Tuesday 30 July 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 73 - 77


ಕಾರ್ತ್ತ್ಯಾಯನೀವ್ರತಪರಾಃ ಸ್ವಪತಿತ್ವಹೇತೋಃ ಕನ್ಯಾ ಉವಾಹ ಭಗವಾನಪರಾಶ್ಚ ಗೋಪೀಃ ।
ಅನ್ಯೈ ರ್ದ್ಧೃತಾ ಅಯುಗಬಾಣಶರಾಭಿನುನ್ನಾಃ ಪ್ರಾಪ್ತಾ ನಿಶಾಸ್ವರಮಯಚ್ಛಶಿರಾಜಿತಾಸು ॥೧೩.೭೩॥
ಮದುವೆಯಾದ,ಕಾರ್ತ್ಯಾಯನೀ ವ್ರತವನ್ನು ತೊಟ್ಟ,
ಕೃಷ್ಣನ ಸೆಳೆತಕ್ಕೊಳಗಾಗಿ ಕಾಮಬಾಣ ನೆಡಲ್ಪಟ್ಟ,
ಇವನೇ ಪತಿಯಾಗಬೇಕೆಂಬ ಪಣವನ್ನು ತೊಟ್ಟ,
ಕನ್ನಿಕೆ-ಗೊಲ್ಲಪತ್ನಿಯರೊಂದಿಗೆ ಕೃಷ್ಣನ ರಮಿಸುವಾಟ.

ತಾಸ್ವತ್ರ ತೇನ ಜನಿತಾ ದಶಲಕ್ಷಪುತ್ರಾ ನಾರಾಯಣಾಹ್ವಯಯುತಾ ಬಲಿನಶ್ಚ ಗೋಪಾಃ ।
ಸರ್ವೇsಪಿ ದೈವತಗಣಾ ಭಗವತ್ಸುತತ್ವಮಾಪ್ತುಂ ಧರಾತಳಗತಾ ಹರಿಭಕ್ತಿಹೇತೋಃ ॥೧೩.೭೪॥
ಹೀಗಿಲ್ಲಿ, ಆ ಗೊಲ್ಲ ಹೆಣ್ಣುಮಕ್ಕಳಲ್ಲಿ ಶ್ರೀಕೃಷ್ಣ,
ಜನ್ಮವಿತ್ತ ಹತ್ತುಲಕ್ಷ ಮಕ್ಕಳ ಹೆಸರು ನಾರಾಯಣ.
ಅವರೆಲ್ಲಾ ಸೇರಿದವರಾಗಿದ್ದರು ದೇವತಾಗಣ,
ಹರಿಭಕ್ತಿ, ಮತ್ತವನ ಮಕ್ಕಳಾಗಬಯಸಿದ ಕಾರಣ.
ಶ್ರೀಕೃಷ್ಣ ಹೀಗೆ ಅವರೆಲ್ಲರ ಮದುವೆಯಾಗಲು ಕಾರಣ,
ಮುಂದಿನ ಶ್ಲೋಕದಲ್ಲಿ ಕೊಡಲ್ಪಟ್ಟಿದೆ ವಿವರದ ಹೂರಣ.

ತಾಸ್ತತ್ರ ಪೂರ್ವವರದಾನಕೃತೇ ರಮೇಶೋ ರಾಮಾ ದ್ವಿಜತ್ವಗಮನಾದಪಿ ಪೂರ್ವಮೇವ ।
ಸರ್ವಾ ನಿಶಾಸ್ವರಮಯತ್ ಸಮಭೀಷ್ಟಸಿದ್ಧಿಚಿನ್ತಾಮಣಿರ್ಹಿ ಭಗವಾನಶುಭೈರಲಿಪ್ತಃ ॥೧೩.೭೫॥
ಭಗವಂತ ಹಿಂದೆ ತಾನೇ ಕೊಟ್ಟಿದ್ದ ವರದ ಅನುಸಾರ,
ಮುಂಜಿಗೆ ಮೊದಲೇ ಹೆಣ್ಣುಗಳೊಡನವನ ವಿಹಾರ.
ತಾನೊಪ್ಪಿದವರಿಗೆ ಬಯಸಿದ್ದ ಕೊಡುವ ಭೂಪ,
ಲೋಕಜನಕ ಪರಿಪೂರ್ಣಗೆಲ್ಲಿ ಪಾಪದ ಲೇಪ?

ಸಮ್ಪೂರ್ಣ್ಣಚನ್ದ್ರಕರರಾಜಿತಸದ್ರಜನ್ಯಾಂ ವೃನ್ದಾವನೇ ಕುಮುದಕುನ್ದಸುಗನ್ಧವಾತೇ ।
ಶುತ್ವಾಮುಕುನ್ದಮುಖನಿಸ್ಸೃತಗೀತಸಾರಂ ಗೋಪಾಙ್ಗನಾ ಮುಮುಹುರತ್ರ ಸಸಾರ ಯಕ್ಷಃ॥೧೩.೭೬॥
ಉತ್ತಮ ರಾತ್ರಿಗಳವು-ಪೂರ್ಣಚಂದ್ರನ ಬೆಳಕಿಂದ ಶೋಭಿತ,
ನೈದಿಲೆ ಮಲ್ಲಿಗೆ ಮುಂತಾದ ಹೂಗಳಿಂದ ಪರಿಮಳಭರಿತ.
ಸುಗಂಧಮಯ ಗಾಳಿ ಬೀಸುವ ಆ ವೃಂದಾವನ,
ಕೃಷ್ಣಾರವಿಂದದಿಂದ ಹೊರಬಂದ ಸುಶ್ರಾವ್ಯಗಾನ.
ಗೋಪಿಯರು ಆನಂದದಿಂದ ಮೈಮರೆತ ಆ ಕ್ಷಣ,
ಆಗಾಯಿತು ಅಲ್ಲಿಗೆ ಯಕ್ಷನೊಬ್ಬನ ಆಗಮನ.

ರುದ್ರಪ್ರಸಾದಕೃತರಕ್ಷ ಉತಾಸ್ಯ ಸಖ್ಯುರ್ಭೃತ್ಯೋ ಬಲೀ ಖಲತರೋsಪಿಚ ಶಙ್ಖಚೂಡಃ ।
ತಾಃ ಕಾಲಯನ್ ಭಗವತಸ್ತಳತಾಡನೇನ ಮೃತ್ಯುಂ ಜಗಾಮ ಮಣಿಮಸ್ಯ ಜಹಾರ ಕೃಷ್ಣಃ ॥೧೩.೭೭॥
ಆ ಯಕ್ಷಗೆ ಇತ್ತು ಶಿವನ ಅನುಗ್ರಹದ ರಕ್ಷಣೆ,
ರುದ್ರಮಿತ್ರ ಕುಬೇರನ ಸೇವಕನಾಗಿದ್ದವನವನೇ.
ಬಲಿಷ್ಠ ಕ್ರೂರಿ ಶಂಖಚೂಡನೆಂದು ಅವನ ಹೆಸರು,
ಗೋಪಿಯರ ಕದಿವಾಗ ಕೃಷ್ಣನಕೈಯಿಂದ ನಿಂತಿತವನ ಉಸಿರು.
ಅವನ ಮಣಿ ಕಿತ್ತುಕೊಂಡ ಕೃಷ್ಣನ ನೋಡುತ್ತಿರಲು ಸ್ತ್ರೀಯರು.

No comments:

Post a Comment

ಗೋ-ಕುಲ Go-Kula