ್ತು ಇತರರು ಕೊಲ್ಲಲಾರದ ಗಣಪನ ವರದಕೊಡೆ.
ಆ ದೈತ್ಯರನ್ನೆಲ್ಲಾ ಕೊಂದ ಅಪರಿಮಿತ ಬಲದ ರಮೇಶ,
ತಾಳಮರದ ಹಣ್ಣುಗಳ ತನ್ನವರಿಗೆಲ್ಲಾ ಕೊಟ್ಟ ಸರ್ವೇಶ.
[Contributed by Shri Govind Magal] 

No comments:

Post a Comment

ಗೋ-ಕುಲ Go-Kula